Sunday, August 29, 2004

Most Kannada films are one-day wonders - Deccan Herald

Most Kannada films are one-day wonders - Deccan Herald

ಇನ್ನೇನು ಕೆಲವೇ ದಿನಗಳು. ಅಮೇರಿಕೆಯಿಂದ ಭಾರತಕ್ಕೆ, ಕರ್ಣಾಟಕಕ್ಕೆ ಬೆಂಗಳೂರಿಗೆ ಮರಳುವುದಕ್ಕೆ. ಹೀಗೆ browse ಮಾಡುತಿದ್ದಾಗ ಕಂಡ ಲೇಖನವಿದು.

ನಮ್ಮ ಕನ್ನಡ ಚಲನಚಿತ್ರಗಳ ಪರಿಸ್ಥಿತಿ ದೇವರಿಗೇ ಪ್ರೀತಿ. ಕನ್ನಡ ಚಿತ್ರಗಳು ಬಹುತೇಕ ಬೇರೆ ಭಾಷೆಗಳಿಂದ ರೀಮೇಕ್ ಆದವುಗಳೇ. ಅದೂ ಮೂಲ ಚಿತ್ರದ ಸೊಬಗು ಇದರಲ್ಲಿರುವುದಿಲ್ಲ. ಇನ್ನೊಂದೇನೆಂದರೆ ಬೆಂಗಳೂರಿನಲ್ಲಿ ಆರು ಭಾಷೆಗಳ ಚಿತ್ರಗಳು ಪ್ರದರ್ಶನಗೊಳ್ಳುತ್ತವೆ. ಆದ್ದರಿಂದ ಒರಿಜಿನಲ್ ಚಿತ್ರ ನೋಡಲು ಸಿಗುವಾಗ ನಕಲು ಚಿತ್ರವನ್ನು ಏಕೆ ನೋಡಬೇಕು ?

ರಾಜಕುಮಾರ್ ತಂಡದ ನೇತೃತ್ವದಲ್ಲಿ ನಡೆದ ಮುಷ್ಕರ ನಿಜವಾಗಲೂ ಖಂಡನೀಯ. ಆಣ್ಣಾವ್ರು ಮಹಾನ್ ಕಲಾವಿದರು. ಅವರ ಮಕ್ಕಳು ಅವರ ಹತ್ತಿರ ಕೂಡ ಸುಳಿಯುವುದಿಲ್ಲ ಅನ್ನುವುದನ್ನು ಬೇರೆಯವರು ಅರ್ಥಮಾಡಿಕೊಳ್ಳಬೇಕು. ನಮ್ಮ ಚಿತ್ರಗಳು ಅಷ್ಟು ಕಳಪೆ ಮಟ್ಟದ್ದಾಗಿರುವಾಗ ಬೇರೆ ಭಾಷೆಗಳ ಚಿತ್ರಗಳನ್ನು ವಿರೋಧಿಸಿ ನಾವು ಸಾಧಿಸುವುದಾದರೂ ಏನು ? ಬರೇ ಕನ್ನಡ ಚಿತ್ರಗಳು ತೆರೆಯ ಮೇಲೆ ಕಂಡರೆ ಚಿತ್ರರಸಿಕರು ಅವುಗಳನ್ನು ಮಾತ್ರ ನೋಡುತ್ತಾರೆಂಬುದು ಶುದ್ಧ ತಪ್ಪು ಕಲ್ಪನೆ. ಆಗ ವೀಕ್ಷಕರು ಮನೆಯಲ್ಲೇ ಕುಳಿತು ಕೇಬಲ್ ಮೂಲಕ ತಮಗೆ ಬೇಕಾದ ಚಿತ್ರಗಳನ್ನು ನೋಡುತ್ತಾರೆ. ಥಿಯೇಟರ್ ಪ್ರದರ್ಶಕರಿಗೆ ಮಾತ್ರ ಪೆಟ್ಟು ತಗಲುತ್ತದೆ.

ಹೌದು, ನಮ್ಮ ಚಿತ್ರರಂಗಕ್ಕೆ ಇದೆಂಥಾ ದೆವ್ವ ಮೆಟ್ಟಿದೆ ? ಈ ವರ್ಷವಂತೂ ತೀರ ಕಳಪೆ ಚಿತ್ರವಾದ ಪ್ರೀತಿ-ಪ್ರೇಮ-ಪ್ರಣಯ ಚಿತ್ರಕ್ಕೆ ಉತ್ತಮ ಚಿತ್ರ ಪ್ರಶಸ್ತಿ ದೊರೆತಿದೆ. ಎಲ್ಲಿಂದ ಎಲ್ಲಿಗೆ ಬಂದಿದ್ದೇವೆ ? ಗಿರೀಶ ಕಾಸರವಳ್ಳಿ ಸೀತಾರಾಂ ಹೆಸರು ಮಾತ್ರ ಕೇಳುತ್ತದೆ. ಬೇರೆ ಸಮರ್ಥ ನಿರ್ದೇಶಕರು ನಮ್ಮಲ್ಲಿಲ್ಲವೇ ? ಅಂಥಾ ಉತ್ತಮ ಕಲಾವಿದರನ್ನು ಹೊಂದಂಥ ಕನ್ನಡ ಚಿತ್ರರಂಗಕ್ಕೆ ಒಳ್ಳೆಯ ಸಾರಥಿಗಳ ಕೊರತೆಯಿದೆ. ಸ್ವಲ್ಪ ರಿಸ್ಕ್ ಅನ್ನಿಸಿದರೂ ಸರಿ ಹಣ ಸುರಿದು ಸ್ವಮೇಕ್ ಚಿತ್ರ ನಿರ್ಮಿಸಿ ಗೆಲ್ಲುವ ಛಾತಿ ಇರುವವರು ನಮ್ಮಲ್ಲಿ ಕಡಮೆಯಾಗಿದ್ದಾರೆ. ರವಿಚಂದ್ರನ್ ಮಾತ್ರ ಹೀಗೆ ಅದ್ದೂರಿ ಮಸಾಲೆ ಚಿತ್ರಗಳನ್ನು ನಿರ್ಮಿಸಿ ಗೆಲ್ಲಬಲ್ಲರು. ಬೇರೆ ಯಾರ ಬಳಿಯೂ ದುಡ್ಡಿಲ್ಲ. ಧೈರ್ಯವೂ ಇಲ್ಲ.

