ಈಚೆಗೆ ಕೆಲಸ ಎಷ್ಟು ಹೆಚ್ಚಾಗಿದೆಯೆಂದರೆ ಬ್ಲಾಗಿಸಲು ಸಾಧ್ಯವೇ ಆಗುತ್ತಿಲ್ಲ. ಇಂದು ಶುಕ್ರವಾರದ ಸಂಜೆಯಾಗಿರುವುದರಿಂದ ಏನಾದರೂ ಬರೆಯಬೇಕೆಂಬ ಚಪಲ. ಬರೆಯುವುದಕ್ಕೆ ಸಮಯ ಕೂಡ ಇದೆ. ಏಕೆಂದರೆ ಒಟ್ಟಿಗೆ ನಾಲ್ಕು ದಿನ ರಜೆ ಬಂದಿದೆ. ಬ್ಲಾಗಿಸಲು ಸಾಧ್ಯವಾಗದ ದಿನಗಳಲ್ಲಿ ಅದೆಷ್ಟು ವಿಚಾರಗಳು ಬ್ಲಾಗ್-ಯೋಗ್ಯವಾಗಿ ಕಂಡವೋ! ದಾರಿಯಲ್ಲಿ ಕಾಣುವ ಮರದ ಹಸಿರಿರಬಹುದು, ಮುಂಗಾರು ಮಳೆಯ ಮೋಡ ಕವಿದ ಆಕಾಶವಿರಬಹುದು. ಬೆವರು ಸುರಿಸುವ ಹೋಟೆಲಿನ ಮಾಣಿಯಿರಬಹುದು, ಮುಗಿಯದ ಟ್ರಾಫಿಕ್ಕಿನಲ್ಲಿ ಮೂಡಿದ ಒಳ್ಳೆಯ ಯೋಚನೆಯಿರಬಹುದು. ಅಥವ ವರ್ಜೀನಿಯಾ ಟೆಕ್ಕಿನ ಮಾರಣ ಹೋಮದ ಬಗ್ಗೆಯಿರಬಹುದು; ಅದು ಮೂಡಿಸಿದ ಜುಗುಪ್ಸೆಯ ಬಗ್ಗೆಯಿರಬಹುದು. ಎಲ್ಲೆಡೆ ಮೊಳಗುವ ಮುಂಗಾರು ಮಳೆ ಚಿತ್ರದ ಸುಂದರ ಗೀತೆಗಳಿರಬಹುದು; ಶಂಕರಜಯಂತಿಯ ಬಗ್ಗೆಯಿರಬಹುದು; ಪೂ.ಚಂ.ತೇ ಅವರ ನಿಧನದ ಬಗ್ಗ್ಎಯಿರಬಹುದು, ಶೃಂಗೇರಿಯ ಜಗದ್ಗುರುಗಳ ಬೆಂಗಳೂರು ಪ್ರವಾಸದ ಬಗ್ಗೆಯಿರಬಹುದು, ರಾಮನವಮಿಯ ಕಚೇರಿಯ ಸಂಗೀತದ ಸೊಬಗಿರಬಹುದು. ಆದರೆ ಇವುಗಳ ಬಗ್ಗೆ ಬರೆಯಲು ವ್ಯವಧಾನವಿದ್ದರೆ ತಾನೆ? ಅಷ್ಟು ಬಿಡುವಿಲ್ಲದ ಕೆಲಸ! ಇರಲಿ. ದುಃಖಿಸಿ ಪ್ರಯೋಜನವಿಲ್ಲ. ಈಗ ತಲೆಯ ಹೊಕ್ಕ ವಿಷಯವೊಂದಿದೆ. ಅದರ ಬಗ್ಗೆ ಬರೆದರಾಯ್ತು!
ಇಂದು ನನ್ನ ಪತ್ನಿ ತನ್ನ ಮೊಬೈಲನ್ನು ಮನೆಯಲ್ಲಿ ಮರೆತಿದ್ದಳು. ಕೆಲಸಕ್ಕೆ ನನ್ನ ಮೊಬೈಲನ್ನೇ ಒಯ್ದಳು. ನಾನು ಮೊಬೈಲಿಲ್ಲದೆ ನನ್ನ ಕಛೇರಿಗೆ ತೆರಳಿದೆ. ಬಹಳ ದಿವಸಗಳಾದ ಮೇಲೆ ಜೇಬಿನಲ್ಲಿ ಮೊಬೈಲಿಲ್ಲದೇ ಹೋಗಿತ್ತು. ತೀರ ಅಭ್ಯಾಸವಾಗಿರುವ ವಸ್ತು ನಮ್ಮನ್ನು ಕ್ಷಣಕಾಲ ಅಗಲಿದಾಗಲೇ ತಾನೆ, ನಾವು ಅದಕ್ಕೆ ಅಷ್ಟು ದಾಸರಾಗಿದ್ದೇವೆಯೆಂದೋ ಅಥವಾ ಅದನ್ನು ಅಷ್ಟು ಪ್ರೀತಿಸುತ್ತೇವೆಯೆಂದೋ ತಿಳಿಯುವುದು?
ಫೋನಿಲ್ಲದೆ ನನ್ನ ಮನಸ್ಸು ಹದಿನೈದು ವರ್ಷಗಳ ಹಿಂದೆ ಓಡಿತ್ತು - ಸಿನಿಮಾದ ಫ್ಲಾಶ್ ಬ್ಯಾಕ್ ರೀತಿಯಲ್ಲಿ. ಆಗ ಮೊಬೈಲಿರಲಿ, ನಮ್ಮ ಮನೆಯಲ್ಲೇ ದೂರವಾಣಿಯೇ ಇರಲಿಲ್ಲ. ಅದಕ್ಕೆ ಬುಕ್ ಮಾಡಿ ವರ್ಷಗಳೇ ಕಳೆದಿದ್ದವು. ಆದರೂ ನಮ್ಮ ಮನೆಗೆ ಫೋನ್ ಬಂದಿರಲಿಲ್ಲ. ಆದರೂ ಜೀವನ ನಡೆಯುತ್ತಿರಲಿಲ್ಲವೇ? ಮನೆಗೆ ಯಾರಾದರೂ ನೆಂಟರಿಷ್ಟರು ಬಂದಾಗ ಹಠಾತ್ತನೇ ಬರುತ್ತಿದ್ದರು. ಈಗ ಬರುವ ಹಾಗೆ ಫೋನ್ ಮಾಡಿ ಬರುತ್ತಿರಲಿಲ್ಲ. ಅದರಿಂದ ಒಂದು ರೀತಿಯ ಸಂತೋಷದ ಅಚ್ಚರಿ ಉಂಟಾಗುತ್ತಿತ್ತು. ಈ ನಡುವೆ ಹಾಗಾಗುವುದು ಬಹಳ ಕಡಿಮೆ. ನಾನು ಮನೆಗೆ ಯಾರಾದರೂ ಬಂದರೆ ಫೋನ್ ಮಾಡಿಯೇ ಬರಲಿ ಎಂದು ಎಣಿಸುತ್ತೇನೆ. ನಾನೂ ಫೋನ್ ಮಾಡಿಯೇ ಮತ್ತೊಬ್ಬರ ಮನೆಗೆ ಹೋಗುವುದು. ಯಾಕೆ ಪಾಪ ಅವರಿಗೆ ತೊಂದರೆ ಎಂದು ನನಗನ್ನಿಸುವುದು. ಜೊತೆಗೆ ಮನೆಯಲ್ಲಿಲ್ಲದಿದ್ದರೆ? ಇದೇ ಅವರಿಗೂ ಅನ್ನಿಸುವುದು. ಹಿಂದೆ ಒಬ್ಬರ ಮನೆಗೆ ಹೊರಟಾಗ ಈ ಯೋಚನೆಗಳು ಇರುತ್ತಿರಲಿಲ್ಲವೇ?
