Showing posts with label Literature. Show all posts
Showing posts with label Literature. Show all posts

Sunday, July 15, 2007

ಆಷಾಢಸ್ಯ ಪ್ರಥಮದಿವಸೇ

ಇಂದು ಆಷಾಢಮಾಸದ ಮೊದಲ ದಿನ.

"ಆಷಾಢವೆಂದರೆ ಯಾವ ಶುಭಕಾರ್ಯಕ್ರಮವೂ ಇರದ ತಿಂಗಳು. ಯಾವ ದೊಡ್ಡ ಹಬ್ಬವೂ ಇಲ್ಲದ ಮಾಸ." ಎಂದು ಎಲ್ಲರೂ ತಿಳಿಯುವ ವಿಷಯ. ಆದರೆ ಕೆಲವರಿಗೆ ಇದು ಹಬ್ಬ. ಅದೂ ಈ ಮಾಸದ ಮೊದಲ ದಿವಸ.

"ಟಾಟಾ ಇಂಡಿಕಾಮ್" ನ ಜಾಹಿರಾತಿನಲ್ಲೊಬ್ಬಳು "ಐ ಲವ್ ಯೂ" ಎಂದು ಮೂರು ಬಾರಿ ಹೇಳಿದ ಬಳಿಕ ಆ ಕಡೆ ಕೇಳಿಸದಿದ್ದರಿಂದ ಆ ಫೋನಿಗೆ "ಐ ಹೇಟ್ ಯೂ" ಎಂದು ಜುಗುಪ್ಸೆಯಿಂದ ಹೇಳುತ್ತಾಳೆ. "ನಾ ನಿನ್ನ ಪ್ರೀತಿಸುವೆ" ಅನ್ನುವ ಮಾತನ್ನು ಹೇಳಲು ಕೂಡ ತಾಳ್ಮೆಯಿಲ್ಲದ ಜನಾಂಗವಾಗಿದ್ದೇವೆ.

ಈ-ಮೈಲ್ ಯುಗದ ಈ ಕಾಲದಲ್ಲಿ ಸಂದೇಶಗಳು ನಿತ್ಯನಿರಂತರ ಪ್ರವಹಿಸುತ್ತಿರುತ್ತವೆ. ನಮಗೆ ಸಂವಹನವೆಂದರೆ ಎಷ್ಟು ಸುಲಭ! ಮನಸ್ಸಿಗೆ ಬಂದವರನ್ನು ಮನಸ್ಸಿಗೆ ಬಂದಾಗ ಸಂಪರ್ಕಿಸಬಹುದು. ಈ ಕಡೆಯಲ್ಲಿ ಅವರ ಸೆಲ್, ಆ ಕಡೆ ಇನ್ನೊಬ್ಬರದ್ದು. ಮಾತಿಗೆ ಮೊದಲಿಡುವುದು ಬಹಳ ಸುಲಭ. ಆದರೆ ಇಪ್ಪತ್ತು ವರ್ಷಗಳ ಹಿಂದೆ ಹಾಗಿರಲಿಲ್ಲವಲ್ಲ! ಫೋನ್ ಎಂದರೆ ಕಷ್ಟ. ಎಲ್ಲ ಪತ್ರವ್ಯವಹಾರವೇ! ಇನ್ನೂರು ವರ್ಷಗಳ ಹಿಂದೆ? ಹೋಗಲಿ, ಸಾವಿರ ವರ್ಷಗಳ ಹಿಂದೆ?

ಸಂವಹನದ ಅಗತ್ಯ ಎಲ್ಲರಿಗೂ ಇದೆ. ಆದರೆ ಇದರ ಅಗತ್ಯ ಆಗುವುದು ವಿಶೇಷವಾಗಿ ಪ್ರೇಮಿಗಳಿಗೆ. ಈಗಿನ ಕಾಲದಲ್ಲಿ ನಾನು ಮೊದಲೇ ಹೇಳಿದ ಹಾಗೆ ಸಂವಹನದ ಭೌತಿಕ ಕಂದಕವನ್ನು ನಾವು ದಾಟಿದ್ದೇವೆ. ಏನನ್ನು ಹೇಳಲು ಬಯಸುತ್ತಾರೋ - ಅದೇ ಮಾನಸಿಕ ಮತ್ತು ಬೌದ್ದಿಕ ಕಂದಕಗಳು - ಅದನ್ನು ಮೀರಿಸುವ ಕಷ್ಟ ಇದ್ದೇ ಇದೆ. ನಾವಿರುವವರೆಗೂ ಇರುತ್ತದೆ.

ಈಗ ಊಹಿಸಿಕೊಳ್ಳಿ. ಸುಮಾರು ಎರಡು ಸಾವಿರ ವರ್ಷಗಳ ಹಿಂದಿನ ಕಾಲ. ಅವನು ಬೇಸಿಗೆಯ ಬೇಗೆಯಲ್ಲಿ ತಪ್ತನಾಗಿ ಈಗಿನ ಆಂಧ್ರಪ್ರದೇಶದ ಆಸುಪಾಸಿನಲ್ಲಿದ್ದಾನೆ. ಅವಳು ಹಿಮಾಲಯದ ತಣ್ಣನೆಯ ವಾತಾರವರಣದಲ್ಲಿದ್ದರೂ ವಿರಹದ ಬೇಗೆಯಿಂದ ಬೇಯುತ್ತಿದ್ದಾಳೆ. ಈ ಪ್ರೇಮಿಗಳ ಸಂಪರ್ಕ ಹೇಗೆ ತಾನೆ ಸಾಧ್ಯ? ಒಳ್ಳೆಯ ಕಾವ್ಯಕ್ಕೆ ವಸ್ತುವಾಗಬಲ್ಲುದು ಈ ಸಂಪರ್ಕ. ಆಗಿದೆ ಕೂಡ.

ಈ ವಸ್ತುವನ್ನೇ ನಮ್ಮ ಕವಿಕುಲಕ್ಕೆ ಗುರುವೆನಿಸಿಕೊಂಡ ಕಾಲಿದಾಸನು ತನ್ನ ಮೇಘದೂತದಲ್ಲಿ ವಿಸ್ತರಿಸಿದ್ದಾನೆ. ಮುಂಚೆ ವರ್ಣಿಸಿದ ಪರಿಸ್ಥಿತಿಯಲ್ಲಿ ಸಿಲುಕಿದ ಆ ಪ್ರೇಮಿಗೆ ಯಾವ ದಾರಿಯೂ ಕಾಣದೆ - ಹಾಗೆ ಕಂಡ ಮೋಡವೊಂದನ್ನು ತನ್ನ ದೂತನನ್ನಾಗಿ ಮಾಡಿ ತನ್ನ ಪ್ರಿಯತಮೆಗೆ ಸಂದೇಶ ನೀಡುವುದೇ ಈ ಕಾವ್ಯದ ವಸ್ತು.

ಆ ಮೋಡವನ್ನು ನಮ್ಮ ನಾಯಕ ಕಂಡದ್ದು ಆಷಾಢದ ಮೊದಲನೇ ದಿವಸ. ಆ ಕಾವ್ಯದ ರಸವನ್ನನುಭವಿಸಿದ, ಕಾಲಿದಾಸನ ಅಭಿಮಾನಿಗಳಿಗೆ ಈ ದಿನ ಹಬ್ಬವಲ್ಲದೇ ಮತ್ತೇನು? ಸುಮಾರು ನೂರಹತ್ತು ಮಂದಾಕ್ರಾಂತಾ ಛಂದಸ್ಸಿನ ಪದ್ಯಗಳಲ್ಲಿ ಯಕ್ಷನ ಸಂದೇಶವನ್ನು ಮೇಘಕ್ಕೆ ತಿಳಿಸುತ್ತಾನೆ.

ಇದರ ಮೊದಲ ಪದ್ಯ :
ಕಶ್ಚಿತ್ ಕಾಂತಾವಿರಹಗುರುಣಾ ಸ್ವಾಧಿಕಾರಾತ್ ಪ್ರಮತ್ತಃ
ಶಾಪೇನಾಸ್ತಂಗಮಿತಮಹಿಮಾ ವರ್ಷಭೋಗ್ಯೇನ ಭರ್ತುಃ
ಯಕ್ಷಶ್ಚಕ್ರೇ ಜನಕತನಯಾಸ್ನಾನಪುಣ್ಯೋದಕೇಷು
ಸ್ನಿಗ್ಧಚ್ಛಾಯಾತರುಷು ವಸತಿಂ ರಾಮಗಿರ್ಯಾಶ್ರಮೇಷು ||

ಇದರ ಸ್ಥೂಲಾರ್ಥ: ಒಬ್ಬ ಯಕ್ಷನು ತನ್ನ ಸ್ವಾಮಿಯಿಂದ ಕೊಟ್ಟ ಶಾಪದಿಂದ ತನ್ನ ಮಹಿಮೆಯನ್ನು ಕಳೆದುಕೊಂಡವನಾಗಿ ಒಂದು ವರ್ಷ ತನ್ನ ಪ್ರೇಯಸಿಯಿಂದ ದೂರನಾಗಿ ಜನಕನ ಮಗಳ (ಸೀತೆಯ) ಸ್ನಾನದಿಂದ ಪಾವನವಾದ ಝರಿಗಳ ಮರಗಳ ಸ್ನಿಗ್ಧವಾದ ನೆರಳಿನಿಂದ ಕೂಡಿದ ರಾಮಗಿರಿಯ ಪ್ರದೇಶದಲ್ಲಿ ವಸತಿಯನ್ನು ಮಾಡಿದನು.

ಇದರ ಹಿಂದಿನ ಕಥೆ ಹೀಗೆಂದು ಊಹಿಸಲಾಗಿದೆ. ಈ ಯಕ್ಷನು ಯಕ್ಷರ ರಾಜಧಾನಿಯಾದ ಅಲಕಾಪುರಿಯಲ್ಲಿ ಕುಬೇರನ ತೋಟದ ಮಾಲಿ. ಒಮ್ಮೆ ಇಂದ್ರನು ಐರಾವತವನ್ನು ತೋಟಕ್ಕೆ ತಂದಾಗ ತನ್ನ ಒಡೆಯನ ಮಿತ್ರನ ವಾಹನವನ್ನು ತೋಟದೊಳಗೆ ಬಿಡಲಾರದೆ ಬಿಟ್ಟಾಗ ತೋಟಕ್ಕೆ ಹಾನಿಯಾಗುತ್ತದೆ. ಕುಬೇರನು ಇದನ್ನು ತಿಳಿದು ಒಂದು ವರ್ಷದ ಮಟ್ಟಿಗೆ ತನ್ನ ಮಾಲಿಯನ್ನು ಗಡೀಪಾರು ಮಾಡುತ್ತಾನೆ. ಈ ಗಡೀಪಾರು ಓದುಗರಾದ ನಮಗೆ ಒಳ್ಳೆಯ ಕಾವ್ಯಾಸ್ವಾದವನ್ನು ಮಾಡಿಸುತ್ತದೆ.

ಒಂದು ವರ್ಷ ತನ್ನ ಹೆಂಡತಿಯಿಂದ ದೂರವಿದ್ದ ಯಕ್ಷನ ವಿರಹದ ಬೇಗೆ ರಾಮಗಿರಿಯ ಬಿಸಿಲನ್ನೂ ಮೀರಿತ್ತು. ತಾಳಲಾರದ ವಿರಹದಿಂದ ನಮ್ಮ ಯಕ್ಷನೇನು ಮಾಡಿದ?

ತಸ್ಮಿನ್ನದ್ರೌ ಕತಿಚಿದಬಲಾವಿಪ್ರಯುಕ್ತಃ ಸ ಕಾಮೀ
ನೀತ್ವಾ ಮಾಸಾನ್ ಕನಕವಲಯಭ್ರಂಶರಿಕ್ತಪ್ರಕೋಷ್ಠಃ |
ಆಷಾಢಸ್ಯ ಪ್ರಥಮದಿವಸೇ ಮೇಘಮಾಶ್ಲಿಷ್ಟಸಾನುಮ್
ವಪ್ರಕ್ರೀಡಾಪರಿಣತಗಜಪ್ರೇಕ್ಷಣೀಯಂ ದದರ್ಶ ||

ಸ್ಥೂಲಾರ್ಥ: ಆ ರಾಮಗಿರಿಯಲ್ಲಿ ತನ್ನ ಸ್ತ್ರೀಯ ವಿರಹದಲ್ಲಿ ತಿಂಗಳುಗಳನ್ನು ಕಳೆದ ಆ ಪ್ರೇಮಿಯ ಮಣಿಕಟ್ಟಿನ ಪ್ರದೇಶ ಚಿನ್ನದ ಕಂಕಣ ಅದನ್ನು ಬಿಟ್ಟು ಜಾರಿದ್ದರಿಂದ ಬರಿದಾಗಿತ್ತು. ಆಗ ಆಷಾಢ ಮಾಸದ ಮೊದಲ ದಿವಸ ಬೆಟ್ಟವನ್ನಾಲಿಂಗಿಸಿದ, ಆನೆಯು ತಿವಿದು ಆಡುತ್ತಿರುವಂತೆ ಮನೋಹರವಾಗಿ ಕಂಡ ಮೇಘವನ್ನು ಕಂಡನು.

ಆ ಮಣಿಕಟ್ಟಿನ ಪ್ರದೇಶ ಎಷ್ಟು ವಿರಹವನ್ನು ತನ್ನ ಬರಿದಾಗುವಿಕೆಯಿಂದ ಹೇಳುತ್ತದೆ!

ಕನ್ನಡದಲ್ಲಿ ಬೇಂದ್ರೆಯವರು ಮೇಘದೂತದ ಪದ್ಯಾನುವಾದ ಮಾಡಿದ್ದಾರೆ. ಅದರಲ್ಲಿ "ಕನಕವಲಯಭ್ರಂಶರಿಕ್ತಪ್ರಕೋಷ್ಠಃ" ದ ಅನುವಾದ ಹೇಗೆ ಮಾಡಿದ್ದಾರೋ ತಿಳಿಯದು. ಆದರೆ ಸಂಸ್ಕೃತದ ಹಲವು ಶಕ್ತಿಗಳಲ್ಲಿ ಇಂಥ ಪದವನ್ನು ನಾಮಪದವನ್ನಾಗಿ ಮಾಡುವುದೂ ಒಂದು. ಹೆಚ್ಚು ಅಕ್ಷರಗಳನ್ನು ತೆಗೆದುಕೊಳ್ಳದೆಯೇ ಅಷ್ಟನ್ನು ಹೇಳುವುದು ಸಂಸ್ಕೃತದ ಜಾಡು.

ಮೇಘದೂತದ ಮೊದಲ ಐದು ಪದ್ಯಗಳು ಮಾತ್ರ ಕವಿ ಹೇಳುವವು. ಇದಾದ ಮೇಲೆ ಎಲ್ಲ ಯಕ್ಷ ಮೇಘವನ್ನುದ್ದೇಶಿಸಿ ಹೇಳುವುದೇ. ಅಚೇತನವಾದ ಮೇಘವನ್ನೇ ಏಕೆ ದೂತನ್ನನಾಗಿ ಮಾಡಿದನೆಂಬುದಕ್ಕೆ ಐದನೆ ಪದ್ಯ ಹೀಗೆ.

ಧೂಮಜ್ಯೋತಿಃಸಲಿಲಮರುತಾಂ ಸನ್ನಿಪಾತಃ ಕ್ವ ಮೇಘಃ
ಸಂದೇಶಾರ್ಥಾಃ ಕ್ವ ಪಟುಕರಣೈಃ ಪ್ರಾಣಿಭಿಃ ಪ್ರಾಪಣೀಯಾಃ |
ಇತ್ಯೌಸುಕ್ಯಾದಪರಿಗಣಯನ್ ಗುಹ್ಯಕಸ್ತಂ ಯಯಾಚೇ
ಕಾಮಾರ್ತಾ ಹಿ ಪ್ರಕೃತಿಕೃಪಣಾಶ್ಚೇತನಾಚೇತನೇಷು ||

ಧೂಮ, ಜ್ಯೋತಿ, ನೀರು ಮತ್ತು ಗಾಳಿಗಳ ಕೂಡಿಕೆಯಲ್ಲವೇ ಮೋಡ? ಸಂದೇಶಗಳು ಪಟುವಾದ ಕರಣಗಳುಳ್ಳ (ಅಂದರೆ ಜ್ಞಾನೇಂದ್ರಿಯಗಳು ಚೆನ್ನಾಗಿರುವ) ಚೇತನವಾದ ಪ್ರಾಣಿಗಳಿಂದ ತಾನೆ ಒಯ್ಯಲ್ಪಡಬೇಕು? ಆದರೂ ಉತ್ಸುಕತೆಯಿಂದ (ನಮ್ಮ ಯಕ್ಷನಿಗೆ ಬೇರೇನೂ ಕಂಡಿರಲಿಲ್ಲವೇನೋ? ಅಥವಾ ವಿರಹದ ಔತ್ಸುಕ್ಯ ಪರಾಕಾಷ್ಠೆಯನ್ನು ಆಗ ಮುಟ್ಟಿತೋ?) ಇದನ್ನು ಯೋಚಿಸದೆ ಯಕ್ಷನು ಮೋಡವನ್ನೇ ಬೇಡಿದನು. ವಿರಹತಪ್ತರಾದವರು ಚೇತಾನಾಚೇತನಗಳ ನಡುವೆ ಭೇದವನ್ನೆಂದು ಎಣಿಸುವರು?

ಹೀಗೆ ಮೊದಲಾಗುತ್ತದೆ ಯಕ್ಷನ ಸಂದೇಶ. ಮೋಡವನ್ನು ಹೊಗಳಿ ಒಲಿಸಿಕೊಂಡು, ರಾಮಗಿರಿಯಿಂದ ಅಲಕಾಪುರಿಗೆ (ಯಕ್ಷರ ಒಡೆಯನಾದ ಕುಬೇರನ ನಗರ) ಹೇಗೆ ಹೋಗಬೇಕು ಎಂಬುದನ್ನು ವಿವರವಾಗಿ ಹೇಳುವುದೇ ಪೂರ್ವ ಮೇಘ. ಅಲಕಾಪುರಿಯಲ್ಲಿ ನಡೆಯುವ ಸಂಗತಿಯು ಉತ್ತರಮೇಘದ್ದು.

ಒಂದೊಂದು ಪದ್ಯವೂ ಸುಮನೋಹರವಾಗಿದೆ. ಭಾವ ಉಕ್ಕಿ ಹರಿಯುತ್ತದೆ. ಇದನ್ನು ಓದಿಯೇ ಆಸ್ವಾದಿಸಬೇಕು!

ಶತಾವಧಾನಿ ಆರ್. ಗಣೇಶರು ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಮೇಘದೂತದ ಬಗ್ಗೆ ಉಪನ್ಯಾಸಮಾಲೆಯನ್ನು ಮಾಡಿದ್ದರು. ಎರಡು ಎಂ.ಪಿ.೩ ಸಿ.ಡಿ.ಯಷ್ಟಿರುವ ಈ ಉಪನ್ಯಾಸ ಬಹಳ ಸೊಗಸಾಗಿದೆ. ಇದನ್ನು ಕೇಳಿ, ಮೇಘದೂತವನ್ನು ಕೊಂಡು ತಂದೆ. ಮೇಘದೂತವನ್ನು ಓದಲಾರದೆ ಇರುವವರು ಈ ಸಿ.ಡಿ.ಯನ್ನಾದರೂ ಕೇಳಬೇಕು. ಎಷ್ಟು ಸೊಗಸು! ಕಾರ್ಯಾಲಯಕ್ಕೆ ಕಾರಿನಲ್ಲಿ ಹೋಗುವಾಗ ಈ ಮೇಘದೂತವೂ ನನ್ನೊಂದಿಗೆ ಹಲವು ದಿನಗಳ ಮಟ್ಟಿಗೆ ಜೊತೆ ನೀಡಿತು.

ಮೋಡಗಳನ್ನು ಕಾಣುವುದೇ ಈಗ ಬೇರೆಯ ನೋಟದಿಂದ.

ಇಂದು ಆಷಾಢದ ಮೊದಲ ದಿವಸವೆಂದು ತಿಳಿದು ಅದರ ಸಂತಸವನ್ನು ಹಂಚಿಕೊಳ್ಳೋಣವೆಂದು ಈ ಲೇಖನ ಬರೆದೆ.

|| ಇತಿ ಶಮ್ ||

Tuesday, June 12, 2007

The Lord of the Rings - my take on the book

This book has been the reason for my not interacting with most of the world for the past few days. Anyway, I finished reading the book - more like speed-read it - and it prompted quite a few reflections. I'd like to share these with others who might have read LotR. Of course, this post is on the book and not on the movie, as expressly mentioned in the title.

I first came across this book in the late 80s - when I used to regularly frequent KQA quizzes as a high school student. More than a few quizzers (studying in college mostly) carried the book around with the elan of a fashion model wearing a precious piece of jewellery. And I saw "The Hobbit" with them too. At that time, I was just mildly curious to know more about this book and that was it. Fast forward to 2001 and New Line Cinema's extravagant and profitable interpretation of this "trilogy". This led to quite a few people getting hooked on to the book, including yours truly. I suppose the Tolkien Society's membership must have gone up because of this. But my ignorance in this matter was considerably exposed. Just before seeing this movie, I bought the book and as is my wont, did not get around to read it. My wife, however, read it (she was another Tolkien newbie) and was spellbound. I was content with the trio of movies. My wife pestered me for a while to read it (quite a while, actually) as she felt the book was much superior to the movie - but gave up in the face of pretty stubborn (and stupid?) resistance from my side.

They say in Kannada that for something to happen, the time has to be ripe for it ("kAla kUDi barabEku"). And surely, the time last week was quite ripe for my reading of the book. I took the book in my hands unsuspectingly, much similar to Bilbo Baggins when he laid his hands for the first time upon the ring. I had no idea that I would be sucked into Tolkien's Middle Earth with such force. And for a week or so, I did little other than reading the book.

Tolkien was professor of Anglo-Saxon and the language used in his book is a curious mix of various tongues - invented, old and new. I don't know much about Finnish or Icelandic to even comment on his construction of Elvish (and its multiple dialects). His English was a refreshing and relaxing change from the modern version that we Indians have come to now associate with business and technology. The literary style is somewhat like champU (a mixture of prose and poetry seen in Indian literature) with a greater bias towards prose.

The story is epic-like with multiple types of characters across the "goodness" spectrum ranging all the way from Elrond, Galadriel and the Elves to the dwarves and Men and hobbits and finally the orcs, ringwraiths and the Dark Lord, Sauron himself. In Indian literature of this type, there is a tendency to always look at existing stories such as the rAmAyaNa, the mahAbhArata and the purANAs for any interesting story which could then be interpreted or improvised by a poet. But Tolkien has created this world - Middle-Earth, completely in his mind. Of course, he tells us in the introduction as well as in other places that Beowulf and the Finnish Kalevala were the chief inspiration in this matter. But inventing a completely new world with a new set of languages and a new history is simply amazing. His motivations might have been purely linguistic but the depth and scope of the story and its background do not convey that at all. I was amazed to discover later that Tolkien was a staunch Roman Catholic. Yet, I did not find any evidence of any of that in that book. It could be pretty subtle. But his creation idea of Middle Earth (detailed in his Silmarillion) is similar to the Christian tradition and yet close to Indian and other "pagan" religious traditions.

As everybody knows, the story is mainly of the evil Ring and the long, laborious attempt to destroy it. I will not go to the story in detail as you can find a better synopsis here.

As to what the title itself means - it could mean the Ring itself - which is of course "the One Ring to rule them all". It could also mean Sauron, the dark spirit, never seen in person who had actually made the Ring in the first place. It could also mean the humble Frodo, who finally succeeded in his attempt (with a lot of help, of course) to destroy the Ring. It could also mean Providence (or the Invisible Supreme Spirit) whose gentle nudges are seen throughout the story. For instance, Gollum's presence was completely necessary for the ring to be destroyed and several hints are dropped in the story. But his presence seems to be a hindrance too. Another instance is when Merry gets his sword from the Barrow-Wights in the Old Forest and only such swords had the ability to wound the Nazgul, which Merry does in the Battle for Gondor. The fact that every small thing, small event has some purpose is one of the central themes of the LotR.

Any movie made from a book is usually no match for the book itself and it is quite true here. The movie skips several parts and interesting conversation and even intriguing characters like Tom Bombadil. The overall story-line is what the movie barely manages to hold. To be fair to the movie version, a movie capturing an entire book with all its suggested variations, is very difficult and what we have now is close to the best movie version of LotR we could have.

The work is quite literary in nature and there is no comparison between this and the Harry Potter series. The latter comes across as quite juvenile compared to the scale of the LotR. In fact, I am sorry that I brought up the Harry Potter series at all. Both of them are not even in the same graph, so to speak.

I couldn't help but compare our epics with LotR. I should say that Tolkien, as a single person - though standing on the shoulders of giants, has managed to create something worth comparison, which is saying a lot. Our epics are multi-dimensional in that they are partly history, partly literature, partly spiritual, partly religious and even educational and fantasy-like. Tolkien's epic is more uni-dimensional or at the most bi or even tri-dimensional - it cannot have the same dimensions as works of a living tradition such as our epics. If Elves and Dwarves were real people, I would assume that LotR would be as revered as our epics are. Our rAmAyaNa and mahAbhArata are more rooted in reality than LotR. Our epics, IMHO, show more of exhortation for puruSha prayatna or individual effort than LotR. In more than one place, I saw characters in LotR being nostalgic of eras gone by and some times even being fatalistic in outlook. While I saw the Indian epics giving out "positive" messages in several parts, LotR seems quite bleak in comparison. Mordor's description as a bleak, desert like landscape with grey all around and Frodo's almost hopeless struggle is a point in this matter. This "armageddon" type of confrontation is seen in many places in Semitic as well as European myths and it is no different in the LotR. Though the rAmAyaNa and the mahAbhArata also have major conflicts at their climaxes, a feeling of "the-world-will-continue-in-spite-of-any-result" permeates them and it is not "armageddon". Whereas in the LotR, Frodo's success or failure would change the world completely. In this, LotR is influenced by Semitic ideas. I did not see any Eastern or Oriental sources acknowledged by Tolkien and I would carry on with that assumption. But there are enough situations which would have seemed quite at home in an Indian work. These probably show the common-ness of all human ethos.

It was tough not to see the Lord of the Rings as an allegory, in spite of Tolkien's explicit statements to the contrary. Impressions of a life-changing war permeate the LotR. WWI and WWII, during which Tolkien was directly and indirectly involved, respectively, seem to have influenced him quite a bit. I also saw Tolkien's clear opposition to vulgar industrialization and stretching it by a bit - to even Communism in his post-war depiction of the Shire. The Ring stood for absolute power. Frodo, in my perspecive, stood for that small but enduring "human" spirit that leads to great accomplishments.

Now for some miscellaneous observations. The classification of characters into Wizards, Elves, Men, Dwarves, Hobbits, Orcs, Ents, Uruk-hai and other interesting classes is quite similar to what we see in Indian traditions (Rushi, rAkShasa, martya, deva,yakSha, gandharva, kinnara, kimpuruSha, vAnara and several others). Also, Tolkien seems to like benevolent monarchy over other forms of government. A feudal spirit, exemplified by Sam's serving of Frodo, shows where Tolkien's preferences lie. This kind of echoes the spirit behind the Indian varNa system - which is still practiced implicitly across the world - but lies coded explicitly only in old Indian "casteist" works.

There are too many observations to be brought out in a blog-sized piece. But I would like to summarize my take finally. The Lord of the Rings deserves all its popularity and more. In fact, I was surprised to see that the LotR was quite famous in the "Flower-Power" generation. It can be safely classified as literature, which means that it is something that can be read and re-read and enjoyed many times over in spite of knowing the story line and the eventual outcome. There are several maxims and subhAShita like quotes coming out of several characters and these are worth mining for in the gem-mine that the LotR is.

So, gentle reader, if you have read till this sentence and have not read the LotR, I urge you to go to the nearest bookstore and pick up a copy for years of refined literary pleasure.

Monday, May 28, 2007

ಭೈರಪ್ಪ ಚರ್ಚಾಪಟು, ಕಾದಂಬರಿಕಾರನಲ್ಲ - ಡಾ|| ಯು. ಆರ್. ಅನಂತಮೂರ್ತಿ

ಇಂದು ಮುಂಜಾನೆ ಏಳುತ್ತಾ ವಿಜಯಕರ್ನಾಟಕವನ್ನು ಕೈಗೆತ್ತಿಕೊಂಡಾಗ ಕಂಡ ವಿಷಯವೇ ಇದು. ಎನ್. ಎಸ್. ಶಂಕರ್ ಎಂಬುವರೊಬ್ಬರು ಎಸ್. ಎಲ್. ಭೈರಪ್ಪನವರ "ಆವರಣ" ಕಾದಂಬರಿಯ ಬಗ್ಗೆ ಒಂದು ವಿಶ್ಲೇಷಣಾತ್ಮಕ ಪುಸ್ತಕವನ್ನು ಬರೆದು ಅದರ ಬಿಡುಗಡೆಯ ಸಮಾರಂಭದಲ್ಲಿ ನಮ್ಮ ಅನಂತಮೂರ್ತಿಯವರನ್ನು ಕರೆದಿದ್ದರು. ಅವರಲ್ಲಾಡಿದ ಭಾಷಣದ ಸಾರವೇ ಈ ಬರಹದ ತಲೆಬರಹ.

"ಆವರಣ"ದ ಬಗ್ಗೆ ನಾನು ಹಿಂದೆ ಇಲ್ಲಿ ಬರೆದಿರುವೆ. ಆಗ್ಗಿನಿಂದ ಈವರೆಗೆ ಆವರಣದ ಬಗ್ಗೆ ನನ್ನ ಚಿಂತನೆ ಬದಲಾಯಿಸಿಲ್ಲ. ಹೌದು - ಇದು ಭೈರಪ್ಪನವರ ಬೇರೆ ಕೃತಿಗಳ ಹಾಗಿಲ್ಲ - ಸ್ವಲ್ಪ ಕೃತಕವಾಗಿ ನನಗೆ ಕಂಡಿತ್ತು ಎಂಬ ವಿಷಯವನ್ನು ಅದರಲ್ಲಿ ಬರೆದಿದ್ದೆ. ಅದನ್ನೇ ತೆಗೆದುಕೊಂಡಿದ್ದಾರೆ ಅನಂತಮೂರ್ತಿ. ರಝಿಯಾ ಮತ್ತು ಅಮೀರರು ಬಹಳ ಕಾಲದ ಮೇಲೆ ಸೇರಿದಾಗ, ರಝಿಯಾ ತನ್ನ ಗಂಡನೊಡನೆ ಚರ್ಚೆ ಮಾಡುತ್ತಾಳೆ; ಪ್ರೀತಿ ಮಾಡುವುದಿಲ್ಲ ಎಂಬುದು ಇವರ ಒಂದು ಅಹವಾಲು. ಕಾದಂಬರಿಯ ಕಲಾತ್ಮಕತೆಗೆ ಚರ್ಚೆ ಮೀಸಲಾಗಿದ್ದಿದ್ದರೆ ತೊಂದರೆ ಇರುತ್ತಿರಲಿಲ್ಲ. ಆದರೆ ಭೈರಪ್ಪನವರು ಜನಪ್ರಿಯತೆಗಾಗಿ ಬರೆಯುವ ಲೇಖಕರೆಂದು ಆಕ್ಷೇಪಿಸಿದ್ದಾರೆ.

ಸುದ್ದಿವಿವರವನ್ನು ಪೂರ್ಣವಾಗಿ ಓದಿದಾಗ ಒಂದು ರೀತಿಯ ಅಸಹ್ಯಭಾವನೆ ನನ್ನಲ್ಲುಂಟಾಯಿತು.

ಮೊದಲಿಗೆ ಕಾದಂಬರಿಯ ಕಲಾತ್ಮಕತೆಯ ಬಗ್ಗೆ ಇವರು ಹೇಳುವ ಮಾತು. ಇದರಲ್ಲಿ "ಒಳನೋಟ" ಇರಲಿಲ್ಲವೆಂದು ನಮ್ಮ ಅನಂತಮೂರ್ತಿಯವರ ಅಂಬೋಣ. ಭೈರಪ್ಪನವರ ಬೇರೆಯ ಕಾದಂಬರಿಗಳಿಗೆ ಹೋಲಿಸಿದರೆ ಆವರಣದ ಒಳನೋಟ ಸ್ವಲ್ಪ ಕಡಿಮೆ ಎಂದು ನನಗನ್ನಿಸಿದರೂ ಬೇರೆ ಲೇಖಕರ ಉತ್ಕೃಷ್ಟಕೃತಿಗಳಿಗೆ ಹೋಲಿಸುವಷ್ಟು ಒಳನೋಟವಿದೆಯೆಂದು ಹೇಳಬೇಕಾಗುತ್ತದೆ. ಆದರೆ ಈ ಮಾತು ಒಂದು ಕೃತಿಗೆ ಮೀಸಲಾಗದೆ ಸಾರಾಸಗಟಾಗಿ ಭೈರಪ್ಪನವರಿಗೆ "ಒಳನೋಟ"ವೇ ಇಲ್ಲವೆಂದರೆ?

ಒಪ್ಪೋಣ, ನನಗೆ ಭೈರಪ್ಪನವರ ಭಾಷೆ ಅಷ್ಟು ಸೊಗಸಿಲ್ಲ ಅನ್ನಿಸುತ್ತದೆ. "ಕವಿತ್ವದ ಆರ್ದ್ರತೆ" ಅವರ ಭಾಷೆಯಲ್ಲಿಲ್ಲ. ಆದರೆ ಇಡೀ ಪ್ರಬಂಧವನ್ನು ಗಮನಿಸುವಾಗ ಆದೂ ಧ್ವನಿಪರಂಪರೆಯುಳ್ಳದ್ದೆ ಎಂದು ಬಹಳಷ್ಟು ಜನ ಒಪ್ಪುತ್ತಾರೆ. ಹಾಗಾಗಿ ಅವರ ಕೃತಿಗಳು ಕಾವ್ಯಸದೃಶವಾಗಿಯೇ ಆಗುತ್ತವೆ. ಅಥವಾ ಅ.ಮೂ ಪ್ರಕಾರ ವಿಕ್ರಮ್ ಸೇಠ್ ರ "Golden gate" ರೀತಿಯಲ್ಲಿ ಭೈರಪ್ಪ ಬರೆಯಬೇಕೆಂದೋ?