ಇದರ ಜೊತೆಗೆ ಸಪ್ಪೆ ಊಟವನ್ನು ಒಂದು ಹೋಟೆಲಿನಲ್ಲಿ ಉಂಡವನು ಅಲ್ಲಿ ಮತ್ತೆ ಹೋಗುವುದಿಲ್ಲ. ಪೂರ್ವಾಪರದಂಥ ಒಳ್ಲೆಯ ಚಿತ್ರ ನಿರ್ಮಾಣವಾದರೂ ಅದನ್ನು ನೋಡುವವರಿಲ್ಲ. ಏಕೆಂದರೆ ಹೋಟೆಲಿನಲ್ಲಿ ಕೆಟ್ತ ಅಡುಗೆಯವರು ಸೇರಿದ್ದಾರೆ. ಹೋಟೆಲಿನ ಮ್ಯಾನೇಜರರು ಇದನ್ನು ಗಮನಿಸಬೇಕು. ಹೊಸ ಅಡುಗೆಯವರಿಗೆ ಒಳ್ಲೆಯ ಅಡುಗೆಯವರಿಗೆ ಅವಕಾಶಮಾಡಿಕೊಡಬೇಕು. ಅದಾದ ಮೇಲೆ ಒಬ್ಬೊಬ್ಬ ಗ್ರಾಹಕನಿಂದ ಕಳೆದು ಹೋದ ಹೆಸರನ್ನು ಮತ್ತೆ ಸಂಪಾದಿಸಬೇಕು. ಆಗ ಮೂಂಚಿನಂತೆ ಹೋಟೆಲ್ ಜನರಿಂದ ಕಿಕ್ಕಿರಿಯುತ್ತದೆ. ನಮ್ಮ ಚಿತ್ರರಂಗಕ್ಕೂ ಇದೇ ಔಷಧಿ !

ತನ್ನತನವನ್ನು ಹೊಂದಿದ್ದ ಕನ್ನಡ ಚಿತ್ರರಂಗ ತನ್ನ ಸೊಬಗನ್ನು ಕಳೆದುಕೊಂಡಿದೆ. ಇದೇ ರೀತಿ ಮುಂದುವರೆದರೆ ನಮ್ಮ ಚಿತ್ರರಂಗ ಚರಿತ್ರೆಯಲ್ಲೂ ಸೇರದೆ ನಶಿಸಿಹೋಗುತ್ತದೆ. ಏಕೆಂದರೆ ಬೇಲೂರು ಹಳೇಬೀಡುಗಳು ಸುಂದರವಾಗಿದ್ದವು ಅನ್ನುವ ಮಾತ್ರಕ್ಕೆ ಇತಿಹಾಸದಲ್ಲಿ ಸೇರುವ ಸಾಮರ್ಥ್ಯವನ್ನು ಪಡೆದಿವೆ. ತೀರಾ ಸುಮಾರಾದ ನಮ್ಮ ಚಿತ್ರರಂಗಕ್ಕೆ ಯಾವ ವೈಶಿಷ್ಟ್ಯ ?

Tuesday, August 17, 2004

ತಾಳಲಾರೆ!

ಅಮೇರಿಕಕ್ಕೆ ಬಂದು ಏಳು ವರ್ಷಗಲಾದವು. ಇನ್ನೂ ನಿನ್ನೆ ಹತ್ತನೇ ಕ್ಲಾಸಿನ ಪರೀಕ್ಷೆಯ ಫಲಿತಾಂಶಗಳನ್ನು ನೋಡಿದ ಹಾಗಿದೆ. ಅದಾದ ಮೇಲೆ ಪಿ ಯು ಸಿ, ಬಿ ಇ ಇವೆಲ್ಲ ಮುಗಿಸಿ ಒಂದು ವರ್ಷ ಭಾರತದಲ್ಲಿ ಕೆಲಸ ಮಾಡಿ ಅಮೇರಿಕಕ್ಕೆ ಬಂದದ್ದು. ಇಲ್ಲಿ ಸ್ನಾತಕೋತರ ಪದವಿ ಪಡೆದ ನಂತರ ಕೆಲಸವನ್ನು ಗಳಿಸಿ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಮಧ್ಯದಲ್ಲಿ ನನ್ನ ಆಶ್ರಮದಲ್ಲಿ ಬಡ್ತಿ ಬೇರೆ ದೊರೆಯಿತು. (ಅಂದರೆ ಮದುವೆಯಾಯಿತೆಂದು) ನಮ್ಮ ದೇಶಕ್ಕೆ ಮರಳಲು ಅವಕಾಶಗಳಿದ್ದರೂ, ಅದೇ ಹೇಳುತ್ತಾರಲ್ಲ, ಕಾಲ ಕೂಡಿ ಬರಬೇಕು ಅಂತ, ಹಾಗೇ ನನಗೂ ಈಗ ಕಾಲ ಕೂಡಿ ಬಂದಿದೆ. ಇನ್ನು ಮೂರು ವಾರಗಳಲ್ಲಿ ನಾನು ಬೆಂಗಳೂರಿಗೆ ಮರಳುತ್ತಿದ್ದೇನೆ! ನನಗಂತೂ ಮಹದಾನಂದ.