ಆಗ ಇನ್ನು ಸ್ವಲ್ಪ ಮುಂದಾಲೋಚನೆ ಮಾಡುವ ಅವಶ್ಯಕತೆಯಿರುತ್ತಿತ್ತು. ಈ ಗೊತ್ತಾದ ದಿನ ನಿಮ್ಮ ಮನೆಗೆ ಬರುವೆ ಎನ್ನುವ ಒಬ್ಬರು ಮಿತ್ರರು ಹೇಳಿದಾಗ ಮನಸ್ಸಿನಲ್ಲಿ ಜ್ಞಾಪಕವಿರುತ್ತಿತ್ತು. ಇಲ್ಲವೇ ಡೈರಿಯಲ್ಲಿ ಬರೆದಿಡುತ್ತಿದ್ದೆವು. ಈಗ ಇದಕ್ಕೆ ತದ್ವಿರುದ್ಧ. ಎಲ್ಲವೂ ಆಗಲೇ! ಕಾರಿನಲ್ಲಿಯೇ ಕುಳಿತು ಹೋಟೆಲಿನ ರಿಸರ್ವೇಶನ್ ಮಾಡಿಸುವುದು, ಬ್ಯಾಂಕಿನ ವ್ಯವಹಾರವನ್ನು ಮನೆಯಿಂದ ಮಾಡುವುದು. ಆಧುನಿಕ ಬೆಳೆವಳಿಗೆ ಚೆನ್ನಾಗಿಲ್ಲವೆಂದಲ್ಲ! ಆದರೆ ಆ ಹಳೆಯ ರೀತಿಯಲ್ಲಿದ್ದ ಸೊಬಗು ಹೋಗಿದೆಯೆಂದು ಸ್ವಲ್ಪ ಖಿನ್ನತೆ. ಎಲ್ಲವೂ ಆ ಕ್ಷಣದಲ್ಲೇ ಮಾಡಬಹುದಾದ್ದರಿಂದ ನಾವು ಸಮಯವನ್ನು ಉಳಿಸುವೆವೇ? ಖಂಡಿತ ಇಲ್ಲ. ಹಿಂದೆ ಯಾರನ್ನು ನೋಡಲು ಹೋದರೂ ಈಗಿನ ಹಾಗೆ "ಇಲ್ಲಾ ರಿ. ನಾನು ತುಂಬಾ ಬಿಝಿ." ಎಂದು ಒದರುತ್ತಿರಲಿಲ್ಲ. ಅವರಿಗೆ ಸಮಯವಿರುತ್ತಿತ್ತು. ಫೋನಿಲ್ಲದ ಆ ಕಾಲದಲ್ಲಿ, ತುಂಬ ಕಾರುಗಳ ಕಾರುಬಾರು ಇರದ ಆ ಕಾಲದಲ್ಲಿ, ಮನೆಗಳು ಚಿಕ್ಕದಾಗಿದ್ದರೂ ಮನಸ್ಸುಗಳು ದೊಡ್ಡದಾಗಿದ್ದ ಆ ಕಾಲದಲ್ಲಿ - ಬಹುತೇಕ ಎಲ್ಲರಿಗೂ ಸಮಯವಿರುತ್ತಿತ್ತು. ಈಗ ಎಲ್ಲವನ್ನೂ ಅಲ್ಲೇ ಮಾಡಲು ಸಾಧ್ಯವಿದ್ದರೂ ನಮ್ಮ ಬಳಿ ಬೇರೆಯವರಿಗೆ ಹೋಗಲಿ, ನಮಗಾಗಿಯೇ ಸಮಯವಿಲ್ಲ. ನಿರಂತರ ಹಾರಾಟ...ನಿರಂತರ ಓಡಾಟ... ಬೇಗ ಕೆಲಸ ಮುಗಿಸಲು ವ್ಯವಸ್ಥೆಯಿದ್ದರೂ ನಮ್ಮ ಬಳಿ ಸಮಯ ಉಳಿಯುವುದಿಲ್ಲ. ಎಂಥ ವಿಪರ್ಯಾಸ!
ನಾವು ನಮ್ಮೂರಿನ ಬೇರೆಯ ಭಾಗಗಳ ಮತ್ತು ಬೇರೆ ಊರಿನ ನೆಂಟರಿಷ್ಟರನ್ನು ಸಂಪರ್ಕಿಸಲು ಪತ್ರಗಳನ್ನು ಬರೆಯುತ್ತಿದ್ದೆವು. ಅದೂ ಕೈಯಲ್ಲಿ. ಈಗಿನ ಹಾಗೆ ಕೀಲಿಮಣೆಯ ಬರಹ ಇರಲಿಲ್ಲ. ಈಗಲೂ ಈ-ಮೈಲ್ ನಲ್ಲೂ ಅದೇ ವಿಷಯ ಬರೆಯಬಹುದು. ಆದರೆ ಬಹಳಷ್ಟು ಜನರು ಮಾತನಾಡುವುದನ್ನೇ ಅಪೇಕ್ಷಿಸುತ್ತಾರೆ. ಇದರಿಂದ ಜನರ ಬರವಣಿಗೆಯ ಶಕ್ತಿ ಕುಂಠಿತವಾಗುತ್ತಿದೆಯೇ? ಇಲ್ಲಿ ಒಂದು ವಿಚಿತ್ರದ ಸಂಗತಿಯೇ ನಡೆಯುತ್ತಿದೆಯೆನ್ನಬಹುದು. ಯಾವಾಗಲಾದರೂ ಯಾರನ್ನಾದರೂ ಮಾತನಾಡಿಸುವುದು ಆಧುನಿಕ ತಂತ್ರಜ್ಞಾನದ ಸಾಧನೆಯಾದರೆ ಮತ್ತೊಬ್ಬರನ್ನು ಮುಖೇನ ಮಾತನಾಡಿಸುವುದು ತಲತಲಾಂತರಗಳಿಂದ ಮಾನವನಲ್ಲಿ ಹುದುಗಿದ ಆ ಸಂವಹನದ ಕೋರಿಕೆ, ಬೇಡಿಕೆ. ಆದ್ದರಿಂದ ಬರೆಯಲು ಮರೆಯುತ್ತಿದ್ದೇವೆಯಾದರೂ ಅದಕ್ಕಿಂತ ಮೂಲಭೂತವಾದ ರೀತಿಯಲ್ಲಿಯೇ, ಬರಿಯ ಮಾತಿನಿಂದಲೇ ಸಂಪರ್ಕಿಸುತ್ತಿದ್ದೇವೆ. ಆದರೂ ಮನಸ್ಸಿನ ಮೂಲೆಯಲ್ಲಿ - ಹಳೆಯ ರೀತಿಯಲ್ಲಿ ಮೊದಲು ಉ.ಕು.ಸಾಂ ಅಥವಾ "ಕ್ಷೇಮ" ಬರೆದು, "ತೀರ್ಥರೂಪರಾದ" ಮುಂತಾದ ರೀತಿಗಳಲ್ಲಿ ಸಂಬೋಧಿಸಿ, ಬರವಣಿಗೆ ಅರ್ಥವಾಗುವ ರೀತಿಯಲ್ಲಿ ಸ್ಫುಟವಾಗಿ ಬರೆಯುವ ಅಭ್ಯಾಸ ನಮ್ಮಿಂದ ದೂರವಾಗಿದೆಯೆಂದು ಕಂಡಾಗ - ಏನೋ ಕಳೆದುಕೊಂಡ ಹಾಗಾಗಿ ಮನಸ್ಸು ಮ್ಲಾನವಾಗುತ್ತದೆ.
