Showing posts with label Philosophy. Show all posts
Showing posts with label Philosophy. Show all posts

Wednesday, August 29, 2007

ಚಂದ್ರಗ್ರಹಣ ಮೂಡಿಸಿದ ಚಿಂತನೆ

ಇಂದು ಬೆಳಗ್ಗೆ ಪತ್ರಿಕೆಯನ್ನೋದುವಾಗ ಎರಡು ವಿಷಯಗಳು ಒಮ್ಮೆಲೆ ದೃಷ್ಟಿಗೋಚರವಾದುವು. ಮೊದಲೆನಯದು ಚಂದ್ರಗ್ರಹಣದ ಬಗ್ಗೆ ವಿಜ್ಞಾನಿಗಳು ಮಾಡುವ ಸಂಶೋಧನೆಯನ್ನು ಕುರಿತದ್ದು. ಇನ್ನೊಂದು - ಅದರ ಪಕ್ಕದಲ್ಲೇ ಕಂಡದ್ದು - ಖ್ಯಾತ ಜ್ಯೋತಿಷಿಗಳೆಂದು ಕರೆಸಿಕೊಂಡ ಎಸ್. ಕೆ. ಜೈನ್ ಅವರ ವಿಶ್ಲೇಷಣೆ. ಅವರ ಪ್ರಕಾರ ಚಂದ್ರಗಹಣ ಸೂರ್ಯಗ್ರಹಣಗಳು ಒಂದೇ ಪಕ್ಷದಲ್ಲಿ (ಹದಿನೈದು ದಿನಗಳೊಳಗೆ) ನಡೆಯುವ ಕಾರಣದಿಂದ ಇದು ಅವಲಕ್ಷಣವಾದ ನಿಮಿತ್ತ. ಪ್ರಪಂಚದಲ್ಲಾಗುವ ದುರಂತಗಳ ಸೂಚನೆ ಇದು ಎಂಬಂತೆ ಹೇಳಿದ್ದರು. ಇದೇ ರೀತಿಯ ಗ್ರಹಣದ್ವಯ ಮಹಾಭಾರತದ ಕುರುಕ್ಷೇತ್ರ ಯುದ್ಧದ ಮುಂಚೆಯೂ ಆಗಿತ್ತು (ಹದಿಮೂರು ದಿನಗಳು ಈ ಗ್ರಹಣಗಳ ನಡುವಣ ಅಂತರ) ಎಂದು ಮಹಾಭಾರತದಲ್ಲಿಯೇ ಬಂದಿದೆ. ಗ್ರಹಣಗಳು ಮನುಷ್ಯನ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತವೆ ಎಂದು ಚರಿತ್ರೆಯನ್ನು ನೋಡಿದಾಗ ಕಂಡು ಬರುವ ಸಂಗತಿ.

ಆದರೆ ಇದು ನನ್ನನ್ನು ಯೋಚನೆಗೀಡು ಮಾಡಿತು. ಇದೇ ಜ್ಯೋತಿಷಿಗಳು ಸೆಪ್ಟೆಂಬರ್ ೧೧, ೨೦೦೧ ರ ದುರಂತದ ಬಗ್ಗೆ ಮುಂಚಿನ ಸೂಚನೆಯನ್ನೇನಾದರೂ ನೀಡಿದ್ದರೇ? ಒಂದೊಂದು ದುರಂತವಾದ ಮೇಲೂ ಈ ಜ್ಯೋತಿಷಿಗಳು - "ಆಹಾ ನೋಡಿದಿರಾ ಈ ಗ್ರಹಗತಿಗಳಲ್ಲಿ ನನಗೆ ಮೊದಲೇ ಕಂಡಿತ್ತು. ಎಂಥ ಒಳ್ಳೆ ಜ್ಯೋತಿಷಿ ನಾನು" ಎಂಬಂತೆ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವವರೇ! ಇಲ್ಲವೇ ಸ್ಥೂಲವಾಗಿ ಏನಾದರೂ ಆಗುವಂತೆ ಕಾಣುವ ಒಂದು ವಿಷಯವನ್ನು ತಾವು ಜ್ಯೋತಿಃಶಾಸ್ತ್ರದ ಮೂಲಕ ನಿರ್ಧಾರ ಮಾಡಿದ ಹಾಗೆ ಹೇಳುತ್ತಾರೆ. ಆದರೆ ಒಮ್ಮೆಯಾದರೂ ಆ ಸುನಾಮಿಯ ದುರಂತದ ಬಗ್ಗೆಯೋ ಅಥವಾ ಈಚೆಗೆ ಹೈದರಾಬಾದಿನ ಬಾಂಬ್ ಸ್ಫೋಟದ ಬಗ್ಗೆಯೋ ಮೊದಲೇ ಹೇಳಿದ್ದರೇ? ಊಹೂಂ.