ಈಗ ಅ.ಮೂ.ರವರ "ಸಂಸ್ಕಾರ"ವನ್ನೇ ತೆಗೆದುಕೊಳ್ಳಿ - ಪ್ರಾಣೇಶಾಚಾರ್ಯರಿಗಾದ ಸಮಸ್ಯೆ ವಾಸ್ತವವಾಗಿ ಅವರಷ್ಟೇ ವ್ಯಾಸಂಗವಿದ್ದ ಬೇರೆ ಯಾರಾದರೂ ಕರ್ಮಠರಿಗೆ ಆಗಿದ್ದರೆ ಛಕ್ಕನೆ ಉತ್ತರ ಸಿಕ್ಕುತ್ತಿತ್ತು. (ಪಾ. ವೆಂ. ಆಚಾರ್ಯರ ಇದರ ಬಗೆಗಿನ ಲೇಖನವನ್ನೋದಿ). ಅಷ್ಟು ದಿನ ಒದ್ದಾಡುವ ಪ್ರಸಂಗವೇ ಬರುತ್ತಿರಲಿಲ್ಲ. ಬೇಕೆಂದು ಪ್ರಾಣದೇವರ ಗುಡಿಗೆ ಪ್ರಾಣೇಶಾಚಾರ್ಯರನ್ನು ಕಳಿಸಿದ್ದು ಚಂದ್ರಿಯ ಜೊತೆ ಇವರನ್ನು ಸೇರಿಸಲೆಂದು. ಇದು ಕಥೆಯ ಮುಖ್ಯಕೊಂಡಿ. ಇಲ್ಲೇ factual ಆಗಿ ತಪ್ಪು ಮಾಡಿದ ಇವರು, ಬೇರೆಯವರಿಗೆ ಒಳನೋಟವಿಲ್ಲ ಅನ್ನುವುದು ಅಷ್ಟು ಸಮಂಜಸವಾಗಿ ನನಗೆ ಕಾಣಲಿಲ್ಲ. ಜೊತೆಗೆ ಪ್ರಾಣೇಶಾಚಾರ್ಯರನ್ನು ಚಂದ್ರಿಯ ಜೊತೆ ಸೇರಿಸಿದರೆ ಅದು ವಿಪ್ಲವವೇ? ಇದನ್ನು ಭೈರಪ್ಪನವರ "ದಾಟು" ವಿನಲ್ಲಿ ಚರ್ಚೆಯಾದ ಜಾತಿಯ ವಿಷಯಕ್ಕೆ ಹೋಲಿಸಿ. ಜಾತಿರಾಜಕಾರಣದ ಒಳನೋಟ ಅಲ್ಲಿ ಕಂಡಷ್ಟು ನನಗೆ ಬೇರೆಲ್ಲೂ ಕಂಡಿಲ್ಲ. ಬೇರೆ ಬೇರೆ ಪಂಗಡಗಳ ದೃಷ್ಟಿಕೋನದಿಂದ ಸಮಸ್ಯೆಯನ್ನು ತೋರಿಸಿ ಓದುಗರನ್ನು ಯೋಚನೆಗಿಕ್ಕುವ ಭೈರಪ್ಪನವರ ಪರಿ ಅನನ್ಯಸಾಧಾರಣ. ಭೈರಪ್ಪನವರು "ಆವರಣ"ದಲ್ಲಿ ತೋರಿರುವಷ್ಟು ಒಳನೋಟ ಅನಂತಮೂರ್ತಿಯವರ ಅತಿ ಜನಪ್ರಿಯಕೃತಿಯಾದ "ಸಂಸ್ಕಾರ"ದಲ್ಲೂ ನನಗೆ ಕಾಣಲಿಲ್ಲ. ಅ.ಮೂ ಅವರ ಬಿಡಿ ಲೇಖನಗಳಲ್ಲಿ, ಸಣ್ಣ ಕತೆಗಳಲ್ಲಿ ನನಗೆ ಒಮ್ಮೊಮ್ಮೆ ಒಳ್ಳೆಯ ಒಳನೋಟ ಕಂಡಿದೆ. ಆದರೆ ಭೈರಪ್ಪನವರನ್ನು ಒಳನೋಟವಿಲ್ಲದ ಸಾಹಿತಿಯೆಂಬುದು ಅ.ಮೂ ರವರ bias ಅನ್ನು ಸ್ಪಷ್ಟವಾಗಿ ತೋರುತ್ತದೆಯೆಂದೆನ್ನಬೇಕು.

ಈಗ "ಚರ್ಚಾಪಟು" ಎಂಬ ಹಣೆಪಟ್ಟಿಯ ಬಗ್ಗೆ. ಹೌದು, "ಭಿತ್ತಿ"ಯಲ್ಲಿ ಭೈರಪ್ಪನವರೇ ಒಪ್ಪಿಕೊಂಡಂತೆ ಅವರು ಒಳ್ಳೆಯ ಚರ್ಚಾಪಟು. ಅವರಿಗೆ ಸರಿಯಾಗಿ ಕಂಡ ವಿಷಯದ ಬಗ್ಗೆ ಬರೆಯಲು ಅವರಿಗೆ ಹಕ್ಕಿಲ್ಲವೇ? (ಹೌದು, ಅ.ಮೂ ರವರಿಗೂ ಭೈರಪ್ಪನವರನ್ನು ಟೀಕಿಸುವ ಹಕ್ಕಿದೆ. ಆದರೆ ನನಗೂ ಅವರನ್ನು ಟೀಕಿಸುವ ಹಕ್ಕಿದೆ). ಅವರಿಗೆ ಮನಸ್ಸಿಗೆ ಬಂದ ವಿಷಯಕ್ಕೆ ಸ್ವಲ್ಪ ಪುಷ್ಟಿ ಕೊಟ್ಟು ಬರೆದರೆ ಅವರು ಚರ್ಚಾಪಟುವಾಗುವರೇ? ಅಥವಾ ಭೈರಪ್ಪನವರೆತ್ತಿದ ಪ್ರಶ್ನೆಗಳಿಗೆ ಉತ್ತರಿಸಲಾರದೆ ಮೊದಲೇ ಸೋಲೊಪ್ಪಿಕೊಂಡು ಈ hit and run ರೀತಿಯನ್ನು ಅ.ಮೂ ಉಪಯೋಗಿಸುತ್ತಿದ್ದಾರೆಯೇ?

ವಂಶವೃಕ್ಷದಲ್ಲಿ ಕಾತ್ಯಾಯನಿಯನ್ನು ನರಳಿಸಿ ನರಳಿಸಿ ಕೊಂದದ್ದು ನನಗೆ ಇಷ್ಟವಾಗಲಿಲ್ಲ. ಆದರೆ ಆ ಪಾತ್ರಕ್ಕೆ ನಾನು ಮರುಕಪಟ್ಟಿದ್ದೆ. ಏಕೆಂದರೆ ಭೈರಪ್ಪನವರು ಹಾಗೆ ಚಿತ್ರಿಸಿದ್ದಾರೆ. ಸಂಪ್ರದಾಯವನ್ನು ಬಿಡಲು ಈ ಕಡೆ ಸಾಧ್ಯವಾಗದೆ, ನವನಾಗರಿಕತೆಯನ್ನು ಮೈಗೂಡಿಸಿಕೊಳ್ಳದೆಯಿರುವ ತ್ರಿಶಂಕು-ಸ್ಥಿತಿ ಆಕೆಯದು. ಇದನ್ನು ಚೆನ್ನಾಗಿಯೇ ತೋರಿರುವರಲ್ಲ? ಎರಡೂ ಸಾಧ್ಯತೆಗಳನ್ನು ತೋರಿದರೂ, ಕಾತ್ಯಾಯನಿಯನ್ನು ಕೊಲ್ಲುವುದು ಭೈರಪ್ಪನವರಿಗಿಷ್ಟವೋ ? ಅಥವಾ ವಾಸ್ತವದ ಪ್ರತಿಬಿಂಬವೋ? ಜೀವನದಲ್ಲಿ ಸ್ವತಃ ಬಹಳ ಕಷ್ಟ ಪಟ್ಟ ಭೈರಪ್ಪನವರಿಗೆ ಜನರ ಬಗ್ಗೆ ಕಾಳಜಿ ಹೆಚ್ಚು. ಅವರು ಅಮಾನವೀಯವಾಗಿ ಪಾತ್ರಚಿತ್ರಣಮಾಡಿರುವುದನ್ನು ನಾನು ನೋಡಿಲ್ಲ. ಅಂಥ ಮಂದ್ರದ ಮೋಹನಲಾಲನ ಬಗ್ಗೆಯೇ ಅನುಕಂಪ ಹುಟ್ಟುವ ಹಾಗೆ ಮಾಡುವ ಭೈರಪ್ಪನವರು "ಸಮಾಜಿಕ ಜವಾಬ್ದಾರಿಯಿಲ್ಲದ ಬಾಡಿಗೆಯ ಹಂತಕರ ದ್ವೇಷದಿಂದ ಬರೆಯಬಲ್ಲ"ವರೇ?

"ಮಂದ್ರ"ವನ್ನು ಎಷ್ಟು ಜನ ಓದಿದರು? ಅದಕ್ಕೆ ಆವರಣದ ರೀತಿಯ ಪ್ರತಿಕ್ರಿಯೆ ಏಕೆ ಸಿಗಲಿಲ್ಲ? ಅಷ್ಟು ಜನಪ್ರಿಯ ಏಕಾಗಲಿಲ್ಲ? ವಾಸ್ತವವಾಗಿ ಅದರಲ್ಲಿನ ಕಲಾತ್ಮಕತೆ "ಆವರಣ"ಕ್ಕಿಂತ ಬಹಳ ಹೆಚ್ಚು. ಹೆಚ್ಚಿನ ಸಂಖ್ಯೆಯಲ್ಲಿ ಪಾತ್ರಗಳನ್ನು ಸೃಷ್ಟಿಸದೆ ಒಬ್ಬ ಕಲಾವಿದನ ಏಳು-ಬೀಳುಗಳನ್ನು ಬಿಂಬಿಸುವ ಮಂದ್ರ ಸುಂದರವಾದ ಕೃತಿ. ಆದರೆ ಆವರ ಬೇರೆಯ ಪುಸ್ತಕಗಳಷ್ಟು ಜನಪ್ರಿಯವಲ್ಲ. ಹಲವರು ಮೊದಲ ಅಧ್ಯಾಯದ ನಂತರವೇ ಪುಸ್ತವನ್ನು ಮೂಲೆಗುಂಪು ಮಾಡಿದ್ದನ್ನು ನಾನು ಕಂಡಿದ್ದೇನೆ. ಆದರೆ ಆ ಕೃತಿಯ ಸ್ವಾರಸ್ಯ ಪೂರ್ಣವಾಗಿ ಓದುವವರಿಗೆ. ಕಲೆಯ ಆ ಮುಖಗಳನ್ನು ಆಸ್ವಾದಿಸಬಲ್ಲವರಿಗೆ. ರಸಾಸ್ವಾದದ ಆ ಮಟ್ಟ ಜನಪ್ರಿಯವಲ್ಲ, ದುರದೃಷ್ಟವಶಾತ್! ಜನಪ್ರಿಯವಾಗಿ ಅದನ್ನು ಮಾಡಬೇಕಿದ್ದರೆ, ಅಸಭ್ಯವಾದ ವಿಚಾರಗಳನ್ನು ವರ್ಣಿಸಿ ಮಾಡಬಹುದಿತ್ತಲ್ಲ? ಆದರೆ ವಸ್ತುಸ್ಥಿತಿ ಅದು ಹಾಗಾಗಲೇ ಇಲ್ಲವೆಂಬುದು. ಆದ್ದರಿಂದ ಕೇವಲ ಜನಪ್ರಿಯತೆಗಾಗಿ ಬರೆಯುವವರು ಭೈರಪ್ಪ ಎಂಬುದು ಹುರುಳಿಲ್ಲದ ಮಾತು.

ಆದರೆ ಕೃತಿಯು ಜನಪ್ರಿಯವಾದರೆ ಅದು ಲೇಖಕನ ದೌರ್ಬಲ್ಯವೇ? ಈ "ಅನಾವರಣ" ಪುಸ್ತಕವನ್ನು ಬರೆದ ಶಂಕರ್ ಪ್ರಕಾರ - ಪುಸ್ತಕ ಕಡಿಮೆ ಮಾರಾಟವಾದಷ್ಟು ಆ ಲೇಖಕನಿಗೆ ಹೆಚ್ಚಿನ ಸಾಮಾಜಿಕ ಜವಾಬ್ದಾರಿಯಿದೆಯೆಂದೇ?

ಭೈರಪ್ಪನವರು ಸತ್ಯವನ್ನೇ ಎತ್ತಿ ಹಿಡಿವವರು. ಕಹಿಯಾಗಿ ಕಂಡರೂ ಅದು ಸತ್ಯವೇ. ಮೊದಲೇ ಹೇಳಿದ ಹಾಗೆ ಎರಡು ಪಂಗಡಗಳ ನಡುವೆ ಸತ್ಯದ ಬುನಾದಿಯ ಮೇಲೆ ಸಂಬಂಧವನ್ನು ಕಟ್ಟಬೇಕು. ಸುಳ್ಳಿನ ಬುನಾದಿಯ ಮೇಲಲ್ಲ. ಸತ್ಯವನ್ನಾಶ್ರಯಿಸಿದರೆ ಮೊದಲು ಕಷ್ಟ ಅಥವಾ ಕಹಿಯಾದರೂ ನಂತರ ಸುದೃಢ ಸಮಾಜ ಬೆಳೆಸಲು ಸಾಧ್ಯವಾಗುವುದು. ಸುಳ್ಳಿನ ಮೇಲೆ ಸುಳ್ಳನ್ನು ಹೇಳಲು ಹೋಗುವ ಇಂಥ "ಶಂಕರ್" (ಎಂಥ ವಿಪರ್ಯಾಸದ ಹೆಸರು - ಶಂಕರನೆಂದರೆ ಮಂಗಳವನ್ನುಂಟು ಮಾಡುವವನು!) ಅಂಥವರಿಗೆ ನಿಜವಾಗಿ ಸಾಮಾಜಿಕ ಜವಾಬ್ದಾರಿಯಿದೆಯೇ?

Friday, February 23, 2007

AvaraNa by SL Bhyrappa: an eye-opener?

AvaraNa is a term used in Vedantic and Buddhist literature to denote that aspect of nescience (avidyA) that obscures all things. This word has been used with the same intention by SL Bhyrappa as the title of his latest novel.

AvaraNa - the novel has created history in the Kannada publishing industry. No other recent book has been sold out as soon as this book. Even before this book was formally released, eager readers awaiting Bhyrappa's latest novel bought all copies from book stores leaving people like me without the latest book. However, I was able to procure a copy directly from the publisher - Sahitya Bhandara. Needless to say, I then devoured the book in less than two days, in spite of hectic work. After all, isn't this the latest book written by the knowledgeable philosopher-novelist Bhyrappa?

The Kannada publishing industry is much bewailed these days. But Bhyrappa's books buck the trend and most of them have gone on to multiple editions.

This book is probably the most controversial that Bhyrappa has written. It deals with the relationship between Hinduism and Islam which, as everybody knows, can be termed tenuous at best.

Most of Bhyrappa's novels are based in and around a few districts of Karnataka or have characters that are from that region. He feels that this is essential in order for him to get into the mind of the character and maintain realism at the same time. Another feature of his novels is the strong female character. Both of these can be found in AvaraNa as well.

I will try not to give too many spoilers in this post - but AvaraNa is a book that can be read even if one knows its full gist. This is because it is not a regular novel. Anyway, for those who haven't read AvaraNa yet and want to do so, this is the point to decide if you want to continue reading this post or not.

Before I start delving into the book, I will try to explain why I have written this post about a Kannada book in English. I saw some reviews of AvaraNa in English on the Net. One review, especially, has compared AvaraNa to the Da Vinci Code. Let me just say that the effort is like comparing apples to oranges. But, as a result of that review, this book has become famous in non-Kannada circles as well. I wish to give a different perspective to the interested non-Kannadiga as well and that is why I am typing this post up in English.

The book begins with the protagonist, Razia, contemplating the ruins of Hampi. She, a screenplay writer, and her husband Amir, commissioned by the government, are in Hampi to make a documentary. The ruins of Hampi move Razia, who by birth is a Hindu - Lakshmi, so much that she continues to study more about it. Significantly, Lakshmi's introspection is also prodded by the destruction of the controversial masjid at Ayodhya - which she comes to hear about.

The story moves through a recollection by Razia on the circumstances of her marriage and simultaneous conversion to Islam. Lakshmi, clouded by love and a heady socialist euphoria that prevailed in that age, does not pay much importance to her symbolic conversion to Islam. Her inter-religious marriage makes her an icon in society for feminism as well as freedom from religious dogma. Her father, a staunch Gandhian, does not like his daughter getting married to a Muslim and disowns her and several years pass. Her father passes away and she visits her village in a long time. Razia/Lakshmi sees a library full of books on history that were read by her father and digs deep into them.

The matter that she discovers in the books causes an epiphany in her. She begins to read those even more and realizes that there has been a systematic pulling the wool over the eyes of society. She writes a very interesting novel - which forms the parallel track of AvaraNa also - to express her understanding. She opposes the system that is creating an AvaraNa to prevent society's understanding of the truth.

The story-within-a-story technique is not new to Indian literature. The Panchatantra is full of these, for example. But a parallel track is interesting and it is probably Bhyrappa's first attempt at this. It comes off very well, I should say. The story that Lakshmi writes in AvaraNa is simultaneously metaphorical and historical. Set in the mid-Mughal period, several historical aspects like the destruction of the Vishvanatha temple at Kashi by Aurangzeb are described in the parallel track. The characters in the parallel story mirror Lakshmi's story to a certain extent and also current Indian/Hindu society. This story is the best part of AvaraNa and I won't add any spoilers to that here.

This parallel track seems to be a continuation in the voice of "sArtha" - Bhyrappa's earlier historical novel. The only change is that the voice, in the case of "AvaraNa", has been emasculated - literally. That voice can be taken to be the voice of Hindu Dharma declining because of the assaults it endured. The description of several events in the parallel track is chilling.

Razia/Lakshmi faces lot of opposition from her in-laws who are staunch Muslims when she does not follow several Islamic customs - Hijab, for instance. Her son, who is raised by her in-laws, has a complete Islamic upbringing. She finds out that the religion of her in-laws does not confer freedom and peace upon its adherents. There are several parts of the novel that describe Islamic customs in detail and in that aspect, this book is more of a documentary than a novel.

An interesting aspect is that whenever the Prophet (PBUH) is mentioned in the book, it is suffixed by a ("sa") (which is the original Arabic for the PBUH acronym that is seen whenever that name is mentioned - such as earlier in this sentence).

The "AvaraNa" that Lakshmi/Razia faces is brought out well. For instance, she attends a conference on text book writing that is quite reminiscent of the "detoxification" effort of our honorable government. None of the professors in that meeting is able to answer Lakshmi in argument and yet, her points never go well with the establishment. It is as if they are unable to see the evident truth that is in front of their eyes - which is what AvaraNa really is.

A piece about AvaraNa can never be complete without mention of Prof. Shastri's character. This is a character that has tasted the wonderful benefits of being a celebrity Socialist in India. This smooth talking educationist has shades of several real well-known personalities in him. I won't mention who it is - but it will be pretty evident for anyone who reads the book. Shastri is the one who persuades Lakshmi to take up Islam as an act of rebellion against "oppressive Hinduism". Prof. Shastri has the wonderful ability of reinterpreting any event of history in that communistic light - in terms of oppressors and the oppressed, much similar to that of several of our comrades. For instance, he interprets Hampi's ruins as due to Shaiva-VaishNava clashes instead of Islamic Iconoclasm. He epitomizes the class of left leaning intellectuals that have sold their conscience to the establishment in return for the favors it bestows upon them. Of course, he is not an honest man as well.

The novel ends with Lakshmi/Razia trying to publish her novel, to find it banned by the government. A consoling part of the novel is that Amir, Razia's husband realizes what his wife has been fighting for and gets ready to help her. A list of books read by Razia/Lakshmi can be found at the end of the book and it also serves as a bibliography - something that is unheard of for a novel. Bhyrappa has resorted to this to defend the book from possible bans. His logic is the same as his character's. If his book is banned, then each and every book in the list at the end of the book might also need to be banned.

The book is wonderfully informative and is cause for deep introspection. Bhyrappa has forever argued for relationships between communities to be based on a strong foundation of truth rather than systemic misinformation. It is no different in this book. Though Islam has come in for rough treatment, to put it mildly, there are some parts that cause a person to pause and think for a while. For instance, a Hindu character is told that his gods are not as powerful as Allah for they could not protect their own abodes from destruction at the hands of Allah's men. Having seen temples at Somnath, Varanasi and Mathura destroyed, won't any Hindu feel demoralized? That argument about the relative power of gods, though childish, can provoke some serious thought.

Amir, though born and brought up a Muslim, sees his wife's plight and sides with her at the end of the book. In my mind, this also shows that Bhyrappa is still an optimist. People may deride Bhyrappa for being an anti-Islamic person after they read this book. But they can never say that he is anti-human. Bhyrappa seems to believe that this fundamental human quality will triumph over any religious dogma.

Bhyrappa, in my opinion, has been a bit simplistic in several parts in the novel. For instance, Shastri's wife is a staunch British Catholic and wants her daughter to grow up as one. But, just think of it. A British woman who can marry an Indian against her parent's wishes doesn't look like she can be as rigid as portrayed in the book. Certain situations in the novel look artificially set up, as if they were there just for a theological discussion waiting to happen. And finally, I don't know if any writer can escape this - but a few characters and situations in AvaraNa seemed like callbacks to older works of Bhyrappa.

Though most of the facts related in the book were already known by me and some of the books in the bibliography had already been read by me, this book's worth, IMO, is in the literary presentation. The parallel track, the imagery - for instance, that of a cow whose calf has been tied up elsewhere (there are several other examples if one cares to read deeply) , the language, the situations and the character development are all outstanding.

However, superficial readers of the book might feel a strong feeling against Islam, which is certainly NOT Bhyrappa's intent. But he definitely wants to discuss "minority-ism" in India. This is similar to the spirit in which he wrote against Girish Karnad's glorification of Tipu Sultan as a national hero. But because of all this, it may not go down too well with the government.

My only hope is that this does not lead to some more mindless violence and yet another idiotic book ban.

If you haven't read it yet, please do. Sahitya Bhandara's Bangalore number is 2287-7618.

Monday, January 29, 2007

ಭೈರಪ್ಪನವರ "ಪರ್ವ": ಚಿಂತನೆಗಳು: ಭಾಗ ೩

ಎಲ್ಲರಿಗೂ ತಿಳಿದ ಹಾಗೆ ಮಹಾಭಾರತದಲ್ಲಿ ಪಾಂಡವರದೇ ಮುಖ್ಯ ಸ್ಥಾನ. ಇವರ ವಿಚಿತ್ರದ ಹುಟ್ಟಿನ ಬಗ್ಗೆ ನನಗನಿಸಿದ್ದನ್ನು ಹಿಂದೆಯೇ ಬರೆದಿದ್ದೆ. ಪರ್ವದಲ್ಲಿ ಇದನ್ನು ಹೇಗೆ ನೋಡಲಾಗಿದೆ ಎನ್ನುವುದರ ಬಗ್ಗೆ ಕೂಡ ಹಿಂದಿನ ಭಾಗಗಳಲ್ಲಿಯೇ ಬರೆದದ್ದಾಯ್ತು. ಈಗ ಪರ್ವದಲ್ಲಿನ ಪಾಂಡವರು ನನಗೆ ಹೇಗೆ ಕಂಡರು ಅನ್ನುವುದರ ಬಗ್ಗೆ ಸ್ವಲ್ಪ ಬರೆಯುತ್ತೇನೆ.

ಚಿಕ್ಕಂದಿನಿಂದ ನನಗೆ ಮಹಾಭಾರತವೆಂದರೆ ಹೊಳೆಯುತ್ತಿದ್ದ ಹೆಸರು ಭೀಮನದು. ರಾಮಾಯಣವೆಂದರೆ ಆಂಜನೇಯನದು. ಇದು ನನ್ನ ವೈಯಕ್ತಿಕ ವಿಷಯವೋ ಅಥವಾ ಎಲ್ಲ ಮಕ್ಕಳಲ್ಲೂ ಹಾಗೆಯೋ ಎನ್ನುವುದನ್ನು ಅರಿಯೆ. ಭೀಮನ ನಂತರದ ಹೆಸರು ಅರ್ಜುನನದು. ಧರ್ಮರಾಯ ಮತ್ತು ಯಮಳರ ಬಗ್ಗೆ ಯೋಚನೆ ಸಹ ಬರುತ್ತಿರಲಿಲ್ಲ. ವಯಸ್ಸಾಗುತ್ತಾ ಭಾರತದ ಅರ್ಜುನನ ಪರಾಕ್ರಮವು ಮತ್ತು ಯುಧಿಷ್ಠಿರನ ಧರ್ಮಪ್ರಜ್ಞೆ ನನ್ನನ್ನು ಭೀಮನನ್ನು ಸ್ವಲ್ಪ ನೇಪಥ್ಯಕ್ಕೆ ತಳ್ಳುವ ಹಾಗೆ ಮಾಡಿತ್ತು. ಆದರೆ "ಪರ್ವ" ಓದಿದ ಮೇಲೆ ನನ್ನ ಚಿಕ್ಕಂದಿನ ಆಲೋಚನೆಯನ್ನು ಮತ್ತೊಮ್ಮೆ ನೋಡುವಂತಾಯ್ತು.

"ಪರ್ವ"ದಲ್ಲಿಯೂ ನನ್ನ ಚಿಕ್ಕಂದಿನಲ್ಲಿ ಹೇಗೋ ಹಾಗೆಯೇ! ಪಾಂಡವರಲ್ಲಿ ಭೀಮನಿಗೆ ಅಗ್ರ ಸ್ಥಾನ. ನಂತರದ್ದು ಅರ್ಜುನನದು. ಧರ್ಮ-ನಕುಲ-ಸಹದೇವರದು ನಾನು ಹಿಂದೆಯೇ ಬರೆದ ಹಾಗೆ ಒಂದು ರೀತಿಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವ ಬಗೆಯವರು.

ಭೀಮನ ಪ್ರಸಕ್ತಿ ಬಂದಾಗ ಅವನು ತನ್ನ ಹಿಂದಿನ ಹೆಂಡತಿಯಾದ ಹಿಡಿಂಬೆಯನ್ನು ನೋಡಲು ಹೋಗುತ್ತಿರುತ್ತಾನೆ. ಅದು ಯುದ್ಧದಲ್ಲಿ ತನ್ನ ಮಗನಾದ ಘಟೋತ್ಕಚನ ಸಾಹಾಯ್ಯವನ್ನು ಕೇಳಲು. ಹಿಂದೆ ಹಿಡಿಂಬೆಯನ್ನು ಮಗುವಾದ ಘಟೋತ್ಕಚನನ್ನೂ ಹಾಗೆಯೇ ಬಿಟ್ಟು ಹೊರಟದ್ದರ ಬಗ್ಗೆ ಅಳುಕು ಭೀಮನಿಗೆ ಸಹಜವಾಗಿರುತ್ತದೆ. ತಿಳಿದೂ ತಿಳಿದೂ ದೇವಸೇನಾನಿಯಾದ ವಾಯುವಿನಿಂದ ತನ್ನನ್ನು ಪಡೆದ ತಾಯಾದ ಕುಂತಿಯ ಮಾತನ್ನು ಕೇಳಿ ಹೆಂಡತಿಯನ್ನು ಬಿಟ್ಟದ್ದರ ಬಗ್ಗೆ ಪಶ್ಚಾತ್ತಾಪವೂ ಇರುತ್ತದೆ. ನಾನೆಂದಿಗೂ ಹಿಡಿಂಬೆಯೊಂದಿಗಿನ ಭೀಮನ ಪುನಃಸಮಾಗಮದ ವಿಷಯವಾಗಿ ಯೋಚಿಸಿರಲಿಲ್ಲ. "ಪರ್ವ" ಅದು ಹೇಗಾಗಿದ್ದಿರಬಹುದು ಅನ್ನುವುದನ್ನು ಮನೋಜ್ಞವಾಗಿ ತೋರುತ್ತದೆ. ಪತ್ನೀ-ಸುತರನನ್ನು ಬಿಟ್ಟು ಯಾವ ನೈತಿಕ ಅಧಿಕಾರದಿಂದ ಮಗನ ನೆರವನ್ನು ಕೇಳಲು ಭೀಮನಿಗೆ ಸಾಧ್ಯವಿದ್ದಿರಬಹುದು? ಘಟೋತ್ಕಚನಿಗೂ ಹೆಂಡತಿ ಮಕ್ಕಳಿರುತ್ತಾರೆ. ಮಗ ಯುದ್ಧದಲ್ಲಿ ಸಾಯುವನು ಎಂದು ಮೊದಲೇ ತಿಳಿದ ಪರ್ವದ ಓದುಗನಿಗೆ ಈ ಸಂಗತಿ ಸ್ವಲ್ಪ ದುಃಖವುಂಟಾಗುವ ಹಾಗೆ ಮಾಡುತ್ತದೆ.

ಭೀಮನದು ಭೌತಿಕ ಸ್ತರದಲ್ಲಿ ಮೂಡಿದ ಪಾತ್ರ. ತಿಳಿದವರೊಬ್ಬರು ಈ ಸಂಗತಿಯನ್ನು ಹೇಗೆ ಭೈರಪ್ಪನವರು ಧ್ವನಿಸಿದ್ದಾರೆ ಎಂಬುದರ ಬಗ್ಗೆ ಹೇಳಿದರು. "ಪರ್ವ"ದಲ್ಲಿ ಭೀಮನಿಗೆ ತನ್ನ ದೇಹದ ಅವಯವಗಳ ಬಗ್ಗೆಯೇ ಚಿಂತೆ. ಬೆವರು, ಹಸಿವು, ಬಿಸಿಲು ಇತ್ಯಾದಿ. ಜೊತೆಗೆ ಅವನ ಚಿಂತನೆಗಳೂ ಹಾಗೆ. ಧರ್ಮರಾಯನ ಧರ್ಮಕ್ಕೆ ಕಟ್ಟು ಬೀಳಲು ಭೀಮನಿಗೆ ಎಂದಿಗೂ ಸುತರಾಂ ಇಷ್ಟವಿರುವುದಿಲ್ಲ. ಜೂಜಾಡುವ ತನ್ನ ಅಣ್ಣನ ಕೈಗಳನ್ನೇ ಸುಟ್ಟು ಹಾಕುವ ಮಟ್ಟಿಗೆ ಕೋಪ ಅವನಿಗೆ. ದ್ರೌಪದಿಗಾದ ಅವಮಾನಕ್ಕೆ ಸರಿಯಾಗಿ ಪ್ರತಿಕ್ರಯಿಸಿದವನೇ ಭೀಮ. ಇವನೂ ದ್ರೌಪದಿಯೂ ಸಮಾನಮನಸ್ಕರು. ನನಗೆ "ಪರ್ವ"ದ ಭೀಮ ಬಹಳ ಹಿಡಿಸಿದ. ಪ್ರಾಯಃ ಏಕೆಂದರೆ, ಮೂಲದ ಭೀಮನಿಗೂ ಇವನಿಗೂ ಕಡಿಮೆ ಅಂತರವಿರುವ ಕಾರಣವಿರಬಹುದು.

ಇದಾದ ನಂತರ ಅರ್ಜುನನದು. ಅರ್ಜುನನು ಪರ್ವದಲ್ಲೂ ಅಪ್ರತಿಮ ಬಿಲ್ಲುಗಾರ. ಆದರೆ ಇದರ ಬಗ್ಗೆ ಅವನಿಗೆ ಮೂಲದಲ್ಲಿ ಇರುವ ಹಾಗೆ ಒಂದು ಜಂಭ. ಜೊತೆಗೆ ವಿಲಾಸಿ ಪುರುಷ ಬೇರೆ. ಇವನಿಗೆ ಹಲವರು ಹೆಂಡತಿಯರು. ದ್ರೌಪದಿಯನ್ನು ಗೆದ್ದ ಅರ್ಜುನ ಅವಳಿಂದ ಬಹಳಷ್ಟು ಪ್ರೀತಿಯನ್ನು ಗಳಿಸಿಯೂ ಅದನ್ನು ಉಳಿಸಿಕೊಳ್ಳಲಾರದೆ ಹೋಗುತ್ತಾನೆ. ದ್ರೌಪದಿಗೂ ಅರ್ಜುನನಿಗೂ ನಿರಂತರ ಶೀತಲ ಸಮರ. ಅರ್ಜುನನು ಸುಭದ್ರೆಯೊಡನೆ ದ್ವಾರಕೆಗೆ ತೆರಳುವಾಗ ಹುಣ್ಣಿಮೆಯ ರಾತ್ರಿಯಿರುತ್ತದೆ. ಇದು ಅವನ ರಸಿಕ ಮನೋಭಾವವನ್ನು ತೋರುತ್ತದೆಯೆಂದು ಪರ್ವದಲ್ಲಿ ಧ್ವನಿಸಿದೆ ಎಂದು ತಿಳಿದವರೊಬ್ಬರು ಸೂಕ್ತವಾಗಿ ತೋರಿದರು. ಅರ್ಜುನನದು ಇನ್ನೊಂದು ಗುಣವೆಂದರೆ ಅವನ "ಧರ್ಮಪರಾಯಣತೆ". ಧರ್ಮದ ಬಾಹ್ಯ ಆಚರಣೆಗಳಿಗೆ ಬಹಳ ಮನ್ನಣೆ ಕೊಡುವ ಪಾತ್ರ ಅರ್ಜುನನದು. ಮೂಲದಲ್ಲೂ ಹಾಗೆಯೇ! ಆದರೆ ಪರ್ವದಲ್ಲಿ ಇದನ್ನು ಅವಗುಣವೆಂಬಂತೆ ಭೈರಪ್ಪನವರು ತೋರಿದ್ದಾರೆ. ಧರ್ಮದ ಅಂತರಂಗವನ್ನು ತಿಳಿಯುವ ಕುತೂಹಲ ಅರ್ಜುನನಿಗಿರುವುದನ್ನು ನಾನು ಪರ್ವದಲ್ಲಿ ನೋಡಲಿಲ್ಲ. ಧರ್ಮಜನ ಬಲಗೈ ಭಂಟನೆಂದರೆ ಅರ್ಜುನನೇ! ಮೂಲದ ಉತ್ತರಗೋಗ್ರಹಣ ಪ್ರಸಂಗದಲ್ಲಿ ಅನಿತರಸಾಧಾರಣವಾಗಿ ಮೆರೆಯುವ ಅರ್ಜುನ ಪರ್ವದಲ್ಲಿ ಕಾಣುವುದಿಲ್ಲ. ಮೂಲದಲ್ಲಿ ಯುದ್ಧಸಮಯದಲ್ಲಿ ಅರ್ಜುನ ವಿಷಾದದಿಂದ ಕೂಡಿ ಕೃಷ್ಣನಿಂದ ಗೀತೋಪದೇಶ ಪಡೆಯುತ್ತಾನೆ. ಆದರೆ ಪರ್ವದಲ್ಲಿನ ಅರ್ಜುನ ಅದನ್ನು ಪಡೆಯುವಷ್ಟು ವಿನಯಸಂಪನ್ನನಾಗಿ ನನಗೆ ಕಾಣಲಿಲ್ಲ.

ಇತರ ಕಾವ್ಯಗಳಲ್ಲಿ ಭುಜಕೀರ್ತಿ-ಕಿರೀಟಗಳ ಹೊತ್ತ ಅತೀಂದ್ರಿಯ ಶಕ್ತಿ ಸಂಪನ್ನರಾದ ಪಾಂಡವರು ಇಲ್ಲಿ ಎಲ್ಲ ಮನುಷ್ಯರ ಹಾಗೆ ಕಾಣಿಸುತ್ತಾರೆ. ಭೀಮಾರ್ಜುನರ ಪಾತ್ರಗಳ ಬಗೆಗಂತೂ ಹಾಗೆ ಪ್ರತಿ ನಿಮಿಷಕ್ಕೂ ಅನ್ನಿಸುತ್ತಿತ್ತು. ಎಲ್ಲಿ ಆ ಭೀಮಸೇನ? ಎಲ್ಲಿ ಇಲ್ಲಿನ ಭೀಮ? ನಾರಾಯಣನ ಸಹಚರನಾದ ನರನ ಅವತಾರನಾದ ಮೂಲದ ಅರ್ಜುನನೆಲ್ಲಿ? ಪರ್ವದ ಅಹಂಕಾರಿ ವಿಲಾಸಿ ಪುರುಷ ಅರ್ಜುನನೆಲ್ಲಿ? ಆದರೂ ಕುರುಕ್ಷೇತ್ರಯುದ್ಧದಲ್ಲಿ ಗೆಲುವಿಗೆ ಕಾರಣರು ಈ ಇಬ್ಬರೆ! ಪರ್ವದಲ್ಲಿಯೂ ಹೀಗೇ ಇರುವುದು.