ನದಿಯಲ್ಲಿ ಹಳೆಯ ನೀರು ಹರಿದು ಮುಂದೆ ಹೋಗಲೇಬೇಕು. ಹೊಸ ನೀರು ಹರಿದು ಬರಬೇಕು. ಕಾಲದ ಹರಿಯುವಿಕೆಯಲ್ಲಿ ಕೂಡ ಹೀಗೆಯೇ! "ಕೆಟ್ಟ ಕಾಲವಪ್ಪ ಇದು!" ಎಂದು ಹಲುಬುವವರು ಹಲವರಿದ್ದರೂ ಅವರಿಗೆ ನಾನು ಹೇಳುವುದು ಇದನ್ನೇ - "ನಿಮ್ಮ ಯೌವನದಲ್ಲಿ, ನಿಮ್ಮ ಹಿರಿಯರೂ ಹೀಗೇ ಅಂದದ್ದನ್ನು ಮರತಿರೋ?" ಎಂದು. ನನ್ನ ಮೇಲಿನ ಬರವಣಿಗೆ "ಕಾಲ ಕೆಟ್ಟಿತು" ಅನ್ನುವವರ ರೀತಿಯಾಗಿ ಕಂಡಿರಬಹುದು. ಆದರೆ ಅದು ಇರುವುದರ ಬಗ್ಗೆ ಬೇಸರವಲ್ಲ. ಹಳೆಯ ರೀತಿಯಲ್ಲಿಯೂ ಇದ್ದ ಸ್ವಲ್ಪ ಸೊಗಸು ಮಾಯವಾಗಿರುವ ಬಗೆಗಿನ ಮರುಕವಷ್ಟೆ.
"ಬದಲಾವಣೆಯೇ ಶಾಶ್ವತ" - ಈ ವಾಕ್ಯದಷ್ಟು ಕ್ಲೀಷೆ ಮತ್ತೊಂದಿಲ್ಲದಿದ್ದರೂ ಅದು ಎಷ್ಟು ಸತ್ಯವೆಂದು ಒತ್ತಿ ಹೇಳಬೇಕಾದುದೇನಿಲ್ಲ. ಕಾಲ ಜಾರುತ್ತದೆ. ನಿನ್ನೆಯ ಮಕ್ಕಳು, ಇಂದಿನ ಯುವಕರಾಗುತ್ತಾರೆ. ನಿನ್ನೆಯ ಯುವಕರು ಇಂದಿನ ವೃದ್ಧರಾಗಿ, ನಿನ್ನೆಯ ವೃದ್ಧರು ಕೇವಲ ಇಂದಿನ ಮತ್ತು ಮುಂದಿನ ನೆನಪಾಗಿ ಉಳಿಯುವುದರಲ್ಲಿ ಕಾಲದ ನಿಃಶಬ್ದ ಹರಿಯುವಿಕೆ ತಿಳಿಯುವುದು. "ಇತಿಹಾಸದ ಹಿಮದಲ್ಲಿ" ಹುದುಗಿರುವ "ಸಿಂಹಾಸನ ಮಾಲೆಗಳೆ"ಲ್ಲ ಕಾಲ ಮುಟ್ಟಿ ಮುಂದೆ ಹೋದ ಮೈಲಿಗಲ್ಲುಗಳು.
ನನಗೆ ಬಹಳ ಇಷ್ಟವಾದ ಕವಿ-ದಾರ್ಶನಿಕರಲ್ಲಿ ಒಬ್ಬರಾದ ಭರ್ತೃಹರಿಯ ವೈರಾಗ್ಯ ಶತಕದ ಪದ್ಯದೊಂದಿಗೆ ನನ್ನ ಇಂದಿನ ಗದ್ಯಕ್ಕೆ "ಇತಿ ಶಮ್" ಎನ್ನುವೆ.
ಸಾ ರಮ್ಯಾ ನಗರೀ ಮಹಾನ್ ಸ ನೃಪತಿಃ ಸಾಮಂತಚಕ್ರಂ ಚ ತತ್ |
ಪಾರ್ಶ್ವೇ ತಸ್ಯ ಚ ಸಾ ವಿದಗ್ಧಪರಿಷತ್ ತಾಶ್ಚಂದ್ರಬಿಂಬಾನನಾಃ |
ಉದ್ವೃತ್ತಃ ಸ ಚ ರಾಜಪುತ್ರನಿವಹಸ್ತೇ ಬಂದಿನಸ್ತಾಃ ಕಥಾಃ |
ಸರ್ವಂ ಯಸ್ಯ ವಶಾದಗಾತ್-ಸ್ಮೃತಿಪಥಂ ಕಾಲಾಯ ತಸ್ಮೈ ನಮಃ ||
ಏನು ರಮ್ಯ ನಗರ! ಆ ಮಹಾರಾಜ ! ಏನವನ ಸಾಮಂತರು!
ಆಯೆಡೆ ವಿದ್ವನ್ಮಂಡಲಿಯಿರೆ, ಈಯೆಡೆ ಚಂದ್ರಮುಖಿಯರು!
ಏನಾ ರಾಜಕುವರವರ್ಗದ ಗರ್ವ! ಆ ಹೊಗಳುಭಟ್ಟರಾಕಥೆಗಳೋ!
ಈಯೆಲ್ಲ ಯಾರ ವಶದಿಂ ಕೇವಲ ಸ್ಮೃತಿಯಾಗಿಹುದೋ ಆ ಕಾಲಗೆ ನಮೋ ನಮಃ!
Showing posts with label Nostalgia. Show all posts
Showing posts with label Nostalgia. Show all posts
Tuesday, May 08, 2007
Tuesday, April 17, 2007
MV Krishnaswamy and his Maharaja's college in Mysore
MVK : outlookindia.com and Mysore, Once Upon A Time present a wonderful picture of a remarkable person of that bygone era. I had barely heard of MV Krishnaswamy's name before I read this piece. However, these pieces are just marvellous. Written by Sugata Srinivasaraju, these take you really back in time to show how Mysore was in the Royal Era. I have been always keen to know more and more about the old Mysore state when ruled by the Royal family under able administrators such as Sir M Visvesvaraya. This piece has tickled my curiosity to know even more.
All I can say is "Ah! Those must have been the days"
All I can say is "Ah! Those must have been the days"
Wednesday, March 21, 2007
Exam season - a trip down memory lane
When I began to scan today's newspaper, the first thing that I caught my eyes was the note that SSLC exams were beginning today. That took me a trip down memory lane.
Even though the last exam I wrote was quite a while ago, the mention of the word "exam" still brings up a variety of feelings in me. Nostalgia, fear and relief together is a unique combination.
When we undergo an ordeal, it seems most distressing at that moment. But after a while, we seem to enjoy it. And after even more time, we begin to miss it! Exams were just like that. I still remember the ceaseless preparations, late night studies (mostly because I lazed around during most of the year), anxiety and a whole range of what-ifs. What if this question for which I was not prepared appeared in the paper? Just thinking about that possibility made many a student nervous.