ಆದರೂ ಜನರು ಇವರನ್ನು ನಂಬುತ್ತಾರೆ. ಇವರು ಹೇಳಿದ್ದು ವೇದವಾಕ್ಯಕ್ಕೂ ಮಿಗಿಲು ಎಂಬಂತೆ ಇವರ ನಂಬಿಕೆ. ನಮ್ಮ ಸಮಾಜ ಹೆಚ್ಚೆಚ್ಚು ಆಧುನಿಕವಾಗಿದ್ದೂ ಈ ಹಿಂದಿನ ಅಷ್ಟೇನೂ ಪ್ರಗತಿದಾಯಕವಾಗದ (ಜೊತೆಗೆ ಅಷ್ಟು ವಿಚಾರಪೂರ್ಣವಲ್ಲದ) ಒಂದು ನಂಬಿಕೆಗೆ ತಮ್ಮ ಶ್ರದ್ಧಾಭಕ್ತಿಗಳನ್ನು ಕೊಟ್ಟು ಕೊರಗುತ್ತಿದೆ. ಇಪ್ಪತ್ತು ವರ್ಷಗಳ ಹಿಂದೆ ನಾನಿನ್ನೂ ಬಾಲಕ. ಆದರೆ ಈ ಮಟ್ಟದ ಜ್ಯೋತಿಷ್ಯದ ತಾಂಡವವನ್ನು ಕಂಡಿರಲಿಲ್ಲ. ಇದರ ಹಿಂದೆಯೂ ಹಾಗೆ ನನ್ನ ತಿಳಿದ ಮಟ್ಟಿಗೆ ಇರಲಿಲ್ಲ. ಉದಾಹರಣೆಗೆ, ನಮ್ಮ ತಾತ-ಅಜ್ಜಿಯವರ ಮದುವೆ ಈಗಿನ ಹಾಗೆ ಜಾತಕ ನೋಡಿ ನೋಡಿ ಮಾಡಿದ್ದಲ್ಲ! ಆದರೂ ಅವರು ಐವತ್ತು-ಅರವತ್ತು ವರ್ಷಕ್ಕೂ ಹೆಚ್ಚಿನ ಕಾಲ ಸಂಸಾರ ಮಾಡಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಪ್ರತಿಯೊಂದಕ್ಕೂ ಜ್ಯೋತಿಷ್ಯದ ಉಪಯೋಗ! ಬೆಳಗ್ಗೆ ಕೆಲಸಕ್ಕೆ ಹೋಗುವ ಮುಂಚೆ ರಾಹುಕಾಲದ ಪರೀಕ್ಷೆ! ಯಾವುದೇ ಕೆಲಸದ ಸಮಯದಲ್ಲಿ ಈ ಗುಳಿಕ-ರಾಹು-ಯಮಗಂಡಗಳ ಪರಿಶೀಲನೆ! ಹಲವು ಹಳೆಯ ಮನೆಗಳು ಈಗಿನ "ವಾಸ್ತು" ಪ್ರಕಾರ ಕಟ್ಟಿದ್ದಲ್ಲ. ಆದರೂ ಆ ಮನೆಗಳು ನೂರಾರು ವರ್ಷಗಳ ಕಾಲ ಬಾಳಿ ಬೆಳಗಿವೆ. ಆದರೆ ಈಗ ಪ್ರತಿಯೊಂದು ಕಟ್ಟಡವೂ "ವಾಸ್ತು ಪ್ರಕಾರ" ಇರಬೇಕು. ಅದಿಲ್ಲವೆಂದರೆ ಯಾರೋ ಬಂದು - ನಿಮ್ಮ ವಾಸ್ತು ಸರಿಯಿಲ್ಲ ಅನ್ನುವುದು, ನಿಮಗೆ ಮನಸ್ಸಿಗೆ ಬೇಜಾರಾಗುವುದು ಎಲ್ಲ ಸಾಮಾನ್ಯ ಸಂಗತಿಗಳು. ಆಧುನಿಕ ಕಾಲದಲ್ಲಿ "ಮೂಢನಂಬಿಕೆ" ಎಂದು ಮೂಲೆಗುಂಪು ಮಾಡಬಹುದಾದಂಥ ನಂಬಿಕೆಗಳಿಗೇಕೆ ಮೊರೆ ಬೀಳುತ್ತಾರೆ ನಮ್ಮ ಜನ?