ಆದರೆ ಈ ಕಾಯುವ ಕೆಲಸವಿದೆಯಲ್ಲ! ಅಬ್ಬ! ಟಿಕೆಟ್ ಖರೀದಿಸಿದ್ದಾಗಿದೆ. ಎಂದು ಹೊರಡುವೆನೋ ತಿಳಿದಿದೆ. ಕೆಲವೇ ದಿನಗಳು ಎಂದು ತಿಳಿದಿದ್ದರೂ ಅದೇನೋ ಮನದಲ್ಲಿ ಉದ್ವೇಗ. ಏಳು ವರ್ಷ ಇಲ್ಲಿದ್ದ ನಂತರ ಈ ಜಾಗಕ್ಕೆ ಸ್ವಲ್ಪ ಹೊಂದಿಕೊಂಡಿದ್ದೇನೆ. ಆದರೆ ನಮ್ಮೂರಿನಲ್ಲಿರುವ ಮಜ ಇಲ್ಲಿಲ್ಲ. ನಮ್ಮ ನಾಡು, ನಮ್ಮ ಜನ, ನಮ್ಮ ಮಣ್ಣು, ನಮ್ಮ ಬಾಷೆ! ಇವೆನ್ನೆಲ್ಲ ಬಿಟ್ಟು ಎಷ್ಟು ಕಾಲ ಕಳೆದಿದ್ದೇನೆ! ಕೆಲಸದ ಮಧ್ಯೆ ಕೂತು ಇದರ ಬಗ್ಗೆ ಯೋಚಿಸುತ್ತಾ ತಲೆ ಕೆಡಿಸಿಕೊಳ್ಳುವುದಕ್ಕಿಂತ ಇದರ ಬಗ್ಗೆ ಸ್ವಲ್ಪ ಬರೆದರೆ ನೆಮ್ಮದಿ ಬಂದು ಸಮಯ ಸ್ವಲ್ಪ ಕಳೆಯುತ್ತದೆ ಎಂದು ನನ್ನ ಈ ಬರಹ. ಕಾಯುವಾಗಂತೂ ಒಂದೊಂದು ದಿನವೂ ಒಂದೊಂದು ವರ್ಷದಂತೆ. (ಯುಗದಂತಲ್ಲ ಬಿಡಿ).

ಅಮೇರಿಕ ಸ ಸಂ ಒಂದು ಮಹಾನ್ ದೇಶ. ಆದರೆ ಅದು ನನ್ನ ದೇಶವಲ್ಲ. ನನ್ನ ದೇಶದಲ್ಲಿ ನನಗೆ ಪ್ರೀತಿ ದೊರೆತಿದೆ. ದೊರೆಯದೇ ಹೋಗಿದ್ದರೆ ಬೇರೆ ದೇಶದಲ್ಲಿದ್ದರೆ ಸರಿಹೋಗುತ್ತಿತ್ತೋ ಏನೊ. ಆದರೆ ಸ್ಥಿತಿ ಹಾಗಿಲ್ಲ. ನಾನೂ ನನ್ನ ದೇಶವನ್ನು ಪ್ರೀತಿಸುತ್ತೇನೆ. ನನಗೂ ಕರ್ತವ್ಯವಿದೆ. ಬೇರೆಯ ದೇಶದಲ್ಲಿದ್ದುಕೊಂಡು ಮಾಡುವುದಕ್ಕಿಂತ ನಮ್ಮ ದೇಶದಲ್ಲಿರುವುದೇ ನನಗೆ ಲೇಸು. ನನ್ನ ಪರಿವಾರವೆಲ್ಲವೂ ಭಾರತದಲ್ಲೇ ಇರುವುದು. ಆದ್ದರಿಂದ ಅವರೊಡನೆ ಇರುವುದೇ ನನಗೆ ಸರಿ.

ಏನೋ ಬರೆಯಬೇಕೆನ್ನಿಸಿತು. ಬರೆದೆ. ಇನ್ನು ಕೆಲವೇ ದಿನಗಳು. ಅದಾದ ಮೇಲೆ ನಾನು ನಮ್ಮ ಮನೆಯಲ್ಲಿ ! ನಮ್ಮ ದೇಶದಲ್ಲಿ ! ಆದರೆ ಈ ಬಾರಿ ಬರುವ ವಿಮಾನಯಾತ್ರೆಯ ತಾರೀಖು ನೋಡಬೇಕಿಲ್ಲ! ಅಯ್ಯೋ ಹೊರಡಬೇಕಲ್ಲಪ್ಪ ಅನ್ನುವ ತಳಮಳವಿಲ್ಲ! ಅಷ್ಟು ಸಂತೋಷ ನನಗಿದೆ! ಇದನ್ನು ನೆನೆಸಿಕೊಂಡರೆ ಸಂತೋಷ.