I still remember the food restriction imposed at home. I was supposed to eat only light food - not that I had the appetite to eat anything at all! And of course, the unavoidable drowsiness! During other times, I would be able to stay up late at night - but during exams, no, not at all! I would feel drowsy at 8 PM!!
Mid-term exams were never a problem - but final exams were. One reason was that they all happened in the scorching summer. I used to have exams at 2 PM. Imagine walking to school in the wonderfully hot summer sun at 12:30 PM! That too with all that tension!
And can we forget the Divine? Especially during exam times? Such fervor was never seen before and would never be seen till the next exams! How devoutly we bowed down to the pictures of Gods and to the temples on the way to school! How devoutly did several of us apply vermilion and vibhUti on our otherwise unadorned foreheads!
I had pictures of my favorite God Ganesha pasted on my pad! And that pad! That unavoidable accoutrement of the exam season! That faithful companion when all else, including your textbooks, friends and other resources, had abandoned you! That wonderful thing that provided support to your answer sheets! Was any pad other than my lucky pad acceptable? What if I took something else and the question paper became so ponderously unanswerable (shudder) !
And when you went into that exam, you would have friends (would you call them friends then?) waiting around. Some would be better prepared than you and a few others would give you that happy consolation that you had company! Some officious ones would try to check your level of preparedness before the exam, asking about some obscure thing in the text book, which, of course, you would have heard about only then! Then you would spend the rest of the time praying for that not to appear in the paper, or if you were a bit braver, try to finally (and frantically) see those unopened corners of the book where such precious nuggets were hidden.
That usual bell which signaled commencement of the day's classes otherwise, would sound ominous. This would then set off a slowly trudging group of sober students towards their exam rooms. Once textbooks and bags had been laid in that inaccessible corner, students would then approach their seats and sit in them, all the while offering silent prayer or recalling that tidbit which would become useless in a couple of hours.
The wait for the question paper would be a veritable eternity. Once the answer papers were given, several would mark it with their favorite auspicious word - be it Sri or OM or RAM or whatever! And finally would the paper be delivered. Some would begin scanning the papers and others would begin scanning the faces of their classmates. A purposeful smile let out by the second ranker would rankle the first ranker whose position would be in jeopardy if he/she didn't do well. The answering would begin.
There were always those who felt great sadistic joy in requesting for that first additional sheet with a triumphant spring from their seats! These would inevitably draw anxious eyes from the rest of the room. And competition would begin for more sheets amongst the students.
Some would always get out of any exam thirty minutes before the rest. Everybody would look at that person incredulously. "What is with this guy? Is he faster or am I slower?". Some confident guys would think - "Poor guy. Probably didn't know the answers to all the questions". And then there were those from whom answer sheets had to be literally snatched away by the invigilator.
How can I forget that rarely absent, mostly latent, sometimes patent and even blatant tendency to copy? In mathematics exams, one could see the dire desire of several students to check if they indeed had obtained the right answer. Ingenious means of communication would have been developed for this juvenile act. Of course, a few unfortunate ones got debarred at public examinations.
Once the students got out of the halls, there would be this cross-checking with others. These meddlesome ones who wanted to check all the answers of their classmates would be chased away by those sullen characters who would be sure of their dismal performance in the exam even without being sure of the correctness of their answers.
This solemn process would occur on each day of the exam.
This dark cloud of the exam had the silver lining of the last day when everybody knew that their ordeal had come to an end. They would not be subject to any more torture that year. They were free! It is this feeling that evokes a fond feeling of nostalgia even now. Once enmeshed in the real world, things to look forward to are not that easily available; one would have to make them by and for oneself. The exam (and the subsequent long summer vacation) presented a system provided annual event which would be the thing to collectively look forward to.
When elders would tell us wistfully that student life was golden, we would curse them for not being sympathetic before grudgingly looking at our textbooks. How true they were! When I advise students (usually some hapless young relative that I have captured for the time being) to enjoy their student lives, I feel as if I am looking at a mirror that shows my face back in time.
But relief is another feeling that accompanies thoughts about examinations. No more of those cruel "Draw a diagram of the digestive system of a frog. Label the parts" or "Write short notes on Alfonso de Albuquerque". No more cramming useless dates for questions such as "Describe the causes, course and results of the (put your most hated battle here)".
This is something that will never come back in our lives. We may relive the same through our children or reminisce about those wonderful, crazy, funny, young and innocent moments.
"koi lauTA de mere beete hue din" - sings the Hindi part of my brain. Or for those preferring English, Bryan Adams sang - "Those were the best days of my life".
Even though the last exam I wrote was quite a while ago, the mention of the word "exam" still brings up a variety of feelings in me. Nostalgia, fear and relief together is a unique combination.
When we undergo an ordeal, it seems most distressing at that moment. But after a while, we seem to enjoy it. And after even more time, we begin to miss it! Exams were just like that. I still remember the ceaseless preparations, late night studies (mostly because I lazed around during most of the year), anxiety and a whole range of what-ifs. What if this question for which I was not prepared appeared in the paper? Just thinking about that possibility made many a student nervous.
I still remember the food restriction imposed at home. I was supposed to eat only light food - not that I had the appetite to eat anything at all! And of course, the unavoidable drowsiness! During other times, I would be able to stay up late at night - but during exams, no, not at all! I would feel drowsy at 8 PM!!
Mid-term exams were never a problem - but final exams were. One reason was that they all happened in the scorching summer. I used to have exams at 2 PM. Imagine walking to school in the wonderfully hot summer sun at 12:30 PM! That too with all that tension!
And can we forget the Divine? Especially during exam times? Such fervor was never seen before and would never be seen till the next exams! How devoutly we bowed down to the pictures of Gods and to the temples on the way to school! How devoutly did several of us apply vermilion and vibhUti on our otherwise unadorned foreheads!
I had pictures of my favorite God Ganesha pasted on my pad! And that pad! That unavoidable accoutrement of the exam season! That faithful companion when all else, including your textbooks, friends and other resources, had abandoned you! That wonderful thing that provided support to your answer sheets! Was any pad other than my lucky pad acceptable? What if I took something else and the question paper became so ponderously unanswerable (shudder) !
And when you went into that exam, you would have friends (would you call them friends then?) waiting around. Some would be better prepared than you and a few others would give you that happy consolation that you had company! Some officious ones would try to check your level of preparedness before the exam, asking about some obscure thing in the text book, which, of course, you would have heard about only then! Then you would spend the rest of the time praying for that not to appear in the paper, or if you were a bit braver, try to finally (and frantically) see those unopened corners of the book where such precious nuggets were hidden.
That usual bell which signaled commencement of the day's classes otherwise, would sound ominous. This would then set off a slowly trudging group of sober students towards their exam rooms. Once textbooks and bags had been laid in that inaccessible corner, students would then approach their seats and sit in them, all the while offering silent prayer or recalling that tidbit which would become useless in a couple of hours.
The wait for the question paper would be a veritable eternity. Once the answer papers were given, several would mark it with their favorite auspicious word - be it Sri or OM or RAM or whatever! And finally would the paper be delivered. Some would begin scanning the papers and others would begin scanning the faces of their classmates. A purposeful smile let out by the second ranker would rankle the first ranker whose position would be in jeopardy if he/she didn't do well. The answering would begin.
There were always those who felt great sadistic joy in requesting for that first additional sheet with a triumphant spring from their seats! These would inevitably draw anxious eyes from the rest of the room. And competition would begin for more sheets amongst the students.