ಆಧುನಿಕತೆ ಭೌತಿಕವಾಗಿ ಐಶಾರಾಮವನ್ನು ಒದಗಿಸಿದ್ದರೂ ಮನಸ್ಸಿನಿಂದ ಶಾಂತಿಯನ್ನು ಕಿತ್ತುಕೊಂಡಿದೆಯೆಂದೇ ಹೇಳಬೇಕು. ಭೌತಿಕದ ಆರಾಮದಿಂದ ಮನಸ್ಸಿಗೆ ಹಾರಾಡುವುದಕ್ಕೆ ರೆಕ್ಕೆ ಬಂದ ಹಾಗಾಗಿದೆ. ಆದರೂ ಪ್ರಯೋಜನವಿಲ್ಲ. ಹಿಂದೆಯಾದರೋ ಊಟಕ್ಕೆ ಮತ್ತು ನೀರಿಗೆ ಪರದಾಟವಿರುತ್ತಿತ್ತು. ಈ ರೀತಿಯ ವಿಷಯಗಳನ್ನು ಕುರಿತು ಯೋಚಿಸಲು ಸಹ ಸಮಯವಿರುತ್ತಿರಲಿಲ್ಲ. ಆದರೆ ಈಗ ಓಡಾಡಲು ಕಾರು-ಪ್ಲೇನು, ಮನೆಯಲ್ಲಿ ಟಿವಿ, ಮಿಕ್ಸಿ, ತಂಗಳು ಪೆಟ್ಟಿಗೆ ಮುಂತಾದ ಉಪಕರಣಗಳು ಎಲ್ಲೆಲ್ಲೂ ಇವೆ. ದೇಹಕ್ಕೆ ಸುಖ ಸಿಕ್ಕಿದೆ. ಆದರೆ ಮನಸ್ಸು "idle" ಆಗಿಬಿಟ್ಟಿದೆ. ಖ್ಯಾತವಾದ ಇಂಗ್ಲಿಷ್ ಗಾದೆ ಎಲ್ಲರಿಗೂ ಗೊತ್ತಲ್ಲ? "An idle mind is the devil's workshop". ನಮ್ಮಲ್ಲಿ ಬಹಳ ಜನರಿಗೆ ಇದೇ ಆಗಿರುವುದು ಎಂದು ನನ್ನ ಅನಿಸಿಕೆ (ನಾನೂ ಇದಕ್ಕೆ ಹೊರತಲ್ಲ). ಬೇರೆ ಕೆಲಸವಿಲ್ಲವಲ್ಲ? ಅದಕ್ಕೆ ಪಕ್ಕದ ಮನೆಯ ಟಿವಿ ದೊಡ್ಡದಾದರೆ ನಮ್ಮ ಮನೆಯದು ಇನ್ನೂ ದೊಡ್ಡದಾಗಬೇಕೆಂಬ ಹಂಬಲ ಬರುತ್ತದೆ. ಕೆಲಸ ಹೆಚ್ಚು ಮಾಡದೆ ವರ್ಷಕ್ಕೆ ಶೇಕಡಾ ಮುವ್ವತ್ತರಷ್ಟು ಸಂಬಳ ಹೆಚ್ಚಬೇಕು ಎಂಬಂಥ ನಿರೀಕ್ಷೆಗಳು ಬೇರೆ. ಕೆಲಸ ಆದಷ್ಟು ಕಡಿಮೆ ಮಾಡಿ ಆದಷ್ಟು ಹೆಚ್ಚು ಭೋಗಗಳನ್ನು ಸವಿಯಬೇಕೆಂಬುದು ಬಹಳ ಕಾಲದಿಂದ ಮಾನವನ ಹಂಬಲವಾದರೂ ಈಗ ಅದು ಸ್ವಲ್ಪ ಹೆಚ್ಚಾಗಿಯೇ ಕಾಣುತ್ತಿದೆ ಎಂದು ಹೇಳಬೇಕು. ಇವೆಲ್ಲ ಮತ್ತು ಇದಕ್ಕೂ ಹೆಚ್ಚಿನ ಕಾರಣಗಳಿಂದ ಮನುಷ್ಯಸಮಾಜ ಅತಂತ್ರತೆ ಮತ್ತು ಅಶಾಂತಿಯನ್ನು ಹೊಂದಿದೆ. ಇದಕ್ಕೆ ಪರಿಹಾರ ಬೇಕಾದದ್ದೇ. ಪರಿಹಾರದ ಆಭಾಸವಾಗಿ ಸಾಂಖ್ಯಶಾಸ್ತ್ರ (numerology), ಜ್ಯೋತಿಷ್ಯ, ಮಂತ್ರ/ತಂತ್ರ ಮುಂತಾದವು ನಗರಗಳಲ್ಲಿ ಹೆಚ್ಚು ಕಾಣಸಿಗುತ್ತವೆ. ನಮ್ಮ ಮನಸ್ಸನ್ನು ಬದಲಾಯಿಸಲು ಪ್ರಯತ್ನ ಪಡದೆ ಯಾರಿಗೋ ದುಡ್ಡು ಕೊಟ್ಟು "ಶಾಂತಿ" ಮಾಡಿಸಿಕೊಂಡರೆ ತಮ್ಮ ತೊಂದರೆ ಪರಿಹಾರವಾದ ಹಾಗೆ ಅನ್ನುವ ಯೋಚನೆ ಗಟ್ಟಿಯಾಗಿ ನಮ್ಮ ಜನರ ಮೆದುಳುಗಳಲ್ಲಿ ಬೇರೂರಿದೆ. ಸುಖ ದುಃಖಗಳ ಮೂಲಸ್ವರೂಪಕ್ಕೆ ಹೋಗಿ ನಿಷ್ಕರ್ಷೆ ಮಾಡುವ ಬುದ್ಧಿ ನಮ್ಮ ಜನರಲ್ಲಿದ್ದಿದ್ದರೆ ಈಗ ಕಾಣುವ ಜ್ಯೋತಿಷ್ಕರಲ್ಲಿ ಅರ್ಧಕ್ಕರ್ಧ ಬೇರೆ ವೃತ್ತಿಗಳನ್ನು ಅವಲಂಬಿಸುತ್ತಿದ್ದರು.

ಒಂದು ಮಾತನ್ನು ಹೇಳಲು ಇಚ್ಛಿಸುವೆ. ನನಗೆ ಜ್ಯೋತಿಷ್ಯದ ಶಕ್ತಿಯ ಬಗ್ಗೆ ಅಷ್ಟು ತಿಳಿದಿಲ್ಲ. ಆದ್ದರಿಂದ ಅದರಲ್ಲಿ ದೋಷವಿದೆ ಎಂದು ನಾನು ಹೇಳಲಾರೆ. ಆದರೆ ಸಮಾಜದ ಈ ಹೊಸ ಬೆಳವಣಿಗೆ ಮಾತ್ರ ಒಳ್ಳೆಯದಲ್ಲ.