ಇವರಿಬ್ಬರ ನಂತರ ಧರ್ಮರಾಯನ ಪಾತ್ರ. ನನ್ನ ಪ್ರಕಾರ ಭೈರಪ್ಪನವರು ಈ ಪಾತ್ರವನ್ನು ಸರಿಯಾಗಿ ಬೆಳೆಸಲಿಲ್ಲ. ಪರ್ವದ ಧರ್ಮರಾಜ ಒಬ್ಬ ಶಕ್ತಿಹೀನನಾದ "ಧರ್ಮಪರಾಯಣ"ನಾದ ನಿಷ್ಕ್ರಿಯನಾದ ರಾಜ. ದ್ರೌಪದಿ-ಭೀಮರಿಗಂತೂ ಇವನನ್ನು ಕಂಡರೆ ಆಗದ ಹಾಗೆ ಪರ್ವ ತೋರಿದೆ. ದ್ರೌಪದಿಯ ಸ್ವಯಂವರದ ನಂತರ ಇವಳನ್ನು ಗೆದ್ದು ತಂದ ಅರ್ಜುನನ ಮುಂದೆ ಅವಳ ಮೇಲೆ ಆಸೆಯನ್ನು ಧರ್ಮರಾಯ ತೋರುತ್ತಾನೆ. ಪಾಂಡವರಲ್ಲಿ ಒಡಕು ಮೂಡದಿರಲೆಂದೇ ಕುಂತಿ ಪಾಂಚಾಲಿಯನ್ನು ಪಂಚಪತಿಗಳ ಪತ್ನಿಯಾಗೆಂದು ಒಪ್ಪಿಸುತ್ತಾಳೆ. ಆದರೆ ಇದಕ್ಕೆ ಬೀಜ ಧರ್ಮರಾಯನೇ! ದ್ರೌಪದಿಯನ್ನು ಗೆಲ್ಲಲು ಅಸಮರ್ಥನಾಗಿದ್ದೂ ಅವಳ ಮೇಲೆ ಆಸೆಯನ್ನು ಪಟ್ಟು ತಮ್ಮನ ಹೆಂಡತಿಯ ಮೇಲೆ ಕಣ್ಣು ಹಾಕಿದವನಾಗಿ ಧರ್ಮರಾಯ ಪರ್ವದಲ್ಲಿ ಕಾಣುತ್ತಾನೆ. ದ್ರೌಪದಿಯಂತೂ ಇವನ ಬಗ್ಗೆ "ಧರ್ಮದ ಗಬ್ಬು" ಬರುವ ಬಾಯವನೆಂದು ತನ್ನಲ್ಲಿಯೇ ಬೈದುಕೊಳ್ಳುತ್ತಾಳೆ.

ಇಡೀ ಭಾರತದಲ್ಲಿ ಧರ್ಮಜ ತಪ್ಪು ಮಾಡುವುದು ನನಗೆ ಕಂಡ ಹಾಗೆ ಎರಡು ಬಾರಿ. ಒಂದು ದ್ಯೂತದ ಆಮಂತ್ರಣವನ್ನು ಅಂಗೀಕರಿಸಿ ಪಟ್ತದ ರಾಣಿಯನ್ನೂ ತಮ್ಮಂದಿರನ್ನೂ ಪಣವಾಗಿಡುವುದು. ಎರಡನೆಯದು ದ್ರೋಣನನ್ನು ಕೊಲ್ಲುವಾಗ ಸುಳ್ಳು ಹೇಳುವುದು. ಎರಡನೆಯದು ತಪ್ಪಲ್ಲ ಬಿಡಿ. ಆದರೂ ಇವೆರಡೆ ನನಗೆ ಕಾಣಿಸುವುವು. ಯಕ್ಷಪ್ರಶ್ನೆಯ ಪ್ರಸಂಗದಲ್ಲಿ ತಮ್ಮಂದಿರೆಲ್ಲರನ್ನು ಉಳಿಸುವುದು ಧರ್ಮಜ ಅಲ್ಲವೇ? ಸ್ವರ್ಗಾರೋಹಣದಲ್ಲಿಯೂ ನೇರವಾಗಿ ಸ್ವರ್ಗಕ್ಕೆ ಹೋಗಲು ಅನುಮತಿ ದೊರೆತದ್ದು ಧರ್ಮಜನಿಗೇ ಅಲ್ಲವೇ? ಆದರೂ ಪರ್ವದಲ್ಲಿ ಇವೆರಡು ಸಂಗತಿಗಳು ಧರ್ಮರಾಯನ ಪರವಾಗಿ ವಕಾಲತ್ತಿನಲ್ಲಿ ಸೋತ ಹಾಗೆ ಕಾಣುತ್ತವೆ. ತೀರ ದುರ್ಬಲ ಪಾತ್ರವಾಗಿ ಕಂಡಿದೆ. ನನಗೆ ಪರ್ವದಲ್ಲಿನ ಧರ್ಮಜನ ಪಾತ್ರ ಹಿಡಿಸಲೇ ಇಲ್ಲ.

ನಕುಲ-ಸಹದೇವರನ್ನು ಬಿಡಿ, ಅಯ್ಯೋ ಪಾಪವೆನಿಸುತ್ತದೆ. ಇವರ ಪಾತ್ರಗಳನ್ನು ಯಾರೂ ದೊಡ್ಡದಾಗಿ ಚಿತ್ರಿಸಿಲ್ಲ. ಪರ್ವದಲ್ಲಿಯೂ ಹಾಗೆಯೇ !

ಪಾಂಡವರ ಶಕ್ತಿಗೆ ಅವರ ಧರ್ಮವೇ ಕಾರಣವೆಂದು ಭೈರಪ್ಪನವರು ತೋರಿದ್ದಾರೆ. ಉದಾಹರಣೆಗೆ ಎಂದಿಗೂ ದಾಸೀಗಮನವನ್ನು ಮಾಡದವಾರು ಪಾಂಡವರು. ಹೀಗೆ ಇಂದ್ರಿಯ ಲೋಲುಪರಾಗದೆ ತಮ್ಮಲ್ಲಿನ ಶಕ್ತಿಯನ್ನುಳಿಸಿಕೊಂಡು, ಸೋಲಿನ ಬೆಂಕಿಯಿಂದ ತಪ್ತರಾಗಿ ವಿಜಯಗಳಿಸಿದವರು ಪಾಂಡವರು. ಆದರೆ ಎಂಥ ವಿಜಯ ಅದು?

ಮುಂದಿನ ಬಹುಮುಖ್ಯವಾದ ಪಾತ್ರ, ಕುಂತಿಯ ಹಾಗೆಯೇ ಪಾಂಡವರನ್ನು ಒಟ್ಟಾಗಿಯೇ ಇಡುವ ಇನ್ನೊಂದು ಪಾತ್ರ. ಅದು ದ್ರೌಪದಿ! ಮಹಾಭಾರತದಲ್ಲಿ ಹಿಂದಿನ ಜನ್ಮದಲ್ಲಿ ಐದು ಪತಿಗಳ ವರವನ್ನು ಬೇಡಿದ ಕಾರಣ ದ್ರೌಪದಿಯು ಐದು ಜನ ಗಂಡಂದಿರನ್ನು ಪಡೆಯಬೇಕಾಯ್ತು ಎಂದೆಲ್ಲ ಕೇಳಿದ್ದೇವೆ. ಪರ್ವದ ಮಟ್ಟಿಗೆ ಧರ್ಮರಾಯನ ಪ್ರಸಂಗದಲ್ಲಿ ಇದರ ಕಾರಣವೇನೆಂದು ನೋಡಿದ್ದಾಯ್ತು. ಇವಳದ್ದು ಕೂಡ ದೊಡ್ಡ ಪಾತ್ರ.

ಇಲ್ಲಿ ಒಂದು ಮಾತು ಹೇಳಲು ಇಚ್ಛಿಸುತ್ತೇನೆ. ಭೈರಪ್ಪನವರ ಸ್ತ್ರೀಪಾತ್ರಗಳು ಅವರ ಪುರುಷಪಾತ್ರಗಳಿಗಿಂತ ವಿಭಿನ್ನವಾಗಿ ಉತ್ತಮವಾಗಿ ಮೂಡಿಬರುತ್ತವೆ. ಗೃಹಭಂಗದ ನಂಜಮ್ಮನಾಗಲಿ, ಸಾರ್ಥದ ಚಂದ್ರಿಕೆಯಾಗಲಿ, ಅಥವಾ ಧರ್ಮಶ್ರೀಯ ಲಿಲ್ಲಿಯಾಗಲಿ, ದಾಟುವಿನ ಸತ್ಯೆಯದಾಗಲಿ - ಇವರ ಸ್ತ್ರೀಪಾತ್ರಗಳೆಲ್ಲವೂ ವಿಭಿನ್ನ, ಸುಂದರ, ಮನೋಜ್ಞ. ಇವರ ಅಂತಃಕರಣ ಹೆಂಗಸರಿಗಾಗಿ ಮಿಡಿಯುತ್ತದೆಂದು ಯಾರಾದರೂ ಹೇಳಬಹುದು. ಭೈರಪ್ಪನವರ ತಾಯಿಯವರು ಅವರ ಮೇಲೆ ಗಾಢವಾದ ಪ್ರಭಾವ ಬೀರಿರುವುದನ್ನು ಅವರು ತಮ್ಮ ಆತ್ಮಕಥೆಯಾದ "ಭಿತ್ತಿ"ಯಲ್ಲೇ ಹೇಳಿಕೊಂಡಿದ್ದಾರೆ. ಅದೇ ಮುಂದುವರೆದಿದೆ ಎಂದು ಹೇಳಬಹುದು.

ಸರಿ ಮತ್ತೊಮ್ಮೆ ದ್ರೌಪದಿಯ ಕಡೆ ಬರೋಣ. ದ್ರೌಪದಿ ಐದು ಗಂಡಂದಿರನ್ನು ಪಡೆದ ಹೆಂಗಸು. ಯುವತಿಯಾಗಿ ಪಾಂಡವರ ಮನೆ ಸೇರಿದ ಕೃಷ್ಣೆ (ಪರ್ವದ ಉದ್ದಕ್ಕೂ ಇದೇ ಹೆಸರಿನಲ್ಲೇ ದ್ರೌಪದಿಯ ಸಂಬೋಧನೆ ಆಗುವುದು) ತನ್ನ ಅತ್ತೆಯಾದ ಕುಂತಿಯಿಂದ ಐದು ಬಲಿಷ್ಠರಾದ ಗಂಡಂದಿರನ್ನು ಒಟ್ಟಿಗೆ ನಿಭಾಯಿಸುವುದು ಹೆಮ್ಮೆಯ ಸಂಗತಿಯೆಂಬ ತಪ್ಪು ಕಲ್ಪನೆಗೆ ಒಳಗಾಗುತ್ತಾಳೆ. ಆದರೆ ಕುಂತಿಗೆ ಒಮ್ಮೆ ಒಬ್ಬರ ಸಂಪರ್ಕವಿದ್ದರೆ ದ್ರೌಪದಿಗೆ ಐದೂ ಜನರ ಸಂಪರ್ಕವೂ ಒಟ್ಟಿಗೆ. ನಂತರ ದ್ರೌಪದಿಯು ಅದು ಎಂಥ ತಪ್ಪಾಗಿತ್ತು ಎಂದು ನೆನೆಸಿಕೊಳ್ಳುತ್ತಾಳೆ. ಪ್ರತಿದಿನ ಒಬ್ಬ ಗಂಡನಿಗೆ ಮೀಸಲಾದ ದ್ರೌಪದಿ ಹಸಿದ ಹೆಬ್ಬುಲಿಗಳಿಗೆ ಹುಲ್ಲೆ ಸಿಗುವ ಹಾಗೆ ಸಿಕ್ಕಿಹೋಗುತ್ತಾಳೆ. ಇದು ನನ್ನ ಮಾತಲ್ಲ - ದ್ರೌಪದಿಯೇ ತನ್ನ ಸ್ವಗತದಲ್ಲಿ ಈ ರೀತಿಯ ಮಾತಾಡಿಕೊಳ್ಳುತ್ತಾಳೆ. ಅವಳ ಪರಿಸ್ಥಿತಿಗೆ ಎಂಥವರಾದರೂ ಅನುಕಂಪವ್ಯಕ್ತಪಡಿಸಬಹುದು. ನಂತರ ಒಂದು ವರ್ಷ ಒಬ್ಬ ಗಂಡನೊಂದಿಗೆ ಸಂಸಾರ ಎಂದು ಒಪ್ಪಂದವಾಗುತ್ತದೆ. ಈ ಸಂಗತಿ ಮಡಿವಂತರಿಗೆ ಕಷ್ಟವೆಂದೆನಿಸಬಹುದು. ಆದರೆ ಇದು ಮಹಾಭಾರತದ ಕಥೆಯನ್ನು ಗಮನಿಸಿದಾಗ ಅಸಮಂಜಸ ಸಂಗತಿಯೆಂದೇನೂ ಅನ್ನಿಸುವುದಿಲ್ಲ. ಅಂದ ಹಾಗೆ, "ಪರ್ವ" ಚಿಕ್ಕ ಮಕ್ಕಳಿಗಲ್ಲ!

ಭಾರತದ ಸ್ಥೂಲಕಥೆಯನ್ನೋದುವವರಿಗೆ ಇಂಥ ಒಂದು ಸಮಸ್ಯೆಯ ಅರಿವೇ ಆಗುವುದಿಲ್ಲ. ಭೈರಪ್ಪನವರ ಪ್ರತಿಭೆ ಅಂಥ ಕತ್ತಲೆಯ ಕೋಣೆಗಳಲ್ಲಿ ಬೆಳಕು ಚೆಲ್ಲುವುದೇ ಆಗಿದೆ.

ದ್ರೌಪದಿಯು ಬಹಳ ರೂಪವತಿಯೆಂದು ಮಹಾಭಾರತದಲ್ಲಿರುವಂತೆ ಪರ್ವದಲ್ಲಿಯೂ ಸಹ ತೋರಿಸಿದೆ. ಅವಳ ಮಟ್ಟಿಗಂತೂ ಅವಳ ರೂಪವೇ ಅವಳ ಶತ್ರು! ಹೆಚ್ಚು ವಯಸ್ಸಾದರೂ ತನಗಿಂತ ಕಿರಿಯರಾದ ಕೀಚಕ ಮತ್ತು ಜಯದ್ರಥರು ಕೂಡ ಅವಳಲ್ಲಿ ಆಸೆ ಪಡುತ್ತಾರೆ, ಅವಳನ್ನು ವ್ಯಥೆಗೀಡು ಮಾಡುತ್ತಾರೆ. ದ್ರೌಪದಿ ಈ ಅನರ್ಥಗಳಿಗೆ ಕಾರಣವಾದ ತನ್ನ ವಯಸ್ಸಾದರೂ ಮಾಸದ ಸುಂದರ ರೂಪವನ್ನೇ ಶಪಿಸಿಕೊಳ್ಳುತ್ತಾಳೆ. ಇವಳಿಗೆ ನಿಜವಾದ ಆಸರೆಯಾಗುವುದು ಭೀಮ. ತನ್ನ ಮನಸ್ಸಿಗೆ ಸ್ಪಂದಿಸಿ, ಕೋರಿಕೆಗಳನ್ನು ತೀರಿಸುವ ಭೀಮನೇ ಇವಳಿಗೆ ಅತ್ಯಂತ ಪ್ರಿಯನಾಗುತ್ತಾನೆ.

ಅವಳಿಗೆ ಪಾಂಡವರಿಂದ ಐದು ಮಕ್ಕಳು ಹುಟ್ಟುತ್ತಾರಷ್ಟೆ. ಆ ಉಪ-ಪಾಂಡವರು ಯುದ್ಧದ ಕೊನೆಯಲ್ಲಿ ಅಶ್ವತ್ಥಾಮನಿಂದ ಕ್ರೂರವಾದ ರೀತಿಯಲ್ಲಿ ಹತರಾಗುತ್ತಾರೆ. ಆಗ ಮೂಡಿಸುವ ಒಂದು ಪ್ರಸಂಗಕ್ಕೆ ಭೈರಪ್ಪನವರಿಗೆ "hats off" ಹೇಳದೆ ಬೇರೆ ದಾರಿಯಿಲ್ಲ. ಅಭಿಮನ್ಯುವಿನ ಸಾವಿನ ಸಮಯದಲ್ಲಿ ಅರ್ಜುನನು ಬಹಳ ಗೋಳಿಟ್ಟಿರುತ್ತಾನೆ. ಭೀಮನೂ ಘಟೋತ್ಕಚನ ಸಾವಿನಲ್ಲಿ ಹಾಗೆಯೇ ಮಾಡಿರುತ್ತಾನೆ. ಆದರೆ ಉಪಪಾಂಡವರು ಸತ್ತಾಗ - ಅವರನ್ನು ಕುರಿತು ಅವರ ತಂದೆಯರು ಶೋಕಿಸುವುದಿಲ್ಲ. ಯಾರು ಯಾವ ಮಗುವಿನ ತಂದೆಯೋ ಎಂದು ತಿಳಿಯದೆ ಈ ಶೋಕರಾಹಿತ್ಯವೋ ಎಂಬಂತೆ ಪರ್ವದಲ್ಲಿ ಪ್ರಶ್ನೆ ಉದ್ಭವಿಸುತ್ತದೆ. ಈ ಸಂಗತಿಯನ್ನು ಜ್ಞಾಪಿಸಿದ ಅಶ್ವತ್ಥಾಮನನ್ನು ಬಿಟ್ಟು ಬಿಡಿ ಎಂದು ದ್ರೌಪದಿ ಹೇಳಿದಾಗ ಮನಸ್ಸು ಅವಳ ಅವಸ್ಥೆಗೆ ಮರುಗದೆ ಇರುವುದಿಲ್ಲ.

ಭೈರಪ್ಪನವರ ಪ್ರತಿಭೆಯ ಬಗ್ಗೆ ಇನ್ನೊಂದು ಮಾತು. ಅವರು ಮೂಲಭಾರತದಲ್ಲಿಯೂ ಸಲೀಸಾಗಿ ಸೇರಬಲ್ಲಂಥ ಸನ್ನಿವೇಶಗಳನ್ನು ನಿರ್ಮಿಸಿದ್ದಾರೆ. ಇದು ಅಷ್ಟು ಸುಲಭಾವಾದ ಕೆಲಸವಲ್ಲ. ಹಿಂದಿನ ಪ್ಯಾರಾದಲ್ಲಿ ಬಂದ ಸಂಗತಿ ಈ ಬಗೆಯದು. ಪಾತ್ರಗಳ ಒಳ ಹೊಕ್ಕು ನೋಡುವ ಇವರ ಈ ಪ್ರತಿಭೆಯೇ ಈ ಉತ್ಕೃಷ್ಟ ಕೃತಿಗೆ ಕಾರಣವೆಂದು ಇಲ್ಲಿ ಮತ್ತೊಮ್ಮೆ ಹೇಳುತ್ತೇನೆ.

ಒಟ್ಟಿನಲ್ಲಿ, ಕುಂತಿಯ ಹಾಗೆಯೇ ದ್ರೌಪದಿಯದೂ ದೊಡ್ಡ ಪಾತ್ರ.

ಪರ್ವದ ಬಗ್ಗೆ ಬರೆಯಲು ಹೊರಟು ಆಗಲೇ ಮೂರು ಭಾಗಗಳಾಗಿವೆ. ಇದೇನು ಪರ್ವವನ್ನೇ ಮತ್ತೆ ಇಲ್ಲಿ "ಕಾಪಿ" ಮಾಡಬೇಕ ಅನ್ನುವ ಅನುಮಾನ ನನಗೆ. ಆದರೆ ಬರೆಯಲು ಆರಂಭಿಸಿದಾಗ ಅದು ಬರೆಸಿಕೊಂಡೇ ಹೋಗುತ್ತದೆ. "ಪರ್ವ" ಅಷ್ಟು ವಿಚಾರಪ್ರಚೋದಕ ಕೃತಿ. ಇನ್ನು ಹೆಚ್ಚು ಬರೆಯಲಾರೆ. ಮುಂದಿನ ಭಾಗಗಳ ವಿಷಯಗಳನ್ನು ಈಗಲೇ ಹೇಳಿಬಿಡುತ್ತೇನೆ.

ನಾಲ್ಕನೆಯ ಭಾಗದಲ್ಲಿ - ಇನ್ನಷ್ಟು ಪಾತ್ರಗಳ ಬಗ್ಗೆ - ಕೃಷ್ಣ (ಯಾದವ ಕುಲ) ಮತ್ತು ವ್ಯಾಸರ ಬಗ್ಗೆ. ಭೀಷ್ಮಾದಿಗಳನ್ನು ಸೇರಿಸಲು ಯತ್ನಿಸುತ್ತೇನೆ.

ಐದನೆಯ ಹಾಗೂ ಕೊನೆಯ ಭಾಗದಲ್ಲಿ - "ಪರ್ವ"ದ ಸಾಮಾನ್ಯವಾದರೂ ಅಸಾಮಾನ್ಯ ಸಂಗತಿಗಳು - ಆಹಾರ, ಜೀವನ ರೀತಿ, ಸೂಕ್ಷ್ಮ ಸಂಗತಿಗಳು - miscellaneous - ಅನ್ನುತ್ತಾರಲ್ಲ, ಅದರ ಬಗ್ಗೆ.

ಇದನ್ನು ಬರೆಯುತ್ತಿರುವುದು ನನ್ನ ಜ್ಞಾಪಕಕ್ಕೋಸ್ಕರ. ಹೀಗನ್ನಿಸಿತ್ತು ಪರ್ವವನ್ನು ಆಗ ಓದಿದಾಗ ಎಂದು ನನಗೆ ತಿಳಿಸಿಕೊಳ್ಳಲು. ಇತರರಿಗೆ ಇದು ಚಿಂತನೆಗೆ ಗ್ರಾಸವಾಗುವುದಾರದೆ ನನಗೆ ಸಂತೋಷ.

Friday, January 19, 2007

ಭೈರಪ್ಪನವರ ಪರ್ವ: ಚಿಂತನೆಗಳು : ಭಾಗ ೨

ಎಷ್ಟು ದಿವಸಗಾಳದವು ಬರೆದು ಎಂದೆನಿಸುತ್ತಿದೆ. ಪರ್ವ ಬುದ್ಧಿಯಿಂದ ಮನಸ್ಸಿನಿಂದ ಸ್ವಲ್ಪ ಜಾರುತ್ತಾ ಇದೆ. ಆದರೂ ಅದರಲ್ಲಿ ಬಂದ ಹಲವು ವಿಷಯಗಳನ್ನು ಮರೆಯಲು ಸಾಧ್ಯವಿಲ್ಲ. ಈ ಭಾಗದಲ್ಲಿ ಮುಖ್ಯವಾಗಿ ಮಹಾಭಾರತದ ಮುಖ್ಯ ವ್ಯಕ್ತಿತ್ವಗಳನ್ನು ಭೈರಪ್ಪನವರು ಹೇಗೆ ಚಿತ್ರಿಸಿದ್ದಾರೆನ್ನುವ ಬಗೆಗೆ ನನಗೆ ಕಂಡಿದ್ದನ್ನು ಬರೆಯುತ್ತೇನೆ.

ಕಥೆಯ ಹೆಣೆಯುವಿಕೆಯನ್ನು ಅದ್ಭುತವಾಗಿ ಭೈರಪ್ಪನವರು ಮಾಡಿದ್ದಾರೆ ಅನ್ನುವುದು ಸವಕಲು ಮಾತಾದೀತು. ಭಾರತದ ಕಥೆಯನ್ನ್ಜು ಸಿಂಹಾವಲೋಕನದ ರೀತಿಯಲ್ಲಿ ನಿರೂಪಿಸಿದ್ದಾರೆಂಬುದನ್ನು ಹಿಂದಿನ ಭಾಗದಲ್ಲಿಯೇ ಬರೆದಿದ್ದೆ. ಇದರೊಂದಿಗೆ ಕಥೆಯನ್ನು ಸ್ಮರಿಸುತ್ತಿರುವ ಪಾತ್ರಗಳು ಕಥೆಯ ಆ ಭಾಗವನ್ನು ಹೇಗೆ ನೋಡಿದ್ದರು ಎಂಬುದನ್ನೂ ವಿಶ್ಲೇಷಿಸಿದ್ದಾರೆ. ಅತೀಂದ್ರಿಯ ಶಕ್ತಿಗಳ ಉಲ್ಲೇಖ ಇದರಲ್ಲಿ ಲವಲೇಶದಷ್ಟೂ ಇರದಿದ್ದರೂ ಭಾರತೀಯ ಸಂಸ್ಕೃತಿಯ ಚಿಂತನಾಲಹರಿಯನ್ನು ಕ್ವಚಿದಪಿ ಬಿಟ್ಟಿಲ್ಲ.

ಕುಂತಿಯ ಸಿಂಹಾವಲೋಕನದಲ್ಲಿ ಹಿಮಾಲಯದ ತಪ್ಪಲಿನ ಜೀವನದ ಬಗ್ಗೆ, ಸಂಸಾರವನ್ನು ನಡೆಸಲು ಅಶಕ್ತನಾದ ಪಾಂಡುವಿನ, ದೇವ ಜನಾಂಗದ ಜನರ ಜೊತೆ ಆದ ಸಂಪರ್ಕದ ವಿಷಯಗಳು ಬರುತ್ತವೆ. ಕಥೆಯ ಆ ಭಾಗದಲ್ಲಿ ಕುಂತಿಯದೇ ಮುಖ್ಯ ಪಾತ್ರ ಎಂಬುದು ತಿಳಿದ ಮಾತೇ. ಭಾರತದಲ್ಲಿ ಕುಂತಿ ದೈಹಿಕವಾಗಿ ಹೇಗಿದ್ದಳು ಎಂಬ ವಿವರ ಬಂದಿದೆಯೋ ಇಲ್ಲವೋ ತಿಳಿಯದು. ಆದರೆ ಪರ್ವದಲ್ಲಂತೂ ಕುಂತಿಯ ವ್ಯಕ್ತಿತ್ವ ಮಾನಸಿಕವಾಗಿಯೂ ದೈಹಿಕವಾಗಿಯೂ ದೊಡ್ಡದು. ಅದರಿಂದಲೇ ಅವಳ ಮಕ್ಕಳು ಅಷ್ಟು ಶಕ್ತಿವಂತರಾದುದು. ಪಾಂಡವರಲ್ಲಿ ಮೊದಲ ಮೂವರು ಇವಳ ಮಕ್ಕಳು - ಮತ್ತು ಹೆಚ್ಚು ಖ್ಯಾತರು. ಯಮಳರಾದ ನಕುಲ-ಸಹದೇವರು ಮಾದ್ರಿಯ ಮಕ್ಕಳು, ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವಷ್ಟರ ಮಟ್ಟಿಗಿನ ಪಾತ್ರದವರು. ಧರ್ಮ ಭೀಮಾರ್ಜುನರ ಶಕ್ತಿ ತಾಯಿಂದ ಬಂದದ್ದು ಎಂದು ಚೆನ್ನಾಗಿ ಭೈರಪ್ಪನವರು ಕಾಣಿಸಿದ್ದಾರೆ. ಕುಂತಿಯ ಪಾತ್ರ ಮತ್ತೆ ಕರ್ಣನ ಪ್ರಸಕ್ತಿಯೊಂದಿಗೆ ಬರುತ್ತದೆ. ಕೊನೆಯಲ್ಲಿ ಯುದ್ಧಾನಂತರವೂ ಅವಳ ಪಾತ್ರ ಬರುತ್ತದೆ. ಒಟ್ಟಿನಲ್ಲಿ ಕುಂತಿಯ ಪಾತ್ರ ನೋಡಿದಾಗ ಮನಸ್ಸಿಗೆ ಬಂದ ಮಾತು - ದೊಡ್ಡ ಜೀವ ಎಂಬುದು. ರಾಜ ವೈಭವಗಳನ್ನೂ ಪತಿಯಿದ್ದರೂ ಅನುಭವಿಸಿದ ವೈಧವ್ಯವನ್ನೂ ವಯಸ್ಸಿಗೆ ಸಹಜವಾಗಿ ಬಂದ ಕಾಮನೆಗಳನ್ನೂ ಕಾಡಿನಲ್ಲಿ ಮಕ್ಕಳೊಂದಿಗೆ ಪಟ್ಟ ಪಾಡನ್ನೂ ಕೊನೆಯಲ್ಲಿ ಆದ ಮಾರಣಹೋಮವನ್ನೂ - ಇವುಗಳಿಗಿಂತ ಹೆಚ್ಚಿನದನ್ನೂ ಕುಂತಿ ಅನುಭವಿಸಿದಳು. ದೊಡ್ಡ ಜೀವ ಅನ್ನದೇ ಬೇರೆಯ ಮಾತಿಲ್ಲ. ಕುಂತಿಗೆ ಭೈರಪ್ಪನವರು ಕರ್ಣನ ಪ್ರಸಂಗದಲ್ಲಿ ಸ್ವಲ್ಪ ಕುಂದು ತಂದಂತೆ ಕಂಡರೂ ಆಗಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಅದನ್ನು ಅನಿವಾರ್ಯವೆಂಬಂತೆ ಕಾಣಿಸಿ ಅವಳ ಘನತೆಯನ್ನು ಎತ್ತಿಯೇ ಹಿಡಿದಿದ್ದಾರೆ ಎಂದು ಹೇಳಬೇಕು.

ಪಾಂಡವರ ತಾಯಿಯ ಪಾತ್ರ ಹೀಗಾದರೆ ಕೌರವರ ತಾಯಿಯ ಪಾಡು ಹೇಗೆ? ಮೂಲದ ಭಾರತದಲ್ಲಿ ಗಾಂಧಾರಿ ಪತಿವ್ರತಾಧರ್ಮದ ಪಾಲನೆಗೋಸ್ಕರ ಕಣ್ಣುಪಟ್ಟಿ ಕಟ್ಟಿಕೊಂಡರೆ ಇಲ್ಲಿ ಸ್ವಲ್ಪ ದೊಡ್ಡಸ್ತಿಕೆ ತೋರಲು ಮಾಡಿದ ಕೆಲಸವೆಂಬಂತೆ ಭೈರಪ್ಪನವರು ತೋರಿದ್ದಾರೆ. ಇಲ್ಲಿಯೂ ಗಾಂಧಾರಿ ಪತಿವ್ರತೆಯೇ! ಆದರೆ ಅಕೆಯ ಕಣ್ಣುಪಟ್ಟಿಯನ್ನು ಧರಿಸುವುದಕ್ಕೆ ಕಾರಣ ಬೇರೆ. ಕುರುಡನಾದ ಧೃತರಾಷ್ಟ್ರನಿಗೆ ಹೆಣ್ಣನ್ನು ಯಾರು ತಾನೇ ಕೊಡುತ್ತಿದ್ದರು? ಕನ್ಯಾಶುಲ್ಕವನ್ನು ಕೊಟ್ಟ ನಂತರವೇ ಭೀಷ್ಮರು ಗಾಂಧಾರಿಯನ್ನು ಕರೆತಂದದ್ದು. ಶುಲ್ಕಕ್ಕಾಗಿ ಬಂದ ಹೆಣ್ಣು, ಕುರುಡನನ್ನು ಮದುವೆಯಾಗುತ್ತಿದ್ದೇನೆ, ಇನ್ನು ಪ್ರಪಂಚವನ್ನು ನೋಡಿದರೇನು, ಬಿಟ್ಟರೇನು ಎಂಬ ವೈರಾಗ್ಯದ ಭಾವನೆ ಗಾಂಧಾರಿಯ ಈ ವರ್ತನೆಗೆ ಕಾರಣ (ಭೈರಪ್ಪನವರ ಪ್ರಕಾರ). ಹಸ್ತಿನಾವತಿಗೆ ಬಂದ ಮೇಲೆ ಎಲ್ಲರೂ ಈ ಕೆಲಸ ಮಾಡಿದ ಗಾಂಧಾರಿಯನ್ನು ದೊಡ್ಡವಳು, ಪರಮ ಸಾಧ್ವಿ ಎಂದೆಲ್ಲಾ ಬಗೆದಾಗ ಇವಳಲ್ಲೂ ಇದನ್ನು ಮುಂದುವರೆಸಿದರೆ ಚೆನ್ನ ಎಂಬ ಭಾವನೆ ಬಲಿತು ಹಾಗೆಯೇ ಮಾಡುತ್ತಾಳೆ. ಭೈರಪ್ಪನವರು ಇಲ್ಲಿ ಮೂಲದ ಭಾರತದಲ್ಲೂ ಅಸಂಗತವೆಂದು ಕಾಣದೆ ಇರುವ ಹಾಗೆ ಕಥೆಯನ್ನು ಹೆಣೆದಿದ್ದಾರೆ. ಕುಂತಿಯ ಮೇಲೆ ಈರ್ಷ್ಯೆ ಈಕೆಗೆ ಇದ್ದದ್ದೇ! ಯುದ್ಧಾನಂತರ ಕಣ್ಣುಪಟ್ಟಿ ಬೇಕೆಂದೇ ತೆಗೆಸುತ್ತಾಳೆ. ಯುದ್ಧರಂಗವನ್ನು ಕೃಷ್ಣಕುಂತಿಯರೊಡನೆ ನೋಡಿ ಬರುತ್ತಾಳೆ. ಮತ್ತೆ ಪಟ್ಟಿ ಧರಿಸುತ್ತಾಳೆ. ಇಲ್ಲಿ ಒಂದು ಕರುಣಾಜನಕವಾದ ಸಂದರ್ಭ ಸ್ಮರಿಸಲು ಯೋಗ್ಯ. ಕೌರವರೆಲ್ಲರೂ ಹತರಾದಾಗ ಪಾಂಡವರ ಕಡೆಯವರೆಲ್ಲರೂ ಅಂಧದಂಪತಿಗಳನ್ನು ನೋಡಲು ಹೋಗುತ್ತಾರೆ. ಬಲವಂತವಾಗಿ ನೋಡುವುದನ್ನು ಬಿಟ್ಟ ಗಾಂಧಾರಿಗೆ ತನ್ನ ಮಕ್ಕಳ ಮುಖಪರಿಚಯವಿರಲಿಲ್ಲವೆಂಬುದನ್ನು ಭೈರಪ್ಪನವರು ಜ್ಞಾಪಿಸುತ್ತಾರೆ. ಆಗ ಅವಳು ಪಾಂಡವರ ಕಡೆಯವರನ್ನು "ನನ್ನ ಮಕ್ಕಳು ನೋಡಲು ಚೆನ್ನಾಗಿದ್ದರೇ?" ಎಂದು ಕೇಳಿದಾಗ ಕರುಳು ಕಿವುಚಿಬರುತ್ತದೆ. ಎಂಥ ಕಲ್ಲೆದೆಯವರೂ ಇಲ್ಲಿ ಸ್ವಲ್ಪ ಸಹಾನುಭೂತಿಯನ್ನು ಗಾಂಧಾರಿಗೆ ನೀಡಿಯೇ ನೀಡುತ್ತಾರೆ.