Some would always get out of any exam thirty minutes before the rest. Everybody would look at that person incredulously. "What is with this guy? Is he faster or am I slower?". Some confident guys would think - "Poor guy. Probably didn't know the answers to all the questions". And then there were those from whom answer sheets had to be literally snatched away by the invigilator.
How can I forget that rarely absent, mostly latent, sometimes patent and even blatant tendency to copy? In mathematics exams, one could see the dire desire of several students to check if they indeed had obtained the right answer. Ingenious means of communication would have been developed for this juvenile act. Of course, a few unfortunate ones got debarred at public examinations.
Once the students got out of the halls, there would be this cross-checking with others. These meddlesome ones who wanted to check all the answers of their classmates would be chased away by those sullen characters who would be sure of their dismal performance in the exam even without being sure of the correctness of their answers.
This solemn process would occur on each day of the exam.
This dark cloud of the exam had the silver lining of the last day when everybody knew that their ordeal had come to an end. They would not be subject to any more torture that year. They were free! It is this feeling that evokes a fond feeling of nostalgia even now. Once enmeshed in the real world, things to look forward to are not that easily available; one would have to make them by and for oneself. The exam (and the subsequent long summer vacation) presented a system provided annual event which would be the thing to collectively look forward to.
When elders would tell us wistfully that student life was golden, we would curse them for not being sympathetic before grudgingly looking at our textbooks. How true they were! When I advise students (usually some hapless young relative that I have captured for the time being) to enjoy their student lives, I feel as if I am looking at a mirror that shows my face back in time.
But relief is another feeling that accompanies thoughts about examinations. No more of those cruel "Draw a diagram of the digestive system of a frog. Label the parts" or "Write short notes on Alfonso de Albuquerque". No more cramming useless dates for questions such as "Describe the causes, course and results of the (put your most hated battle here)".
This is something that will never come back in our lives. We may relive the same through our children or reminisce about those wonderful, crazy, funny, young and innocent moments.
"koi lauTA de mere beete hue din" - sings the Hindi part of my brain. Or for those preferring English, Bryan Adams sang - "Those were the best days of my life".
Thursday, August 17, 2006
ಸ್ವಾತಂತ್ರ್ಯದಿವಸದ ಕಿರುನೆನಪುಗಳು
ಸಾಕಷ್ಟು ಸ್ವಾತಂತ್ರ್ಯದಿವಸಗಳನ್ನು ನೋಡಿದ್ದೇನೆ. ಒಂದರಂತೆ ಒಂದಿಲ್ಲದಿದ್ದರೂ ಆ ದಿನ ಸಾಮಾನ್ಯವಾಗಿ ಮೂಡಿಸುವ ಭಾವನೆಗಳು ಬಹುಪಾಲು ಹಾಗೆಯೇ ಇಂದಿಗೂ ಇವೆ.
ಶಾಲೆಯಲ್ಲಿ ಓದುವಾಗ ಸ್ವಾತಂತ್ರ್ಯದಿನ ನಮ್ಮ ದೇಶದ ಬಗ್ಗೆ ಯೋಚಿಸುವ ಸಮಯವಾಗಿತ್ತು. ವಿಶೇಷವಾಗಿ ಸ್ವಾತಂತ್ರ್ಯಸಂಗ್ರಾಮದ ಬಗ್ಗೆ. ಅಂದಿನ ಹುತಾತ್ಮರ ಬಗ್ಗೆ. ಗಾಂಧಿ-ನೆಹರು-ಪಟೇಲ್ ಮುಂತಾದವರ ಹಳೆಯ ಚಿತ್ರಗಳು ಟಿ.ವಿ.ಯಲ್ಲಿ ಬಿತ್ತರಗೊಳ್ಳುತ್ತಿದ್ದವು. ಅದನ್ನೇ ನೋಡಿ ನನಗೆ ಸಂತೋಷ. ದೇಶಭಕ್ತಿಯ ತಾತ್ಕಾಲಿಕ ಆವೇಶ. ಜೊತೆಗೆ ಬಿಳಿಯ ಸಮವಸ್ತ್ರ ಧರಿಸಿ ಶಾಲೆಗೆ ಹೋಗೋಣ - ಅಲ್ಲಿ ಸಾಮೂಹಿಕ ವ್ಯಾಯಾಮದಲ್ಲಿ ಪಾಲ್ಗೊಳ್ಳೋಣ - ಧ್ವಜಾರೋಹಣ ಕಾರ್ಯಕ್ರಮದ ನಂತರ ಚಾಕಲೇಟ್ ಅಥವಾ ಮತ್ತೊಂದು ಮಿಠಾಯಿಯ ತಿನ್ನೋಣ ಎಂಬ ಕ್ರಮವೇ ಸಾಧಾರಣವಾಗಿ ಎಲ್ಲ ಶಾಲೆಗೆ ಹೋಗುವ ಮಕ್ಕಳಿಗೂ ಇದ್ದಿತ್ತು.
ಶಾಲೆಯ ನಂತರ ಕಾಲೇಜು. ಅಲ್ಲಿ ಶಾಲೆಗೆ ಹೋಗಲೇ ಬೇಕೆಂಬಂತೆ ಕಡ್ಡಾಯವಿಲ್ಲ. ಹೋಗಲು ಇಷ್ಟವಿದ್ದವರು ಹೋಗಬಹುದು. ಇಲ್ಲದೇ ಮನೆಯಲ್ಲಿರಬಹುದು. ನನಗೋ ಎನ್.ಸಿ.ಸಿ ಮುಂತಾದ ಚಟುವಟಿಕೆಗಳು ಸ್ವಲ್ಪ ಬೋರು ಹೊಡೆಸುವಂಥವು. (ಈಗ ಹೋಗಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಪಶ್ಚಾತ್ತಾಪ, ಬಿಡಿ) ಕ್ರಿಕೆಟ್, ಕಥೆಪುಸ್ತಕ ಓದುವುದು, ಬೀದಿ ಸುತ್ತುವುದು, ಟಿ.ವಿ. ನೋಡುವ ಮೊದಲಾದ ಕಾರ್ಯಕ್ರಮಗಳೇ ಇಷ್ಟ. ಕಡ್ಡಾಯವಿರದುದರಿಂದ ಗರಿಗೆದರಿದ ಹಕ್ಕಿಯ ಹಾಗೆ ನನಗೂ ಸ್ವಾತಂತ್ರ್ಯದ ಅನುಭವ. ಆದರೂ ಮನೆಯ ಒಳಗೆ ಕಾಫಿ ಹೀರುತ್ತಾ ಕೆಂಪು ಕೋಟೆಯ ಮೇಲಿನ ಭಾಷಣದ ವೀಕ್ಷಣೆ . ಅಂದಿನ ಪ್ರಧಾನಿಗಳು ಏನು ಹೇಳಿದರೋ ಯಾರಿಗೆ ಗೊತ್ತು? ಹೇಗಿದ್ದರೂ "ಹೇಳುವುದು ಒಂದು - ಮಾಡದಿರುವುದೇ ಹಲವು ಹನ್ನೊಂದು" ಎಂಬ ನನ್ನ ಆಗಲೇ ಮೂಡಿದ ಒಂದು ಸಿನಿಕತೆ (cynicism) ಬೇರೆ! ಆದರೆ ಇದರ ನಡುವೆಯೂ ದೇಶಭಕ್ತಿಯ ತಾತ್ಕಾಲಿಕ ಆವೇಶ!