ಇರಲಿ, ದೂರದ ಬೆಟ್ಟ ನುಣ್ಣಗೆ ಎನ್ನುವರು. ಮೊನ್ನೆ ನನ್ನ ಸಂಬಂಧಿಯೊಬ್ಬರ ಮನೆಯಲ್ಲಿ ಬೆಂಗಳೂರಿನ ಕ್ಲಬ್ಬಿನೊಂದರಲ್ಲಿ ತೆಗೆದ ಚಿತ್ರಗಳನ್ನು ನೋಡಿದೆ. ನಾನು ಕ್ಲಬ್ಬಿಗೆ ಹೋಗುವವನಲ್ಲ. ಆದರೆ ಆ ಚಿತ್ರಗಳನ್ನು ನೋಡಿದಾಗ, ಚಿತ್ರದಲ್ಲಿರುವವರ ಉಡುಪುಗಳನ್ನು ನೋಡಿದಾಗ ಇದು ಯಾವುದೋ ಬೇರೆ ದೇಶ ಎಂದೇ ಅನ್ನಿಸಿತು.

ನನಗೇನು ಗೊತ್ತು ? ಬೆಂಗಳೂರು ಹೀಗೇ ಇತ್ತೇನೋ ? ದೇಶ ಬಿಟ್ಟಿದ್ದು ವಿದ್ಯಾರ್ಥಿಯಾಗಿ. ಮರಳುವುದು ಅಭಿಯಂತಾರನಾಗಿ. ಈಗ ಸ್ವಲ್ಪ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಈಗ ನನ್ನ ಕಣ್ಣಿಗೆ ನಮ್ಮ ನಗರ ಹೇಗೆ ಕಾಣುವುದೋ ? ನನ್ನದೋ ತೀರ middle class sensibilities. ಈಗ ಸ್ವಲ್ಪ ಮೇಲಿನ ಸ್ತರದಲ್ಲಿದ್ದೇನೆ ಅನ್ನಿಸುತ್ತದೆ. ಆದರೂ ಅದೇ ಭಾವನೆಗಳು. ಅವೇ ಬೇಕು ಬೇಡಗಳು.

ಇರಲಿ, ಪ್ರತಿದಿನವೂ ಹೊಸದು, ಪ್ರತಿಜಾಗವೂ ಹೊಸದು. ಮನಸ್ಸಿಗೆ ಬುದ್ಧಿಗೆ ಆಗುವ ಜೀವನ ಪಾಠ ನಿರಂತರ. ಮತ್ತೆ ಮನೆಗೆ ಹೊಸ ಪಾಠ ಕಲಿಯಲು ಹೊರಟಿದ್ದೇನೆ. ಅದೃಷ್ಟವಿದ್ದರೆ ಸ್ವಲ್ಪ ದೇಶಸೇವೆ ಮಾಡುವ ಅವಕಾಶ ದೊರೆಯುತ್ತದೆ. ಮುಂದೆ ಓದುವ ಅವಕಾಶವೂ ದೊರೆಯಬಹುದು. ಆದರೆ ಇದಕ್ಕೆ ಸರಿಯಾಗಿ ಜವಾಬ್ದಾರಿಯೂ ಹೆಚ್ಚುವುದು. ಹಿಂದಿನ ವಿದ್ಯಾರ್ಥಿಯಲ್ಲವಲ್ಲ ನಾನು ! ವಯಸ್ಸಾಗಿದೆಯಾದರೂ ಬುದ್ಧಿ ಬಂದಿಲ್ಲ. ನೋಡೋಣ. ಜೀವನ ಮನಃಪ್ರವಾಸದಿ ಒಂದು ದೊಡ್ಡ ಪ್ರವಾಸ.

|| ಎಲ್ಲರಿಗೂ ಶುಭವಾಗಲಿ ||

Friday, August 13, 2004

Dhananjoy Chatterjee takes comfort in bhajans

Dhananjoy Chatterjee takes comfort in bhajans

ಈ ಲೇಖನವನ್ನೋದಿದವರಿಗೆ ಧನಂಜಯ ಚಟರ್ಜಿ ಎಷ್ಟು ಬದಲಾಯಿಸಿದ್ದಾನೆ ಎಂದು ತಿಳಿಯಬೇಕು. ಹಾಗೆ ಬರೆದಿದ್ದಾರೆ. ಇವನ ಹೆಂಡತಿ ಮತ್ತು ತಾಯಿ ಸಹ ರಾಷ್ಟ್ರಪತಿಗಳಿಗೆ ನಿವೇದನೆಯನ್ನು ಕಳಿಸಿದ್ದಾರಂತೆ. ನಿವೇದನೆಯನ್ನು ತಿರಸ್ಕರಿಸಿದ್ದಾಯ್ತು. ಆದರೂ ನೇಣು ಹಾಕಿದರೆ ಸಾಮೂಹಿಕ ಆತ್ಮಹತ್ಯ ಮಾಡಿಕೊಳ್ಳುವುದಾಗಿ ಈ ಅಪಾದಿತನ ಕುಟುಂಬವು ಬೆದರಿಕೆ ಹಾಕಿದೆ.