ಗಾಂಧಾರಿಯನ್ನು ನೋಡಿದ ಮೇಲೆ ಧೃತರಾಷ್ಟನ ಸರದಿ. ಇವನ ಕುರುಡುತನ ಎರಡು ಬಗೆಯದು. ಭೌತಿಕ ಪ್ರಪಂಚವನ್ನು ಕಾಣದೆ ಇರುವುದು ಒಂದಾದರೆ ಧರ್ಮವನ್ನು ಕಾಣದೆ ಇರುವುದು ಇನ್ನೊಂದು. ಭೈರಪ್ಪನವರು ಇದನ್ನು ಹೀಗೆಯೇ ತೋರಿದ್ದಾರೆ. ಆಗಿನ ಕ್ಷತ್ರಿಯರು ಲೋಲುಪರು. ಸೂತಜಾತಿಯ ಪರಿಚಾರಿಕೆಯರನ್ನು ತಮ್ಮ ಕಾಮಾಗ್ನಿಯನ್ನು ಆರಿಸಲು ಬಳಸಿಕೊಳ್ಳುತ್ತಿದ್ದರು. ಧೃತರಾಷ್ಟ್ರನೂ ಇದಕ್ಕೆ ಹೊರತಲ್ಲ! ಕುರುಡನಾದರೂ ಲೋಲುಪತೆ ಬಿಟ್ಟಿರಲಿಲ್ಲವೆಂದು ಭೈರಪ್ಪನವರು ಸ್ಪಷ್ಟವಾಗಿ ತೋರಿದ್ದಾರೆ. ಪರ್ವದಲ್ಲಿ ಗಾಂಧಾರಿಯಿಂದ ಹದಿನಾಲ್ಕು ಮಕ್ಕಳನ್ನು ಧೃತರಾಷ್ಟ್ರ ಪಡೆದರೆ, ಮಿಕ್ಕ ಎಂಭತ್ತಾರನ್ನು ದಾಸಿಯರಲ್ಲಿ ಪಡೆದದ್ದು. ಇವನ ಒಂದು ಪಾತ್ರದ ವಿಶೇಷವನ್ನು ಇಲ್ಲಿ ಸ್ಮರಿಸಬೇಕು. ಕುರುಡನಾದರೂ ಅವನಿಗೆ ಕತ್ತಲೆಯ ಭಯ! ಉರಿಯುತ್ತಿರುವ ಎಣ್ಣೆಯ ವಾಸನೆಯಿಂದ ದೀಪ ಬೆಳಗುತ್ತಿದೆಯೋ ಇಲ್ಲವೋ ಎಂದು ಊಹಿಸುವ ಕುರುಡನಿಗೆ ಆ ಬೆಳಕು ಬೇಕು! ಆ ಬೆಳಕಿನ ಸೌಖ್ಯ ಬೇಕು! ಸಲಸಲವೂ ದಾಸಿಯನ್ನು "ದೀಪ ಉರಿಯುತ್ತಿದೆಯೇ" ಎಂದು ಕೇಳುತ್ತಾನೆ. ಅವನ ಪಾತ್ರವನ್ನು ಈ ಒಂದು ನಡೆವಳಿಕೆಯಿಂದ ಭೈರಪ್ಪನವರು ಚೆನ್ನಾಗಿಯೇ ಸೆರೆಹಿಡಿದಿದ್ದಾರೆ.

ಇದಾದ ಮೇಲೆ ಕಥೆಯ ಆರಂಭದಲ್ಲಿ ಮಾತ್ರ ಬರುವ ಧೃತರಾಷ್ಟ್ರನ ತಮ್ಮ ಪಾಂಡುವಿನ ಪಾತ್ರದ ಬಗ್ಗೆ ನೋಡೋಣ. ಮೂಲದಲ್ಲಿ ಋಷಿಯಿಂದ ಶಪ್ತನಾದ ಪಾಂಡು ಹಿಮಾಲಯದೆಡೆ ಪತ್ನೀಸಮೇತನಾಗಿ ತೆರಳುತ್ತಾನೆ. ಪರ್ವದಲ್ಲಿ ಹಾಗಲ್ಲ. ಯೌವನದ ಹೊಸ್ತಿಲಲ್ಲಿಯೇ ಅತಿಯಾದ ಕಾಮಕೇಳಿಯಿಂದ ತನ್ನ ಶಕ್ತಿಯೆಲ್ಲವನ್ನು ಕಳೆದುಕೊಂಡ ನತದೃಷ್ಟ ಪಾಂಡು. ಇವನು ಕುಂತಿಯ ನೆನಪಾಗಿಯೇ ಪರ್ವದಲ್ಲಿ ಬರುತ್ತಾನೆ. ಅಂದವಾದ ಹೆಂಡತಿಯೊಂದಿಗೆ ಸಂಸಾರ ಮಾಡಲು ಅಶಕ್ತನಾದ ಪಾಂಡುವಿಗೆ ಕುಂತಿ ಹೇಗೆ ತಾಯ ಹಾಗೆ ಕಾಣುತ್ತಾಳೆ ಎಂದು ಭೈರಪ್ಪನವರು ತೋರಿದ್ದಾರೆ. ಸಂತಾನಾಪೇಕ್ಷಿಯಾಗಿ ಅವನು ಹಿಮಾಲಯದ ತಪ್ಪಲಿನಲ್ಲಿ ದೇವ ಜನಾಂಗದ ಮುಖ್ಯರನ್ನು ಸಂತಾನಭಿಕ್ಷೆಗಾಗಿ ಬೇಡುತ್ತಾನೆ. ಕ್ಷೇತ್ರವಂತೂ ಕುಂತಿಯದು. ಪರ್ವದ ಪಾಂಡುವಿಗೆ ಔಷಧೋಪಚಾರಗಳಿಂದ ತನ್ನ ಹಿಂದಿನ ಶಕ್ತಿ ಮರಳಬಹುದೆಂಬ ಆಸೆಯಿರುತ್ತದೆ. ಆದರೆ ಆಸೆ ಚಿಗುರುತ್ತಲೇ ಪಾಂಡು ಮರಣವನ್ನಪ್ಪುತ್ತಾನೆ. ಪಾಂಡವರೂ ವಸ್ತುತಃ ಪಾಂಡುವಿನ ಮಕ್ಕಳಾದರೂ ಕೇವಲ ಹೆಸರಿಗೆ ಮಾತ್ರ ಅವನ ಮಕ್ಕಳು ಎಂದು ಎಲ್ಲರಿಗೂ ತಿಳಿದಿರುತ್ತದೆ. ಕಥೆಯಲ್ಲಿ ಅಲ್ಲಲ್ಲಿ ಕುಂತಿಯ ಮಕ್ಕಳು ಎಂದೇ ಪಾಂಡವರನ್ನು ಹೆಸರಿಸುತ್ತಾರೆ.

ಪಾಂಡವರ ಪಾತ್ರಗಳ ಬಗ್ಗೆ ಬರೆಯಲು ಹೊರಟಿದ್ದೆ. ಅದು ಹೋಗಿ ಅವರ ಮಾತಾಪಿತೃಗಳ ಬಗ್ಗೆ ಆಯ್ತು. ಈಗಿನ ಭಾಗ ಆಗಲೇ ದೊಡ್ಡದಾಗುತ್ತಾ ಬಂದಿದೆ. ಮುಂದಿನ ಭಾಗದಲ್ಲಿ ನನಗೆ ಕಂಡ ಬೇರೆಯ ಸಂಗತಿಗಳ ಬಗ್ಗೆ ಬರೆಯುತ್ತೇನೆ.

Wednesday, December 27, 2006

ಭೈರಪ್ಪನವರ ಪರ್ವ: ಚಿಂತನೆಗಳು - ಭಾಗ ೧

ಗದುಗಿನ ನಾರಣಪ್ಪ ತನ್ನ ಕರ್ಣಾಟಭಾರತಕಥಾಮಂಜರಿಯಲ್ಲಿ - "ತಿಣಿಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ" ಎಂದು ಟೀಕಿಸಿದ್ದಾನೆ. ರಾಮಾಯಣವು ಹಿಂದಿನ ಅನೇಕ ಕವಿಗಳಿಗೆ ಕಾವ್ಯಸ್ಫೂರ್ತಿಯನ್ನೊದಗಿಸಿದ್ದರೂ ಆಧುನಿಕರಿಗೆ ಅದರಲ್ಲಿನ ಕಥೆ ಚರ್ವಿತ-ಚರ್ವಣವಾಗಿ ಕಂಡಿದೆ ಎಂದು ನನ್ನ ಅನಿಸಿಕೆ. ರಾಮಾಯಣದ ಕಥೆಯ ಮುಖ್ಯ ಧಾರೆ ಉಪಕಥೆ ಉಪಾಖ್ಯಾನಗಳೆಂಬ ಹೆಚ್ಚು ಕವಲುಗಳಿಂದ ಕೂಡಿರದೆ ನೇರವಾಗಿ ನಿರೂಪಿಸಲ್ಪಟ್ಟಿದೆ. ಭಾರತ ಹಾಗಲ್ಲ. ರಾಮಾಯಣ ದೊಡ್ಡ ನದಿಯಾದರೆ ಭಾರತ "ಮಹಾ" ಎಂಬ ಅನ್ವರ್ಥ ಬಿರುದನ್ನೂ ಸೇರಿಸಿಕೊಂಡು ಸಾಗರಸದೃಶವೆನಿಸಿದೆ, ಜೊತೆಗೆ ನಿತ್ಯನೂತನವಾಗಿ ಕೂಡ ಕಂಡಿದೆ. ರಾಮಾಯಣ ಭಾರತಗಳ ಮೇಲೆ ಮಾಡಿದ ಚಲನಚಿತ್ರಗಳ ಸಂಖ್ಯೆಯನ್ನೇ ಗಮನಿಸಿದರೆ ತಿಳಿಯುತ್ತದೆ. ಗಾತ್ರದಲ್ಲೂ ವಿಷಯವ್ಯಾಪ್ತಿಯಲ್ಲೂ ಮಹಾಭಾರತಕ್ಕೆ ಮಹಾಭಾರತವೇ ಸಾಟಿ.

ಇಷ್ಟು ದೊಡ್ಡದಾದ ಭಾರತವನ್ನು ಸ್ವಂತ ಕಾವ್ಯಪ್ರತಿಭೆಯಿಂದ ಅಲಂಕರಿಸುವುದು ಕಷ್ಟಸಾಧ್ಯವೇ. ಆದರೂ ಕುಮಾರವ್ಯಾಸ ಪಂಪರಾದಿಯಾಗಿ ಹಲವು ಕವಿಗಳು ಕನ್ನಡದಲ್ಲೂ, ಕಾಲಿದಾಸ, ಭಾರವಿ, ಮಾಘ, ರಾಜಶೇಖರ, ಭಾಸ, ಭಟ್ಟನಾರಾಯಣ ಮೊದಲಾದ ಸಂಸ್ಕೃತ ಕವಿ-ನಾಟಕಕಾರರೂ ಮಹಾಭಾರತದಿಂದ ಸಾಮಗ್ರಿಯನ್ನು ಪಡೆದಿದ್ದಾರೆ. ಮಹಾಭಾರತದಿಂದ ಪ್ರೇರಿತವಾದ ಉತ್ತಮ ಕೃತಿಗಳ ಸಾಲಿಗೆ ನಮ್ಮ ಭೈರಪ್ಪನವರ ಪರ್ವವನ್ನು ಅವಶ್ಯವಾಗಿ ಸೇರಿಸಬಹುದು, ಸೇರಿಸಲೇ ಬೇಕು.

ಮಹಾಭಾರತದ ಕಥೆ ಎಲ್ಲರಿಗೂ ತಿಳಿದಿರುವಂಥದು. ಅದನ್ನಾಧರಿಸಿ ಕೃತಿನಿರ್ಮಾಣ ಮಾಡುವವರು ಸಾಮಾನ್ಯವಾಗಿ ಇಡಿಯ ಕಥೆಯ ನಿರೂಪಣೆಗೆ ಹೋಗದೆ ಕೆಲವು ಭಾಗಗಳನ್ನು ವಿಸ್ತರಿಸಿ ಅದಕ್ಕೆ ತಮ್ಮ ಮಾತಿನ ಚಮತ್ಕಾರವನ್ನೂ ಸೇರಿಸಿ ಹೆಚ್ಚು ರಂಜಕವಾಗಿ ಮಾಡುತ್ತಾರೆ. ಭೈರಪ್ಪನವರ ಪರ್ವ ಈ ಸಾಮಾನ್ಯ ಮಾರ್ಗಕ್ಕೆ ಹೋಗದ ಭಿನ್ನ ಕೃತಿ.

"ಪರ್ವ" ಎಂಬ ಹೆಸರಿನಲ್ಲೇ ಸಾಕಷ್ಟು ಅರ್ಥ ಅಡಗಿದೆ. ಮಹಾಭಾರತದ ಪರ್ವಗಳನ್ನು ಜ್ಞಾಪಿಸುವಂಥ ಈ ಪದ ಎರಡು ಯುಗಗಳ ಮಧ್ಯೆ, ಆ ಯುಗಗಳ ಧರ್ಮಗಳ ಮಧ್ಯೆ ಇರುವ ಸಂಧಿಕಾಲ ಅನ್ನುವುದನ್ನು ಕೂಡ ತನ್ನ ಅರ್ಥವ್ಯಾಪ್ತಿಯ ಒಳಗೆ ಸೇರಿಸಿಕೊಳ್ಳಲು ಸಮರ್ಥವಾಗಿದೆ. ಈ ಅರ್ಥವು ಇಡೀ ಕಥೆಯಲ್ಲಿ ಸ್ಫುಟವ್ಯಕ್ತವಾಗಿದೆ. ದ್ವಾಪರ ಮತ್ತು ಕಲಿಗಳ ನಡುವೆ ಇದ್ದ ಕಾಲವನ್ನು ಮಹಾಭಾರತ ತೋರಿಸುತ್ತದೆ ಎನ್ನುವುದು ತಿಳಿದ ಸಂಗತಿಯೇ. ಯುಗಗಳನ್ನು ಹೆಸರಿಸದೆ ಆ ಅರ್ಥ ಚೆನ್ನಾಗಿ ತಿಳಿಯುವ ಹಾಗೆ ಕಥೆ ಹೆಣೆಯಲ್ಪಟ್ಟಿದೆ.

ಮದ್ರ ದೇಶದ ಶಲ್ಯ ಮಹಾರಾಜನ ಮಗ ರುಕ್ಮರಥನ ಚಿಂತನೆಗಳಿಂದ ಕಥೆಯ ಆರಂಭ. ಆ ಹೊತ್ತಿಗೆ ಪಾಂಡವರು ತಮ್ಮ ಅಜ್ಞಾತವಾಸದ ನಂತರ ತಮ್ಮ ರಾಜ್ಯವನ್ನು ಪಡೆಯಲು ಯುದ್ಧಸನ್ನಾಹದಲ್ಲಿರುತ್ತಾರೆ. ಕೌರವರು ಪಾಂಡವರು ತಮ್ಮ ಸುತ್ತಣ ಪ್ರದೇಶಗಳ ರಾಜರನ್ನು ಓಲೈಸುವ ಯತ್ನ ನಡೆದಿರುತ್ತದೆ. ಅಲ್ಲಿಂದ ಮೊದಲ್ಗೊಂಡು ಸಿಂಹಾವಲೋಕನ ರೀತಿಯಲ್ಲಿ ಕಥೆಗೆ ಬೇಕಾಗುವ ಹಿನ್ನೆಲೆಯನ್ನು ಅದೇ ಒದಗಿಸಿಕೊಡುತ್ತದೆ.

ಒಂದು ಸಂಗತಿಯನ್ನು ಇಲ್ಲಿ ಹೇಳಲೇಬೇಕು. ಮಹಾಭಾರತದ ಕಥೆಯನ್ನು ಸುಮಾರು ಚೆನ್ನಾಗಿಯೇ ತಿಳಿದ ನನಗೆ "ಪರ್ವ" ಪಾತ್ರಗಳ ಮನಸ್ಸಿನೊಳಗೆ ಹೊಕ್ಕು ತೋರಿಸಿದ್ದು ಚೆನ್ನಾಗಿತ್ತು. ಆದರೆ ಮಹಾಭಾರತದ ಕಥೆಯನ್ನು ತಿಳಿಯದೆ ಅಂದರೆ ಅದರ ಕಥೆಯ ಕಿಂಚಿತ್ತೂ ಪರಿಚಯವಿಲ್ಲದೆ "ಪರ್ವ"ವನ್ನು ಸವಿಯಬಹುದೇ? ನನ್ನ ಪ್ರಕಾರ : ಸಾಧ್ಯವಿಲ್ಲ. ಭಾರತೀಯರು ಯಾರಾದರೂ ಮಹಾಭಾರತದ ಸ್ಥೂಲಪರಿಚಯವನ್ನಾದರೂ ಹೊಂದಿರುತ್ತಾರೆ. ಭೈರಪ್ಪನವರಿಂದ ನಿರ್ಧರಿಸಲು ಕೂಡ ಇದು ಸ್ವಲ್ಪ ಕಷ್ಟವೇ ಇರಬಹುದು.

ಧರ್ಮದ್ವಯದ ನಡುವೆ ಇರುವ ಸಂಗ್ರಾಮವೆಂಬುದಾಗಿ ಪಾಂಡವ-ಕೌರವರ ಯುದ್ಧ ಕಾಣುತ್ತದೆ. ಇದು ಯಾವ ಧರ್ಮವೆಂದರೆ ಕಥೆಯ ಮೊದಲಿಗೆ ಹೋಗಬೇಕು. ಅಂದಿನ ಕಾಲದಲ್ಲಿ "ನಿಯೋಗ" ವೆಂಬುದು ಸಂತಾನೋತ್ಪತ್ತಿಗೆ ಸರ್ವರಿಂದಲೂ ಮಾನ್ಯವಾದ ಪದ್ಧತಿ. ಇಂದು "In vitro fertilization" ಅನ್ನು ಎಷ್ಟು ಸಹಾನುಭೂತಿಯಿಂದ ನೋಡುತ್ತೇವೆಯೋ ಅಷ್ಟೇ ಮಾನ್ಯತೆ ಆ ಕಾಲದಲ್ಲಿ ನಿಯೋಗ ಪದ್ಧತಿ ಕೂಡ ಪಡೆದಿತ್ತೆಂಬಂತೆ ಕಾಣುತ್ತದೆ. ಪತಿ ಅಶಕ್ತ ಅಥವಾ ಮೃತನಾದಾಗ ವಂಶವನ್ನು ಮುಂದುವರೆಸಲು ಒಬ್ಬ ಶುದ್ಧಚಾರಿತ್ರ್ಯದ ವ್ಯಕ್ತಿಯಿಂದ ವೀರ್ಯದಾನ ಪಡೆದು ಗರ್ಭಧರಿಸುವುದೇ ಈ ಪದ್ಧತಿ. ಈಗ ಇದರ ಮತ್ತೊಂದು ರೂಪ ವೀರ್ಯ"bank" ಗಳಾಗಿ ಕಾಣಿಸುತ್ತಿದೆ.

ನಿಯೋಗ ಮಹಾಭಾರತದ ಕಥೆಗೆ ಎಷ್ಟು ಮುಖ್ಯವೆಂಬುದನ್ನು ನಾನು ಅಷ್ಟು ಮನಗಂಡಿರಲಿಲ್ಲ. ಆದರೆ ಭೈರಪ್ಪನವರಿಗೆ ಇದು ಮೂಲಭೂತವಾಗಿ ಕಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ. ಭೀಷ್ಮನು ಸತ್ಯವತಿಯನ್ನು ತನ್ನ ತಂದೆಗೆ ಕೊಡಿಸಿ ಮದುವೆ ಮಾಡಿಸುವಾಗ ಮಾಡಿದ ಬ್ರಹ್ಮಚರ್ಯ ಪ್ರತಿಜ್ಞೆಯೇ ಮುಂದಿನ ಕಥೆಗೆ ಕಾರಣ. ನಂತರ ಸತ್ಯವತಿಯ ಮಕ್ಕಳಿಬ್ಬರೂ ಮಡಿದಾಗ ಅವಳು ಭೀಷ್ಮನನ್ನೇ ತನ್ನ ಸೊಸೆಯರನ್ನು ಕೈಹಿಡಿಯಬೇಕೆಂದು ಕೇಳಿಕೊಳ್ಳುತ್ತಾಳೆ. ಆದರೆ ಪ್ರತಿಜ್ಞಾಬದ್ಧನಾದ ಭೀಷ್ಮನು ಹಾಗೆ ಮಾಡುವುದಿಲ್ಲ. ಸತ್ಯವತಿ ತನ್ನ ಮದುವೆಗೆ ಮುಂಚೆ ಹುಟ್ಟಿದ ಮಗನಾದ ವ್ಯಾಸಮಹರ್ಷಿಯನ್ನೇ ಸೊಸೆಯರೊಂದಿಗೆ ನಿಯೋಗಕ್ಕಾಗಿ ಕರೆಯುತ್ತಾಳೆ. ಇದು ನಿಯೋಗದ ಮೊದಲ ಸಂಗತಿಯಾದರೆ ಕುಂತೀ-ಮಾದ್ರಿಯರದು ಇನ್ನೆರಡು.

ಪಾಂಡು ಮಹಾರಾಜನು ಸಂತಾನೋತ್ಪತ್ತಿಯಲ್ಲಿ ಅಶಕ್ತನಾದಾಗ ಕುಂತಿಯು ದೇವತೆಗಳಿಂದ ಮಕ್ಕಳನ್ನು ಪಡೆಯುವುದು ಮಹಾಭಾರತದಲ್ಲಿ ಹೇಳಿದೆ. ಭೈರಪ್ಪನವರು ತಮ್ಮ ಕೃತಿಯಲ್ಲಿ "ದೇವ" ಎಂಬ ಜನಾಂಗದ ಮುಖ್ಯರಿಂದ ಕುಂತಿಗೆ ನಿಯೋಗ ನಡೆದ ಹಾಗೆ ತೋರಿಸಿದ್ದಾರೆ. ಹೆಂಡತಿಯಲ್ಲದಿದ್ದರೂ ಹೆಂಡತಿಯಾಗಿ ಕುಂತಿ "ದೇವ" ಜನಾಂಗದ ಪ್ರಮುಖರನ್ನು ಸಂತಾನಕ್ಕಾಗಿ ಸೇವಿಸುತ್ತಾಳೆ. ಮಾದ್ರಿಯೂ ಹೀಗೇ ಮಾಡುತ್ತಾಳೆ. ಈ ಸಂಗತಿ ನಮ್ಮಲ್ಲಿನ ಮಡಿವಂತರಿಗೆ ಸ್ವಲ್ಪ ಕಷ್ಟವಾಗಿ ಕಾಣಬಹುದು. ಇದನ್ನು ನಮ್ಮ ಸಂಸ್ಕೃತಿಯ ಅವಹೇಳನವೆಂದೂ ಕೆಲವರು ಹೇಳಬಹುದು. ವೈಯಕ್ತಿಕವಾಗಿ ನನಗೆ ಇದು ಸ್ವಲ್ಪ ಸಾಮಾನ್ಯವಲ್ಲದ್ದೆಂದು ಅನಿಸಿದರೂ ತೀರ ಅಸ್ವಾಭಾವಿಕವಲ್ಲವೆಂದೆನಿಸುತ್ತದೆ. ವಾಸ್ತವತೆಯನ್ನು ಭೈರಪ್ಪನವರು ಕೈಬಿಡದೆ ಕಥೆಯ ಮುಂದಿನ ಗೊಂದಲಕ್ಕೆ ಇದು ಹೇಗೆ ಕಾರಣವಾಯ್ತೆಂದು ತೋರಿಸುತ್ತಾರೆ.

"ಪರ್ವ"ದಲ್ಲಿ ದುರ್ಯೋಧನ ಈ ಸಂಗತಿಯನ್ನುಪಯೋಗಿಸಿ ಪಾಂಡವರು ತಂದೆಗೆ ಹುಟ್ಟಿದ ಮಕ್ಕಳಲ್ಲವೆಂಬುದನ್ನೇ ಯುದ್ಧದ ಮುಖ್ಯಕಾರಣ ಮಾಡುತ್ತಾನೆ. ತನ್ನ ತಂದೆಯ ಹುಟ್ಟಿನ ಕಥೆಯನ್ನು ಜಾಣತನದಿಂದ ಮರೆಸುತ್ತಾನೆ. ಅವನಿಗೆ ಪಾಂಡವರ ಬಗ್ಗೆ ಇದ್ದ ಮತ್ಸರವೇ ಯುದ್ಧಕ್ಕೆ ಮೂಲಕಾರಣವಾದರೂ ನಿಯೋಗಪದ್ಧತಿಯ ಬಗ್ಗೆ ಅವನು ಮಾಡುವ (ಅಪ?)ಪ್ರಚಾರ ಅವನ ಸೈನ್ಯಕ್ಕೆ ಬಲವನ್ನಂತೂ ಒದಗಿಸುತ್ತದೆ. ಹೀಗೆ ನಿಯೋಗಪದ್ಧತಿ ಧರ್ಮವೋ ಅಧರ್ಮವೋ ಎಂಬುದು ದೊಡ್ಡ ಯುದ್ಧಕ್ಕೆ ಹೊರಗಿನ ಹಾಗೂ ಸ್ವಲ್ಪ ಮಟ್ಟದ ಒಳಗಿನ ಕಾರಣವೂ ಆಗುತ್ತದೆ.

ಭೈರಪ್ಪನವರಿಗೆ ಕ್ಷೇತ್ರ ಮತ್ತು ಬೀಜಗಳ ವಿಷಯ ಬಹಳ ಚಿಂತನೆಯನ್ನೊದಗಿಸಿದೆ. ಸಂತಾನ ಸೇರುವುದು ಕ್ಷೇತ್ರಕ್ಕೋ ಬೀಜಕ್ಕೋ? ವಂಶವೃಕ್ಷದಲ್ಲೂ ಇದೇ ಜಿಜ್ಞಾಸೆ. ಪರ್ವದಲ್ಲಿ ಹಲವು ಕಡೆಗಳಲ್ಲಿ ಇದೇ ಕಾಣುತ್ತದೆ. ಭೀಷ್ಮನಿಂದ ಮೊದಲ್ಗೊಂಡು ಧೃತರಾಷ್ಟ್ರ, ಪಾಂಡುಗಳ ಹುಟ್ಟು, ಪಾಂಡವರ ಹುಟ್ಟು, ಘಟೋತ್ಕಚನ ಹುಟ್ಟು, ಕರ್ಣನ ಹುಟ್ಟು - ಹೀಗೆ ಬರುವ ಕಥೆಯ ಹಲವು ಭಾಗಗಳಲ್ಲಿ ಇದೇ ಚಿಂತನೆಯನ್ನು ನಡೆಸುತ್ತಾರೆ. ಹಾಗೆ ನೋಡಿದಾಗ ವಸ್ತುತಃ ಪಾಂಡು ಮೊದಲ್ಗೊಂಡು ಬರುವ ಸಂತಾನವೆಲ್ಲಕ್ಕೂ ವ್ಯಾಸರೇ ಕಾರಣ! ವ್ಯಾಸರ ಮೊಮ್ಮಕ್ಕಳೇ ಪರಸ್ಪರ ಯುದ್ಧವಾಡಿ ಸಾಯುತ್ತಾರೆ!

ಜೊತೆಗೆ ನಿಯೋಗವನ್ನು ಒಂದು ಉದಾಹರಣೆ ಮಾಡಿಕೊಂಡು ಧರ್ಮದ ಆಚರಣೆಯ ಸ್ವರೂಪ ಹೇಗೆ ಕಾಲದಲ್ಲಿ ಬದಲಾಗುತ್ತದೆ ಎಂದೂ ತೋರಿದ್ದಾರೆ. ವ್ಯಾಸರ ನೆನಪಿನಲ್ಲಿ ತಮ್ಮ ಪೂರ್ವಜರು ಮಾಡಿದ ನಿಯೋಗದಲ್ಲಿ ಹೇಗೆ ರಾಣಿಯ ಅಲಂಕಾರವನ್ನು ಸಂತಾನಾಪೇಕ್ಷಿಯಾದ ರಾಜನೇ ಮಾಡುತ್ತಾನೆ ಎಂದು ಬರುತ್ತದೆ. ಆದರೆ ವ್ಯಾಸರೇ ನಿಯೋಗ ಮಾಡುವ ಸಮಯಕ್ಕೆ ಭೀಷ್ಮ - "ನಿಯೋಗವು ಕೇವಲ ದೈಹಿಕ ಕ್ರಿಯೆಯಾಗಬೇಕು, ಮನಸ್ಸು ಅಚಲವಾಗಿರಬೇಕು. ಅದರಲ್ಲಿರುವ ಇಬ್ಬರೂ ತಮ್ಮ ದೇಹಗಳನ್ನು ಆದಷ್ಟು ಕುರೂಪಮಾಡಿಕೊಳ್ಳಬೇಕು" ಎಂಬ ಕಟ್ಟಳೆ ಮಾಡುತ್ತಾನೆ. ಕುಂತಿಯದು ಸ್ವಲ್ಪ ಭಿನ್ನವಾಗುತ್ತದೆ. ಕೊನೆಯಲ್ಲಿ, ಯುದ್ಧದ ನಂತರ, ಉತ್ತರೆ(ಅರ್ಜುನನ ಸೊಸೆ)ಯ ಮಗು ಹುಟ್ಟುವುದಕ್ಕೆ ಮುಂಚೆಯೇ ಸತ್ತಾಗ ವಂಶಕ್ಕೆ ಬೇರೆ ಗತಿಯಿರುವುದಿಲ್ಲ. ಆಗ ದ್ರೌಪದಿ ಮತ್ತೆ ಗರ್ಭ ಧರಿಸಲು ನಿರಾಕರಿಸಿದಾಗ ಉತ್ತರೆಗೆ ನಿಯೋಗಮಾಡಿಸುವ ವಿಚಾರ ಬರುತ್ತದೆ. ಕುಂತಿಯೇ ಸ್ವಯಂ ನಿಂತು ನಿಯೋಗವನ್ನು ನಿಷೇಧಿಸುತ್ತಾಳೆ. ಇದು ಅಲ್ಲಿ ಕಾಣುವ ಸಂಗತಿ. ಹಲವು ಧರ್ಮಾಚರಣೆಗಳು ಹೇಗೆ ರೂಪಗೊಳ್ಳಬಹುದು ಎಂದು ಊಹಿಸಿಕೊಳ್ಳುವುದಕ್ಕೆ ಇದು ಒಂದು ನಿದರ್ಶನ.

ಇಂಥ ದೊಡ್ಡ ಕೃತಿಯನ್ನು ಕುರಿತು ಬರೆಯುವಾಗ ಮೂಲ ಮಹಾಭಾರತದ ಹಿನ್ನೆಲೆ ಅನಿವಾರ್ಯ. ಆದ್ದರಿಂದ ಒಂದೇ ಭಾಗದಲ್ಲಿ ಮುಗಿಸಲು ಸಾಧ್ಯವಾಗದಿರುವಷ್ಟು ವಿಚಾರಗಳನ್ನು ನನ್ನಲ್ಲಿ "ಪರ್ವ" ಪ್ರಚೋದಿಸಿದೆ.

ನನಗನ್ನಿಸಿದ ಕೆಲವು ವಿಚಾರಗಳನ್ನು ಈ ಲೇಖನದಲ್ಲಿ ಬರೆದಿದ್ದೇನೆ. ಮುಂದಿನ ಭಾಗಗಳಲ್ಲಿ ಹಲವು ಪಾತ್ರಗಳ, "ಪರ್ವ"ದಲ್ಲಿ ನನಗೆ ಕಾಣಿಸಿದ ಚಿಂತನೆಗಳ ಬಗ್ಗೆ ಬರೆಯುತ್ತೇನೆ. ಈ ಲೇಖನವನ್ನು ಓದಿದವರು ಪ್ರತಿಕ್ರಯಿಸಿದರೆ ಸಂತೋಷ.

Tuesday, October 24, 2006

ಭೈರಪ್ಪನವರ ವಂಶವೃಕ್ಷ : ನನ್ನ ಅನಿಸಿಕೆಗಳು

ನಮ್ಮ ಮನೆಯ ಬಳಿ ಒಂದು ನಗರ ಕೇಂದ್ರ ಗ್ರಂಥಾಲಯವಿದೆ. ಅಲ್ಲಿ ಹೊಸ ಪುಸ್ತಕಗಳೇನು ಇಲ್ಲದಿದ್ದರು, ಹಿಂದೆ ಪ್ರಕಟವಾದ ಕೆಲವು ಒಳ್ಳೆಯ ಪುಸ್ತಕಗಳ ಸರಕು ಅಲ್ಲಿದೆ. ಆ ಪುಸ್ತಕಗಳಲ್ಲಿ ಭೈರಪ್ಪನವರ ಕೆಲವು ಪುಸ್ತಕಗಳೂ ಇದ್ದುವು. ವಂಶವೃಕ್ಷ ನಾನು ಹಿಂದೆಯೇ ಓದಿದ್ದ ಕೃತಿ. ಆದರೆ ಆಗ ಓದಿದ್ದು ಆಂಗ್ಲದ ಅನುವಾದದಲ್ಲಿ. ಈ ಪುಸ್ತಕವನ್ನು ನಾನೋದಿದ್ದೇನೆ ಎಂದು ತಿಳಿದಿದ್ದೆ. ಆದರೂ ಒಮ್ಮೆ ಮೂಲದ ಕನ್ನಡದಲ್ಲಿ ಓದಿ ನೋಡೋಣವೆಂಬ ಆಸಕ್ತಿ. ಮನೆಗೆ ತಂದಾಗ ನನಗೆ ಮತ್ತೆ ತಿಳಿಯಿತು - ಎಷ್ಟೇ ಒಳ್ಳೆಯ ಅನುವಾದವಾದರೂ ಮೂಲದ ಸೊಗಡನ್ನು ಉಳಿಸಿಕೊಳ್ಳುವುದು ಕಷ್ಟ ಎಂದು. ಖ್ಯಾತ ಸಿನೆಮಾ ಕೂಡ ಆದ ವಂಶವೃಕ್ಷದಲ್ಲಿ ಈ ನಿಜ ಪ್ರಖರವಾಗಿ ಗೋಚರಿಸಿತು.

ವಂಶವೃಕ್ಷ ನಂಜನಗೂಡು-ಮೈಸೂರು ಪ್ರಾಂತಗಳಲ್ಲಿರುವ ಕುಟುಂಬಗಳ ಕಥೆ. ಭೈರಪ್ಪನವರ ಕಥಾಪುಸ್ತಕಗಳ ಹೆಸರುಗಳು ಕಥೆಯನ್ನು ಬಹಳ ಚೆನ್ನಾಗಿ ಸೂಕ್ತವಾಗಿ ಪ್ರತಿಬಿಂಬಿಸುತ್ತವೆ. ಇಲ್ಲಿಯೂ ಹಾಗೆಯೇ. ಈ ಕಥೆಗೆ "ವಂಶವೃಕ್ಷ" ಎಂಬ ಹೆಸರು ಎಷ್ಟು ಸರಿಯೆಂಬುದು ಪುಸ್ತಕದ ಮಧ್ಯದಿಂದ ತಿಳಿಯಲು ಪ್ರಾರಂಭವಾಗಿ ಕಥೆ ಕೊನೆಗೊಳ್ಳುವೆ ವೇಳೆ ಆ ವೃಕ್ಷ ನಮ್ಮ ಕಲ್ಪನೆಯನ್ನೆಲ್ಲಾ ವ್ಯಾಪಿಸಿಬಿಟ್ಟಿರುತ್ತದೆ.