ನಂತರ ಅಮೇರಿಕಕ್ಕೆ ಗಮನ. ಅಲ್ಲಂತೂ ಈ ದಿನದಂದು ರಜೆಯಿಲ್ಲ. ಮಾಮೂಲಿನ ಹಾಗೆ ಇದೂ ಒಂದು ದಿನ. ಕೆಲಸವೆಲ್ಲವೂ ಮಾಮೂಲಿನ ಹಾಗೆಯೇ! ಆದರೆ ದೇಶವನ್ನು ಬಿಟ್ಟವರಿಗೆ ಏನನ್ನೋ ಬಿಟ್ಟಿದ್ದೇವೆಂಬ ಭಾವನೆ ಹೆಚ್ಚಾಗಿರುತ್ತದೆ ಎಂಬುದು ನನ್ನ ಅನುಭವ. ಅಂದು ವಿಶೇಷವಾಗಿ ನಮ್ಮ ದೇಶದಲ್ಲಿ ಏನು ನಡೆಯಿತು ಎಂದು ಅಂತರ್ಜಾಲ ಪತ್ರಿಕೆಗಳಲ್ಲಿನ ವಿಷಯದ ಹೆಕ್ಕುವಿಕೆ. ಏನೂ ಆಗದಿರಲಿ ಭಯೋತ್ಪಾದಕರಿಂದ ಎಂಬ ಪ್ರಾರ್ಥನೆ. ನಮ್ಮ ದೇಶದ ಆಡಳಿತಕ್ಕೆ ಏನಾಗಿದೆ ಎಂಬ ಒಂದು ಚಿಂತೆ. ಅಮೇರಿಕದ ಸೌಲಭ್ಯಗಳನ್ನು ನೋಡಿ ನಮ್ಮ ದೇಶಕ್ಕೆ ಹೀಗೆ ಎಂದಾಗುವುದೋ ಎಂಬ ಯೋಚನೆ. ಜೊತೆಗೆ ಶುಭಾಶಯಗಳನ್ನು ನೀಡಲು ಅವರಿವರಿಗೆ ಈ-ಮೈಲ್ ಕಳಿಸಿವುದು. ಕಾರ್ಯಕ್ರಮವೇನಾದರೂ ಇದ್ದರೆ ವಾರಾಂತ್ಯದಲ್ಲಿ ಇರುತ್ತಿತ್ತು. ಅದರಲ್ಲಿ ಆದಾಗ ಭಾಗವಹಿಸುವುದು. ಹೀಗೆ ಅಲ್ಲಿ ಸಾಗಿತ್ತು. ಅಲ್ಲೂ ದೇಶಭಕ್ತಿಯ ಆವೇಶ - ಇನ್ನೂ ತಾತ್ಕಾಲಿಕವೇ!
ಭಾರತಕ್ಕೆ ಮರಳಿದ ನಂತರ ಆಗಸ್ಟ್ ೧೫ರಂದು ರಜೆಯಂತೂ ಸಿಗುತ್ತದೆ. ಆದರೆ ಸಾಮಾನ್ಯದ ರಜೆಯಂತಾಗಿದೆ. ಧಾರ್ಮಿಕವಾದ ಒಂದು ಅಂಶ ಈ ದಿನಕ್ಕಿಲ್ಲ. ಆದ್ದರಿಂದ ವಿಶೇಷದ ಹೂವು ಹಣ್ಣು ಪೂಜೆ ಇತ್ಯಾದಿಗಳು ಅಂದು ಇರುವುದಿಲ್ಲ. ಒಂದೇ ಒಂದು ಸಂಗತಿ ಈ ನಡುವೆ ಬೆಂಗಳೂರಿನಲ್ಲಿ ಕಾಣಿಸಿತು. ಅದು ಭಾರತದ ಬಾವುಟಗಳ ಮಾರಾಟ. ಸಣ್ಣ ಹಾಗು ದೊಡ್ಡ ಗಾತ್ರದ ಬಾವುಟಗಳು ಪ್ರತಿಯೊಂದು ದೊಡ್ಡ ಟ್ರಾಫಿಕ್ ಸಿಗ್ನಲ್ ನಲ್ಲಿಯೂ ಲಭ್ಯ. ಬಹುತೇಕ ಎಲ್ಲ ಆಟೋಗಳ ಮೇಲೆ ನಮ್ಮ ದೇಶದ ಧ್ವಜದ ಹಾರಾಟ. ಜೊತೆಗೆ ಕಾರು ಬೈಕುಗಳ ಮೇಲೆಯೂ. ನಮ್ಮ ಸರ್ಕಾರ ದೊಡ್ಡ ಮನಸ್ಸು ಮಾಡಿ ಈಗ ಬಾವುಟಗಳನ್ನು ನಿರ್ಬಂಧಿಸುವುದನ್ನು ನಿಲ್ಲಿಸಿದೆ. ಅದರಿಂದಲೇ ಈಗ ಬಾವುಟಗಳ ಬಿರುಸಾದ ಬಿಕರಿ ನಡೆದಿರುತ್ತದೆ. ಹಿಂದೆಯಾದರೋ ಬಾವುಟವೆಂದರೆ ಮಡಿಯ ವಸ್ತು - ಅದನ್ನು ಮುಟ್ಟಿದರೇ ಅದಕ್ಕೆ ಅವಮಾನ ಮಾಡಿದ ಹಾಗೆ ಅನ್ನಿಸುವಷ್ಟು ಕಠಿನ ನಿಯಮಗಳು ಜಾರಿಯಲ್ಲಿದ್ದವು. ಇವುಗಳ ಸಡಿಲಿಕೆ ಸರ್ಕಾರ ಮಾಡಿರುವ ಒಳ್ಳೆಯ ಕೆಲಸ. ಅವುಗಳು "ಮೇಡ್ ಇನ್ ಚೈನಾ" ಆಗದಿದ್ದರೆ ಒಳ್ಳೆಯದು! (ಅಮೇರಿಕದಲ್ಲಿ ಸಾಮಾನ್ಯವಾಗಿ ಅಲ್ಲಿನ ಸಾಮಾನ್ಯ ಖರೀದಿಗೆ ಸಿಗುವ ಬಾವುಟಗಳೆಲ್ಲವೂ ಮೇಡ್ ಇನ್ ಚೈನಾ!). ಈ ಬಾವುಟದ ಅಂಶ ಬಿಟ್ಟರೆ ಈ ದಿನ ಸಾಮಾನ್ಯದ ರಜೆ. ಹೌದು, ಇಂದೂ ಕೆಂಪು ಕೋಟೆಯ ಮೇಲೆ ನಿಂತು ಮಾತುಗಳನ್ನಾಡುತ್ತಾರೆ, ಆದರೆ ಅವು ಎಂದಿನಂತೆ ಪ್ರಯೋಜನಕ್ಕೆ ಬಾರದವು. ಬದಲಾವಣೆಗಳಾಗಿಯೂ ಬದಲಾವಣೆಯಿಲ್ಲದ ವರ್ತನೆಗಳು ನನ್ನಲ್ಲಿನ ಸ್ವಾತಂತ್ರ್ಯ ದಿನದ ತಾತ್ಕಾಲಿಕ ದೇಶಭಕ್ತಿಯ ಆವೇಶವನ್ನೂ ಇಲ್ಲದ ಹಾಗೆ ಮಾಡಿವೆ. ಈ ಆವೇಶಕ್ಕೆ ಕಾರಣವೇನೆಂದು ಹುಡುಕಲು ಮೊದಲು ಹೊರಟ ನನಗೆ ಈ ಆವೇಶ ವ್ಯರ್ಥವಾದದ್ದು, ನಿರರ್ಥಕವಾದದ್ದು ಎಂಬ ಭಾವನೆ ತರಿಸಿತ್ತು.