ನನ್ನದೊಂದು ಯೋಚನೆ - ಅಲ್ಲ, ಇವನು ಬಾಲಿಕೆಯೋರ್ವಳ ಮೇಲೆ ಅತ್ಯಾಚಾರ ನಡೆಸಿ ಕೊಂದಂಥವನು. ಅದೆಷ್ಟು ನೋವನ್ನು ಆ ಹುಡುಗಿ ಅನುಭವಿಸಿರಬೇಕು ಎಂಬುದನ್ನು ಊಹಿಸಲೂ ಅಸಾಧ್ಯ. ಮದುವೆಯಾಗಿದ್ದ ಯುವಕನೊಬ್ಬನು ಹೀಗೆ ಅತ್ಯಾಚಾರ ನಡೆಸಿದರೆ ಅವನಲ್ಲಿ ಏನೋ ಸಭ್ಯತೆಯ ಮತ್ತು ಮಾನವತೆಯ ಕೊರತೆಯಿದೆ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಹೀಗೆ ಅಪಾದನೆ ಸಾಬೀತಾದ ಮೇಲೂ ಇವನ ಕುಟುಂಬದವರು ಮಾಡಿರುವ ನಿವೇದನೆ ತೀರಾ ಮೋಸದ್ದು. ಈ ರೀತಿಯ ಅತ್ಯಾಚಾರಿಯನ್ನು ಮನೆಯಲ್ಲಿ ಹೇಗೆ ತಾನೇ ಸೇರಿಸಿಕೊಂಡಾರು ? ಆ ಹೇಯ ಕೃತ್ಯಕ್ಕೆ ಎಂಥ ಶಿಕ್ಷೆಯೂ ಕಠಿಣವಲ್ಲ! ಕ್ಷಮೆಯನ್ನು ವಿರೋಧಿಸಿದವರು ಎಲ್ಲ ಪಕ್ಷದವರೂ ! ಇಲ್ಲಾದರೂ ಐಕಮತ್ಯ ಕಂಡಿತಲ್ಲಾ!

ಇದರ ಮಾತು ಹಾಗಿರಲಿ. ಆದರೆ ನನಗೆ ಅಪರಾಧ ಮತ್ತು ಶಿಕ್ಷೆಯ ಸ್ವಭಾವದ ಬಗ್ಗೆಯೇ ಯೋಚನೆ ಬರುತ್ತದೆ. ಈಗ ಒಬ್ಬ ಅಪರಾಧಿಯಿದ್ದಾನೆ ಎಂದು ಬಗೆಯೋಣ. ಒಂದು ಕೆಟ್ಟ ಘಳಿಗೆಯಲ್ಲಿ ಒಂದು ಕೆಟ್ಟ ಕೆಲಸ ನಡೆಯಿತು ಅಂದುಕೊಳ್ಳೋಣ. ಏಕೆ ನಡೆಯಿತು ಎನ್ನುವುದು ಆಳವಾದ ಮನಶ್ಸಾಸ್ತ್ರದ ವಿಷಯ. ಆದರೆ ಈ ಕೃತ್ಯವು ಅಪರಾಧಿಯ ಮನಃ ಪರಿವರ್ತನೆ ಮಾಡಿತು ಎಂದುಕೊಳ್ಳೋಣ. ಹಲವರಿಗೆ ಹಾಗೆಯೇ ಆಗುತ್ತದೆ. ಕೋಪದಲ್ಲಿ ಕತ್ತರಿಸಿದ ಮೂಗಿನ ಹಾಗೆ. ಮನಃ ಪರಿವರ್ತನೆಯಾದರೆ ಅಪರಾಧಿಯಲ್ಲಿನ ಅಪರಾಧ ಸತ್ತಿತೆಂದಲ್ಲವೇ ? ನಾವು ಶಿಕ್ಷೆಯನ್ನು ಕೊಡುವುದೂ ಅದಕ್ಕೇ ಅಲ್ಲವೆ ? ಸಮಾಜದಲ್ಲಿ ನೆಲೆಸಲು ಯೋಗ್ಯತೆಯಿಲ್ಲದ ಜನರನ್ನು ಜೈಲಿಗೆ ತಳ್ಳುತ್ತೇವೆ. ಮರಣದಂಡನೆಯನ್ನೂ ವಿಧಿಸುತ್ತೇವೆ. ಶಿಕ್ಷೆಯ ದೊಡ್ಡ ಅಂಶ ಅಪರಾಧದ ಕೊನೆ, ಅಪರಾಧಿಯ ಕೊನೆಯೇ ಅಲ್ಲ. ಹೌದು - ಕೆಲವು ಅಪರಾಧಿಗಳು ತಮ್ಮ ಕೆಲಸ ತಪ್ಪು ಎಂದು ಭಾವಿಸುವುದಿಲ್ಲ. ಏಕೆಂದರೆ ಅವರಿಗೆ ಅರ್ಥವಾಗುವುದಿಲ್ಲ. ಮಾನಸಿಕ ರೋಗಿಗಳ ಮಾತನ್ನಲ್ಲ ಹೇಳುತ್ತಿರುವುದು. ಅಪರಾಧವನ್ನೇ ಅಭ್ಯಾಸವನ್ನಾಗಿ ಮಾಡಿಕೊಂಡವರ ಬಗ್ಗೆ. ಅವರ ಮಾತಿರಲಿ. ಸಮಾಜದ ಮುನ್ನಡೆಗೆ ಇಂಥವರು ಹೊರಗಿದ್ದರೇ ವಾಸಿ.

ಆದರೆ ಎಷ್ಟು ಯೋಚಿಸಿದರೂ ಅಪರಾಧದ ಮೂಲವನ್ನು ಕಿತ್ತೊಗೆಯುವುದೇ ಶಿಕ್ಷೆಯ ಮೊದಲ ಕೆಲಸ ಎಂದು ನನಗೆ ತೋರುತ್ತದೆ.