"ಇವೆಲ್ಲ ಗೊಡ್ಡು ಹಿಂದು ಧರ್ಮದ ಕೆಟ್ಟತನ. ಕರ್ಮ ಸಿದ್ಧಾಂತದ ಬುನಾದಿಯಿರುವುದರಿಂದ ಜನರು ಅದನ್ನು ನಂಬಿ ತಲೆಯ ಮೇಲೆ ಕೈ ಹೊತ್ತುಕೊಂಡು ಕುಳಿತಿದ್ದಾರೆ. ಇದನ್ನು ಬಿಟ್ಟರೆ ಸಮಾಜ ಉದ್ಧಾರವಾಗುತ್ತದೆ", ಎನ್ನುವುದು "ಪ್ರಗತಿಪರ" ರೆಂದು ತಮ್ಮನ್ನು ತಾವೇ ಬಣ್ಣಿಸಿಕೊಳ್ಳುವ ಒಂದು ಬಣ. ಈ ಮಾತು ಸತ್ಯಕ್ಕೆ ಬಹಳ ದೂರವಾಗಿದೆ. ಧರ್ಮದ ಸರಿಯಾದ ತಿಳಿವಳಿಕೆಯಿಲ್ಲದ ಜನರು ಈ ರೀತಿ ಮಾತಾಡುತ್ತಾರೆ. ಜಾತಕ ನೋಡುವ, ಮುಹೂರ್ತ ಇಡುವ, ಹಸ್ತ ಸಾಮುದ್ರಿಕೆ ಮೊದಲಾದುವೇ ಹಿಂದು ಧರ್ಮ ಎಂದು ಇಂಥವರ ತಪ್ಪು ಕಲ್ಪನೆ. ಪುರಾಣಗಳ ಕಥೆಗಳಲ್ಲಿ ಬರುವ ರಾಮ-ಸೀತೆಯರ, ಕೃಷ್ಣ-ರುಕ್ಮಿಣಿಯರ, ಶಿವ-ಪಾರ್ವತಿಯರ ಮದುವೆಗಳನ್ನು ಜಾತಕ ನೋಡಿಯೇ ಮಾಡಿದ್ದರೆ? ಹೋದರೆ ಹೋಗಲಿ, ದ್ರೌಪದಿಯ ಮದುವೆಯನ್ನು? ದುಷ್ಯಂತ-ಶಕುಂತಲೆಯ ಮದುವೆಗೆ ಮುಹೂರ್ತ ಇಟ್ಟಿದ್ದರೆ? ಈ ದೇವಾಧಿದೇವತೆಗಳ, ನಾಯಕನಾಯಿಕೆಯರ ಚಿತ್ರಪಟಗಳನ್ನಿಟ್ಟು ಪೂಜೆ ಮಾಡುವವರು ಅಥವಾ ಅಭಿಮಾನಿಸುವವರು ಅವರಿಂದ ಕಲಿಯುವುದು ಇಷ್ಟನ್ನೇ?

ನಮ್ಮ ವೇದಗಳಲ್ಲಿ ಜ್ಯೋತಿಷ್ಯದ ಪರಿಚಯ ಇತ್ತೆಂದು ತಿಳಿದುಬಂದರೂ, ಪುರುಷ ಪ್ರಯತ್ನಕ್ಕೆ ಬಹಳ ಪ್ರಾಮುಖ್ಯ ಅಲ್ಲಿ ಕೊಟ್ಟೇ ಇದೆ. ಜೀವನವನ್ನು ಕುರಿತು ಜುಗುಪ್ಸೆಯಿಲ್ಲ; ಅದರ ಬದಲಿಗೆ ಆದರವಿದೆ, ಪ್ರೀತಿಯಿದೆ. "ಪಶ್ಯೇಮ ಶರದಶ್ಶತಂ ಜೀವೇಮ ಶರದಶ್ಶತಂ ನಂದಾಮ ಶರದಶ್ಶತಂ ಮೋದಾಮ ಶರದಶ್ಶತಮ್" ಅನ್ನುವುದು ನಮ್ಮ ವೇದಗಳ ಉತ್ಸಾಹಭರಿತ ಉದ್ಗಾರ. (ನೂರು ಶರತ್ಕಾಲಗಳನ್ನು ನೋಡೋಣ, ನೂರು ಶರತ್ಕಾಲಗಳ ಜೀವನ ಮಾಡೋಣ, ನೂರು ಶರತ್ಕಾಲಗಳ ಆನಂದ ಹೊಂದೋಣ, ನೂರು ಶರತ್ಕಾಲಗಳ ಮುದವನ್ನು ಹೊಂದೋಣ).