ಈ ಹತಾಶೆಯ ನಡುವೆ ಮೊನ್ನೆ ಶಾಲೆಯೊಂದರ ಮುಂದೆ ಹಾದು ಹೋಗುವ ಸಂದರ್ಭ ಬಂದಿತು. ಬಿಳಿ ಉಡುಪುಗಳನ್ನು ಧರಿಸಿ ಮಕ್ಕಳು ಹೊರಗೆ ಬರುತ್ತಿದ್ದರು. ಅವರ ಮುಖಗಳ ಮೇಲಿನ ನಗೆ, ಆ ಕಣ್ಣುಗಳಲ್ಲಿನ ಕಾಂತಿ, ಅವರು ಸೂಸುವ ಆಶಾಭಾವನೆ, ಅವರಲ್ಲಿನ ಲವಲವಿಕೆ - ಇವೆಲ್ಲವೂ ನನ್ನನ್ನು ಒಮ್ಮೆಲೆ ತಟ್ಟಿತು. "ಎಲ್ಲವೂ ಇನ್ನು ಹಾಳಾಗಿಲ್ಲ. All is not lost" ಎಂದು ಮನ ಹರ್ಷಿಸಿತು.
ಇತಿ ಶಮ್
ಶಾಲೆಯಲ್ಲಿ ಓದುವಾಗ ಸ್ವಾತಂತ್ರ್ಯದಿನ ನಮ್ಮ ದೇಶದ ಬಗ್ಗೆ ಯೋಚಿಸುವ ಸಮಯವಾಗಿತ್ತು. ವಿಶೇಷವಾಗಿ ಸ್ವಾತಂತ್ರ್ಯಸಂಗ್ರಾಮದ ಬಗ್ಗೆ. ಅಂದಿನ ಹುತಾತ್ಮರ ಬಗ್ಗೆ. ಗಾಂಧಿ-ನೆಹರು-ಪಟೇಲ್ ಮುಂತಾದವರ ಹಳೆಯ ಚಿತ್ರಗಳು ಟಿ.ವಿ.ಯಲ್ಲಿ ಬಿತ್ತರಗೊಳ್ಳುತ್ತಿದ್ದವು. ಅದನ್ನೇ ನೋಡಿ ನನಗೆ ಸಂತೋಷ. ದೇಶಭಕ್ತಿಯ ತಾತ್ಕಾಲಿಕ ಆವೇಶ. ಜೊತೆಗೆ ಬಿಳಿಯ ಸಮವಸ್ತ್ರ ಧರಿಸಿ ಶಾಲೆಗೆ ಹೋಗೋಣ - ಅಲ್ಲಿ ಸಾಮೂಹಿಕ ವ್ಯಾಯಾಮದಲ್ಲಿ ಪಾಲ್ಗೊಳ್ಳೋಣ - ಧ್ವಜಾರೋಹಣ ಕಾರ್ಯಕ್ರಮದ ನಂತರ ಚಾಕಲೇಟ್ ಅಥವಾ ಮತ್ತೊಂದು ಮಿಠಾಯಿಯ ತಿನ್ನೋಣ ಎಂಬ ಕ್ರಮವೇ ಸಾಧಾರಣವಾಗಿ ಎಲ್ಲ ಶಾಲೆಗೆ ಹೋಗುವ ಮಕ್ಕಳಿಗೂ ಇದ್ದಿತ್ತು.
ಶಾಲೆಯ ನಂತರ ಕಾಲೇಜು. ಅಲ್ಲಿ ಶಾಲೆಗೆ ಹೋಗಲೇ ಬೇಕೆಂಬಂತೆ ಕಡ್ಡಾಯವಿಲ್ಲ. ಹೋಗಲು ಇಷ್ಟವಿದ್ದವರು ಹೋಗಬಹುದು. ಇಲ್ಲದೇ ಮನೆಯಲ್ಲಿರಬಹುದು. ನನಗೋ ಎನ್.ಸಿ.ಸಿ ಮುಂತಾದ ಚಟುವಟಿಕೆಗಳು ಸ್ವಲ್ಪ ಬೋರು ಹೊಡೆಸುವಂಥವು. (ಈಗ ಹೋಗಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಪಶ್ಚಾತ್ತಾಪ, ಬಿಡಿ) ಕ್ರಿಕೆಟ್, ಕಥೆಪುಸ್ತಕ ಓದುವುದು, ಬೀದಿ ಸುತ್ತುವುದು, ಟಿ.ವಿ. ನೋಡುವ ಮೊದಲಾದ ಕಾರ್ಯಕ್ರಮಗಳೇ ಇಷ್ಟ. ಕಡ್ಡಾಯವಿರದುದರಿಂದ ಗರಿಗೆದರಿದ ಹಕ್ಕಿಯ ಹಾಗೆ ನನಗೂ ಸ್ವಾತಂತ್ರ್ಯದ ಅನುಭವ. ಆದರೂ ಮನೆಯ ಒಳಗೆ ಕಾಫಿ ಹೀರುತ್ತಾ ಕೆಂಪು ಕೋಟೆಯ ಮೇಲಿನ ಭಾಷಣದ ವೀಕ್ಷಣೆ . ಅಂದಿನ ಪ್ರಧಾನಿಗಳು ಏನು ಹೇಳಿದರೋ ಯಾರಿಗೆ ಗೊತ್ತು? ಹೇಗಿದ್ದರೂ "ಹೇಳುವುದು ಒಂದು - ಮಾಡದಿರುವುದೇ ಹಲವು ಹನ್ನೊಂದು" ಎಂಬ ನನ್ನ ಆಗಲೇ ಮೂಡಿದ ಒಂದು ಸಿನಿಕತೆ (cynicism) ಬೇರೆ! ಆದರೆ ಇದರ ನಡುವೆಯೂ ದೇಶಭಕ್ತಿಯ ತಾತ್ಕಾಲಿಕ ಆವೇಶ!
ನಂತರ ಅಮೇರಿಕಕ್ಕೆ ಗಮನ. ಅಲ್ಲಂತೂ ಈ ದಿನದಂದು ರಜೆಯಿಲ್ಲ. ಮಾಮೂಲಿನ ಹಾಗೆ ಇದೂ ಒಂದು ದಿನ. ಕೆಲಸವೆಲ್ಲವೂ ಮಾಮೂಲಿನ ಹಾಗೆಯೇ! ಆದರೆ ದೇಶವನ್ನು ಬಿಟ್ಟವರಿಗೆ ಏನನ್ನೋ ಬಿಟ್ಟಿದ್ದೇವೆಂಬ ಭಾವನೆ ಹೆಚ್ಚಾಗಿರುತ್ತದೆ ಎಂಬುದು ನನ್ನ ಅನುಭವ. ಅಂದು ವಿಶೇಷವಾಗಿ ನಮ್ಮ ದೇಶದಲ್ಲಿ ಏನು ನಡೆಯಿತು ಎಂದು ಅಂತರ್ಜಾಲ ಪತ್ರಿಕೆಗಳಲ್ಲಿನ ವಿಷಯದ ಹೆಕ್ಕುವಿಕೆ. ಏನೂ ಆಗದಿರಲಿ ಭಯೋತ್ಪಾದಕರಿಂದ ಎಂಬ ಪ್ರಾರ್ಥನೆ. ನಮ್ಮ ದೇಶದ ಆಡಳಿತಕ್ಕೆ ಏನಾಗಿದೆ ಎಂಬ ಒಂದು ಚಿಂತೆ. ಅಮೇರಿಕದ ಸೌಲಭ್ಯಗಳನ್ನು ನೋಡಿ ನಮ್ಮ ದೇಶಕ್ಕೆ ಹೀಗೆ ಎಂದಾಗುವುದೋ ಎಂಬ ಯೋಚನೆ. ಜೊತೆಗೆ ಶುಭಾಶಯಗಳನ್ನು ನೀಡಲು ಅವರಿವರಿಗೆ ಈ-ಮೈಲ್ ಕಳಿಸಿವುದು. ಕಾರ್ಯಕ್ರಮವೇನಾದರೂ ಇದ್ದರೆ ವಾರಾಂತ್ಯದಲ್ಲಿ ಇರುತ್ತಿತ್ತು. ಅದರಲ್ಲಿ ಆದಾಗ ಭಾಗವಹಿಸುವುದು. ಹೀಗೆ ಅಲ್ಲಿ ಸಾಗಿತ್ತು. ಅಲ್ಲೂ ದೇಶಭಕ್ತಿಯ ಆವೇಶ - ಇನ್ನೂ ತಾತ್ಕಾಲಿಕವೇ!