ಆದರೆ ಮನುಷ್ಯರಾದ ನಮ್ಮಲ್ಲಿ ನ್ಯಾಯದ ಭಾವನೆ ಓಂದಿದೆಯಲ್ಲಾ, ಅದು ಕೇವಲ ಅಪರಾಧದ ಸಾವನ್ನು ಬಯಸುವುದಿಲ್ಲ. ಮುಯ್ಯಿಗೆ ಮುಯ್ಯನ್ನು ಕೇಳುವದೇ ನಮ್ಮ ನ್ಯಾಯಪ್ರಜ್ಞೆಯ ಗುಣ. ಅಪರಾಧಿ ಸಂಪೂರ್ಣವಾಗಿ ಬದಲಾದರೂ ನಮ್ಮ ಮನಸ್ಸಿಗೆ ಅಪರಾಧಿಗೆ ಸರಿಯಾದ ಶಿಕ್ಷೆ ದೊರೆತಿಲ್ಲವೆಂದೇ ಭಾವನೆ. ಅಪರಾಧಿಯನ್ನು ಕೊಂದರೆ ತಮ್ಮ ಮಗಳು ಅಥವಾ ಬೇಕಾದವರು ಮರಳಿ ಬರುವುದಿಲ್ಲ ಎಂದು ತಿಳಿದೇ ಇದೆ. ಆದರೂ ನ್ಯಾಯ ದೊರೆಯಬೇಕು. ಈ ಪ್ರಜ್ಞೆ ಎಲ್ಲ ಸ್ತರಗಳಲ್ಲೂ ಇದೆ. ಅದಕ್ಕೆ ನನಗೂ ಈ ಘಟನೆಯ ಬಗ್ಗೆ ಓದಿದಾಗ ಅವನ ಜೀವದಾನಕ್ಕಾಗಿ ಬೇಡಿದ ಧನಂಜಯನ ಪರಿವಾರದ ಬಗ್ಗೆ ತೀವ್ರತರವಾದ ತಿರಸ್ಕಾರವುಂಟಾದದ್ದು. ಆದರೂ -- ನಮ್ಮ ಮನೆಯವರೇ ಈ ರೀತಿ ಕೆಲಸ ಮಾಡಿದರೆ ನಿರ್ದಾಕ್ಷಿಣ್ಯವಾಗಿ ನ್ಯಾಯಕ್ಕೊಪ್ಪಿಸುವಷ್ಟು ನಾವು ನ್ಯಾಯಪರರೇ ?

ಎಲ್ಲರೂ ಅವರ ಮೂಗಿನ ನೇರಕ್ಕೆ ಯೋಚಿಸುತ್ತಾರೆ. ಆದರೆ ಈ ಘಟನೆ ಎಂಥವರನ್ನೂ ಯೋಚನೆಗೆ ಪ್ರೇರೇಪಣೆಯನ್ನೊದಗಿಸದೇ ಇಲ್ಲ.

Saturday, August 07, 2004

Simulated violence - can we enjoy them without guilt ?

The New Yorker: The Critics: The Current Cinema

The New Yorker is not one of those run of the mill magazines. I introduced myself to this magazine a couple of years ago and have been reading it on and off. The nice short story, the witty cartoon and movie reviews of a different kind with many insightful articles on politics and current happenings make this a treat.

Just look at the current review of these two movies. The reviewer is definitely learned in his art.

Anyway, coming to the point, the point of violence in movies discussed in this review is something I have thought of many times. We profess non-violence in everyday life. We are, to some extent, horrified by the violence we read about in newspapers. But movie violence is of a different category. We seem to be relishing it. The box office numbers show this to be a fact. But only if the killing(s) are done artfully.

Is this plain hypocrisy on our part ? Or is it one of those sub-conscious instinctive things in us ? We vicariously live through the movie as one or more of its characters and kill or are killed in them. But we do so within the comfortable confines of our movie seats. We pay to watch the movie, are entertained for a few hours and forget the movie eventually. I am sure we will abhor violence in and near our homes.

The point made by Orson Welles reproduced in this review is quite remarkable and goads us to look into ourselves. My take on this is as follows: human society has forever been violent. But in recent years, the conflicts have reduced and have made us see the benefits of peace and living without conflict. But our subliminal desires have to be satisfied in one way or the other. Reading about violence and watching violent scenes in movies may quench this desire to some extent.

The same thought applies in case of violent video games. In video games, we kill virtual characters ourselves. Though these 'characters' are ultimately programming constructs, they are alive as far the context of the game goes. In real life, we wouldn't condone even a thousandth of the violence in these games. But we do not mind killing these virtual villains in a mass of blood and gore. This also has the detrimental effect of desensitizing children's minds towards violence.

I cannot help but think of karma in this context. During a discussion on the Advaita-L list, a list member brought up a similar point and I was made to think more on this topic. Karma accrues when there is doership on the part of the kartA or the doer. While watching a movie or playing a game, we implicitly take on the role of a character in it. We identify with them and engage in some 'action', even if only through our mind. We distinctly remember how we 'killed' a character in the game. If we kill somebody in real life we would still remember that action later. As far as memory goes, there is no difference between those of these real and virtual incidents. Is there any other kind of difference ? One aspect, I must stress, is that we know that the characters in the games are mere virtual constructs. But by choosing to play the game and indulge in violence as necessitated by it, IMO, makes us parties to violence.

During sandhyAvandanam every day, we refer to sins committed by 'manasA vAchA hastAbhyAm'. The above action, IMO, can be classified as a mAnasika action and hence it seems to be the case that sin is definitely accrued.