ಇನ್ನೊಂದು ಯೋಚನೆ ಕೂಡ ನನಗೆ ಬರುತ್ತದೆ. ಕಷ್ಟಸಹಿಷ್ಣುತೆ ಕಡಿಮೆಯಾಗಿರುವುದೇ ಈ ಸಾಮಾಜಿಕ ದೌರ್ಬಲ್ಯಕ್ಕೆ ಕಾರಣವಿರಬಹುದೇ? ಹಿಂದೆ ಸವಲತ್ತುಗಳು ಸರಿಯಾಗಿರಲಿಲ್ಲ. ಆದ್ದರಿಂದ ಜನರು ಕಷ್ಟ ಪಡುತ್ತಿದ್ದರು. ಕಷ್ಟ ಪಡಲು ಹೇಸುತ್ತಿರಲಿಲ್ಲ. ಈಗ ಕಷ್ಟ ಬಂದರೆ ಅದನ್ನು ತಪ್ಪಿಸಿಕೊಳ್ಳುವುದು ಹೇಗೆ ಎಂದೇ ಮೊದಲು ನೋಡುತ್ತೇವೆ. ನಾವು ಸುಮ್ಮನೆ ಕಷ್ಟ ಪಡಬೇಕು ಎಂದು ಹೇಳುತ್ತಿಲ್ಲ. ಆದರೆ ಸ್ವಲ್ಪ ಕಷ್ಟವನ್ನಾದರೂ ಪಡುವುದಕ್ಕೆ ಸಿದ್ಧರಿರಬೇಕು. ಈ ಸಹಿಷ್ಣುತೆ ಮನಸ್ಸಿನಲ್ಲಿ ಮತ್ತು ದೇಹದಲ್ಲಿ ಒಳ್ಳೆಯದನ್ನು ಮಾಡುತ್ತದೆ. ಎಂಥ ಕಷ್ಟ ಬಂದರೂ ಸಹಿಸಿಕೊಳ್ಳುವ ಶಕ್ತಿಯನ್ನು ರೂಢಿಸುತ್ತದೆ. ಈ ಗುಣದ ಕಡಿಮೆಯಾಗುವಿಕೆಯೇ ಈ "ನಕ್ಷತ್ರಜೀವಿಗಳ" (ಜ್ಯೋತಿಷ್ಕರು, ಮಂತ್ರ/ತಂತ್ರ ಮಾಡುವ ಮೊದಲಾದವರು) ಹೆಚ್ಚುವಿಕೆಗೆ ಕಾರಣವೇ?

ಅಂದ ಹಾಗೆ, ಎಲ್ಲ "ಪ್ರಗತಿಪರರೂ" ಹೇಯವೆಂದು ತೆಗಳುವ ಮನುಸ್ಮೃತಿಯಲ್ಲಿ ಈ ರೀತಿಯ ನಕ್ಷತ್ರಜೀವಿಗಳು ಪಂಕ್ತಿಭೋಜನಕ್ಕೆ (ಅಂದರೆ ಮನೆಯಲ್ಲಿ ಕರೆದು ಒಟ್ಟಿಗೆ ಕುಳಿತು ಊಟ ಮಾಡುವುದು) ಯೋಗ್ಯರಲ್ಲ ಎಂದು ಹೇಳಿದೆ. ಹಿಂದು ಧರ್ಮದ ಆಭಾಸ ಹೀಗೆ ಕಂಡರೆ, ನಮ್ಮ ಸನಾತನ ಧರ್ಮದ ವಾಸ್ತವದ ಪರಿಚಯಕ್ಕೆ ಯಾವುದನ್ನು ನೋಡಬೇಕು? ಗೀತಾಚಾರ್ಯನಾದ ನಮ್ಮ ಶ್ರೀಕೃಷ್ಣನು ಹೇಳಿದ ಈ ಮಾತುಗಳೇ! ಸಮಸ್ತ ಹಿಂದೂ ಜನಾಂಗಕ್ಕೆ ಆದರಣೀಯವಾದುದು ಗೀತೆ. ಅದೇನು ಹೇಳುತ್ತದೆ ಎಂದು ನೆನಪಿಟ್ಟರೆ ಹಿಂದು ಧರ್ಮದ ಸ್ಥೂಲ ಪರಿಚಯವಾಗುತ್ತದೆ. ಜೊತೆಗೆ ಜೀವನ ನಡೆಸಲು ಸುಲಭವಾಗುತ್ತದೆ. ಇವುಗಳಲ್ಲಿ ಎಲ್ಲಾದರೂ ನಕ್ಷತ್ರಗಳ, ಮಂತ್ರ/ತಂತ್ರದ ಪ್ರಸಕ್ತಿ ಬರುವುದೇ ನೋಡಿ!

ನನಗೆ ಮನಸ್ಸಿಗೆ ಬಂದ ಕೆಲವು ಬಹಳ ಪ್ರಿಯವಾದ ಗೀತೆಯ ಶ್ಲೋಕ ಮತ್ತು ಶ್ಲೋಕಾರ್ಧಗಳೊಂದಿಗೆ ಈ ಬರವಣಿಗೆಯನ್ನು ಮುಗಿಸುತ್ತೇನೆ.

"ಮಾತ್ರಾಸ್ಪರ್ಶಾಸ್ತು ಕೌಂತೇಯ ಶೀತೋಷ್ಣಸುಖದುಃಖದಾಃ |
ಆಗಮಾಪಾಯಿನೋನಿತ್ಯಾಃ ತಾನ್ಸ್ ತಿತಿಕ್ಷಸ್ವ ಭಾರತ ||"

ಸ್ಥೂಲ ಅನುವಾದ : "ಶೀತ-ಉಷ್ಣ, ಸುಖ-ದುಃಖ ಮೊದಲಾದ ದ್ವಂದ್ವಗಳು ಕೇವಲ ಇಂದ್ರಿಯಜನ್ಯಗಳು. ಬಂದು ಹೋಗುವ ಇವು ಅನಿತ್ಯಗಳು. ಆದ್ದರಿಂದ ಅವನ್ನು ತಡೆದುಕೋ, ಅರ್ಜುನ".

"ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂಃ ಮಾ ತೇ ಸಂಗೋಸ್ತ್ವಕರ್ಮಣಿ"

ಸ್ಥೂಲ ಅನುವಾದ : "ಅರ್ಜುನ: ನಿನಗೆ ಕರ್ಮ ಮಾಡುವುದರಲ್ಲಿ ಮಾತ್ರ ಅಧಿಕಾರವಿದೆ. ಇದರ ಫಲದಲ್ಲಲ್ಲ. ನೀನು ಕರ್ಮಫಲಕ್ಕೆ ಆಸೆ ಪಡಬೇಡ. ಅದೇ ಹೊತ್ತಿಗೆ ಕರ್ಮ ಮಾಡುವುದನ್ನೂ ಬಿಡಬೇಡ"

"ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವಃ" - ತನ್ನ ಕರ್ಮದಿಂದ ಭಗವಂತನನ್ನು ಅರ್ಚಿಸಿ ಮನುಜ ಸಿದ್ಧಿಯನ್ನು ಹೊಂದುತ್ತಾನೆ.

"ಯೋಗಃ ಕರ್ಮಸು ಕೌಶಲಮ್ " - ಚೆನ್ನಾಗಿ ಕೆಲಸ ಮಾಡುವುದೇ ಯೋಗ.

"ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ |
ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ||"

"ಎಲ್ಲ ಧರ್ಮಗಳನ್ನು ಬಿಟ್ಟು ನನ್ನನ್ನು ಮಾತ್ರ ಶರಣು ಹೊಂದು. ನಾನು ನಿನ್ನನ್ನು ಎಲ್ಲ ಪಾಪಗಳಿಂದಲೂ ಬಿಡಿಸುತ್ತೇನೆ. ದುಃಖಿಸಬೇಡ". - ಈ ಮಾತು ಕೊನೆಯದು. ಏನನ್ನೂ ಮಾಡಲು ಆಗದಾಗ ಶರಣು ಹೊಂದುವುದೊಂದೇ ಮಾರ್ಗ.

|| ಇತಿ ಶಮ್ ||

Friday, May 11, 2007

shrI vidyAraNya - the unparalleled one - Part II

ब्रह्मक्षत्रसमिद्धबुद्धिविभवप्रॊद्भूततेजोबलात्
उद्वेलोग्रतुरुष्कसैन्यजलधिं संस्तभ्य दूराच्चिरम् ।
वेदं शास्त्रमथोद्दधार सकला यो भारतीयाः कलाः
विद्यारण्ययतीश्वरं नमत भॊस्तं नूतनं शङ्करम् ॥

brahma-kShatra-samiddha-buddhi-vibhava-prodbhUta-tejo-balAt
udvelogra-turuShka-sainya-jaladhiM saMstabhya dUrAcchiram
vedaM shAstrama-thoddadhAra sakalA yo bhAratIyAH kalAH
vidyAraNya-yatIshvaraM namata bhostaM nUtanaM shaMkaram

(Composed by mahAmahopAdhyAya Vidvan shrI Ranganatha Sharma in his book PanchadashI pravachana)

Gist: Having stopped the ocean of excessively fierce turuShka forces at a distance for a long time, solely by the radiance emanating from the combined prowess in Brahma and kShatra, he indeed resurrected vedic learning and by that, all the Indian arts. All ye! Bow down to such a personality, shrI vidyAraNya, the foremost among yatis (sages), who is indeed a new Shankara.

The early fourteenth century CE was a tumultuous period for Hindus all over India. Islam had traveled to India and had established strong roots. Several Muslim dynasties had ruled large tracts of India by then. In particular, Malik Kafur, the general of Ala-ud-din Khilji created havoc far into southern India destroying and looting several temples (notably Halebid, Madurai, Srirangam). That was the first time an Islamic ruler had gone so far. The threat of Islamic invasion had become a reality to several people in that region. The Yadavas of Devagiri, the Hoysalas of Dwarasamudra, the Kakatiyas of Warangal and the Pandyas of Madurai were roundly routed. These rulers also fought amongst themselves, just making it easy for a foreign invader to defeat them. The absence of a unified power that could stand up to this onslaught was glaring. The necessity of such a power could not be understated.

यदा यदा हि धर्मस्य ग्लानिर्भवति भारत ।
अभ्युत्थानमधर्मस्य तदात्मानं सृजाम्यहं ॥
“Whenever righteousness declines and unrighteousness increases, then I manifest Myself”. So guarantees Lord Krishna in the gItA. Almost as if to prove this statement was the advent of Sri vidyAraNya.

In 1296 CE (April 11th, according to a few researchers), to the blessed couple mAyaNa and shrImatI was born mAdhava. This is durmukha saMvatsara, vaishAkha shuddha saptamI, Wednesday, according to the lunar calendar. Madhava or mAdhavAchArya (not to be confused with madhvAchArya) was destined to grow to become shrI vidyAraNya. Based on existing research and information, he was born in Karnataka in the bharadvAja gotra. His school was krishNayajurveda and his sUtra was bodhAyana.