ಕರ್ಮಠರಾದ ಆದರೆ ವಿದ್ವಾಂಸ ಹಾಗು ಯೋಚನಾಶಕ್ತಿಯನ್ನು ಹೊಂದಿದ ಶ್ರೀನಿವಾಸ ಶ್ರೋತ್ರಿಗಳು ಈ ಕಥೆಯ ಮುಖ್ಯ ಪಾತ್ರ. ಇವರೇ ಈ ವಂಶವೃಕ್ಷದ ಕಥೆಗೆ ಬೇರು ಮತ್ತು ಮರದ ಮುಖ್ಯ ಭಾಗ. ಕಥೆ ಇವರ ಮಗನಾದ ನಂಜುಂಡ ಶ್ರೋತ್ರಿಯನ ಮರಣದೊಂದಿಗೆ ಆರಂಭವಾಗುತ್ತದೆ. ಮಗನನ್ನು ಕಳೆದುಕೊಂಡ ತಾಯಿ ಭಾಗೀರಥಮ್ಮ, ಗಂಡನನ್ನು ಕಳೆದುಕೊಂಡ ಕಾತ್ಯಾಯನಿ ಮತ್ತು ತನಗೆ ತಿಳಿಯುವ ಮುಂಚೆಯೇ ತಂದೆಯನ್ನು ಕಳೆದುಕೊಂಡ ಮಗು ಚೀನಿ ಆರಂಭದಲ್ಲಿ ಕಾಣುತ್ತಾರೆ. ಇದೇ ಕುಟುಂಬಕ್ಕೆ ಸೇರಿದ ಮತ್ತೊಂದು ಬಹಳ ಒಳ್ಳೆಯ ಪಾತ್ರ - ಕೆಲಸದವಳಾದರೂ ಮನೆಯ ಸದಸ್ಯೆಯಂತೆ ನಡೆಯುವ ಲಕ್ಷ್ಮಿಯದು.

ಈ ಕುಟುಂಬಕ್ಕೆ ಒಂದು ವಿದ್ವತ್ತಿನ ಸಂಬಂಧದಿಂದ ಮತ್ತೊಂದು ಕುಟುಂಬ ಸೇರುತ್ತದೆ. ಮೈಸೂರಿನ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರು ಮತ್ತು ಸಂಶೋಧಕರು ಆದ ಸದಾಶಿವರಾಯರದೇ ಈ ಕುಟುಂಬ. ಇವರಿಗೆ ಒಬ್ಬ ತಮ್ಮ - ಇಂಗ್ಲೀಷಿನ ಅಧ್ಯಾಪಕ ಹಾಗು ನಾಟಕಪ್ರಿಯ ಆಧುನಿಕ - ರಾಜಾರಾಯ. ಸದಾಶಿವರಾಯರ ಹೆಂಡತಿಯಾದ ಮುಗ್ಧೆ ನಾಗಲಕ್ಷ್ಮಿ. ಇವರ ಮಗ ಪೃಥ್ವಿ.

ಮರಣಿಸಿದ ಪತಿಯ ಬಿ.ಏ ಓದುವ ಆಸೆಯನ್ನು ನೆರವೇರಿಸುವ ನಂಬಿಕೆಯನ್ನು ಹೊಂದಿದ ಕಾತ್ಯಾಯನಿ ನಂಜನಗೂಡಿನಿಂದ ಮೈಸೂರಿನ ಕಾಲೇಜಿಗೆ ಹೋಗುವ ಪ್ರಸಂಗದೊಂದಿಗೆ ಕಥೆಗೆ ತಿರುವು ಸಿಗುತ್ತದೆ. ಅತ್ತೆ ಒಪ್ಪದಿದ್ದರೂ ಮಾವನವರು ಒಪ್ಪಿ ಸೊಸೆಯನ್ನು ಕಳಿಸುತ್ತಾರೆ. ಅಲ್ಲಿ ಆಕೆ ರಾಜಾರಾಯನ ಸಂಪರ್ಕವನ್ನು ಹೊಂದುತ್ತಾಳೆ. ಯೌವನಾವಸ್ಥೆಯ ಈರ್ವರ ಸಂಪರ್ಕ ಪರಿಚಯದಿಂದ ಪ್ರೇಮಕ್ಕೆ, ಪ್ರೇಮದಿಂದ ಉತ್ಕಟವಾದ ಪ್ರೇಮಕ್ಕೆ ತಿರುಗುವುದನ್ನು ಭೈರಪ್ಪನವರು ಚೆನ್ನಾಗಿ ನಿರೂಪಿಸಿದ್ದಾರೆ. ಒಂದು ಕಡೆ ತನ್ನ ಮರಣಿಸಿದ ಪತಿಯ ಕುಟುಂಬದ ಕಡೆಗಿನ ಕರ್ತವ್ಯ, ಮತ್ತೊಂದು ಕಡೆ ತನ್ನ ಯೌವನದ ಸಹಜ ವಾಂಛೆಗಳು - ಇವೆರಡರ ನಡುವೆ ಡೋಲಾಯಮಾನವಾದ ಕಾತ್ಯಾಯನಿಯ ಅವಸ್ಥೆ ಮನೋಜ್ಞವಾಗಿ ವರ್ಣಿತವಾಗಿದೆ. ಕೊನೆಗೆ ಆಶೆಯ ಮಹಾಪೂರ ಅವಳ ಧಮನಿಗಳಲ್ಲಿ ಹರಿಯುತ್ತಿದ್ದ ಸಂಪ್ರದಾಯವನ್ನು ಆ ಕಾಲಕ್ಕಾದರೂ ಮುಳುಗಿಸಿ ರಾಜಾರಾಯನ ಜೊತೆಗೆ ಮದುವೆ ನಡೆದುಹೋಗುತ್ತದೆ. ಇಲ್ಲಿ ಒಂದಂಶವನ್ನು ಗಮನಿಸಲೇ ಬೇಕು. ಇಪ್ಪತ್ತನೆಯ ಶತಮಾನದ ಮೊದಲನೆಯ/ಎರಡನೆಯ ದಶಕದಿಂದ ಮೂರು-ನಾಲ್ಕು ದಶಕಳ ಕಾಲ ನಡೆಯುವ ಈ ಕಥೆಯಲ್ಲಿ ಈ ಮದುವೆ ನಡೆಯುವ ಸಮಯದಲ್ಲಿ ವಿಧವಾ ವಿವಾಹಕ್ಕೆ ಮೈಸೂರಂಥ ಸಂಪ್ರದಾಯಸ್ಥ ನಗರ ಸರಿಯಾದ ತಾಣವಾಗಿರಲಿಲ್ಲ. ಈ ಸಂಗತಿ ಕಾತ್ಯಾಯನಿಯ ಯೌವನದ ಬಯಕೆಗಳ ತೀಕ್ಷ್ಣತೆಯನ್ನು ಮತ್ತು ಅವಳ ಸ್ವಾತಂತ್ರ್ಯಪ್ರೀತಿಯನ್ನು ಎತ್ತಿ ತೋರಿಸುತ್ತದೆ.

ಇನ್ನೊಂದು ಕಡೆ ಸದಾಶಿವರಾಯರ ಕನಸು. ಅವರದು ಭಾರತೀಯ ಸಂಸ್ಕೃತಿ ಮತ್ತು ಇತಿಹಾಸಗಳನ್ನು ಕುರಿತು ಉದ್ಗ್ರಂಥವನ್ನು ರಚಿಸಬೇಕೆಂಬ ಹಂಬಲ. ಸಾಕಷ್ಟು ಸಾಮರ್ಥ್ಯ ಅವರಲ್ಲಿತ್ತು ಎಂಬುದನ್ನು ಭೈರಪ್ಪನವರು ನಮಗೆ ತೋರಿಸುತ್ತಾರೆ. ಇವರ ವಿದ್ವನ್ಮಿತ್ರರು ನಂಜನಗೂಡಿನ ಶ್ರೀನಿವಾಸ ಶ್ರೋತ್ರಿಯರು. ಇಬ್ಬರೂ ವಿದ್ವಾಂಸರಾದರು ಅವರಲ್ಲಿರುವ ಭೇದವನ್ನು ಭೈರಪ್ಪನವರು ಸೂಕ್ಷ್ಮವಾದರೂ ಸೊಗಸಾಗಿ ತೋರಿದ್ದಾರೆ. ಸದಾಶಿವರಾಯರದ್ದು ಪಾಶ್ಚಾತ್ಯರ ರೀತಿ. ಅಧ್ಯಯನ ಮಾಡಬೇಕು, ಗ್ರಂಥರಚನೆ ಮಾಡಬೇಕು ಎಂಬ ಹಂಬಲ, ಸ್ವಲ್ಪ ಕೀರ್ತಿಯ ಆಸೆಯೂ ಕಾಣುತ್ತದೆ. ಸಂಸ್ಕೃತಿಯ ಅಧ್ಯಯನಕ್ಕೂ ಜೀವನಕ್ಕೂ ಸಂಬಂಧವಿಲ್ಲದ ಹಾಗೆ ನಡೆಯುತ್ತಾರೆ. ಅಧ್ಯಯನಕ್ಕಾಗಿ ಅಧ್ಯಯನ ಎಂಬುದು ಅವರ ರೀತಿ. ಆದರೆ ಶ್ರೀನಿವಾಸ ಶ್ರೋತ್ರಿಯರದು ಅಪ್ಪಟ ಭಾರತೀಯ ರೀತಿ. ಸದಾಶಿವರಾಯರ ಸಂದೇಹಗಳನ್ನು ಪುಸ್ತಕಗಳನ್ನು ನೋಡದೆಯೇ ಪರಿಹರಿಸಬಲ್ಲ ವಿದ್ವತ್ತು ಇವರಲ್ಲಿದ್ದರೂ, ಪುಸ್ತಕ ರಚನೆಗೆ ಕೈಹಾಕಿದವರಲ್ಲ. ಕೀರ್ತಿಯ ಲಾಲಸರಲ್ಲ. ತಮ್ಮ ಓದನ್ನೆಲ್ಲ ಬದುಕಿನಲ್ಲಿ ಕಾಣಿಸುವ ಋಷಿಕಲ್ಪ ವ್ಯಕ್ತಿತ್ವ ಇವರದು. ಭೈರಪ್ಪನವರ ideal ಏನು, ಅವರ ವೈಯಕ್ತಿಕ ಅಭಿಪ್ರಾಯವೇನು, ಅವರ ಒಲವೆಲ್ಲಿದೆ ಎಂದು ಇವರಿಬ್ಬರ ಪಾತ್ರಗಳ ಅಧ್ಯಯನದಿಂದ ಚೆನ್ನಾಗಿ ತಿಳಿಯಬಹುದು. ಭೈರಪ್ಪನವರಿಗೆ ಪಾಶ್ಚಾತ್ಯರ ಬಗ್ಗೆ ಗೌರವ ಮತ್ತು ಕಾಳಜಗಳಿವೆ, ಆದರೆ ಭಾರತೀಯ ವಿಚಾರಧಾರೆಯಲ್ಲಿ ಶ್ರದ್ಧೆಯಿದೆ ಎಂಬುದನ್ನು ಸುವಿದಿತ ಮಾಡಿಸುತ್ತಾರೆ.

ಸದಾಶಿವರಾಯರ ಹಂಬಲವು ಬೌದ್ಧಿಕ ಸಾಹಚರ್ಯವನ್ನು ಅಪೇಕ್ಷಿಸುವ ಬಗೆ ಸೊಗಸಾಗಿ ವ್ಯಕ್ತವಾಗಿದೆ. ಓದು-ಬರಹ ತಿಳಿಯದ ಪತ್ನಿಯಿಂದ ಬೌದ್ದಿಕ ಸಾಹಚರ್ಯ ಸಿಗದ ರಾಯರಿಗೆ ಶ್ರೀಲಂಕದವಳಾದ ಕೇಂಬ್ರಿಡ್ಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಕರುಣಾ ರತ್ನೆ ಜೊತೆಯಾಗಿ ಸಿಗುತ್ತಾಳೆ. ವಿದ್ಯಾರ್ಥಿನಿಯಾಗಿ ರಾಯರ ಜತೆ ಕೆಲಸ ಮಾಡಲು ಪ್ರಾರಂಭಿಸುವ ಕರುಣಾಳಿಗೆ ಕ್ರಮೇಣ ರಾಯರು ಅನಿವಾರ್ಯರಾಗುತ್ತಾರ, ಜೀವನದ ಗುರಿಯನ್ನು ತಲುಪಲು ಸಾಧನವಾಗುತ್ತಾರೆ. ರಾಯರಿಗೂ ಹಾಗೇ ಆಗಿ ಇಬ್ಬರೂ ಸಿವಿಲ್ ಮದುವೆ ಕೂಡ ಆಗುತ್ತಾರೆ. ಒಂದಂಶ ಇಲ್ಲಿ ನನಗೆ ಅಷ್ಟು ಹಿಡಿಸಲಿಲ್ಲ . ಕರುಣಾ ಎಂಬ ಸೊಗಸಾದ ಹೆಸರನ್ನು ಪಡೆದವಳನ್ನು ಭೈರಪ್ಪನವರು "ರತ್ನೆ" ಎಂದೇ ರಾಯರಿಂದ ಕರೆಸುತ್ತಾರೆ. ರತ್ನೆಯೆಂಬುದು surname. ಪತಿಪತ್ನಿಯರಿಬ್ಬರ ನಡುವೆ ಈ surname ಸಂಬೋಧನೆ ಅಷ್ಟು ಸರಿಯಿಲ್ಲ. ಅಥವಾ - ಇವರಿಬ್ಬರೂ ತಮ್ಮ profession ಗಾಗಿಯೇ ಹತ್ತಿರ ಬಂದದ್ದು, ಕೊನೆಯವರೆಗೂ ಇವರ ಸಂಬಂಧ ಹಾಗೆಯೇ ಉಳಿಯಿತು ಎಂಬುದನ್ನು ಓದುಗರಿಗೆ ಚೆನ್ನಾಗಿ ತಿಳಿಸುವುದಕ್ಕೆ ಹೀಗೆ ಉತ್ಪ್ರೇಕ್ಷೆ ಮಾಡಿದ್ದಾರೋ ಏನೋ! ದ್ವಿಪತ್ನೀತ್ವದಲ್ಲಿ ಓದದ ಹೆಂಡತಿಗೆ ತೊಂದರೆಯಿಲ್ಲ, ಆದರೆ ಓದಿದ ಹೆಂಡತಿಗೆ ತೊಂದರೆ. ಈ ಇಕ್ಕಟ್ಟಿನಲ್ಲಿ ಸದಾಶಿವರಾಯರನ್ನು ಸಿಕ್ಕಿಸಿ ಕೊನೆಯವರೆವಿಗೂ ಒದ್ದಾಡಿಸುತ್ತಾರೆ. ಏನೂ ತಿಳಿಯದ ಹೆಂಡತಿ ಆತಂಕದ ಸಮಯದಲ್ಲಿ ರಾಮನಾಮವನ್ನು ಬರೆದು ದುಗುಡ ಮರೆಯಲು ಯತ್ನಿಸಿ ಮರೆಯುವುದರಲ್ಲಿ ಯಶಸ್ವಿನಿಯೂ ಆಗುತ್ತಾಳೆ. ಇದರಿಂದ ಭೈರಪ್ಪನವರು ಮುಗ್ಧ ನಂಬಿಕೆಗೆ ಒಳ್ಳೆಯ ಸ್ಥಾನವನ್ನೇ ಕೊಟ್ಟ ಹಾಗೆ ಕಾಣುತ್ತದೆ. ಇದರಿಂದ ನಾಗಲಕ್ಷ್ನ್ಮಿಯಲ್ಲಿ ಮೂಡುವ ಒಂದು ನಿರ್ಲಿಪ್ತತೆ ಕೂಡ ನಿದರ್ಶನವೆಂಬುದಾಗಿ ಸಾರಿದ್ದಾರೆ.

ಕಾತ್ಯಾಯನಿ ಮದುವೆಯಾದ ಆರಂಭದ ದಿನಗಳಲ್ಲಿ ಬಹಳ ಸಂತೋಷದಿಂದಿದ್ದರೂ ಒಂದೆರಡು ವರ್ಷಗಳಲ್ಲಿ ತನ್ನ ಹಳೆಯ ಕುಟುಂಬದ ಬಗ್ಗೆ ನೆನಪು ಮಾಡಿಕೊಳ್ಳುತ್ತಾಳೆ. ಜತೆಗೆ ಅವಳಿಗಾಗುವ ಗರ್ಭಪಾತಗಳಿಂದ ಅವಳಿಗೆ ಮಕ್ಕಳಾಗಲು ಸಾಧ್ಯವಿಲ್ಲದೇ ಹೋಗುತ್ತದೆ. ಇದಾದ ಮೇಲಂತೂ ತನ್ನ ಮಗನಾದ ಚೀನಿಯ ಬಗ್ಗೆ ಹೆಚ್ಚಿನ ವಾತ್ಸಲ್ಯ ಅವಳಲ್ಲಿ ಮೂಡಿದರೂ ಏನೂ ಮಾಡಲಾರದೆ ಹೋಗುತ್ತಾಳೆ. ಚೀನಿಯನ್ನು ಕರೆತರುವ ಅವಳ ಪ್ರಯತ್ನಗಳು ವಿಫಲವಾಗಿ ಅವಳ ಖಿನ್ನತೆಗೆ ದಾರಿಯಾಗುತ್ತವೆ. ದುರದೃಷ್ಟವಶಾತ್ ಕಾತ್ಯಾಯನಿಯು ಈ ಗರ್ಭಪಾತಗಳೆಲ್ಲ ಅವಳ ಮಾವನವರ ಮನೆಯನ್ನು ಬಿಟ್ಟೂ ಪುನರ್ವಿವಾಹವಾದದ್ದಕ್ಕೆ ಎಂದು ಬಗೆದು ಮಾನಸಿಕ ರೋಗಕ್ಕೆ ತುತ್ತಾಗುತ್ತಾಳೆ. ಕಾಲೇಜಿಗೆ ಬರುವ ಮಗನೂ ಸಹ ತನ್ನನ್ನು ನಿರಾಕರಿಸಿದಾಗ ಅವಳ ರೋಗ ಉಲ್ಬಣಿಸಿ ಸಮಾಧಾನವಿಲ್ಲದೆಯೇ ಕೊರಗುತ್ತಾಳೆ.

ಈಕೆಯ ವಿಧವಾ-ವಿವಾಹ ಮತ್ತು ವಂಶವೃಕ್ಷದ ಕಲ್ಪನೆಯ ನಡುವಿನ ಘರ್ಷಣೆ ಕೆಲವು ಒಳ್ಳೆಯ ಚಿಂತನೆಗಳನ್ನು ಮೂಡಿಸಿದೆ. ಭೈರಪ್ಪನವರು ಎತ್ತುವ ಪ್ರಶ್ನೆ - ಒಂದು ವಂಶವೃಕ್ಷದ ಬೀಜವನ್ನು ಫಲಿಸಿದ ಕ್ಷೇತ್ರ ಮತ್ತೊಂದು ವಂಶದ ಕ್ಷೇತ್ರವಾಗುವಾಗ ಏನಾಗಬಹುದು - ಎಂಬುದು? ಈ ಪ್ರಶ್ನೆ ಓದುಗರನ್ನೂ ಕಾಡಿಸುತ್ತದೆ. ಪುಸ್ತಕ ಓದಿದ ಬಹಳ ದಿನಗಳ ಮೇಲೆಯೂ!

ಬರುಬರುತ್ತಾ ಕೊನೆಯ ನೂರು ಪುಟಗಳಲ್ಲಿ ಅಕಸ್ಮಾತ್ತಾಗಿ ಗೋಚರವಾಗುವ ಸತ್ಯ ಶಾಂತರೂ ದಾಂತರೂ ಆದ ಶ್ರೀನಿವಾಸ ಶ್ರೋತ್ರಿಯರಿಗೂ ಆಘಾತಕರವಾಗಿ ಪರಿಣಮಿಸುತ್ತದೆ. ಪುತ್ರನ ಆಕಸ್ಮಿಕ ಮರಣದ ಸಮಯದಲ್ಲೂ ಅಲ್ಲಾಡದ ಬೆಟ್ಟದಂಥಿದ್ದ ಅವರ ವ್ಯಕ್ತಿತ್ವ ಈ ಸತ್ಯದಿಂದ ಸ್ವಲ್ಪ ಪೆಟ್ಟು ತಿನ್ನುತ್ತದೆ. (ಅದು ಏನು ಎಂದು ನಾನು ಹೇಳಿದರೆ ಓದುಗರಾದ ನೀವು ಈ ಪುಸ್ತಕವನ್ನು ಓದದೇ ಇರಬಹುದು. ಪುಸ್ತಕ ಓದಿದವರಿಗೆ ಹೇಗಿದ್ದರೂ ಗೊತ್ತು ತಾನೆ?) ವಂಶದ ಬಗ್ಗೆ ಬಹಳ ಹೆಚ್ಚಿನ ಗೌರವವಿರಿಸಿದ ಶ್ರೋತ್ರಿಯರಿಗಂತೂ ಈ ಆಘಾತ ಕಷ್ಟಸಹ್ಯವಾಗುತ್ತದೆ. ಅಷ್ಟೇ ಏಕೆ? ಅವರ ವಂಶಗೌರವವೆಂಬ ಕಲ್ಪನೆಯನ್ನೇ ಬುಡಮೇಲು ಮಾಡುತ್ತದೆ. ಆದರೆ ಹಿಂದೆ ಆತಂಕ ಮೂಡಿಸುವ ದುವಿಧೆಗಳಲ್ಲಿ ಗೆದ್ದು ಬಂದಿದ್ದ ಶ್ರೋತ್ರಿಯರು ಇಲ್ಲಿಯೂ ಕಡೆಯಲ್ಲಿ ಗೆಲ್ಲುತ್ತಾರೆ. "ಧರ್ಮದ ಮಾರ್ಗದಲ್ಲಿ ನಡೆಯುವವರಿಗೆ ಧರ್ಮವೇ ಮಾರ್ಗ ತೋರುತ್ತದೆ" ಎಂಬ ಅಚಲ ನಂಬಿಕೆಯನ್ನು ಹೊಂದಿದ ಶ್ರೋತ್ರಿಯರು ಅಂತ್ಯದಲ್ಲಿ ಭಾರತೀಯ ಆಶ್ರಮಧರ್ಮದ ಪಾಲನೆಯನ್ನೇ ಮಾಡುತ್ತಾರೆ.

ಒಂದು ಭಾಗವನ್ನು ಮಾತ್ರ ಇಲ್ಲಿ ನಂಬಲು ಕಷ್ಟ. ಮನೆಯ ಕೆಲಸದವಳಾದ, ಶ್ರೋತ್ರಿಯರಿಗಿಂಥ ಸ್ವಲ್ಪ ಚಿಕ್ಕವಳಾದ ಲಕ್ಷ್ಮಿಗೆ ತಿಳಿದ ಒಂದು ಸತ್ಯ ಇವರಿಗೆ ಹೇಗೆ ತಿಳಿಯದೇ ಹೋಯಿತೆಂಬುದು. ಅದೂ ಅದೇ ಊರಿನಲ್ಲಿಯೇ ಇದ್ದಂಥವರಾದ ಶ್ರೋತ್ರಿಯರು ತಕ್ಕ ಮಟ್ಟಿಗೆ ಜನಜನಿತವಾದ ಒಂದು ವಾರ್ತೆಯನ್ನು ತಿಳಿಯದೇ ಹೋದರಲ್ಲಾ ಎಂದು ನಂಬಲು ಸ್ವಲ್ಪ ಕಷ್ಟ. ಆದರೂ ಹೇಳುತ್ತಾರಲ್ಲಾ, ಕಾವ್ಯಾಸ್ವಾದನೆಗೆ ಅಥವಾ ರಸಾಸ್ವಾದನೆಗೆ ಮೊದಲಿಗೆ ಬೇಕಾಗಿರುವುದು ಕೋಲ್ರಿಜ್ ಹೇಳಿದ "willing suspension of disbelief". ನಾವೂ ಇಲ್ಲಿ ಅದನ್ನೇ ಆಶ್ರಯಿಸಿದಾಗೆ ಒದುಗರಿಗೆ ಒಂದು ಅದ್ಭುತ ಪ್ರಸಂಗ ಮೂಡುತ್ತದೆ. ಒಬ್ಬ ಮಹಾಪುರುಷನು ಒದಗಿದ ಕಷ್ಟವನ್ನು ಹೇಗೆ ನಿಭಾಯಿಸಬಲ್ಲ ಎಂಬುದು ಎಲ್ಲ ಓದುಗರಿಗೆ ಆಗುವ ಒಂದು ಪಾಠ. ಅದನ್ನು ದರ್ಶನಶಾಸ್ತ್ರವನ್ನು ಅಭ್ಯಸಿಸಿದ ಭೈರಪ್ಪನವರು ಚೆನ್ನಾಗಿಯೇ ಮಾಡಿಸುತ್ತಾರೆ.

ಈ ಪುಸ್ತಕದ ಮೇಲೆ ಚಿತ್ರವನ್ನು ಮಾಡಿದ ಗಿರೀಶ್ ಕಾರ್ಣಾಡರ ಪ್ರಕಾರ ಈ ಸಿನಿಮಾ ಕೃತಿ ತಮ್ಮ ಅತ್ಯಂತ ದುರ್ಬಲ ಕೃತಿಗಳಲ್ಲಿ ಒಂದು ಎಂಬುದು. ಹಾಗೆ ಹೇಳಲು ಕಾರಣ ಸ್ವಲ್ಪವಿದೆಯೋ ಏನೋ! ಕಾತ್ಯಾಯನಿಯ ಪಾಡು ಎಂಥ ನಾಯಿಗೂ ಬೇಡವೆಂಬಂತೆ ನಿರೂಪಿಸಿದ ಭೈರಪ್ಪನವರು ಆಧುನಿಕ ಕಾದಂಬರಿಕಾರನ ಮುಸುಕು ಹಾಕಿಕೊಂಡ "ಸನಾತನಿ" ಎಂಬುದೇ ಆ ಕಾರಣವಿರಬಹುದೇ? ಆಧುನಿಕನಾದ ನನ್ನಲ್ಲೂ ಈ ವಿಷಯ ಸ್ವಲ್ಪ ಕಳವಳ ಮೂಡಿಸದೇ ಇರಲಿಲ್ಲ. ಈಗ ಯುವತಿಯಾದ ಒಬ್ಬ ವಿಧವೆ ಮತ್ತೆ ಮದುವೆಯೇ ಆಗಬಾರದೇ? ಮಕ್ಕಳಿಲ್ಲದಿದ್ದರೆ ಹೇಗೆ? ಮಕ್ಕಳಿದ್ದರೆ ಹೇಗೆ? ಇಲ್ಲಿ ಅಸಂಖ್ಯಾತ ಸಾಧ್ಯತೆಗಳಿದ್ದರೂ ಅವುಗಳಲ್ಲಿ ಒಂದನ್ನು ತೋರಿಸಿ ಈ ವಿಷಯದ ಬಗ್ಗೆ ಚಿಂತನೆಯನ್ನು ಪ್ರಚೋದಿಸುವುದೇ ಭೈರಪ್ಪನವರ ಕಥನಾಕೌಶಲವೆಂದು ಹೇಳಬೇಕೇ ಹೊರತು "ಅವರು ಹಾಗೆ ಚಿತ್ರಿಸಿದ್ದಾರೆ, ಆದ್ದರಿಂದ ಅವರು ಸನಾತನಿಗಳು" ಎಂದು ಹೇಳುವುದು ನನ್ನ ಪ್ರಕಾರ ಸರಿಯೆನಿಸುವುದಿಲ್ಲ.

ಇನ್ನೊಂದು ಸಣ್ಣ ತಪ್ಪೂ ಪುಸ್ತಕದಲ್ಲಿದೆ. ಕೊಲಂಬಸನು ಅಮೇರಿಕೆಯನ್ನು ಕಂಡುಹಿಡಿದನೆಂದರೆ ಅದು ಹಾಸ್ಯಾಸ್ಪದವಾದ ಸಂಗತಿಯನ್ನು ಹೇಳುತ್ತಾ ಹೊರಟ ಭೈರಪ್ಪನವರು ಅಲ್ಲಿ ಭಾರತೀಯ ಮೂರ್ತಿಗಳ ಅವಶೇಷಗಳಿದ್ದವು ಎಂದು ನನ್ನ ಪ್ರಕಾರ ತಪ್ಪಾಗಿ ಬರೆದಿದ್ದಾರೆ. ಇದಕ್ಕೆ ಪುರಾವೆ ಎಲ್ಲಿಯೂ ಇಲ್ಲ ಎಂದು ನನ್ನ ತಿಳಿವಳಿಕೆ. ತಪ್ಪಿದ್ದಲ್ಲಿ ತಿದ್ದಿಕೊಳ್ಳಲು ಸಿದ್ಧನಾಗಿರುವೆ.

ಒಟ್ಟಿನಲ್ಲಿ, ಚಿಂತನೆಗೆ ಒಳ್ಳೆಯ ಗ್ರಾಸವಾಗುವ ಈ ವಂಶವೃಕ್ಷ ಅತ್ಯಂತ ಜನಪ್ರಿಯ ಕಾದಂಬರಿಗಳಲ್ಲಿ ಒಂದು. ಈ ಪುಸ್ತಕವನ್ನೋದಿದ ಅಥವಾ ಓದದ ಇತರರಿಗೆ ನನ್ನ ಅನಿಸಿಕೆಗಳನ್ನು ಓದಿ ಏನನ್ನಿಸಿದೆಯೋ ಎಂಬುದನ್ನು ತಿಳಿಯಲು ನಾನು ಕುತೂಹಲಿಯಾಗಿದ್ದೇನೆ.

Thursday, October 12, 2006

More on Karnad, Bhyrappa, Tipu Sultan etc., (response to a comment)

I started writing this as a response to a comment that December Stud had made. Since it became a much bigger piece, I decided to make it a separate post.

December Stud (DS in the piece below),
You've agreed throughout in your comment with whatever Chi.Mu and NSL said.But in the end you ask the question, "why the controversy?". This is basically coming back to square one. I agree that Shankaramurthy might have done it just to polarise society and get votes and so on. But there are other internal and important issues. Since it has been raised now, it is better to beat it to death completely so that it can never raise its head again.

Do you believe it is OK if a text book hails Tipu Sultan as a hero just because the government believes that calling him a hero will appease minorities which will then lead to communal harmony? You've already shown that you agree that Tipu has committed those atrocities. So, at the very best, Tipu is a gray character more on the darker side than a pearly white all-good side. I think most detached observers will agree with this characterization.

Now, do you think that relationships between communities can be based on deception and lies? In other words, should it be "forgive and forget" (implying knowledge of atrocities and then consciously acknowledge it and ask for forgiveness - just as America has done with Native Americans) or "deny and maintain status quo" (Politicians starting from Gandhi and Nehru have gone the minority appeasement route and they just managed to create Pakistan and the Babri Masjid demolition controversy)? If "forgive and forget" had really been used, so many people probably would not have been killed and this unnecessary tension between the two communities might not have existed.

If the truth of the matter that Tipu was a dark gray character is acknowledged, history would have played its role of conveying the truth well. History, as I see it, has its value mainly in showing us the good and bad of the past so that we in the present can learn from them.

If people also acknowledge that he destroyed 8000 temples and converted thousands of people to Islam by the sword - but also gave a pittance of a dENige (done when Tipu was mentally fragile) to Shringeri and Nanjanagud and even ShrIrangapaTTaNa - what should Tipu be seen as? In light of the letters that Tipu wrote to the Sultans of Afghanistan and the inscription on his sword, you tell me what Tipu should be seen as. Objectively.

Lot of people have this thought in the corner of their minds that to be objective, one must support both Hindus and Muslims and that is why, DS, you probably did that (still :)) thing in your comment. But in this case, an objective - not saffron or green colored - view will still lead you or any one to see that Tipu was a bigot. Now, being a bigot might be fine from a Muslim perspective - which is the main problem - as Tipu did whatever his Holy Quran told him. But an objective consideration will lead you just to this. But let's not go there for now.

If this fact of Tipu's bigotry is wilfully suppressed and children are taught something else (a la glorious romantic novels from Bhagwan Gidwani) to subserve an ideology or a mistaken notion that appeasement leads to the common good, I feel that the Government is doing something dangerous. Instead of releasing the pent-up pressure in a pressure cooker, people are just trying to be indifferent to it. A little more time and it just might just explode causing a lot of harm to everybody, concerned or not. This resentment of the other community is exactly that. Acknowledge its existence and the root cause for it and try to alleviate it. Denying that the problem exists is just like the ostrich putting its head in the sand. Systematic indifference from the government is the cause for all the Hindu-Muslim clashes happening now.

If this is done, actually the BJP will suffer in the polls as it will have no plank to stand on. So far, it has used only Ramjanmabhumi and the image of Hindus as victims and images of glorious Hindu past (very similar to the Muslim League's pitch to Muslims) to garner votes. If everybody is educated, then politics will become issue-based and not caste/religion based which will be quite a welcome change for India. Shrewd politicians across the political spectrum (the Communists, the Congress and the BJP) have foreseen this problem and it appears that they want to keep the flame of hate burning to provide heat for themselves.

Otherwise the country might just become prosperous! And politicians will be given no easy plank to stand on! Of these, the people with the most simplistic and stupidest ideology are the Left and they are the ones who back the Islamists to the hilt also. These guys have the unique ability to see the world only in terms of the oppressors and the oppressed. And they use this perverse perspective everywhere. It is they who want to rewrite all history in that light (or should I say darkness?). Also, communism is the one ideology that thrives only in strife and poverty. So it is they who really want to keep the country poor and illiterate to serve their own selfish needs.

In my opinion, educating people about the truth is what is necessary and this is always better than any stupid revolution. What is happening now is precisely the opposite and that is why VijayaKarnataka (in spite of its being bought over by the Times of India group) should be commended for trying to bring this to light and educating the public.

Thank you for the thought-provoking comments.

Friday, October 06, 2006

Girish Karnad, SL Bhyrappa, Tipu Sultan and others

Girish Karnad is a multi-faceted personality. He is one of the few Jnanapeetha award winners of the country - he is one of the seven award winners from Karnataka. He is a popular playwright, movie director and actor. In fact, I don't think any of the Jnanpeeth awardees across the country is as popular an actor as Girish Karnad. He has acted in movies of several languages - including Kannada, Hindi, Telugu and Tamil. None can disagree with the fact that Girish Karnad is a really talented man. But, alas! He is human. To err is human and to show that he is human, Girish has erred! Not that he has not proved his erring er.. human credentials before...

Any man is entitled to his opinion and Girish Karnad deserves to have his. Several men of his age have been enamoured of socialism and Girish Karnad is no exception. However, those men were honest. I would not have written this blog had he held his opinions honestly. I thought the earlier incidents were exceptions - but this time he has shown that he is not an honest man and lives for his political ambitions only, whatever those may be.

Anybody in India in the last couple of weeks is sure to have come across the controversy courted by DV Shankaramurthy, the education minister of Karnataka when he said that Tipu Sultan was anti-Kannada and that he should not be celebrated as a national hero. I tend to agree with him and you can find my thoughts about the matter here.

Now, Girish Karnad could have kept quiet like several other litterateurs who did. But he did not. He called for an open debate with the minister and firmly contested that Tipu Sultan was a national hero. Of course Karnad had already written a play titled - "The Dreams of Tipu Sultan" in which he portrayed Tipu Sultan as a magnanimous character and national hero. Since these things did not go together, Girish Karnad had to protest. He was accompanied in this task by the usual "secular" suspects - BK Chandrashekhar and GK Govinda Rao.