ಭಾರತಕ್ಕೆ ಮರಳಿದ ನಂತರ ಆಗಸ್ಟ್ ೧೫ರಂದು ರಜೆಯಂತೂ ಸಿಗುತ್ತದೆ. ಆದರೆ ಸಾಮಾನ್ಯದ ರಜೆಯಂತಾಗಿದೆ. ಧಾರ್ಮಿಕವಾದ ಒಂದು ಅಂಶ ಈ ದಿನಕ್ಕಿಲ್ಲ. ಆದ್ದರಿಂದ ವಿಶೇಷದ ಹೂವು ಹಣ್ಣು ಪೂಜೆ ಇತ್ಯಾದಿಗಳು ಅಂದು ಇರುವುದಿಲ್ಲ. ಒಂದೇ ಒಂದು ಸಂಗತಿ ಈ ನಡುವೆ ಬೆಂಗಳೂರಿನಲ್ಲಿ ಕಾಣಿಸಿತು. ಅದು ಭಾರತದ ಬಾವುಟಗಳ ಮಾರಾಟ. ಸಣ್ಣ ಹಾಗು ದೊಡ್ಡ ಗಾತ್ರದ ಬಾವುಟಗಳು ಪ್ರತಿಯೊಂದು ದೊಡ್ಡ ಟ್ರಾಫಿಕ್ ಸಿಗ್ನಲ್ ನಲ್ಲಿಯೂ ಲಭ್ಯ. ಬಹುತೇಕ ಎಲ್ಲ ಆಟೋಗಳ ಮೇಲೆ ನಮ್ಮ ದೇಶದ ಧ್ವಜದ ಹಾರಾಟ. ಜೊತೆಗೆ ಕಾರು ಬೈಕುಗಳ ಮೇಲೆಯೂ. ನಮ್ಮ ಸರ್ಕಾರ ದೊಡ್ಡ ಮನಸ್ಸು ಮಾಡಿ ಈಗ ಬಾವುಟಗಳನ್ನು ನಿರ್ಬಂಧಿಸುವುದನ್ನು ನಿಲ್ಲಿಸಿದೆ. ಅದರಿಂದಲೇ ಈಗ ಬಾವುಟಗಳ ಬಿರುಸಾದ ಬಿಕರಿ ನಡೆದಿರುತ್ತದೆ. ಹಿಂದೆಯಾದರೋ ಬಾವುಟವೆಂದರೆ ಮಡಿಯ ವಸ್ತು - ಅದನ್ನು ಮುಟ್ಟಿದರೇ ಅದಕ್ಕೆ ಅವಮಾನ ಮಾಡಿದ ಹಾಗೆ ಅನ್ನಿಸುವಷ್ಟು ಕಠಿನ ನಿಯಮಗಳು ಜಾರಿಯಲ್ಲಿದ್ದವು. ಇವುಗಳ ಸಡಿಲಿಕೆ ಸರ್ಕಾರ ಮಾಡಿರುವ ಒಳ್ಳೆಯ ಕೆಲಸ. ಅವುಗಳು "ಮೇಡ್ ಇನ್ ಚೈನಾ" ಆಗದಿದ್ದರೆ ಒಳ್ಳೆಯದು! (ಅಮೇರಿಕದಲ್ಲಿ ಸಾಮಾನ್ಯವಾಗಿ ಅಲ್ಲಿನ ಸಾಮಾನ್ಯ ಖರೀದಿಗೆ ಸಿಗುವ ಬಾವುಟಗಳೆಲ್ಲವೂ ಮೇಡ್ ಇನ್ ಚೈನಾ!). ಈ ಬಾವುಟದ ಅಂಶ ಬಿಟ್ಟರೆ ಈ ದಿನ ಸಾಮಾನ್ಯದ ರಜೆ. ಹೌದು, ಇಂದೂ ಕೆಂಪು ಕೋಟೆಯ ಮೇಲೆ ನಿಂತು ಮಾತುಗಳನ್ನಾಡುತ್ತಾರೆ, ಆದರೆ ಅವು ಎಂದಿನಂತೆ ಪ್ರಯೋಜನಕ್ಕೆ ಬಾರದವು. ಬದಲಾವಣೆಗಳಾಗಿಯೂ ಬದಲಾವಣೆಯಿಲ್ಲದ ವರ್ತನೆಗಳು ನನ್ನಲ್ಲಿನ ಸ್ವಾತಂತ್ರ್ಯ ದಿನದ ತಾತ್ಕಾಲಿಕ ದೇಶಭಕ್ತಿಯ ಆವೇಶವನ್ನೂ ಇಲ್ಲದ ಹಾಗೆ ಮಾಡಿವೆ. ಈ ಆವೇಶಕ್ಕೆ ಕಾರಣವೇನೆಂದು ಹುಡುಕಲು ಮೊದಲು ಹೊರಟ ನನಗೆ ಈ ಆವೇಶ ವ್ಯರ್ಥವಾದದ್ದು, ನಿರರ್ಥಕವಾದದ್ದು ಎಂಬ ಭಾವನೆ ತರಿಸಿತ್ತು.
ಈ ಹತಾಶೆಯ ನಡುವೆ ಮೊನ್ನೆ ಶಾಲೆಯೊಂದರ ಮುಂದೆ ಹಾದು ಹೋಗುವ ಸಂದರ್ಭ ಬಂದಿತು. ಬಿಳಿ ಉಡುಪುಗಳನ್ನು ಧರಿಸಿ ಮಕ್ಕಳು ಹೊರಗೆ ಬರುತ್ತಿದ್ದರು. ಅವರ ಮುಖಗಳ ಮೇಲಿನ ನಗೆ, ಆ ಕಣ್ಣುಗಳಲ್ಲಿನ ಕಾಂತಿ, ಅವರು ಸೂಸುವ ಆಶಾಭಾವನೆ, ಅವರಲ್ಲಿನ ಲವಲವಿಕೆ - ಇವೆಲ್ಲವೂ ನನ್ನನ್ನು ಒಮ್ಮೆಲೆ ತಟ್ಟಿತು. "ಎಲ್ಲವೂ ಇನ್ನು ಹಾಳಾಗಿಲ್ಲ. All is not lost" ಎಂದು ಮನ ಹರ್ಷಿಸಿತು.
ಇತಿ ಶಮ್
Subscribe to:
Posts (Atom)