Wealth and learning, it is said, do not go together. It was the case at least with Madhava and his family. sAyaNa and bhoganAtha were his younger brothers and these brothers had Singale as their sister.

Taught initially by his father mAyaNa, mAdhava and sAyaNa, became disciples of shrI shrIkaNThanAtha, a renowned teacher around the area of Sringeri. Later they learnt under the famous pontiffs of Sringeri – shrI bhAratI tIrtha and the great shrI vidyAtIrtha. shrI shankarAnanda (author of gItAtAtparyabodhinI and other advaitic works) was another teacher.

shrI vidyAtIrtha was known to have traveled as far as the Himalayas in those days. It would not be too much to surmise that mAdhava might have accompanied him in a few of his travels. This would have given mAdhava an idea of the country’s state at that time and would have even probably sown in his mind the seeds of the Great Reconstruction that he was to undertake later.
The learning of both sAyaNa and mAdhava was encyclopedic, covering the veda, vyAkaraNa(grammar), alaMkAra (poetics), vedAnta, shilpa (architecture), kalA (art), orthodox and heterodox darshanas, Agamas, purANas, music, Ayurveda, mathematics and so many other fields. The fact that this pair of brothers has accomplished so much is ample testimony to their education. It can be vouched for by any traditional paNDit that mastery in even one of these fields is difficult. What then of this bewildering variety of subjects!

After completing brahmacharya or the Ashrama of studenthood, Madhava very likely entered gArhasthya or the life of a householder. For a person who had titles like “prativasantasomayAji” (one who performed the soma sacrifice every spring), it seems quite unlikely that he would be unmarried. (Unmarried people cannot perform such sacrifices). sAyaNa must have followed his brother into householdership as well. It is surmised that Madhava spent almost sixty years of his life (age 20 to age 80) as a householder.

It was during these momentous sixty years that mAdhava undertook several onerous tasks. He was instrumental in founding a kingdom that would become the bulwark against future Islamic invasions. He was the Prime Minister of the region he lived in. He was Royal Preceptor. He guided several efforts to codify dharma, culture and art. He was also the kulapati in his gurukula.

As was done in those days, shrI mAdhavAchArya formally renounced the world and became a sannyAsin – shrI vidyAraNya - around 1376 CE. He became the pontiff of Sringeri, that great seat of learning. Even then, shrI vidyAraNya could not spend a lot of time in Sringeri itself, but in the capital, Hampi, to guide the rulers in administration.

As shrI vidyAraNya himself says in his panchadashI
ज्ञानिना चरितुं शक्यं सम्यग्राज्यादिलौकिकम् ।
An illumined person can indeed address worldly acts such as ruling a kingdom.

Swami VidyAraNya himself was an apt example for that statement. He attained videha-mukti (bodiless salvation) in 1386 CE.

This particular post focused on the details of the life of shrI vidyAraNya. The next part will focus on the political aspect of shrI mAdhava-vidyAraNya’s contributions.

iti sham

References
1. shrI vidyAraNya vijaya - by shrI DVG (Collected works of DVG, Vol 3, Directorate of Kannada and Culture, Nrupatunga Road, Bangalore - 560 001 )
2. vibhUtipuruSha vidyAraNya - by shatAvadhAni Dr. R Ganesh (Published by shrI bhagavatpAdaprakAshana, Swarnavalli, Sonda - 581 336, Karnataka)
3. panchadashI pravachana - by MM vidvAn shrI ranganAtha sharmA (Published by vedanta bharati, Krishnarajanagara, Mysore Dt - 571 602, Karnataka)

shrI VidyAraNya, the unparalleled - Introduction - Part I

India ever since her independence in 1947 has chosen to unfortunately celebrate only “politically correct” and “convenient to explain” heroes and freedom fighters. As a result, we forget, at great loss to ourselves and our progeny, such great men that had served Mother India in various roles.

Swami VidyAraNya is one such illustrious personage. Even though the state of karNATaka celebrates him in several books and even the occasional film song here and there, he is fast vanishing from the minds of the common man. Of course, he seems to have been forgotten in other parts of India. His memory is well preserved only among practising Advaitins who, to this day hold dear his great works such as the panchadashI, the vivaraNa-prameya-saMgraha and of course, the monumental veda bhAShya – done with the help of his younger brother of his pUrvAshrama – sAyaNa.

Other Indian readers need to learn more about such people who epitomize Indian values and culture. Indians were not always fatalists resorting to the inviolable law of karma. And neither were they cowards.

Remembering such personalities makes our life richer. It also makes us humble after having known that such great men walked the earth and country that we now take for granted.

With this short introduction, I will begin the series on shrI vidyAraNya from the next post.

Friday, March 09, 2007

ಸಟೆಯೋ ದಿಟವೋ?