But this time, Karnad had not counted on SL Bhyrappa, arguably Kannada's finest novelist, writing a piece about this in the popular Kannada daily Vijayakarnataka. Bhyrappa argued quite eloquently that Tipu should not be celebrated as a hero. The most important thing that Bhyrappa mentioned was in his last paragraph. He said that relationships between communities, (Hindu and Muslim in this context) should not be built on false foundations - but on solid truths. Calling Tipu a national hero basically attempts to whitewash the atrocities that he had committed in the name of religion. True attempts at reconciliation should focus on the truth, forgiveness should follow and only then could a real relationship develop. Bhyrappa, in my opinion, is right on the money here. He also provided good historical proof about Tipu's atrocities. He also castigated Karnad for making a hero out of Tughlaq in a play of the same name while history said something else. Bhyrappa urged Karnad to pay attention to history whenever historical characters were used in creative endeavors. He also accused Karnad of misusing art to serve an ideology whereas art ideally has to be beyond all -isms.

This piece begged for a response from Karnad and sure enough, there was one in the Vijayakarnataka published a few days later. But, unfortunately, Karnad's piece was not a real response at all. In his piece, Karnad failed to answer any of Bhyrappa's concerns. Instead, he accused Bhyrappa of becoming a "dhiDIr"(quick) historian overnight. About the liberties taken with Muhammad bin Tughlaq, Karnad replied that Tughlaq was just a figment of the writer's imagination. And since any writer had the freedom to do that, Karnad was justified in doing what he did.

Now, I ask Girish Karnad - if Tughlaq was just a purely fictional character, then why did Karnad have to call him Tughlaq? He could have called him Abdul Hasan or even Imran Khan!! The name Tughlaq has historical significance. So when people watch Karnad's play, they end up thinking that Mohammed Bin Tughlaq was actually a very kind and considerate ruler whereas history mentions the exact opposite! It then becomes obvious that Karnad wanted to get into the good books of Marxists and the Minority by pandering to their ideology and religion respectively.

Karnad also did not answer the important question of whether art should be subservient to any ideology be it religious or political. Art ideally, in my opinion, is above such ideological squabbles and is mainly for enjoyment by the connoisseur.

Karnad then resorted to hit and run and name calling tactics - typically employed by several left-leaning folks. This is known as vitanDAvAda in Samskrit/Kannada. When one cannot face an issue or argue well, vitaNDa is resorted to. Karnad had directed a couple of movies based on Bhyrappa's novels - "vamshavRuksha" and "tabbaliyu nInAde magane". Since Bhyrappa wrote against Karnad's ideas, the latter came out and said that those movies Karnad directed were Karnad's weakest creations. The fact that those movies won Girish Karnad a foothold in the parallel cinema circle and some awards were conveniently forgotten. Karnad used those movies when he wanted and now when he was confronted with something unpleasant, he resorted to name calling. This was just dishonest!

Shatavadhani Dr. R. Ganesh did a good piece refuting Karnad in Vijayakarnataka, which now has become a veritable battlefield for fighting several battles - minorityism vs non-minorityism, the role of art in ideology, literary vs historical portrayal and others. Dr. Ganesh brought focus back to the crux of Bhyrappa's article (the last paragraph that talks about how relationships have to based on foundations of truth and not otherwise) and showed how Girish Karnad had failed miserably to write a rebuttal to that.

Another point that is worth a mention here is that unlike Karnad, Bhyrappa is no "dhiDIr" historian. Having read several of Bhyrappa's works, I know the attention to detail paid by Bhyrappa to historical facts. Just read his "sArtha" and "parva" to understand that. Though there are a few debatable points in his novels, Bhyrappa tries very hard to portray the facts as they are. He studies a subject for several years before he actually commences writing. Bhyrappa's immense talent and creativity then lies in how he creates and manipulates characters in that setting.

Karnad, on the other hand, probably knows his history too. But, if he really feels that ideology is above art, he's probably OK with creativity being used to even distort historical facts. Evidence to this can be seen in how Karnad has twisted the stories of yayAti and yavakrIDa (I agree that is not "history" but still...) to suit his needs. But there is a big debate over whether history lies mainly in facts or solely in the interpretation of those facts. Karnad may just be reinterpreting the facts, albeit a bit too freely.

Even with all this, Karnad's criticism, unfortunately I feel, stops with the Hindu society and does not extend to other (deserving?) parts of Indian society (including Islamists and Christists). Is this because he knows that to get "rAjAshraya", he needs to pander to the Marxists and Minorities? It could also be because Hindus normally don't protest and when they do, they do a pretty crude job of it. So it is easy to malign the Hindus and get kudos whereas it is not the same with the other sections. There it is! It finally boils down to economics and incentives. Karnad has plenty of incentive to criticize the Hindu society and not otherwise.

Could it be possible to say that Karnad and his likes have sprung forth mainly or only because of prevailing conditions in society? In that case, it could be that Karnad has unwittingly chosen to do what he does!

Sunday, August 06, 2006

ವಿರಾಟಪರ್ವ, ನಳೋಪಾಖ್ಯಾನ ಮತ್ತು ಸೂಪರ್ ಮ್ಯಾನ್

ವಿರಾಟ ಪರ್ವ, ನಳನ ಕಥೆ ಮತ್ತು ಸೂಪರ್ ಮ್ಯಾನ್ - ಈ ಮೂರೂ ಕಥೆಗಳು ನನಗೆ ಪ್ರಿಯವಾದವು. ನನಗಷ್ಟೇ ಅಲ್ಲದೆ ಬಹಳಷ್ಟು ಜನರಿಗೆ ಪ್ರಿಯವಾದವು. ಈ ಮೂರು ಭಾಗಗಳಲ್ಲೂ ಮೂಲಭೂತ ರೀತಿಯಲ್ಲಿ ಒಂದು ಸಮಾನವಾದ ಅಂಶ ನನಗೆ ಕಾಣಿಸಿತು. ವಸ್ತುತಃ ಅದೇ ನನ್ನ ಈ ಭಾಗಗಳ ಬಗೆಗಿನ ಪ್ರೀತಿಗೆ ಕಾರಣ ಎಂದೂ ಅನ್ನಿಸಿತು. ಏನೀ ಕಾರಣವೆಂಬುದನ್ನೇ ಇಲ್ಲಿ ವಿಶದಗೊಳಿಸಲು ಯತ್ನಿಸಿದ್ದೇನೆ.

ವಿರಾಟಪರ್ವಕ್ಕೂ ನಲೋಪಾಖ್ಯಾನಕ್ಕೂ ಥಟ್ಟನೆ ಹೊಳೆಯುವ ಒಂದು ಸಂಬಂಧವುಂಟು. ಇವೆರಡೂ ಭಾಗಗಳು ಭಾರತೀಯರ ಕಾವ್ಯಕಥಾಸ್ರೋತಸ್ಸಿಗೆ ಮೂಲವಾದ ಇತಿಹಾಸಪುರಾಣವೆಂಬ ಪರ್ವತದ ಶಿಖರಪ್ರಾಯವಾಗಿರುವ ಮಹಾಭಾರತದವು. ಮಹಾಭಾರತವೆಂದರೆ "ಪಂಚಮೋ ವೇದಃ" ಎಂದು ಖ್ಯಾತವಾದುದು. ಮಹಾಭಾರತದ ಗುಣಗಾನ ಎಷ್ಟು ಮಾಡಿದರೂ ಸಾಲದಾದರೂ, ಇಲ್ಲಿನ ಉದ್ದೇಶ ಅದಲ್ಲವಾಗಿದ್ದರೂ, ಅದರ ಬಗ್ಗೆ ಒಂದು ಒಳ್ಳೆಯ ಮಾತು ಹೇಳದೇ ಇರಲು ಸಾಧ್ಯವಾಗದೆ ಪಂಚಮೋ ವೇದಃ ಎಂದು ಹೇಳಿದೆ ಅಷ್ಟೆ.

ಪುಸ್ತಕದ ಕಪಾಟಿನಲ್ಲಿ ಕೈಯಾಡಿಸುತ್ತಿದ್ದಾಗ ಶ್ರೀ ಏ. ಆರ್. ಕೃಷ್ಣಶಾಸ್ತ್ರಿಗಳ ವಚನಭಾರತ ಸಿಕ್ಕಿತು. ಸೊಗಸಾದ ಗ್ರಂಥ. ಪುಟ ತಿರುವಿದಾಗ ವಿರಾಟಪರ್ವದ ಉತ್ತರಗೋಗ್ರಹಣ ಪ್ರಸಂಗ ಸಿಕ್ಕಿತು. ಅದನ್ನು ಓದಿದಾಗ ನನಗಾದ ಆನಂದ ಅಷ್ಟಿಷ್ಟಲ್ಲ. ಪಾಂಡವರ ಹದಿಮೂರು ವರ್ಷಗಳ ಅರಣ್ಯ ಮತ್ತು ಅಜ್ಞಾತವಾಸದ ನಂತರ ಅವರಿಗಾದ ಬಿಡುಗಡೆಯ ಆನಂದ ನಮ್ಮನ್ನು ತಟ್ಟದೇ ಇರುವುದಿಲ್ಲ. ಇಲ್ಲಿ ವಿಶೇಷತಃ ನನಗೆ ಹಿಡಿಸಿದ್ದು ಅರ್ಜುನನ ಶೌರ್ಯದ ವರ್ಣನೆ. ಅರ್ಜುನನು ಬೃಹನ್ನಳೆಯಾಗಿ ನಾಟ್ಯಾಚಾರ್ಯನಾಗಿದ್ದರೂ ವಿರಾಟಪುತ್ರನಾದ ಉತ್ತರಕುಮಾರನ ಸಾರಥ್ಯ ಅವನಿಗೆ ಒದಗಿ ಬರುತ್ತದೆ. ಅಲ್ಲಿ ರಣಹೇಡಿಯಾಗಿ ಓಡುವ ಉತ್ತರನನ್ನು ಯುದ್ಧಕ್ಕಾಗಿ ಹುರಿದುಂಬಿಸಲು ಮಾಡುವ ವ್ಯರ್ಥಪ್ರಯತ್ನ ವಿನೋದಮಯವಾಗಿದೆ. ಇದಾದ ನಂತರ ಸ್ವತಃ ಅರ್ಜುನನೇ ರಥಿಯಾಗಿ ಭೀಷ್ಮದ್ರೋಣಾದಿಗಳ ಎದುರು ಒಬ್ಬನೇ ನಿಲ್ಲುತ್ತಾನೆ. ಹದಿಮೂರು ವರ್ಷಗಳ ಅವಮಾನ, ದುಃಖ, ಕಷ್ಟಗಳು ಒಮ್ಮೆಯೇ ನೆನಪಿಗೆ ಬಂದು, ಅದಕ್ಕೆ ಕಾರಣಭೂತರಾದವರು ಎದುರಿಗೇ ಇದ್ದಾಗ ಅಸಹಾಯಶೂರನಾದ ಅರ್ಜುನನ ಸಾಮರ್ಥ್ಯ ವಿಜೃಂಭಿಸುತ್ತದೆ. ಎಲ್ಲರನ್ನೂ ಲೀಲಾಜಾಲವಾಗಿ ಧೂಳೀಪಟಮಾಡಿಬಿಡುತ್ತಾನೆ. ಕರ್ಣನ ಮಾತುಗಳು ಕೇವಲ ವ್ಯರ್ಥಪ್ರಲಾಪಗಳಾಗಿಯೇ ಉಳಿಯುವ ಹಾಗೆ ಮಾಡುತ್ತಾನೆ. ಅರ್ಜುನನ ಶೌರ್ಯಸಾಮರ್ಥ್ಯಗಳನ್ನು ವೈರಿಗಳ ಮೂಲಕ ಹೇಳಿಸಿರುವುದು ಬಹಳ ಚೆನ್ನಾಗಿ ಮೂಡಿಬರುತ್ತದೆ. ಭೀಷ್ಮ - "ಗಾಳಿಯು ಬೀಸುತ್ತಿದೆ. ಕುದುರೆಗಳು ಕಣ್ಣೀರಿಡುತ್ತಿವೆ. ಉತ್ಪಾತಗಳು ಕಾಣಿಸುತ್ತಿವೆ. ಇಂದು ಅವಶ್ಯವಾಗಿ ಹೆಚ್ಚಿನ ಹಿಂಸೆ ನಡೆಯುವ ಹಾಗಿದೆ. ಬಂದಿರುವವನು ಅರ್ಜುನನೇ ಇರಬೇಕು" ಎಂಬ ಮೊದಲಾದ ಮಾತುಗಳಲ್ಲಿ ವೀರರಸ ತುಂಬಿ ತುಳುಕುತ್ತದೆ. ಅಶ್ವತ್ಥಾಮನೂ ಕೃಪಾಚಾರ್ಯನೂ ದ್ರೋಣನೂ ಅರ್ಜುನನನ್ನು ಹೊಗಳುವವರೇ. ಇಲ್ಲಿನ ಯುದ್ಧವನ್ನು ಕುರುಕ್ಷೇತ್ರ ಯುದ್ಧಕ್ಕಿಂತಲೂ ಬಹಳ ಸುಲಭವಾಗಿ ಅರ್ಜುನ ನಿರ್ವಹಿಸುತ್ತಾನೆ.

ನಂತರ ಇದೇ ಭಾಗವನ್ನು ಕುಮಾರವ್ಯಾಸಭಾರತದಲ್ಲಿ ಓದಲು ನೋಡಿದೆ. ಉತ್ತರಗೋಗ್ರಹಣದ ಒಂದು ಸಂಧಿಯನ್ನು ಓದಿದಾಗ ಅಲ್ಲಿ ಕುಮಾರವ್ಯಾಸನ ವರ್ಣನೆ ಅದ್ಭುತವಾಗಿ ಕಂಡಿತು. ಅಬ್ಬ! ಕುವೆಂಪುರವರು ಹೇಳಿದ "ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು, ಭಾರತ ಕಣ್ಣಲಿ ಕುಣಿಯುವುದು" ಎಂಬ ಮಾತು ಎಷ್ಟು ಸತ್ಯವೆಂದು ಮತ್ತೊಮ್ಮೆ ಮನಗಂಡೆ.

ಕೌರವರ ಪರಾಜಯದ ಬಳಿಕ ಪಾಂಡವರ ನಿಜಸ್ವರೂಪದ ಜ್ಞಾನ ವಿರಾಟಾದಿಗಳಿಗಾಗುತ್ತದೆ. ಇದಾದಾಗ ಮನಸ್ಸಿಗೆ ಏನೋ ಒಂದು ಸಂತಸ; ಜೊತೆಗೆ ನೆಮ್ಮದಿ ಕೂಡ.

ಅಂತೂ ನನಗೆ ಭಾರತದಲ್ಲಿ ಪ್ರಿಯವಾದ ಭಾಗ ವಿರಾಟಪರ್ವ. ಸರಿ, ಮನಯಲ್ಲಿ ನಮ್ಮ ತಂದೆಯವರನ್ನೂ ತಾಯಿಯವರನ್ನೂ ಭಾರತದಲ್ಲಿನ ನಿಮ್ಮ ಪ್ರಿಯವಾದ ಭಾಗ ಯಾವುದೆಂದು ಕೇಳಿದೆ. ಅವರೂ ವಿರಾಟಪರ್ವವೆನ್ನುವುದೇ? ಆಗ ನನ್ನ ಕುತೂಹಲ ಇನ್ನೂ ಕೆರಳಿತು. ಇದು ಹೀಗೆ ಏಕಿರಬಹುದೆಂದು.

ನಲನ ಕಥೆಯೂ ಹಾಗೆ. ಬಹಳ ಇಷ್ಟ ನನಗೆ. ವಿಶೇಷತಃ ದಮಯಂತಿ ಮಾಡುವ ಉಪಾಯದಿಂದ ಬಾಹುಕ ರೂಪದಲ್ಲಿರುವ ನಳನನ್ನು ಕುಂಡಿನಾಪುರಕ್ಕೆ ಮೋಸದ ಸ್ವಯಂವರಕ್ಕೆ ಕರೆಯುವ ಭಾಗ ಚೆನ್ನಾಗಿದೆ. ಬಾಹುಕನು ತನ್ನ ದೊರೆಯಾದ ಋತುಪರ್ಣನಿಗೆ ಬೋಧಿಸುವ ಅಕ್ಷವಿದ್ಯೆ, ಅಶ್ವವಿದ್ಯೆ - ಇವೆಲ್ಲವೂ ಕುತೂಹಲಕಾರಿಯಾಗಿದೆ. ತನ್ನ ಪತ್ನಿಯಾದ ದಮಯಂತಿಯನ್ನು ತನ್ನ ಮುದ್ದಿನ ಮಕ್ಕಳನ್ನೂ ಕಂಡಿಯೂ ಸಹ ಏನು ಮಾಡಲಾರದ ನಳನ ಸ್ಥಿತಿ ಕರುಣಾಜನಕವಾಗಿದೆ. ಒಟ್ಟಿನಲ್ಲಿ ಕಥೆಯು ಸುಖಾಂತ್ಯಗೊಳ್ಳುತ್ತದೆ.

ಸೂಪರ್ ಮ್ಯಾನ್ ೧೯೩೦ರ ಆಸುಪಾಸಿನಲ್ಲಿ ಸೃಷ್ಟಿಸಲ್ಪಟ್ಟ ಕಾಮಿಕ್ ಕಥಾಸರಣಿಯ ನಾಯಕ. ಅಮೇರಿಕದಲ್ಲೇ ಅಲ್ಲದೆ ಪ್ರಪಂಚದಾದ್ಯಂತ ಬಹಳಷ್ಟು ದೇಶಗಳಲ್ಲಿ ಇವನ ಅಭಿಮಾನಿಗಳಿದ್ದಾರೆ. ಚಿಕ್ಕಂದಿನಲ್ಲಿ ನಾನು ಕೂಡ! ಈಗಲೂ ಸೂಪರ್-ಮ್ಯಾನ್ ಎಂದರೆ ನನಗೆ ಬಹಳ ಇಷ್ಟ.

ಇವು ಮೂರರಲ್ಲೂ ಕಾಣುವ ಸಮಾನ ಅಂಶವೊಂದು ನನಗೆ ಹೊಳೆಯಿತು. ಇದೇ ಇವುಗಳ ಯಶಸ್ಸಿಗೂ ಜನಪ್ರಿಯತಗೂ ಕಾರಣವೇ? ನನಗೆ ಹೌದು ಎಂದೆನಿಸುತ್ತದೆ. ನಿಮಗೇನೋ ಹೇಳಿ ತಿಳಿಸಿರಿ.

ಸಮಾನ ಅಂಶವೆಂದರೆ - ಇವುಗಳಲ್ಲಿನ ನಾಯಕಪಾತ್ರವು ಸಶಕ್ತವಾಗಿದ್ದರೂ ಕಾರಣಾಂತರಗಳಿಂದ ಬದ್ಧವಾಗಿ ಸ್ವಾತಂತ್ರ್ಯವನ್ನು ಕಳೆದುಕೊಂಡಿದೆ. ವಿರಾಟನ ಅರಮನೆಯಲ್ಲಿ ರಾಜ್ಯಾಧಿಪತಿಗಳಾಗಿದ್ದ ಪಾಂಡವರು ಸಾಮಾನ್ಯ ಕೆಲಸದವರಾಗಿ ಸೇರಿರುತ್ತಾರೆ. ಚಕ್ರವರ್ತಿಯಾಗಿದ್ದ ನಲನು ಋತುಪರ್ಣನ ಆಸ್ಥಾನದಲ್ಲಿ ಸಾರಥಿಯ ಕೆಲಸ ಮಾಡುತ್ತಾನೆ. ಸೂಪರ್ ಮ್ಯಾನ್ ಕ್ರಿಪ್ಟಾನ್ ಎಂಬ ಗ್ರಹದಿಂದ ಭೂಮಿಗೆ ಬಂದು, ಇಲ್ಲಿನ ವಾತಾವರಣದಲ್ಲಿ ಅತಿಬಲನಾಗಿದ್ದರೂ ಕ್ಲಾರ್ಕ್ ಕೆಂಟ್ ಎಂಬ ಮಾರುವೇಷದಲ್ಲಿ ಸಾಮಾನ್ಯರ ಹಾಗೆ ವರ್ತಿಸಬೇಕಾಗಿ ಬರುತ್ತದೆ.

ಇಂಥ ಪರಿಸ್ಥಿತಿಯ ವೈಪರೀತ್ಯಗಳು ಓದುಗರಲ್ಲಿ ಒಂದು ತಾದಾತ್ಮ್ಯವನ್ನು ಒದಗಿಸಲು ಸಹಾಯಮಾಡುತ್ತದೆ. ಇಂಥ ಸರ್ವಶಕ್ತರೂ ಸಾಮಾನ್ಯರ ಹಾಗಿರುವರಲ್ಲಾ ಎಂಬ ಆಶ್ಚರ್ಯ. ಓದುಗ ತಾನು ಸಾಮಾನ್ಯನಾಗಿದ್ದರೂ ತನ್ನಲ್ಲಿ ಅಲೌಕಿಕ ಶಕ್ತಿಯಿರಬಹುದೆಂಬ ಭಾವನೆಗೂ ಕಾರಣವಾಗುತ್ತದೆ. ಓದುಗ ತಾನೂ ಒಂದು ಬೂದಿ ಮುಚ್ಚಿದ ಕೆಂಡದ ಹಾಗೆಂದು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.

ಒಂದು ಕಥಾಭಾಗ ರುಚಿಸಬೇಕೆಂದರೆ ಅಲ್ಲಿನ ಪಾತ್ರಗಳಲ್ಲಿ ಓದುಗನು ಸಹಮತಿಯನ್ನುಳ್ಳವನಾಗಿರಬೇಕು, ತನ್ನನ್ನು ತಾನೇ ಅವುಗಳೊಡನೆ ಗುರುತಿಸಿಕೊಳ್ಳಲು ಸಾಧ್ಯವಾಗಬೇಕು. ತಾನೇ ಆ ಪಾತ್ರವಾಗದಿದ್ದರೆ ಆ ಪಾತ್ರಕ್ಕೆ ಸಹಾನುಭೂತಿಯನ್ನು ತೋರಿಸುವ ಇನ್ನೊಂದು ಪಾತ್ರವಾಗಿದ್ದರೂ ಪರವಾಗಿಲ್ಲ. ಖಲನ ಪಾತ್ರಗಳಲ್ಲಿ ಸಾಮಾನ್ಯ ಓದುಗರು ತಮ್ಮನ್ನು ತಾವು ಗುರುತಿಸಿಕೊಳ್ಳುವುದು ಕಷ್ಟ. ಉತ್ತಮ ಪಾತ್ರಗಳೊಡನೆ ಗುರುತಿಸಿಕೊಳ್ಳಲು ಸಾಧ್ಯವಾದರೆ ಕಥೆಯೂ ಹೆಚ್ಚು ಜನಪ್ರಿಯವಾಗುತ್ತದೆ. ಪಾತ್ರಗಳು ಉತ್ತಮವಾಗಿದ್ದರೂ, ಸಶಕ್ತವಾಗಿದ್ದರೂ ಸಂದರ್ಭವಶಾತ್ ಆಕಾಶದಲ್ಲಿ ಹಾರಾಡದೆ ತಮ್ಮಂತೆಯೇ ಭೂಮಿಯ ಮೇಲೆ ಇದ್ದರೆ ಅಥವಾ ಇರಲೇ ಬೇಕಾಗಿದ್ದರೆ? ಸ್ವಲ್ಪ ಹೆಚ್ಚಿನ ತಾದಾತ್ಮ್ಯ ದೊರೆಯಲು ಇದು ಪ್ರಾಯಃ ಸಹಾಯ ಮಾಡಬಹುದು, ಅಲ್ಲವೇ?

ಬೇರೆ ಕಥೆಗಳಲ್ಲೂ ಹಾಗೆಯೇ. ರಾಜನೊಬ್ಬ ಮಾರುವೇಷದಲ್ಲಿ ಸಂಚರಿಸುವ ಕಥೆಗಳು ಮನಸ್ಸಿಗೆ ರುಚಿಸುತ್ತವೆ. ಬಾಷಾ ಎಂಬ ತಮಿಳು ಚಿತ್ರದಲ್ಲಿ ರಜನಿಕಾಂತ್ ಗೆ ಇಂಥದೇ ಪಾತ್ರ. ಆಮೇರಿಕದಲ್ಲಂತೂ ಪ್ರತಿಯೊಬ್ಬ "ಸೂಪರ್ ಹೀರೋ"ವಿಗೂ ಒಂದು ಸಾಮಾನ್ಯ ನಾಗರಿಕನ ಪಾತ್ರವಿರುತ್ತದೆ. ಹೀಗೆಯೇ ಬಹಳಷ್ಟು ಕಥೆ ಚಲನಚಿತ್ರಗಳಿವೆ. ಇವುಗಳ ವಿಶೇಷ ಜನಪ್ರಿಯತೆಗೆ ನಾನು ಹೇಳಿದ ಸಂಗತಿಯೂ ಕಾರಣವಿರಬಹುದೇ?

ಆದರೆ ಇದನ್ನು ಚೆನ್ನಾಗಿ ಉಪಯೋಗಿಸುವುದು ಕಥೆಗಾರನ ಪ್ರತಿಭೆಗೆ ಬಿಟ್ಟಿದ್ದು. ಕಥೆಗಾರನ ಪ್ರತಿಭೆ ಹೆಚ್ಚಿಲ್ಲದಿದ್ದರೆ ಆ ಸಂಗತಿಗಳಲ್ಲಿನ ರಸವನ್ನು ಚೆನ್ನಾಗಿ ಮೂಡಿಸಲು ಸಾಧ್ಯವಾಗುವುದಿಲ್ಲ.

ನಾನು ಹೇಳಿದ್ದರ ಬಗ್ಗೆ ಇದನ್ನು ಓದಿದವರು ಸ್ವಲ್ಪ ಯೋಚಿಸಿ ನೋಡಿದರೆ ಚೆನ್ನಾಗಿರುತ್ತದೆ. ಅಥವಾ ನನಗೆ ಕಾಣದ ಇನ್ನೊಂದು ಪ್ರಬಲವಾದ ಕಾರಣವಿದ್ದರೆ ಅದನ್ನು ತಿಳಿಯಲು ಇಚ್ಛಿಸುತ್ತೇನೆ. ಪ್ರತಿಕ್ರಯಿಸಿದರೆ ಬಹಳ ಸಂತೋಷ.

|| ಇತಿ ಶಮ್ ||

Thursday, August 03, 2006

Great write up on Malgudi Days by Jhumpa Lahiri

Got this via Churumuri.

You can find the full article here on Boston Review.

Very well written, of course.

Makes me want to read Malgudi days all over again. I think I will do that soon.

Tuesday, July 18, 2006

ಪುಸ್ತಕ ಪರಿಚಯ - ರುದ್ರಮ ದೇವಿ

ಶ್ರೀಯುತರಾದ ನೋರಿ ನರಸಿಂಹ ಶಾಸ್ತ್ರಿಗಳು ತೆಲುಗು ಭಾಷೆಯ ಒಳ್ಳೆಯ ಕಾದಂಬರಿಕಾರರಲ್ಲಿ ಒಬ್ಬರು. ಐತಿಹಾಸಿಕ ಕಾದಂಬರಿಗಳಲ್ಲಿ ಇವರದ್ದು ಎತ್ತಿದ ಕೈ. ಸಾಹಿತ್ಯದಲ್ಲೂ ನುರಿತ ಶಾಸ್ತ್ರಿಗಳು ವೃತ್ತಿಯಿಂದ ವಕೀಲರಾಗಿದ್ದರು. ಆಂಧ್ರದೇಶದ ಚರಿತ್ರೆಯ ನಿರೂಪಣೆ ಇವರಿಂದ ಬಹಳ ಚೆನ್ನಾಗಿ ಆಗಿದೆ. ವಿಶೇಷವಾಗಿ ಸಾಹಿತ್ಯ ನಿರ್ಮಾಣಕ್ಕೂ ಚರಿತ್ರೆಗೂ ಇರುವ ಸಂಬಂಧವನ್ನು ಚೆನ್ನಾಗಿ ತೋರಿದ್ದಾರೆ. ನಾನು ಬರೆದ ಈ ಮಾತು ಅವರ ಕಾದಂಬರಿಗಳನ್ನು ಮೂಲದಲ್ಲಿ ಓದಿದವರಿಂದ. ರುದ್ರಮದೇವಿಯಲ್ಲದೆ ನಾರಾಯಣ ಭಟ್ಟು, ಮಲ್ಲಾರೆಡ್ಡಿ, ಧೂರ್ಜಟಿ ಮೊದಲಾದವುಗಳು ಇವರ ಇತರ ಕಾದಂಬರಿಗಳು.

ರುದ್ರಮದೇವಿ ನಾನು ಪರಿಚಯಿಸಲಿಚ್ಛಿಸುವ ಕಾದಂಬರಿ. ತೆಲುಗು ಮೂಲವನ್ನು ಸಮರ್ಥವಾಗಿ ಸೊಗಸಾಗಿ ಕನ್ನಡದಲ್ಗಿ ಅನುವಾದ ಮಾಡಿದ್ದಾರೆ. ಆನುವಾದಕರು ಕನ್ನಡಾಂಧ್ರ-ಉಭಯಭಾಷಾ-ಪಂಡಿತರಾದ ಶ್ರೀ ವೆಂಕಟರಾಮಪ್ಪನವರು. ಅನುವಾದಕರು ತೆಲುಗು ಸಾಹಿತ್ಯವನ್ನು ಚೆನ್ನಾಗಿ ಅಧ್ಯಯನ ಮಾಡಿದ್ದರಿಂದ ಮೂಲದ ತೆಲುಗು ಸಾಹಿತ್ಯದ ಸೊಬಗು ಕನ್ನಡದ ಅನುವಾದದಲ್ಲೂ ಉಳಿದಿದೆ.

ಝಾಂಸಿಯ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಹೇಗೆ ಕನ್ನಡಿಗರಲ್ಲಿ ವೀರನಾರಿಯರಾಗಿ ಕಂಡುಬರುವರೋ, ಅವರಿಗಿಂತಲೂ ಹೆಚ್ಚಿನ ವೀರಭಾವನೆಯನ್ನು ಅಂಧ್ರರಲ್ಲಿ ತರಿಸುವ ಹೆಸರು ರುದ್ರಮದೇವಿಯದು. ಆಂಧ್ರದ ಓರಂಗಲ್ಲು ಪ್ರಾಂತ ಕಾಕತೀಯ ವಂಶಕ್ಕೆ ಹೆಸರಾದದು. ಇದೇ ವಂಶದವರು ಗಜಪತಿಗಳೆಂದೂ ಖ್ಯಾತಿ ಪಡೆದಿದ್ದರು.

ಕಥಾವಸ್ತುವಿನ ಸ್ಥೂಲನಿರೂಪಣೆ ಹೀಗಿದೆ - ಓರಂಗಲ್ಲಿನ ಗಣಪತಿದೇವ ಮಹಾರಾಜನು ವಾರ್ಧಕ್ಯದಿಂದ ಅನಾರೋಗ್ಯದಿಂದ ಬಳಲುತ್ತಿರುವಾಗ ನೆರೆರಾಜ್ಯದವರು ಅವಕಾಶವನ್ನುಪಯೋಗಿಸಿಕೊಂಡು ದಂಡೆತ್ತಿಬರುವಂಥ ಸಂದರ್ಭದೊಂದಿಗೆ ಕಾದಂಬರಿಯ ಆರಂಭ. ಇದರ ಜೊತೆಗೆ ಸಿಂಹಾಸದ ಉತ್ತರಾಧಿಕಾರಿ ಯಾರೆಂಬುದನ್ನೂ ನಿರ್ಧರಿಸಬೇಕಾದ ಸಮಯ. ಗಣಪತಿದೇವರಿಗೆ ಗಂಡು ಸಂತಾನವಿಲ್ಲದೆ ಇದ್ದುದರಿಂದ ಮುಂದಿನ ಮಹಾರಾಜರಾರು ಎಂಬುದು ಕುತೂಹಲಕ್ಕೆ ಕಾರಣವಾಗುತ್ತದೆ. ಆದರೆ ಮಹಾರಾಜರ ಮಗಳಾಗಿದ್ದವಳು ರುದ್ರಮದೇವಿ. ನವರಾತ್ರಿಯ ಸಮಯದಲ್ಲಿ ಆರಂಭವಾಗುವ ಈ ಕಥೆಯ ಪ್ರಾರಂಭದ ಹೊತ್ತಿಗೆ ರುದ್ರಮದೇವಿಯಾಗಲೇ ವಿವಾಹಿತೆ. ವಿರೂಪಾಕ್ಷದೇವನೆಂಬ ರಾಜ ಈಕೆಯ ಪತಿ. ಈಕೆಗೆ ಮೊಮ್ಮಗನಾದ ಪ್ರತಾಪರುದ್ರನೂ ಹುಟ್ಟಿರುತ್ತಾನೆ. ಹೀಗಾಗಿ ಸಿಂಹಾಸನಕ್ಕಾಗಿ ರುದ್ರಮಳೇ ಮೊದಲಾಗಿ ತನ್ನ ಮೊಮ್ಮಗ, ಅಳಿಯ ಮತ್ತು ಪತಿ ಕೂಡ ಪೈಪೋಟಿಯಲ್ಲಿರುತ್ತಾರೆ.

ಆಸ್ಥಾನದಲ್ಲಿ ಮಹಾರಾಜರು ಮತ್ತವರ ಸಭಿಕರು ಹೇಗೆ ನಡೆದುಕೊಂಡಿದ್ದಿರಬಹುದು, ಗಂಭೀರ ಸಮಸ್ಯೆಗಳನ್ನು ಹೇಗೆ ಸುಲಭಗೊಳಿಸುತ್ತಿದ್ದರು ಎಂದು ತೋರಿಸುವ ಕಥೆಯ ಮುಂದಿನ ಭಾಗ ಬಹು ರೋಚಕವಾದುದು. ಸಿಂಹಾಸನವನ್ನೇರುವುದಕ್ಕೆ ರುದ್ರಮಳೇ ಸರಿಯೆಂದು ಸಭೆ ನಿರ್ಧರಿಸುತ್ತದೆ. ಇದರಿಂದ ತನ್ನ ಪತಿ ಮತ್ತು ಅಳಿಯರು ತನ್ನಿಂದ ದೂರವಾಗುತ್ತಾದೆ. ಹಾಗಾದರೂ ಧೃತಿಗೆಡದೆ ರುದ್ರದೇವ ಮಹಾರಾಜನೆಂದೇ ಕರೆಸಿಕೊಂಡು ರಾಜ್ಯವನ್ನು ಹೇಗೆ ನೆರೆರಾಜ್ಯದವರಾದ ಚೋಳ, ಚಾಲುಕ್ಯ ಮತ್ತು ಯಾದವರಿಂದ ರುದ್ರಮ ದೇವಿ ಹೇಗೆ ಕಾಪಾಡುತ್ತಾಳೆಂಬುದು ಕಥೆಯ ಮುಖ್ಯ ವಸ್ತು.