But another question is one for which I don't know the answer to myself. When is an action deemed to be complete to cause karma ? At what point in time ? During mere contemplation of the action ? After its performance ?

So the point that I wanted to make essentially is that we have to look inside constantly to be on guard for such tendencies. Good actions are to be practiced through good thoughts. Good actions reinforce good thoughts and vice-versa. This is a positive cycle and will cause much benefit.

But thinking is easier than enforcing it in our lives and the latter is what needs to be done.

Anyway, the thesis of this is that we cannot enjoy even simulated violence without associated guilt and karma. If somebody who reads this disagrees, we can definitely have a discussion.

||shubhaM bhUyAt||

Thursday, August 05, 2004

Low cost airlines in India

The Week

ಭಾರತದಲ್ಲಿ ಮೊದಲ ಬಾರಿಗೆ ಈ ಕಡಿಮೆ ದರದ ವಿಮಾನಯಾತ್ರೆಗಳು ಕಾಣತೊಡಗಿವೆ.

ನನಗೆ ನೆನೆಪಿದೆ. ನಾ ಚಿಕ್ಕವನಾಗಿದ್ದಾಗ ದಿನಕ್ಕೊಮ್ಮೆಯೋ ಎರಡು ಬಾರಿಯಾಒ ಕಾಣಿಸಿಕೊಳ್ಳುತ್ತಿದ್ದ ವಿಮಾನಗಳಿಗೆ ಟಾಟಾ ಎಂದು ಕಿರುಚುತ್ತಾ ಓಡುತ್ತಿದ್ದೆ. ಬೇರೆಯ ಮಕ್ಕಳೂ ನನ್ನ ಹಾಗೆಯೇ. ವಿಮಾನದಲ್ಲಿ ಪ್ರಯಾಣವೆಂದರೆ ಒಂದು ಸೌಭಾಗ್ಯವೆಂದೇ ಭಾವನೆ. "ಬಹಳ ಧನವಂತರು ಇವರು - ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ" - ಎಂಬ ಯೋಚನೆಗಳಾಗ ಸರ್ವೇ ಸಾಮಾನ್ಯ. ಬೆಂಗಳೂರಿನ ವಿಮಾನ ನಿಲ್ಡಾಣವನ್ನು ನಾನು ನೋಡಿಯೇ ಇರಲಿಲ್ಲ. ಮೊದಲ ಸಲ ನೋಡಿದ್ದು ಅಮೇರಿಕ್ಯೆಯಿಂದ ಬೆಂಗಳೂರಿಗೆ ಮರಳಿದಾಗ! ಅಮೇರಿಕಕ್ಕೆ ಮೊದಲ ಬಾರಿಗೆ ತೆರಳುವಾಗ ಮದರಾಸಿನಿಂದ ಹಾರಿದ್ದೆ. ಎರಡು ವರ್ಷಗಳ ನಂತರ ಮೊದಲ ಸಲ ಬೆಂಗಳೂರಿಗೆ ಬ್ಬಂದಾಗಲೇ ಅಲ್ಲಿನ ನಿಲ್ದಾಣವನ್ನು ನೋಡಿದ್ದು.

ಅಮೇರಿಕೆಯಲ್ಲಿ ವಿಮಾನಯಾತ್ರೆಗಳನ್ನು ಮಾಡಿದ ಮೇಲೆಯೇ ಇದು ಕೇವಲ ಮತ್ತೊಂದು ಸಾರಿಗೆ ವ್ಯವಸ್ಥೆ ಎಂದು ಮನದಟ್ಟಾಗಿದ್ದು. ಅಮೇರಿಕೆಯಲ್ಲಿ ಎಲ್ಲಿಂದೆಲ್ಲಿಗೆ ಓಡಾಡಬೇಕಾದರೂ ವಿಮಾನವೇ! ಎಲ್ಲಿಂದೆಲ್ಲಿಗೆ ಅಂದರೆ ಐನೂರು ಮೈಲಿಗಳಿಗಿಂತ ಹೆಚ್ಚಿಗೆ ದೂರದಲ್ಲಿರುವೆ ಸ್ಥಳಗಳು. ಅಮೇರಿಕೆಯಲ್ಲಿ ಬಡವರೂ ಶ್ರೀಮಂತರೂ ಇದೇ ವಿಮಾನಯಾತ್ರೆಯನ್ನು ಉಪಯೋಗಿಸುತ್ತಾರೆ. ಇನ್ನೊಂದು ವಿಷಯ. ಅಮೇರಿಕೆಯ ವಿಮಾನಗಳು ನಮ್ಮ ದೇಶದ ರೈಲು ಬಸ್ಸುಗಳಿದ್ದ ಹಾಗೆ. ಬಸ್ಸುಗಳಲ್ಲಿ ರೈಲುಗಳಲ್ಲಿ ಓಡಾಡುವವರೇ ವಿರಳ ಎನ್ನಬಹುದು.