ಸೆಣಸಾಟವೊಂದು ಕಡೆಯಿದ್ದರೆ ಆಂಧ್ರ ಮಹಾಭಾರತದ ನಿರ್ಮಾಣ ತಿಕ್ಕನ ಕವಿಗಳಿಂದ ಹೇಗೆ ರಚಿತವಾಯ್ತು ಎಂಬುದು ಸಹ ಕಥೆಯ ಉಪನದಿಯಾಗಿ ಉದ್ದಕ್ಕೂ ಹರಿದು ಬರುತ್ತದೆ.ಈ ಭಾಗ ನರಸಿಂಹ ಶಾಸ್ತ್ರಿಗಳ ಸಾಹಿತ್ಯರಸಜ್ಞತೆಗೆ ಸಾಕ್ಷಿಯಾಗಿದೆ. ಮಹಾಭಾರತದ ರಚನಾಕ್ರಮವನ್ನು ಸೊಗಸಾಗಿ ನಿರೂಪಿಸಿದ್ದಾರೆ. ತಿಕ್ಕನಾಮಾತ್ಯರು ತಮ್ಮ ಶಿಷ್ಯರೊಂದಿಗೆ ಓರಂಗಲ್ಲಿನ ಶಿವ-ಕೇಶವದೇವಾಲಯದೆದುರಿನ ಮಂಟಪದಲ್ಲಿ ಮೊದಲು ವ್ಯಾಸಭಾರತದ ಕೆಲ ಶ್ಲೋಕಗಳನ್ನು ಓದುವರು. ಆ ಭಾಗದ ರಸವನ್ನು ಗ್ರಹಿಸಿದ ಬಳಿಕ ಅದೇ ರಸವನ್ನು ತೆಲುಗು ಭಾಷೆಯಲ್ಲಿಳಿಸುತ್ತಿದ್ದರು.

ಇನ್ನೊಂದು ಸಾಹಿತ್ಯದ ಕೊಂಡಿ - ಕಥೆಯಲ್ಲಿನ ಪಾತ್ರಗಳಾಗಿ ಬರುವ ಬದ್ದೆನಾಮಾತ್ಯ (ಸುಮತಿ ಶತಕದ ರಚಯಿತಾ) ಮತ್ತು ಜಾಯಪನಾಯಕ (ನೃತ್ತರತ್ನಾವಳಿಯ ಕರ್ತಾ) ಇವರುಗಳು ಹೇಗೆ ಕಥೆಯೊಂದಿಗೆ ಸಾಹಿತ್ಯರಸವನ್ನು ವ್ಯಕ್ತಪಡಿಸುವರು ಎಂಬುದು ಕಾಣುತ್ತದೆ. ವಾಸ್ತವವಾಗಿ ಇವರು ಮತ್ತು ರುದ್ರಮದೇವಿ ಸಮಕಾಲೀನರೂ, ಅದೇ ಪ್ರದೇಶದಲ್ಲಿದ್ದವರು ಆಗದೇ ಇರಬಹುದು. ಆದರೆ ಶಾಸ್ತ್ರಿಗಳ ಕಲ್ಪನಾಸಾಮರ್ಥ್ಯ ಇವರೆಲ್ಲರನ್ನು ಒಂದೇ ಕಥೆಯಲ್ಲಿನ ಪಾತ್ರಗಳನ್ನಾಗಿ ಮಾಡುತ್ತದೆ.

ಕೊಪ್ಪೆರುಂಜಿಂಗ (ಪೆರುಂ ಜಿಂಗ - ಮಹಾ ಸಿಂಹ) ಎಂಬ ಚೋಳ ರಾಜನ ಕಲಾಪಿಪಾಸೆಯೂ ಇಲ್ಲಿ ಕಾಣುತ್ತದೆ. ಯುದ್ಧದ ಸಮಯದಲ್ಲೂ ತನ್ನ ಅತಿಯಾದ ಆತ್ಮವಿಶ್ವಾಸದಿಂದ ನಾಟಕಗಳನ್ನು ಆಡಿಸಿ ನೋಡುವ ಚಪಲ ಮತ್ತು ಕಲಾನಿಷ್ಠೆ ರಾಜರದು. ಒಂದು ಸನ್ನಿವೇಶವನ್ನು ಇಲ್ಲಿ ಅವಶ್ಯವಾಗಿ ಸ್ಮರಿಸಬೇಕು. ಚೋಳರಾಜನಿಗೆ ಭಾಸನ ಊರುಭಂಗ ನಾಟಕವನ್ನು ಮಾಡಿಸಿ ಸಹೃದಯರೊಂದಿಗೆ ನೋಡುವ ಆಸೆ ಮೂಡುತ್ತದೆ. ಆದರೆ ಭಾಸನ ನಾಟಕಗಳು ಭರತಮುನಿಯ ನಿಯಮಗಳಿಗಿಂತ ಮುಂಚೆ ರಚಿತವಾದವುಗಳು. ಆದ್ದರಿಂದ ರಂಗಸ್ಥಳದಲ್ಲಿ ಅಗ್ನಿಯನ್ನಾಗಲಿ, ನೀರನ್ನಾಗಲಿ, ನಿರ್ಯಾಣ (ಸಾವು)ವನ್ನಾಗಲಿ ತೋರಿಸದೇ ಇರುವುದು ಸಾಧುವೆಂದು ಆಗಿನ ನಾಟಕಕಾರರಿಂದ ಅಂಗೀಕೃತವಾದ ಭರತಮುನಿಯ ಮತ. ಇದೇ ಮತದವರು ಆಂಧ್ರದ ಬ್ರಾಹ್ಮಣವಿದ್ವಾಂಸರು. ದುರದೃಷ್ಟವಶಾತ್ ರಾಜನು ಇವರನ್ನೇ ನಾಟಕಕ್ಕಾಗಿ ಆಹ್ವಾನಿಸುತ್ತಾನೆ. ಇಂಥ ಛಾಂದಸರಾದ ಬ್ರಾಹ್ಮಣರೆದುರು ಊರುಭಂಗದ ಕೊನೆಯ ಘಟನೆಯಾದ ದುರ್ಯೋಧನ ಪಾತ್ರದ ಸ್ವರ್ಗಾರೋಹಣವಾಗುತ್ತದೆ. ಇದನ್ನು ಕಂಡ ಬ್ರಾಹ್ಮಣರು ತಮಗೆ ಮೈಲಿಗೆಯಾಯ್ತೆಂದು ಮೃತಾಶೌಚ ತಗುಲಿತೆಂದು ಬಳಿಯಿದ್ದ ಗೋದಾವರಿಯಲ್ಲಿ ಸ್ನಾನ ಮಾಡಲು ಏಳುತ್ತಾರೆ. ನಾಟಕ ಪೂರ್ಣವಾಗುವ ಮುಂಚೆ ಎದ್ದಿದ್ದರಿಂದ ರಾಜನಿಗೆ ವಿಪ್ರರಿಂದ ಮಂಗಲಾಶಾಸನವಾಗುವುದಿಲ್ಲ. ಇದರಿಂದ ರಾಜ ಕ್ರುದ್ಧನಾಗುತ್ತಾನೆ. ಆದರೆ ವಿಪ್ರರನ್ನು ಬಂಧಿಸುವಷ್ಟು ಸಾಹಸ ರಾಜನಿಂದ ಮಾಡಲಾಗುವುದಿಲ್ಲ (ಆಗಿನ ಕಾಲದ ವಿಪ್ರರ ಸ್ಥಾನ ಹಾಗಿತ್ತು). ಇದು ಅಪಶಕುನವೆಂದು ಬಗೆದ ಅವನು ಯುದ್ಧದಲ್ಲಿ ಸೋತು ಹಿಂದಿರುಗುತ್ತಾನೆ.

ಇನ್ನೊಂದು ಸಂಗತಿ - ಜೈನ ಕಾರಕೂನರದು. ಜೈನರೇ ಲೆಕ್ಕಪತ್ರಗಳನ್ನು ನೋಡುತ್ತಿದ್ದ ಆ ಕಾಲದಲ್ಲಿ ಜೈನರ ಗುರುಗಳಿಗೆ ಆಸ್ಥಾನದಲ್ಲಿ ಸ್ವಲ್ಪ ಅವಮರ್ಯಾದೆಯುಂಟಾಗುತ್ತದೆ. ಇದರಿಂದ ಜೈನ ಮತಕ್ಕೇ ಅವಮಾನವೆಂದು ಬಗೆದು ಜೈನ ಕರಣಿಕರೆಲ್ಲರೂ ಕೆಲಸಕ್ಕೆ ಹಾಜರಾಗದೆ ಮುಷ್ಕರ ಹೂಡುತ್ತಾರೆ. ಈ ಮುಷ್ಕರವನ್ನು ಬ್ರಾಹ್ಮಣ ಕರಣಿಕರ ಮೂಲಕ ಹೇಗೆ ಬಗೆಹರಿಸುತ್ತಾರೆ ಎಂಬುದು ಸುಂದರವಾಗಿ ನಿರೂಪಿತವಾಗಿದೆ. ರಾಷ್ಟ್ರದ ಸಂಸ್ಕೃತಿಯ ಬಗ್ಗೆ ಗೌರವವಿಲ್ಲದವರನ್ನು ಹೇಗೆ ನಡೆಸಿಕೊಳ್ಳಬೇಕೆಂಬುದು ಇಲ್ಲಿ ಚೆನ್ನಾಗಿ ವಿವರಿಸಲಾಗಿದೆ.

ಹಿಂದಿನ ಕಾಲದವರು "enjoy" ಮಾಡಲು ತಿಳಿಯದವರು ಎಂದು ಅಂದುಕೊಳ್ಳುವ ಜನರಿಗೆ ಹೇಗೆ ಆಗಿನ ಕಾಲದ ಉತ್ಸವಗಳು (ಧಾರ್ಮಿಕವಲ್ಲದ ಕೇವಲ ಲೌಕಿಕ ಉತ್ಸವಗಳು) ನಡೆಯುತ್ತಿದ್ದವು ಎಂಬುದನ್ನೂ ಶಾಸ್ತ್ರಿಗಳು ಸೊಗಸಾಗಿ ಬಣ್ಣಿಸಿದ್ದಾರೆ. ವಸಂತೋತ್ಸವಗಳು, ಕೌಮುದೀಜಾಗರ (ಬೆಳದಿಂಗಳಿನಲ್ಲಿ ಜಾಗರಣೆ) ಸುಂದರವಾಗಿ ವರ್ಣಿತವಾಗಿವೆ. ಅಲ್ಲಿ ನಡೆಯುವ ಸಹೃದಯ-ಸಮಾಗಮ ಪುನಃ ಪುನಃ ಸ್ಮರಣಯೋಗ್ಯ.

ರಾಜಕೀಯ ಪಿತೂರಿ ಹೇಗೆ ನಡೆಯುತ್ತಿತ್ತು, ಒಂದು ಮತದ ಜನರ ಮೇಲೆ ಮತ್ತೊಂದು ಮತದ ಜನರನ್ನು ಎತ್ತಿಕಟ್ಟುವುದು ಹೇಗೆ ಎಂಬ ಮೊದಲಾದ ಅಂಶಗಳು ಇಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ಕೊನೆಯಲ್ಲಿ ರುದ್ರಮದೇವಿಯು, ಅಲ್ಲ, ರುದ್ರದೇವಮಹಾರಾಜನು ವಿಜೃಂಭಿಸುತ್ತಾನೆ.

ರುದ್ರಮದೇವಿಯ ಪಾತ್ರವಂತೂ ಚೆನ್ನಾಗಿ ಮೂಡಿದ್ದಿರಲೇಬೇಕು. ತನ್ನ ಪತ್ನೀಧರ್ಮವನ್ನು ಪಾಲಿಸಲೆಳಸುತ್ತಾ, ರಾಜಧರ್ಮವನ್ನೂ, ಮಾತೃಧರ್ಮವನ್ನೂ ಹೇಗೆ ಪಾಲಿಸುತ್ತಳೆಂಬುದನ್ನು ಓದಿಯೇ ಕಾಣಬೇಕು. ಅಂತಃಪುರದಲ್ಲಿ ರುದ್ರಮದೇವಿಯಾಗಿ, ಬಾಹ್ಯದಲ್ಲಿ ರುದ್ರದೇವಮಹಾರಾಜನಾಗುವುದು ಹೇಗೆ ಒಬ್ಬ ವ್ಯಕ್ತಿಯಿಂದ ಸಾಧ್ಯವೆಂಬುದನ್ನು ಶಾಸ್ತ್ರಿಗಳು ಸಾಧಿಸಿ ತೋರಿಸಿದ್ದಾರೆ.

ಗೃಹಬಂಧನಕ್ಕೊಳಗಾದರೂ ರಾಜ್ಯದ ಬಗ್ಗೆ ಹೆಚ್ಚಿನ ಕಳಕಳಿಯನ್ನು ಹೊಂದಿದ ಬ್ರಾಹ್ಮಣ-ಮಂತ್ರಿ ಅನ್ನಯ, ರುದ್ರಮದೇವಿಯ ಸಾಕುಮಗಳಾದ ಬ್ರಾಹ್ಮಣಕನ್ಯೆ - ರುಯ್ಯಮ್ಮ, ಆಂಧ್ರಮಹಾಭಾರತದ ನಿರ್ಮಾಣಮಾಡಿದ ತಿಕ್ಕನಾಮಾತ್ಯ, ಬಲಿಷ್ಠರಾದ ಪರಸ್ಪರ ಶತ್ರುಗಳಾಗಿ ನಂತರ ಪುನಃ ಮಿತ್ರರಾಗುವ ಬೊಲ್ಲ-ಗೊಂಡರು, ವಿಲಕ್ಷಣವಾದ ಯತಿಯ ರೂಪದಲ್ಲಿ ಬಂದ ಗೂಢಚಾರಿ - ಇವರೇ ಮೊದಲಾದವರು ಸ್ಮರಣೀಯ ಪಾತ್ರಗಳು.

ಭಾರತೀಯ ಸಂಸ್ಕೃತಿಯು ಕಾದಂಬರಿಯಲ್ಲೆಲ್ಲಾ ಹಾಸುಹೊಕ್ಕಾಗಿದೆ. ಸಂಸ್ಕೃತಿಪ್ರೇಮಿಗಳಿಗೆ, ಸಾಹಿತ್ಯಪ್ರೇಮಿಗಳಿಗೆ, ಕಲೋಪಾಸಕರಿಗೆ, ಇತಿಹಾಸಪ್ರಿಯರಿಗೆ ಈ ನವರಸಭರಿತ-ಗದ್ಯಕಾವ್ಯ ಮಹೋತ್ಸವಪ್ರಾಯವಾಗಿರುವಂತಹುದು. ಆಂಧ್ರರಾಜವೈಭೋಗ ಹೇಗಿತ್ತೆಂಬುದು ತಿಳಿಯಲಿಚ್ಛಿಸುವರು ಈ ಕಾದಂಬರಿಯನ್ನು ಓದಲೇಬೇಕು. ಕನ್ನಡಿಗರಾಗಲಿ, ಆಂಧ್ರರಾಗಲಿ, ಮೂಲತಃ ಭಾರತೀಯರು; ಸನಾತನ ಧರ್ಮ ಭಾರತದ ಜೀವಾಳವೆಂಬುದನ್ನು ಮರೆಯಬಾರದು. ಅದು ಹೇಗೆ ಸಾಧ್ಯವಾಗಿತ್ತೆಂದು ತಿಳಿಯಲು ಈ ಗ್ರಂಥವನ್ನೋದಬೇಕು.

ಕನ್ನಡದಲ್ಲಿ ಕೆಲವು ಐತಿಹಾಸಿಕ ಕಾದಂಬರಿಗಳನ್ನು ಓದಿದ್ದೇನೆ - ದುರ್ಗಾಸ್ತಮಾನವನ್ನೂ ಸಹ. ಆದರೆ ದುರ್ಗಾಸ್ತಮಾನ ಮೊದಲಾದ ಕಾದಂಬರಿಗಳಲ್ಲಿ ವೀರರಸಪ್ರಾಧಾನ್ಯವಿರುವುದು. ಆದರೆ ಈ ರೀತಿಯ ಯುದ್ಧ-ರಾಜ್ಯಶಾಸ್ತ್ರ-ಕಲಾ-ಸಾಹಿತ್ಯ-ನೃತ್ಯ-ಶಾಸ್ತ್ರಗಳೆಲ್ಲದರ ಮೇಲನ, ನವರಸಭರಿತವಾದಂತಹ ಗದ್ಯಕಾವ್ಯವನ್ನು ಇದೇ ಮೊದಲು ಓದಿದ್ದು.

ಈ ಕಾದಂಬರಿಯು ಸಾಹಿತ್ಯ ಅಕಾಡೆಮಿಯಿಂದ ಪ್ರಕಾಶಿತವಾಗಿದೆ. ಇದು ಎಲ್ಲಿ ದೊರೆಯುವುದೋ ತಿಳಿಯದು - ಆದರೆ ಯಾರಾದರೂ ಕೇಳಿದರೆ ಹುಡುಕಿ ತಿಳಿಸಬಲ್ಲೆ.

|| ಇತಿ ಶಮ್ ||

Tuesday, May 16, 2006

Jacques Futrelle and his wonderful Prof Van Dusen

I just discovered a wonderful author of about a hundred years ago. His name is Jacques Futrelle and I came across him via another very interesting resource - Scienceblogs.

One of his most famous stories - The problem of Cell 13 - can be found here. Just as Arthur Conan Doyle had his Sherlock Holmes, Jacques Futrelle had his Van Dusen. Professor Augustus S F X Van Dusen is quite an interesting and intriguing character. Seems to rank up there with Holmes - but I will reserve judgement for now as I have just read one story. But an amazing story, nonetheless.

Interestingly but unfortunately, Jacques Futrelle was one of those who died on the Titanic. His wife, however, survived.

Thanks to Jason Rosenhouse of EvolutionBlog (or is it the other way around?) for pointing me towards a set of great stories.

And by the way, all of Jacques Futrelle's stories can be found online.

Though we take the Internet and the WWW for granted now, I can't but feel grateful for the wealth of information and knowledge I have, literally, at my fingertips. Though Newton made the now famous "Standing on the shoulders of giants" comment to belittle poor Robert Hooke, all of us now can say gratefully that whatever little we see, we do so by standing on the shoulders of giants.

Monday, May 08, 2006

ತಮಿಳು ತಲೆಗಳ ನಡುವೆ

ಮೊನ್ನೆ ಬೆಂಗಳೂರಿನ ಸಪ್ನಾ ಪುಸ್ತಕ ಭಂಡಾರಕ್ಕೆ ಹೋಗಿದ್ದೆ. ನನಗೆ (ನಮ್ಮ ಮನೆಯ ಎಲ್ಲರಿಗೂ ಸಹ) ಯಾವುದೇ ಸಮಾರಂಭವಾಗಲಿ, ಆದಷ್ಟು ಪುಸ್ತಕಗಳನ್ನೇ ಕೊಡಬೇಕೆನ್ನುವ ಪರಿಪಾಟ (ಮತ್ತೊಮ್ಮೆ - "ಪರಿಪಾಠ" ತಪ್ಪು ಪ್ರಯೋಗ). ಸರಿ, ಜೊತೆಗೆ ಹೊಸ "book mall" ಉದ್ಘಾಟನೆಯ ಬಗ್ಗೆ ವಾರ್ತಾಪತಿಕೆಗಳಲ್ಲಿ ಸಮಾಚಾರ ಮೂಡಿತ್ತು. ಸರಿಯೇ ನೋಡಿಬಿಡೋಣವೆಂದು ಹೋದೆ. ಅಲ್ಲಿ ಎರಡನೆ ಅಂತಸ್ತಿನಲ್ಲಿ ಕನ್ನಡ ಪುಸ್ತಕಗಳ ವಿಭಾಗವನ್ನು ಇಟ್ಟಿದ್ದಾರೆ. ಈ ಅಂಗಡಿಯ ವೈಶಿಷ್ಟ್ಯವೆಂದರೆ ಕನ್ನಡ ಪುಸ್ತಕಗಳು. ಆಂಗ್ಲಪುಸ್ತಕಗಳ ಅಂಗಡಿಗಳು ಬೆಂಗಳೂರಿನಲ್ಲಿ ಬೇರೆಯವೂ ಇವೆ. ಆದರೆ ಬಹಳಕಡೆಗಳಿಂದ ಕನ್ನಡಪುಸ್ತಕಗಳನ್ನು ಒಂದೆಡೆ ಸೇರಿಸಿರುವುದು ಸಪ್ನಾ ದಲ್ಲಿ. ಇದರ ಜೊತೆ ಶೇಖಡಾ ಹತ್ತರ ರಿಯಾಯ್ತಿ. ಕೊಳ್ಳದಿರಲು ಹೇಗೆ ಸಾಧ್ಯ? ಅಂದ ಹಾಗೆ ಗಾಂಧಿಬಜಾರಿನ ಅಂಕಿತ ಪುಸ್ತಕಾಲಯವೂ ಒಳ್ಳೆಯ ಪುಸ್ತಕಗಳಿಂದ ಕೂಡಿದೆ.

ಅದಿರಲಿ. ಬೇರೆಯವರಿಗೆ ಪುಸ್ತಕ ಕೊಳ್ಳಲು ಹೋದ ನನಗೆ ಒಂದೆರಡು ಪುಸ್ತಕಗಳು ಬೇಡವೇ? ಸರಿ ಹುಡುಕುತ್ತಿದ್ದೆ. ಬಹಳ ದಿನಗಳಿಂದ ಓದಬೇಕೆಂದುಕೊಂಡಿದ್ದ ಪುಸ್ತಕಗಳು ಡಾ|| ಬಿ.ಜಿ.ಎಲ್ ಸ್ವಾಮಿಯವರವು. ಅವರ "ಹಸುರು ಹೊನ್ನು" ಮತ್ತು "ತಮಿಳು ತಲೆಗಳ ನಡುವೆ" ಕೊಂಡೆ. "ಪಂಚಕಲಶಗೋಪುರ"ವೆಂಬ ಅವರ ಪುಸ್ತಕವನ್ನು ಎರವಲು ಪಡೆದು ಒಂದೆರಡು ಭಾಗ ಓದಿದ್ದೆ. ಸ್ವಾಮಿಯವರ ಶೈಲಿ ತಿಳಿಹಾಸ್ಯದಿಂದ ಕೂಡಿದೆ. ತಿಳಿ ಮಾತ್ರ ಅಲ್ಲ - ಹಾಸ್ಯದಲ್ಲಿ ಸಿಹಿ, ಕಹಿ, ಖಾರ, ಹುಳಿ ಇವೆಲ್ಲ ರಸಗಳನ್ನು ಇವರು ಚೆನ್ನಾಗಿ ಸೇರಿಸಿದ್ದಾರೆ. ಆದ್ದರಿಂದ ಇವರ ಪುಸ್ತಕವನ್ನು ಓದಲು ಇಷ್ಟ. ಜೊತೆಗೆ ಡಿವಿಜಿಯವರ ಮಗ ಬೇರೆ. ತಂದೆ ಮಕ್ಕಳು ಒಂದೇ ಅಲ್ಲದಿದ್ದರೂ ಅವರ ಮಧ್ಯೆ ಇರುವ ವ್ಯತ್ಯಾಸವನ್ನಾದರೂ ನೋಡಬೇಕಲ್ಲಾ ಎಂಬ ಕುತೂಹಲ. ಇನ್ನೂ ಒಂದು ಆಶ್ಚರ್ಯಕರ ಸಂಗತಿಯೆಂದರೆ ಕೇಂದ್ರ ಸಾಹಿತ್ಯ ಪ್ರಶಸ್ತಿಯನ್ನು ಪಡೆದ ಮೊದಲನೆಯ ತಂದೆ-ಮಕ್ಕಳ ಜೋಡಿಯೆಂದರೆ ಡಿವಿಜಿ-ಬಿಜಿಎಲ್ ಅವರದು. ಹಸುರು-ಹೊನ್ನು ಎಂಬ ಇವರ ಪುಸ್ತಕಕ್ಕೆ ಸಂದ ಗೌರವ. ಅದನ್ನು ಮನಗೆ ಹೋದ ತಕ್ಷಣ ನನ್ನ ಪತ್ನಿ ನನ್ನಿಂದ ಕಿತ್ತುಕೊಂಡಳು. ಸರಿ ನನಗಿದ್ದದ್ದು "ತಮಿಳು ತಲೆಗಳ ನಡುವೆ" ಎಂಬುದು.

ಬಿ.ಜಿ.ಎಲ್ ಅವರು (ಇನ್ನು ಮುಂದೆ ಸ್ವಾಮಿಯವರು ಅಥವಾ ಬಿಜಿಎಲ್ ಅನ್ನುತ್ತೇನೆ) ಮದರಾಸಿನಲ್ಲಿ ಪ್ರೆಸಿಡೆನ್ಸಿ ಮಹಾವಿದ್ಯಾಲಯದಲ್ಲಿ ಬಾಟನಿಯ ಪ್ರಾಧ್ಯಾಪಕರಾಗಿ ಕೆಲವು ದಶಕಗಳ ಸೇವೆ ಸಲ್ಲಿಸಿದ್ದರು. ಅಲ್ಲಿ ನಡೆದ ಅವರ ತಮಿಳಿಗರೊಡನೆಯ ತಮಿಳಿನ ಬಗ್ಗೆಯಾದ ಅನುಭವದ ಸಂಗ್ರಹವೇ "ತಮಿಳು ತಲೆಗಳ ನಡುವೆ". ಸ್ವಾಮಿಯವರ ಮನೆ ಮಾತು ತಮಿಳು. ಆದರೂ ತಮ್ಮನ್ನು ತಾವು ಕನ್ನಡಿಗರೆಂದು ಕಂಡುಕೊಳ್ಳುತ್ತಿದ್ದರು. ಇದರೊಡನೆ ಅಪ್ಪಟ ವೈಜ್ಞಾನಿಕ ಮನೋಭಾವನೆ ಇವರದು. ಜೊತೆಗೆ ತಮಿಳಿನ ಬಗ್ಗೆ ಸಹಜವಾಗಿ ಮೂಡಿದ ಕುತೂಹಲ.

ಸರಿ ಪುಸ್ತಕಕ್ಕೆ ಬರೋಣ. ತಮಿಳು ಸಾಹಿತ್ಯವನ್ನು ಸ್ವಾಮಿಯವರು ಚೆನ್ನಾಗಿ ಅಭ್ಯಾಸ ಮಾಡಿದ್ದರೆಂದು ತೋರುತ್ತದೆ. ಮೊದಲಿಗೆ ತಮಿಳಿನ "ಚಂಗ" (ಸಂಘ) ಕಾವ್ಯಗಳ ಕಾಲದ ಹಾಸ್ಯಲೇಪಿತ ಪರಿಚಯವಾಗುತ್ತದೆ.
"ತಮಿಳು ಸಂಸ್ಕೃತಕ್ಕಿಂತಲೂ ಹಳೆಯದು. ಬೇರೆ ದ್ರಾವಿಡ ಭಾಷೆಗಳಾದ ಕನ್ನಡ, ಮಲೆಯಾಳ, ತೆಲುಗುಗಳ ತಾಯಿಸ್ಥಾನದಲ್ಲಿ ನಿಲ್ಲಲು ತಕ್ಕದ್ದು. ಈ ಭಾಷೆಯ ಸಾಹಿತ್ಯ ಕ್ರಿ.ಪೂ. ೨ ನೆಯ ಶತಮಾನಕ್ಕಿಂತ ಹಳೆಯದು. ವಾಸ್ತವವಾಗಿ ಇನ್ನೂ ಹಳೆಯದು - ಆದರೆ ಬೇರೆ ಭಾಷೆಯವರು ನಾಚಿಕೆಯಿಂದ ತಲೆತಗ್ಗಿಸಬಾರದೆಂಬ ಒಂದೇ ಕಾರಣದಿಂದ ಎರಡನೆಯ ಶತಮಾನಕ್ಕೇ ನಿಲ್ಲಿಸಿದ್ದಾರೆ."
ಇದು ತಮಿಳರ ತಮ್ಮ ಭಾಷೆಯ ಬಗೆಗಿನ ವಿಚಾರದ ಒಂದು ಸ್ಥೂಲ ನಿರೂಪಣೆ. ತಮಿಳರ ಅತಿರೇಕಗಳನ್ನು ಪುಸ್ತಕದ ಸುಮಾರು ಇನ್ನೂರು ಪುಟಗಳವರೆಗೂ ಸ್ವಾಮಿಯವರು ವರ್ಣಿಸಿದ್ದಾರೆ. ಎಷ್ಟು ಹಾಸ್ಯ ತುಂಬಿದೆಯೆಂದರೆ ನನಗಂತೂ ನಕ್ಕು ನಕ್ಕು ಹೊಟ್ಟೆ ನೋವು ಬಂದಿತು (ಇದು ತೀರಾ ಸಾಮಾನ್ಯದ ಕ್ಲೀಷೆಯಾದರೂ ಈ ಪುಸ್ತಕಕ್ಕೆ ಸರಿಯಾಗಿ ಹೊಂದುತ್ತದೆ). ಪಾಪ, ಅವರು ಅನುಭವಿಸಿದ ಅನನುಕೂಲಗಳು ಮತ್ತು ಯಾತನೆಗಳನ್ನು ನೆನೆಸಿಕೊಂಡರೆ ಅಯ್ಯೋ ಎನ್ನಿಸದೇ ಇರುವುದಿಲ್ಲ.

ಹಾಸ್ಯದ ಜೊತೆಗೆ ತಮಿಳು ಸಾಹಿತ್ಯ ಮತ್ತು ಅದರ ಬಗೆಗಿನ ಸಂಶೋಧನೆಯ ಬಗ್ಗೆ ಒಂದು ಸ್ಥೂಲ ಪರಿಚಯ ಈ ಪುಸ್ತಕದಿಂದ ದೊರೆಯುತ್ತದೆ. ಚಂಗ ಸಾಹಿತ್ಯದ ವಿಂಗಡಣೆಯ ಬಗೆ. ಶಿಲಪ್ಪದಿಕಾರಂ ನ ಸ್ಥಾನ. ತಮಿಳರ ಲೆಮ್ಯೂರಿಯಾ ಅಥವಾ ಕುಮಾರಿಖಂಡದ ದಂತಕಥೆಯ ನಿರೂಪಣೆ. ತಮಿಳರಿಗೆ ತಮ್ಮ ಭಾಷೆಯ ಬಗ್ಗೆ ಇರುವ ಅತಿಯಾದ ಪ್ರೇಮ. "ತಮಿಳ್ ಇಸೈ" (ತಮಿಳು ಸಂಗೀತ)ನ ಬಗ್ಗೆ ಒಂದಷ್ಟು ಮಾಹಿತಿ. ತಮಿಳನ್ನು ಬಿಟ್ಟು ಬೇರೇನೂ ಬೇಡ ಅನ್ನುವ ವೀರತಮಿಳರ ಹಠ. ಅಲ್ಲಿನ ರಾಜ್ಯ ಸರ್ಕಾರ ತಮಿಳಿನ ಬಗ್ಗೆ ತೋರುವ ಒಲವು - ಗ್ರಂಥಗಳನ್ನು ಬದಲಾಯಿಸಿ ಸಂಶೋಧನೆಯ ದಿಕ್ಕನ್ನು ತಿರುಗಿಸುವ ಪ್ರಯತ್ನ. ತಿರುಕ್ಕುರಲಿನ ಬಗ್ಗೆಯ ಸಂಶೋಧನೆ. ತಮಿಳು ಹೇಗೆ ಬೇರೆ ದ್ರಾವಿಡ ಭಾಷೆಗಳ ಸಮವೇ ಆಗಿದೆ (ತಮಿಳೇತರ ಸಂಶೋಧಕರ ಪ್ರಕಾರ) ಎಂಬ ವಿಚಾರ. ಶೈಕ್ಷಣಿಕ ಕ್ಷೇತ್ರದಲ್ಲಿ ಹೇಗೆ ತಮಿಳನ್ನು ಕ್ರಮವಾಗಿ ತಂದು "ಆರ್ಯ" ಮತ್ತು "ಬ್ರಾಹ್ಮಣ" ಧರ್ಮಗಳ ಬಗ್ಗೆ ತಪ್ಪು ವಿಚಾರವನ್ನು ಹರಡುತಿದ್ದಾರೆಂಬುದರ ಬಗ್ಗೆ. ತಮಿಳೇತರ ಕ್ಷೇತ್ರಗಳಲ್ಲಿಯೂ ತಮಿಳು ಸಂಸ್ಕೃತಿಯನ್ನು ಬಿಡಬಾರದೆಂಬುದರ ಬಗ್ಗೆ ಸರ್ಕಾರದ ಕಟ್ಟಾಜ್ಞೆಯ ಬಗ್ಗೆ. ಹೇಗೆ ಚರ್ವಿತಚರ್ವಣವಾಗಿರುವ ವಿಷಯಗಳನ್ನೇ ಆಧರಿಸಿ ಇಂದಿಗೂ ವಿದ್ಯಾರ್ಥಿಗಳು ಪಿ.ಎಚ್.ಡಿಯನ್ನು ಪಡೆಯುತ್ತಾರೆಂಬುದರ ಬಗ್ಗೆ. ಇವೆಲ್ಲದರ ಮಧ್ಯೆ ಸರಿಯಾದ ರೀತಿಯಲ್ಲಿ ಸಂಶೋಧನೆ ನಡೆದಿಲ್ಲವಲ್ಲಾ ಎಂಬ ಸ್ವಾಮಿಯರ ಅವ್ಯಕ್ತ ಖೇದ. ಇವೇ ಮೊದಲಾದ ಸಂಗತಿಗಳನ್ನು ಈ ಪುಸ್ತಕ ಹೊಂದಿದೆ.

ಹೀಗೆ ನೋಡಿದಾಗ ಮೊದಲು ನನಗನ್ನಿಸಿದ್ದು - ನಾನು ಕನ್ನಡಿಗನಾಗಿ ಹುಟ್ಟಿದ್ದು ನನ್ನ ಪುಣ್ಯವೆಂದು. ನಮಗೆ ಕಣ್ಣು ಕಾಣುವುದೇ ಸ್ವಲ್ಪವಾಗಿದ್ದಾಗ ಅದರ ಮೇಲೆ ಮತಾಂಧತೆ, ಭಾಷಾಂಧತೆ ಮುಂತಾದ ಅಂಧತೆಗಳೂ ಸೇರಿದರೆ ಲೋಕವೇ ಕಾಣದೆ ಹೋಗುವುದಿಲ್ಲವೇ? ಕನ್ನಡಿಗರು ನಿರಭಿಮಾನಿಗಳು ಎಂದು ಹಿಂದೆ ಈ ಬ್ಲಾಗಿನಲ್ಲಿಯೇ ಬರೆದಿದ್ದೇನೆ. ಆದರೆ ತಮಿಳರ ಈ ರೀತಿಯ ಸತ್ಯದ ತಲೆಯ ಮೇಲೆ ಹೊಡೆದ ಹಾಗಿರುವ ಬರೇ ಸುಳ್ಳಿನ ಅಡಿಪಾಯದ ಮೇಲೆ ನಿಂತಿರುವ ದುರಭಿಮಾನ ನಮಗೆಂದಿಗೂ ಬರುವುದಿಲ್ಲವೆಂದು ಹೆಮ್ಮ ಕೂಡ ಆಯ್ತು. ಇದ್ದದ್ದನ್ನು ಇದ್ದ ಹಾಗೆ ಹೇಳಿದರೂ ಕನ್ನಡಿಗರ ಸಮಯಪ್ರಜ್ಞೆ ಮತ್ತು ಮನೋವೈಶಾಲ್ಯ ನಮ್ಮನ್ನು ಕಾಪಾಡುತ್ತದೆ ಎಂದು ಅನ್ನಿಸಿತು. ಇದರ ಬಗ್ಗೆ ಒಂದು ಸಂಗತಿಯನ್ನು ಸ್ವಾಮಿ ನಿರೂಪಿಸುತ್ತಾರೆ. ಒಮ್ಮೆ ಬೀ.ಎಂ.ಶ್ರೀಕಂಠಯ್ಯನವರು ತಮಿಳಿನ ಬಗ್ಗೆ ಭಾವೋದ್ವೇಗಕ್ಕೆ ಒಳಗಾಗಿ "ಕನ್ನಡದಲ್ಲೇನಿದೆ ಮಣ್ಣು" ಅನ್ನುವ ಹಾಗೆ ಹೇಳಿದರು. ಇದನ್ನು ಕೇಳಿದ್ದ ಸಭಿಕರೆಲ್ಲರೂ ಕನ್ನಡಿಗರೇ. ಆದರೆ ಯಾವ ಸಂದರ್ಭದಲ್ಲಿ ಶ್ರೀಕಂಠಯ್ಯನವರು ಹೀಗೆ ಮಾತನಾಡಿದರು ಎಂದು ತಿಳಿದಿದ್ದರು. ಅದಕ್ಕೆ ಸಭೆಯಲ್ಲಿ ನಡೆದ ಅಚಾತುರ್ಯವೆಂದರೆ ಶ್ರೀಯವರ ಆರ್ಭಟ ಮಾತ್ರ. ಕನ್ನಡಿಗರದು ನಿರಭಿಮಾನವೆಂದು ಹೇಳಬಹುದು. ಆದರೆ ತಮಿಳರ ದುರಭಿಮಾನವನ್ನು ತಿಳಿಯಲು ಈ ಪುಸ್ತಕವನ್ನೋದಿ. ನಿಮಗೇ ಅನ್ನಿಸುತ್ತದೆ - ನಮ್ಮದು ಹಾಗಾಗುವುದೇ ಬೇಡಪ್ಪಾ ಎಂದು!