ನಮ್ಮ ದೇಶದಲ್ಲಿ ಈ ರೀತಿ ಯಾವಾಗ ನಡೆಯಬಹುದೋ ಎಂದು ಕನಸು ಕಾಣತೊಡಗಿದಾಗ ಕ್ಯಾಪ್ಟನ್ ಗೋಪಿನಾಥ ಎನ್ನುವವರು ಅವರ ಡೆಕ್ಕನ್ ಏವಿಯೇಷನ್ ಸಂಸ್ಥೆಯ ಮೂಲಕ ಸುಲಭ ದರದ ವಿಮಾನಯಾತ್ರೆಗಳನ್ನು ಒದಗಿಸಿದ್ದಾರೆ. ಮೇಲಿನ ಲೇಖನ ಇದರ ಬಗ್ಗೆಯೇ ಮಾತಾಡುತ್ತದೆ. ಇವರ ಜೊತೆಗೆ ಮಲ್ಲ್ ಯ, ಇಂಡಿಯನ್ ಏರ್ಲೈನ್ಸ್ ಮುಂತಾದ ಸಂಸ್ಥೆಗಳೂ ಸುಲಭದರದ ಯಾತ್ರೆಗಳನ್ನು ಒದಗಿಸುವ ವಿಚಾರ ಮಾಡಿದ್ದಾರೆ. ಎಲ್ಲಕ್ಕೂ ಕಾಲ ಕೂಡಿ ಬರಬೇಕು ಅನ್ನುತ್ತಾರಲ್ಲಾ, ಹಾಗೆ ನಮ್ಮಲ್ಲಿ ಈಗ ಕಾಲ ಕೂಡಿ ಬಂದಿದೆ. ಸರ್ಕಾರವು ವಿಮಾನಯಾನ ಸಂಸ್ಥೆಗಳಿಗೆ ಕಾರ್ಯ ನಡೆಸಲು ಸೌಲಭ್ಯಗಳನ್ನು ಒದಗಿಸಿದೆ. ಆದರೆ ಇವೆಲ್ಲದಕ್ಕೂ ಮೂಲಕಾರಣ ನಮ್ಮ ಜನತಾ ಜನಾರ್ದನ. ಮಧ್ಯ್ಮ ವರ್ಗದ ಪ್ರಜೆಗಳು ಭಾರತದಲ್ಲಿ ತೀವ್ರಗತಿಯಲ್ಲಿ ಮೇಲೆ ಬರುತ್ತಿದ್ದಾರೆ. ಇವರ ಸಂಖ್ಯೆ ಮಾತ್ರ ಹೆಚ್ಚಿದ್ದಲ್ಲದೆ ಇವರ ಆರ್ಥಿಕ ಸ್ಥಿತಿಯೂ ಸುಧಾರಿಸಿದೆ. ಧನವಿರುವಾಗ ಅದನ್ನು ಖರ್ಚು ಮಾದಬೇಡವೇ! ಯಾತ್ರೆಗೆ ರೈಲಿನ ಬದಲು ವಿಮಾನವನ್ನೇ ಬಳಸಿದರಾಯ್ತು! ರೈಲುದರಗಳೂ ಕಡಿಮೆಯೇನಿಲ್ಲ. ಸ್ವಲ್ಪ ಹೆಚ್ಚು ದುಡ್ಡು ಕೊಟ್ಟಿದ್ದೇ ಆದರೇ ಆರಾಮವಾಗಿ ಮತ್ತು ಶೀಘ್ರವಾಗಿ ತಮ್ಮ ತಾಣಗಳನ್ನು ಸೇರಬಹುದು. ರೈಲಿನವರು ಈ ವಿಷಯವನ್ನು ಗಮನಿಸಲೇ ಬೇಕು.

ವೈಯಕ್ತಿಕವಾಗಿ ನನಗೆ ಈ ಬೆಳವಣಿಗೆ ಬಹಳ ಸಂತೋಷವನ್ನುಂಟು ಮಾಡಿದೆ. ಈ ಸೌಕರ್ಯದಿಂದ ನಮ್ಮ ದೇಶದ ಪ್ರವಾಸೋದ್ಯಮ ಚೆನ್ನಾಗಿ ಬೆಳೆಯುವುದರಲ್ಲಿ ಸಂಶಯವೇ ಇಲ್ಲ. ಪ್ರವಾಸೋದ್ಯಮ ಬೆಳೆದಲ್ಲಿ ಸಂಪತ್ತು ದೇಶದೆಲ್ಲೆಡೆ ಹರಡುತ್ತದೆ.

ಪ್ರವಾಸೋದ್ಯಮ ಇಲಾಖೆಯವರು ನಮ್ಮ ಸುಂದರ ನೈಸರ್ಗಿಕ ಸಂಪದ್ಭರಿತವಾದ ದೇಶವನ್ನು ಪ್ರವಾಸಿಗಳಿಗೆ ಇನ್ನಷ್ಟೂ ಆಕರ್ಷಕವಾಗಿ ಮಾಡಿದರೆ ಬಹಳ ಜನಗಳಿಗೆ ಉಪಕಾರವಾಗುತ್ತದೆ.

ಎಲ್ಲಿಂದೆಲ್ಲಿಗೋ ಬಂದುಬಿಟ್ಟೆ. ಇರಲಿ. ಇದನ್ನು ಯಾರು ಓದುವರೋ ನಾ ಕಾಣೆ. ನನಗಂತೂ ಈ ಬರವಣಿಗೆಯಿಂದ ಸಂತೋಷ. ಮುಂದೊಂದು ದಿನ - "ಓಹೋ ಇದನ್ನು ನೋಡಿ ಹಾಗೆ ಯೋಚಿಸಿದ್ದೆನೇ!" ಎಂದು ಉದ್ಗರಿಸಿ ವ್ಹಾ ಎಂದಾಗಲೀ ಥೂ ಎಂದಾಗಲೀ ಹೇಳುವುದಕ್ಕೆ ಅವಕಾಶವಾಗುತ್ತದೆ.

|| ಇತಿ ಶಮ್ ||