ತಮಿಳಿನ ಪ್ರಚಾರದ ಬಗ್ಗೆ ಈ ಪುಸ್ತಕದಲ್ಲಿ ಓದಿದಾಗ ನನಗೆ ಕಮ್ಯೂನಿಸ್ಟ್ ರಷ್ಯಾ, ಚೈನಾ ಮತ್ತು ತಾಲಿಬಾನ್ ಗಳ ನೆನಪಾಯ್ತು. ಕಮ್ಯೂನಿಷ್ಟರು ತಮ್ಮ ಸಿದ್ಧಾಂತಕ್ಕೆ ಎಂದೂ ಕುಂದು ಬರಬಾರದೆಂದು ಹಾರಾಡಿದ್ದವರು. ಸಿದ್ಧಾಂತಕ್ಕೆ ವಿರುದ್ಧ ಬರೆದವರನ್ನು ಸೆರೆಮನೆಗೆ ತಳ್ಳಿದವರು. ತಮ್ಮದು ಎಷ್ಟೇ ತಪ್ಪಿದ್ದರೂ ಒಪ್ಪದಿರುವ ಭಂಡರು. ಕಟ್ಟಾ ಇಸ್ಲಾಮಿಗಳ ಕಥೆಯೂ ಅದೆ. ಮೊನ್ನೆ ಆದ ಪ್ರವಾದಿ ಮಹಮ್ಮದರ ಕಾರ್ಟೂನಿನ ರಾದ್ಧಾಂತ ನಮಗೆ ತಿಳಿಯದೇ? ಇದಕ್ಕೇನೂ ಕಡಿಮೆಯಿಲ್ಲದ್ದು ತಮಿಳರ ಭಾಷಾಪ್ರೇಮ.

ವೀರತಮಿಳರ ವಿಚಾರಲಹರಿಯನ್ನವಲಂಬಿಸದೆ ಬೇರೆಯ ವಿಚಾರವನ್ನು ಬರೆದ ಗೋವಿಂದನ್ ಎಂಬವರ ಪುಸ್ತಕವನ್ನು ಕೊಳ್ಳಬಾರದೆಂಬ ಆಗ್ರಹ ಮಾಡಿದರು ತಮಿಳು ವಾದ್ಯಾರರು. ಒಬ್ಬಿಬ್ಬರು "ತಮಿಳುನಾಡಿನಲ್ಲಿ ಕಾಲಿಟ್ಟೀಯೆ ಜೋಕೆ" ಎಂದು ಪತ್ರಗಳನ್ನೂ ಬರೆದರು. ತಮ್ಮ ಭಾಷೆಯ ಬಗ್ಗೆ (ಅದು ಭಾಷೆಯ ಬಗ್ಗೆಯೂ ಅಲ್ಲ - ಅದರ ಕಾಲದ ಬಗ್ಗೆ) ಐನೂರು ವರ್ಷ ಈಚಿನದು ಎಂದು ಬರೆದವರನ್ನು ಖಂಡಿಸಲು - ಚಿಂಬೋಚಿಯಮ್ (symposium) ಗಳನ್ನು ಏರ್ಪಡಿಸಿ ಖಂಡನೆಯ ಠರಾವುಗಳನ್ನು ಹೊರಡಿಸುವ ರೀತಿ ಇವರದು - ಅದೂ ಪುಸ್ತಕವನ್ನು ಅಥವಾ ಲೇಖನವನ್ನು ಓದದೆಯೇ!! ಹಳೆಯದ್ದಾದಷ್ಟೂ ಒಳ್ಳೆಯದು ಎಂಬುದು ಇವರ ನಂಬಿಕೆ. ಕಾಲಿದಾಸನ "ಪುರಾಣಮಿತ್ಯೇವ ನ ಸಾಧು ಸರ್ವಮ್" ಎಂಬ ಕಿವಿಮಾತು ಬೇರೆ ಭಾಷೆಗಳ ಬಗ್ಗೆ ಹತ್ತಿಯನ್ನು ತುಂಬಿಕೊಂಡ ಕಿವಿಗಳನ್ನುಳ್ಳ ಈ ತಮಿಳರ ಕಿವಿಯನ್ನು ಹೇಗೆ ತಾನೆ ಸೇರೀತು? ಋಗ್ವೇದವನ್ನು ಓದುವಷ್ಟು ಸಂಸ್ಕೃತ ತಿಳಿಯದ "ವಿದ್ವಾ(ಧ್ವ?)೦ಸ"ನ ಅಂಬೋಣ ಏನು ಗೊತ್ತೇ ? ಋಗ್ವೇದವು ತಮಿಳರು ರಚಿಸಿದ ಪಂಚಾಂಗವಂತೆ!! ಇದನ್ನು ನಂಬುವ ಜನರೂ ಇದ್ದಾರಲ್ಲ!

ಈಗಿನ ಕಾಲಕ್ಕೆ ಬಂದಾಗ ತಮಿಳಿಗೆ ಶಾಸ್ತ್ರೀಯ ಸ್ಥಾನದ ಬಗ್ಗೆ ನಡೆದ ತಕರಾರು ನೆನಪಿಗೆ ಬರಬಹುದು. ಅವೆಲ್ಲಕ್ಕೂ ಸ್ಫೂರ್ತಿ ಇವರಿಗೆ ಎಲ್ಲಿಂದ ದೊರೆಯಿತು ಎಂದು ನೋಡಲು ಈ ಪುಸ್ತಕವನ್ನು ಓದಿಯೇ ಓದಬೇಕು.

ಭಾಷೆಯ ಬಗ್ಗೆಯ ಈ ದುರಭಿಮಾನ ಅತಿರೇಕಕ್ಕೆ ಹೋಗಿ ಅಪಾಯಕ್ಕೆ ಕಾರಣವಾಗಬಹುದು. "ತಮಿಳರು ಭಾರತದಾದ್ಯಂತ ಇದ್ದ ಆದಿವಾಸಿಗಳು. ಇವರನ್ನು ದಕ್ಷಿಣಕ್ಕೆ ಓಡಿಸಿದ್ದು ಬೇರೆಯ ಕಡೆಯಿಂದ ಬಂದ ಆರ್ಯರು" ಎಂಬ ಕಟ್ಟುಕತೆಯನ್ನು ಪರಮಸತ್ಯವೆಂದು ತಮಿಳುನಾಡಿನಲ್ಲಿ ಇಂದಿಗೂ ಪಾಠಹೇಳುತ್ತಾರಂತೆ. ಕಲಪ್ಪಿರರು (ಕಳಭ್ರರು) ಎಂಬ ಆರ್ಯ ರಾಜರು ಹೇಗೆ ತಮಿಳನ್ನು ತುಳಿದು ಹಾಳುಗೆಡವಿದರು ಎಂದೆಲ್ಲ ಇಲ್ಲಸಲ್ಲದ್ದು ಹೇಳಿ ಮಕ್ಕಳ ಮನಸ್ಸಿನಲ್ಲಿ ಬೇರೆ ಸಂಸ್ಕೃತಿಗಳ ಬಗ್ಗೆ ವಿಷದ ಬೀಜ ಬಿತ್ತುವ ಇವರ ದುರ್ಬುದ್ಧಿಗೂ, ಮದರಸಾಗಳಲ್ಲಿ ನಡೆಯುವ ಕ್ರಮವಾದ brainwashಗೂ ಏನು ವ್ಯತ್ಯಾಸ? ಎರಡೂ ಕಡೆ ಹಗೆಯೇ! ಎರಡು ಕಡೆ "ನಮ್ಮನ್ನು ಇನ್ನೊಬ್ಬರು ಹಾಳು ಮಾಡಿದರು. ನಮ್ಮ ಈ ದುಃಸ್ಥಿತಿಗೆ ಕಾರಣರು ಬೇರೆಯವರು" ಎಂಬ ಮಹಾ ಅಪಾಯಕಾರಿ ವಿಷ ತುಂಬುತ್ತಿದ್ದಾರೆ. ಎರಡೂ ಕಡೆ ಇದಕ್ಕೆ ಸರ್ಕಾರ ಕುಮ್ಮಕ್ಕು ಕೊಟ್ಟಿದೆ. ಇದು ರಾಜಕೀಯವ್ಯಕ್ತಿಗಳಿಗೆ ಸುಗ್ಗಿಯ ಹಾಗೆ. ತಮಗೆ ತೋಚಿದಾಗ ತಮಗೆ ತೋಚಿದ ರೀತಿಯಲ್ಲಿ ವಿಷಯವನ್ನು ಅಡ್ಡಾದಿಡ್ದಿ ಎಳೆದು ಲಾಭಮಾಡಿಕೊಳ್ಳುವುದರಲ್ಲಿ ನಿಸ್ಸೀಮರಲ್ಲವೇ ಇವರು?
ಒಟ್ಟಿನಲ್ಲಿ ಈ ಪುಸ್ತಕದಿಂದ ಮನೋರಂಜನೆಯ ಜೊತೆಗೆ ನನಗೆ ದೊರೆತ ದೊಡ್ಡ ಪಾಠವೆಂದರೆ - ಮನಸ್ಸು-ಬುದ್ಧಿಗಳನ್ನು ಆದಷ್ಟೂ ಮುಕ್ತವಾಗಿ (open) ಇಡಬೇಕೆಂಬುದು. ಅದಿಲ್ಲದಿದ್ದರೆ ಏನಾಗುವುದೆಂದು ತಿಳಿಯಲು ಈ ಪುಸ್ತಕವನ್ನೋದಿ.

|| ಇತಿ ಶಮ್ ||

Tuesday, April 25, 2006

ನಾನು ಕಾಣದ (ಆದರೂ ಚರಿತ್ರೆಯಲ್ಲಿ, ಪುಸ್ತಕಗಳಲ್ಲಿ ಕಂಡ) ದೆಹಲಿ

outlookindia.com, more than just the news magazine from India
Mean Streets... All HQ, No IQ : outlookindia.com

ಮೇಲಿನ ಕೊಂಡಿಯನ್ನು ಅನುಸರಿಸಿದರೆ ಅಂಜಲಿ ಪುರಿ ಎಂಬಾಕೆ ದೆಹಲಿಯ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ಮೂಡಿಸುವ ಲೇಖನ ಕಾಣುತ್ತದೆ.

ಮೊದಲು ಒಂದು ಸಂಗತಿಯನ್ನು ಹೇಳಲೇಬೇಕು. ನಾನು ದೆಹಲಿಯನ್ನು ಪ್ರತ್ಯಕ್ಷವಾಗಿ ನೋಡೇ ಇಲ್ಲ. ಆದರೆ ಇವರು ಬರೆದ ಲೇಖನವನ್ನೋದಿದಾಗ ದೆಹಲಿಯ ಬಗ್ಗೆ ನನಗನ್ನಿಸಿದ ಅನಿಸಿಕೆಗಳೇ ಪ್ರತಿಧ್ವನಿಸಿದವು. ನಾನು ಓದಿರುವ, ಕಂಡಿರುವ ಸಂಗತಿಗಳ ದೆಸೆಯಿಂದ ಅನುಮಾನ(inference)-ಪೂರ್ವಕವಾಗಿ ಬರೆದದ್ದು ಇದು. ದೆಹಲಿಯ ಪ್ರೇಮಿಗಳ ಮನಸ್ಸನ್ನು ನೋಯಿಸಬೇಕೆಂದಲ್ಲ. ಅಂಥವರಿಗೆ ಈಗಲೇ ಹೇಳುತ್ತೇನೆ- ಮುಂದೆ ಓದಬೇಡಿ. ಓದಿದ ಮೇಲೆ ನನ್ನನ್ನು ದೂರಬೇಡಿ. ಎಚ್ಚರಿಸಿದ್ದೇನೆ, ಜಾಗ್ರತೆ!

ಈ ಲೇಖನವು ಒತ್ತಿ ಒತ್ತಿ ಹೇಳುವುದು - "ದೆಹಲಿಯು ಒಡ್ಡರ, ಅಸಂಸ್ಕೃತರ, ಕಾಳಜಿಯಿಲ್ಲದ ಜನಗಳ ನಗರ"ವೆಂದು. ನನ್ನ ಮನಸ್ಸು ಬುದ್ಧಿಗಳೂ ಈ ವಿಚಾರವನ್ನು ಅನುಮೋದಿಸುತ್ತವೆ.

ಔಟ್-ಲುಕ್ ನಂಥ ಪತ್ರಿಕೆಗಳಲ್ಲಿ ಯಾವಾಗಲೂ ಕಾಣುವ ಸಂಗತಿ ಸ್ತ್ರೀಯರ ಮೇಲಿನ ಅತ್ಯಾಚಾರ ಅತಿ ಹೆಚ್ಚಿರುವ ನಗರವೆಂದರೆ ದೆಹಲಿಯೆಂದೇ. ಮೇಲಿನ ಬರಹವು ಅಂಕಿ ಅಂಶಗಳೊಂದಿಗೆ ಯಾವ ಯಾವ ವಿಷಯಗಳಲ್ಲಿ ದೆಹಲಿ ಒಂದು ಕೆಟ್ಟ ನಗರವೆಂದು ತೋರಿಸಿದೆ. ರಸ್ತೆ ಕಟ್ಟಡಗಳು ದೆಹಲಿಯಲ್ಲಿ ಚೆನ್ನಾಗಿಯೇ ಇವೆ ಎಂದು ಹೇಳಲೇಬೇಕು, ಬಹಳ ಜನ ಇದನ್ನು ಒಪ್ಪುತ್ತಾರೆ ಕೂಡ. ಆದರೆ ನಗರ ಎಂದರೆ ಬರೇ ರಸ್ತೆ ಕಟ್ಟಡಗಳಲ್ಲ ತಾನೆ? ಒಂದು ನಗರಕ್ಕೂ ಮತ್ತದರ ಜನರಿಗೂ ಅವಿನಾಭಾವ ಸಂಬಂಧವಿದ್ದೇ ಇರುತ್ತದೆ.

ದೆಹಲಿ ಒಂದು ಐತಿಹಾಸಿಕ ನಗರ. ಮಹಾಭಾರತದ ಕಾಲದಿಂದಲೂ ಇಲ್ಲಿ ಜನಗಳಿದ್ದೇ ಇದ್ದರು, ಇದ್ದಾರೆ. ಆಗಿನ ಕಾಲದಿಂದ ವಿಧಿವಶಾತ್ "ಭಾರತದ ಭಾಗ್ಯದ ವಿಧಾತ"ರ ನಗರವಾಗಿ ಪರಿಣಮಿಸಿದೆ. ಇದರಿಂದ ಮೇಲಿನಿಂದ ಮೇಲಕ್ಕೆ ಅನರ್ಥಗಳು ನಡೆದೇ ನಡೆದಿವೆ. ಕೌರವ-ಪಾಂಡವರು ಇದ್ದದ್ದು ಇಲ್ಲೇ ಎಂದು ಮರೆಯಬಾರದು. ಅವರ ದಿನನಿತ್ಯದ ಕಾಳಗ-ಮನಸ್ತಾಪಗಳನ್ನು ಮಹಭಾರತ ಚೆನ್ನಾಗಿಯೇ ವರ್ಣಿಸಿದೆ. ಇದರ ಜೊತೆಗೆ ಹಸ್ತಿನಾವತಿಯಲ್ಲೇ ಪ್ರಾಯಃ ಹುಟ್ಟಿದ, ಅಂದರೆ ಅಪ್ಪಟ ದೆಹಲಿಯವರೇ ಆದ, ಕೌರವರು ಮಾಡಿದ ಅತ್ಯಾಚಾರಗಳು ಸರ್ವವಿದಿತ. ದ್ರೌಪದಿಯ ಮಾನಭಂಗಕ್ಕೆ ಯತ್ನಿಸಿದ ದುರ್ಯೋಧನ-ದುಃಶಾಸನರು ಈಗಿನ ದೆಹಲಿಗರಿಗೆ ಪೂರ್ವಜರು. ಆದರೆ ಅವರ ಮಾದರಿಯನ್ನೇ ಅನುಸರಿಸುತ್ತಿರುವ ಇಂದಿನ ದೆಹಲಿಯ ಕೆಲಭಾಗದಷ್ಟು ಪುರುಷವರ್ಗವನ್ನು ಕಂಡಾಗ ಮನಸ್ಸಿಗೆ ಖೇದವಾಗದೇ ಇರದು. ಸ್ವಾರಸ್ಯದ ಒಂದಂಶ ಗಮನಿಸಬೇಕು. ಪಾಂಡವರು ಹುಟ್ಟಿದ್ದು ಹಿಮಾಲಯದ ಅರಣ್ಯಗಳಲ್ಲಿ. ದೆಹಲಿಯಲ್ಲಿ ಹುಟ್ಟದ ಕಾರಣದಿಂದ ಅವರಲ್ಲಿ ಧರ್ಮವಿದ್ದಿರಬೇಕೋ ಏನೊ !

ಈ ಜಗಳದಿಂದ ಕುರುಕ್ಷೇತ್ರಯುದ್ಧ ಸಂಭವಿಸಿದ್ದು ಎಲ್ಲರಿಗೂ ತಿಳಿದ ವಿಷಯ. ಈ ನಗರದಲ್ಲಿ ಹುಟ್ಟಿದ ಅಶಾಂತಿಯ ವಾತಾವರಣ ಧರ್ಮಯುದ್ಧಕ್ಕೇ ಮಾತ್ರವಲ್ಲದೆ ದೇಶದ ಎಲ್ಲೆಡೆಗಳಿಂದ ಬಂದ ಸೈನ್ಯಗಳ ಅಪಾರ-ಪ್ರಾಣಹಾನಿಗೂ ಕಾರಣವಾಯ್ತು. ಏನೋ ಒಂದು ಹಠಮಾರಿತನ, ಒಂದು ಅಸಡ್ಡೆಯ ಪ್ರವೃತ್ತಿ, ಮುಂಗೋಪ - ಇವೆಲ್ಲವೂ ಕೌರವರಲ್ಲೂ ಮತ್ತು ಅವರ ವಂಶಜರೇ ಆದ ಇಂದಿನ ದೆಹಲಿಗರಲ್ಲಿ ಸಮಾನವಾಗಿ ಕಾಣುತ್ತದೆ.

ಈ ಇತಿಹಾಸ-ಪುರಾಣಗಳ ಕಾಲದ ನಂತರ ಈಚೆಯ ಚರಿತ್ರೆಗೆ ಬರಬಹುದು. ರಾಜಾ ಧಿಲು (ದಿಲು?) ಎಂಬ ಒಬ್ಬ ರಾಜನಿಂದ ದೆಹಲಿಯ ಆಧುನಿಕ ಹೆಸರು ಬಂದಿತೆನ್ನುತ್ತಾರೆ. ಅದಿರಲಿ - ನಂತರ ಕೇಳಿಬರುವ ಹೆಸರು ಪೃಥ್ವೀರಾಜ ಚೌಹಾನನದು. ಪೃಥ್ವೀರಾಜ-ಸಂಯುಕ್ತರ ಪ್ರೇಮಕಥೆ ಎಲ್ಲರಿಗೂ ತಿಳಿದಿರುವುದೇ. ಪೃಥ್ವೀರಾಜನ ದುರಂತ ಕೂಡ ತಿಳಿದದ್ದೇ. ಅವನ ನಂತರ ಹಿಂದೂ ರಾಜರು ದೆಹಲಿಯನ್ನು ಆಳಿದ್ದು ಕಡಿಮೆ ಎನ್ನಬಹುದು. ಪೃಥ್ವೀರಾಜ ಒಳ್ಳೆಯ ಸೈನ್ಯವನ್ನು ಹೊಂದಿ ಶಕ್ತಿವಂತನಾಗಿದ್ದರೂ ಅವನ ಅಸಡ್ಡೆಯೇ ಅವನ ಮೃತ್ಯುವಾಯಿತು. ರಾಜರು ಹೆಚ್ಚಿದ್ದ ದೆಹಲಿಯಲ್ಲಿ ಈ ರಾಜಸ ಗುಣವೇ ತಾಂಡವವಾಡಿದೆ.

ಭಾರತವನ್ನು ಆಕ್ರಮಿಸಬಂದ ಇಸ್ಲಾಂ ಮತೀಯರಾಗಲಿ ಇನ್ನೂ ಯಾರಾದರಾಗಲಿ - ಅವರಿಗೆ ದೆಹಲಿಯನ್ನು ವಶಮಾಡಿಕೊಳ್ಳುವುದು ಅತ್ಯವಶ್ಯಕವಾಗಿತ್ತು. ಬಾಬರ - ಇಬ್ರಾಹಿಮ ಲೋದಿಯ ಕಾಳಗವಿರಬಹುದು - ಅಥವಾ ಅಕ್ಬರ-ಹೇಮೂಗಳ ನಡುವೆ ನಡೆದ ಎರಡನೇ ಪಾನಿಪತ್ತಿನ ಯುದ್ಧವಿರಬಹುದು. ಎಲ್ಲವೂ ದೆಹಲಿಯನ್ನು ಆಕ್ರಮಿಸಲೋಸುಗವೇ! ಮುಘಲರು ಆಕ್ರಮಿಸಿದ ನಂತರ ಅವರದ್ದೇ ನಗರವಾಗಿ ದೆಹಲಿ ಸುಮಾರು ಮುನ್ನೂರಕ್ಕೂ ಹೆಚ್ಚು ವರ್ಷ ಉಳಿಯಿತು. ನಂತರ ಬಹಾದುರ ಷಾ ನನ್ನು ಓಡಿಸಿದ ನಂತರ ಬ್ರಿಟೀಷರ ಆಳ್ವಿಕೆ. ಕಲ್ಕತ್ತಾವನ್ನು ತೊರೆದು ದೆಹಲಿಯನ್ನೇ ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ಅದಾದ ಮೇಲೆ ಹಾಗೆಯೇ ಉಳಿದಿದೆ. ಕೆಂಪು ಕೋಟೆಯಲ್ಲಿ ಇಂದಿಗೂ ಸ್ವಾತಂತ್ರ್ಯ-ದಿನಾಚರಣೆಯಂದು ಅಂದಿನ ಪ್ರಧಾನ ಮಂತ್ರಿಗಳು ಭಾಷಣ ಮಾಡುತ್ತಾರೆ. ಹಲವು ರಾಜಕೀಯ ಧುರೀಣರ ಸಮಾಧಿಯನ್ನು ಹೊಂದಿದ ನಗರ ದೆಹಲಿಯಾಗಿದೆ. ಹಲವು ದೇಶಗಳ ರಾಯಭಾರಿಗಳ ಕಛೇರಿಗಳನ್ನು ಹೊಂದಿದ ನಗರವೂ ದೆಹಲಿಯೇ!

ಹೀಗೆ ತಲತಲಾಂತರಗಳಿಂದ ರಾಜಕೀಯ ಶಕ್ತಿಗೆ ದೆಹಲಿ ಕೇಂದ್ರವಾಗಿದೆ; ಪ್ರತೀಕವೂ ಆಗಿದೆ. ದೆಹಲಿಯನ್ನು ಹಿಡಿದವರು ದೇಶವನ್ನೇ ಹಿಡಿಯುವರು. ರಾಜಕೀಯ ಶಕ್ತಿಯಲ್ಲಿ ಸಾಮಾನ್ಯವಾಗಿ ಹಿಂಸೆಯ ಒಂದು ನಾಡಿ ಇದ್ದೇ ಇರುತ್ತದೆ. ಈ ರಾಜಕೀಯ ಶಕ್ತಿಯೇ ದೆಹಲಿಯ ಹಿಂಸಾಪ್ರವೃತ್ತಿಯ ಹಿಂದಿನ ಕಾರಣವಿರಬೇಕು.

ಅದಿರಲಿ. ಈಚೆಗೆ ಓದಿದ ಕಾದಂಬರಿ ಭೈರಪ್ಪನವರ ತಂತು. ಇದರಲ್ಲಿ ದೆಹಲಿಯ ಮತ್ತದರ ಜನರ ಪ್ರಮುಖ ಪಾತ್ರವಿದೆ. ಎಮರ್ಜೆನ್ಸಿಯ ಕಾಲಕ್ಕೆ ಸುಮಾರಾಗಿ ಬರುವ ಈ ಕಾದಂಬರಿ ವಿಶ್ವಕೋಶದ ಧಾಟಿಯಲ್ಲಿ ಆ ಕಾಲದ ಜನಮನವನ್ನು ಸೆರೆಹಿಡಿಯುತ್ತದೆ. ಕಲೆ, ಪತ್ರಿಕೋದ್ಯಮ,ರಾಜಕೀಯ, ವಾಣಿಜ್ಯ, ಅಧ್ಯಾತ್ಮ, ವಿದ್ಯಾಭ್ಯಾಸ - ಇವೆಲ್ಲದರ ಬಗ್ಗೆ ಮತ್ತು ಇವುಗಳ ನಡುವಿನ ಸಂಬಂಧದ ಬಗ್ಗೆ ಸೂಕ್ಷ್ಮವಿಶ್ಲೇಷಣೆಯನ್ನು ಹೊಂದಿದ ಭೈರಪ್ಪನವರ ಇಲ್ಲಿನವರೆವಿಗೂ ಅತಿ ದೊಡ್ಡ ಕೃತಿಯೆಂದರೆ ತಂತು. ಇದರಲ್ಲಿ ಕಾಂತಿಯೆಂಬ ಒಂದು ವಿಶಿಷ್ಟ ಪಾತ್ರವಿದೆ. ದೆಹಲಿಯ ಮಹತ್ವಾಕಾಂಕ್ಷೆಯನ್ನೆಲ್ಲಾ ಆಕೆಯಲ್ಲಿ ಭೈರಪ್ಪನವರು ಆವಾಹಿಸಿದ್ದಾರೆ. ಕೆಲಸ ಕೈಗೂಡಬೇಕೆಂದರೆ ಏನು ಮಾಡುವುದಕ್ಕೂ ಹೇಸದ ಛಲ. ಭ್ರಷ್ಟಾಚಾರವಾದರೂ ಮಹತ್ವಾಕಾಂಕ್ಷೆಯ ಸೇವೆಯಲ್ಲಿ ಅದೇ ಸದಾಚಾರವೆಂಬ ಧೋರಣೆ. ಇವೆಲ್ಲದರ ಜೊತೆಗೆ ಏನನ್ನೂ ಸಾಧಿಸಬಲ್ಲೆನೆಂಬ ಆತ್ಮವಿಶ್ವಾಸ. ಆದರೆ ಇದರ ಜೊತೆಗೆ ಸೇರುವ ಪರರ ಭಾವನೆಗಳ ಬಗೆಗಿನ ಸಂವೇದನಾರಾಹಿತ್ಯ ಸೇರುತ್ತದೆ. ಅಂತಸ್ತೇ ಎಲ್ಲವೆಂಬ ಭ್ರಮೆ. ಇವೆಲ್ಲವೂ ಆ ಪಾತ್ರದಲ್ಲಿ ಕಾಣಿಸುತ್ತದೆ. ಇದು ಭೈರಪ್ಪನವರು ಬಹಳಷ್ಟು ದೆಹಲಿಗರನ್ನು ನೋಡಿಯೇ ಮಾಡಿದ ಪಾತ್ರವಿರಬೇಕು. ಮೂಲತಃ ಕನ್ನಡಿತಿಯದೇ ಆದ ಕಾಂತಿ ದೆಹಲಿಯಲ್ಲೇ ಹುಟ್ಟಿಬೆಳೆದದ್ದರಿಂದ ಅಲ್ಲಿನ ಗುಣಗಳನ್ನೇ (ಇಲ್ಲಿ ಗುಣವೆಂದರೆ characteristic ಎಂದು ಮಾತ್ರ) ತನ್ನದಾಗಿ ಮಾಡಿಕೊಳ್ಳುತ್ತಾಳೆ. (ಈ ಪುಸ್ತಕವನ್ನು ಓದದವರು ಒಂದು ಬಾರಿ ಓದಲೇ ಬೇಕೆಂದು ನನ್ನ ಸ್ನೇಹಪೂರ್ವಕ ಒತ್ತಾಯ. ನಿಮ್ಮ ಸಮಯ ವ್ಯರ್ಥವಾಗುವುದಿಲ್ಲ ಎಂದು ಮಾತ್ರ ನಾನು ಭರವಸೆ ನೀಡಬಲ್ಲೆ.)

ನಾನು ದೆಹಲಿಯ ಸಂಪರ್ಕವನ್ನು ಹೊಂದಿದ ಜನರನ್ನು ಕಂಡಿದ್ದೇನೆ. ನಾನು ನೋಡಿದ ಜನರಲ್ಲಿ ಮೇಲೆ ಆ ಪಾತ್ರದಲ್ಲಿ ಹೇಳಿದ ಗುಣಗಳ ಜೊತೆಗೆ ಎದ್ದು ಕಾಣುವ ಗುಣ ಎಂದರೆ ಒಡ್ಡತನ. ಈ ಒಡ್ಡತನ ಗ್ರಾಮ್ಯವಾದ ಒಡ್ಡತನವಲ್ಲ. ಔಟ್-ಲುಕ್ಕಿನ ಲೇಖನದಲ್ಲಿ ಬರೆದಿರುವ ಹಾಗೆ - ಸೌಜನ್ಯವಿಲ್ಲದಿರುವಿಕೆ. ನೀವು ಒಂದು ಸರಣಿಯಲ್ಲಿ ನಿಂತು ನಿಮ್ಮ ಸರದಿಗಾಗಿ ಕಾಯುತ್ತಿದ್ದಾಗ ಮಧ್ಯೆ ನುಗ್ಗಿ ತನ್ನ ಕೆಟ ನಡೆನುಡಿಗಳಿಂದ ನಿಮ್ಮ ಮನಸ್ಸಿಗೆ ನೋವುಂಟುಮಾಡಿದರೂ ತನ್ನ ಕೆಲಸವನ್ನು ಮಾಡಿಕೊಳ್ಳುವ ಅಸೌಜನ್ಯ. ಇದನ್ನು ನಾನು ಬೇರೆ ಬೇರೆ ಸ್ತರಗಳಲ್ಲಿ ಕಂಡಿದ್ದೇನೆ. ನಾನು ಕಂಡ ಹಾಗೆ ಅವರಲ್ಲಿ ಒಂದು ಅವ್ಯಕ್ತ ಅನುಕ್ತ ಸ್ವ-ಪ್ರಶಂಸೆಯ ಛಾಯೆ ಮೂಡುತ್ತದೆ. ಇದಕ್ಕಿಂತ ವೈಯಕ್ತಿಕವಾಗಿ ನಾನು ಹೆಚ್ಚು ಹೇಳಲಾರೆ.

ಇದೇನು ದೆಹಲಿಯ ಬಗ್ಗೆ ಯಾವ ನಗರದ ಬಗೆಗೂ ಇರದಷ್ಟು ವಿಚಾರವೆಂದು ಕೇಳಿದರೆ ನನ್ನ ಉತ್ತರ ಹೀಗಿದೆ. ದೆಹಲಿ ಈಗ ಎಲ್ಲರಿಗೂ ಹೇಗೆ ಮುಖ್ಯವೋ ನನಗೂ ಹಾಗೆಯೇ ಮುಖ್ಯ. ನಮ್ಮ ದೇಶದ ರಾಜಕೀಯ ರಾಜಧಾನಿಯದು. ನಮ್ಮ ದೇಶದ ಚರಿತ್ರೆಯಲ್ಲಿ ಸಾವಿರ ಸಾವಿರ ವರ್ಷಗಳಿಂದ ಇರುವ ಕೇಂದ್ರಬಿಂದು ದೆಹಲಿ. ಇಂಥ ನಗರದ ಬಗ್ಗೆ ಕುತೂಹಲಾಸಕ್ತಿಗಳು ಮೂಡದಿರಲು ಹೇಗೆ ಸಾಧ್ಯ? ಸಂಸ್ಕೃತಿಯ ವಿದ್ಯಾರ್ಥಿಯಾಗಿ ಮಾತ್ರ ನಾನು ಗಮನಿಸಿದ ಕೆಲವು ಅಂಶಗಳನ್ನು ಹೇಳಬಯಸಿದ್ದೇನೆ, ಅಷ್ಟೆ.

ನನ್ನ ಜಿಜ್ಞಾಸೆ ಮುಂದುವರೆದಿದೆ. ನಗರವೊಂದು ದೇಶದ ರಾಜಧಾನಿಯಾಗಬೇಕಾದರೆ ಅದರಲ್ಲಿ ಏನಾದರೂ ವಿಶೇಷಗುಣವಿರಬೇಕೆ? ಕೌಟಿಲ್ಯನು ಇದರ ಬಗ್ಗೆ ಏನು ಹೇಳಿರುವನೋ ತಿಳಿಯದು. ದೆಹಲಿಯು ನಮ್ಮ ದೇಶದ ರಾಜಧಾನಿಯಾಗಲು ಅರ್ಹವೇ ಎಂಬ ಪ್ರಶ್ನೆಯು ಮನದಲ್ಲಿ ಮೂಡಿದೆ. ಇದು ಒಂದು academic question. ಅಷ್ಟೆ. ತುಘಲಕ್ ಮಾಡಿದ ಹಾಗೆ ರಾಜಧಾನಿಯನ್ನು ಬದಲಿಸಬೇಕೆಂಬ ಹುಚ್ಚುಬುದ್ಧಿ ನನಗಿಲ್ಲ. ಇದ್ದರೂ ನನ್ನ ಮಾತು ಕೇಳುವವರು ಯಾರು ?

ಇನ್ನೂ ಒಂದು ವಿಚಾರಾರ್ಹ ವಿಷಯ- ಇಂಥ ನಗರದಲ್ಲಿ ನಮ್ಮ ರಾಜಕೀಯ ನೇತಾರರು ನುಗ್ಗಿದಾಗ ಇವರ ಮನದಲ್ಲಿ ಏನಾದರೂ ಬುದ್ಧಿಭೇದವುಂಟಾಗುತ್ತದೆಯೇ? ಇದರಿಂದ ಅವರು ಮನಃಸ್ವಾಸ್ಥ್ಯವನ್ನು ಕಳೆದುಕೊಂಡು ದೇಶವನ್ನು ಆಳಲು ಅಸಮರ್ಥರಾಗುವರೇ? ಅಥವಾ ರಾಜಕೀಯಪುರುಷರಿಂದ ದೆಹಲಿಗೆ ಮತ್ತು ದೆಹಲಿಗರಿಗೆ ಈ ಗುಣ ಬಂದಿತೇ?