ಬೆಂಗಳೂರಿನ ಬೀದಿಯಲ್ಲಿ ನಡೆದುಹೋಗುತ್ತಿದ್ದೆ. ಸ್ವಲ್ಪ ದೂರದಲ್ಲಿ ಒಂದು ಪಾರ್ಕಿನಲ್ಲಿನ ಹುಲ್ಲು ಹಾಸಿತ್ತು. ಗಾಳಿಯು ತಂಪಾಗಿ ಬೀಸುತ್ತಿದ್ದು ಬಿಸಿಲಿನ ಝಳ ಅಷ್ಟಿರಲಿಲ್ಲ. ಆಹ್ಲಾದಕರವಾದ ವಾತಾವರಣ. ನೆಲದೆಡೆ ದಿಟ್ಟಿಸುತ್ತಾ ನಡೆದ ನನಗೆ ಒಮ್ಮೆ ಮೇಕೆಮರಿಯೊಂದರ "ಮ್ಯಾ" ದನಿ ಕೇಳಿತು. ಹಿತವಾದ ವಾತಾವರಣದಲ್ಲಿ ಮುಳುಗಿದ್ದ ನನ್ನನ್ನು ಆ ದನಿ ಎಲ್ಲಿಗೋ ಒಯ್ಯಿತು. ಒಮ್ಮೆಲೇ ಪರ್ವತದ ಮೇಲಿನ ತಂಪಾದ ಗಾಳಿಗೆ ಮೈಯೊಡ್ಡಿದವನಾಗಿ ನಾನು; ಕುರುಬನೊಬ್ಬನು ಒಂದು ಮೇಕೆ ಕುರಿಗಳ ದಿಂಡನ್ನು ಮೇಯಿಸುತ್ತಿದ್ದ ಹಾಗೆ; ಈ ಪ್ರಾಣಿಗಳೆಲ್ಲವೂ ಆನಂದದಿಂದ ನಲಿಯುವ ಹಾಗೆ ಆಗಿತ್ತು. ನನ್ನಲ್ಲಿಯೂ ಒಂದು ಆನಂದ, ತೃಪ್ತಿ ತುಂಬಿತ್ತು. ಈ ತೃಪ್ತಭಾವನೆಯ ಮೂಡಿಸಿದ ಮೇಕೆಯ ಕೇಕೆಯ ದನಿಯೆಡೆ ಕಣ್ಣು ಹಾಯಿಸಿದೆ.

ಆದರೆ ಕಂಡದ್ದೇನು? ಅಲ್ಲೊಂದು ವಿಕಾರವಾದ ಲಾರಿಯಿದ್ದು ಅದರಲ್ಲಿ ಮೇಕೆಗಳನ್ನು ಹಿಂಡು ಹಿಂಡು ತುಂಬಿದ್ದರು. ಒಂದರ ಮೇಲೊಂದು ಮೇಕೆಯಿದ್ದು ಅವುಗಳಿಗೆ ನಿಲ್ಲಲೂ ಜಾಗವಿರಲಿಲ್ಲ. ಹೇಗೆ ಉಸಿರಾಡುತ್ತಿದ್ದವೋ! ಆ ಮೇಕೆಯ ದನಿ ಆನಂದದಿಂದ ಕೂಡಿದ್ದಾಗಿರದೆ ಆ ಮೂಕ ಪ್ರಾಣಿಗಳ ಹಾಹಾಕಾರವಾಗಿದ್ದಿತು. ಕಟುಕರ ಬಳಿ ಒಯ್ಯಲ್ಪಡುತ್ತಿದ್ದ ಆ ಮುಗ್ಧ ಮೇಕೆಗಳ ದನಿ ಹಿಂದಿನ ಘಳಿಗೆಯಲ್ಲಿ ಎಷ್ಟು ಮುದ ನೀಡಿತ್ತೋ, ಈಗ ಅಷ್ಟೇ ಕಠೋರವಾಗಿ ಕೇಳಿಸಿತ್ತು. ನನ್ನ ಕರುಳನ್ನು ಕಿವುಚಿದ ಹಾಗಾಗಿತ್ತು.

ಕೇಳಿದ್ದು ಅದೇ ದನಿ. ಆ ದನಿ ಬಿದ್ದದ್ದು ಅದೇ ಕಿವಿಗೆ. ಕೇಳಿದವನೂ ನಾನೇ. ಸಂತೋಷ ನೀಡುವ ಅದೇ ದನಿ ಮರುಘಳಿಗೆಯಲ್ಲಿ ವಿಪರೀತಕ್ಕೆ ತಿರುಗಿತ್ತು.

ಪರ್ವತದ ಗಾಳಿ ನೀಡಿದ್ದ ಆಹ್ಲಾದವು ನಿಜವಾಗಿರಲಿಲ್ಲವೇ? ಅನುಭವಿಸಿದ ಮನಸ್ಸು ಅದನ್ನು ಆ ಕ್ಷಣಕ್ಕೆ ಸತ್ಯವೆಂದು ಒಪ್ಪಿರಲಿಲ್ಲವೇ?
ಕನಸಿನಲ್ಲಿನ ಸತ್ಯವೂ ಹೀಗೆಯೇ ಅಲ್ಲವೇ? ನನಗಂತೂ ಪರೀಕ್ಷೆಯ ಕನಸುಗಳು ಯಾವಾಗಲೂ ಬರುತ್ತಿದ್ದುವು. ನಾನು ಪರೀಕ್ಷೆಯಲ್ಲಿ ಉತ್ತರಿಸಲಾಗದ ಪ್ರಶ್ನೆಗಳು; ಶಾಲೆಗೆ ಪರೀಕ್ಷೆಯ ವೇಳೆಗೆ ಸರಿಯಾಗಿ ತಲುಪದಿರುವುದು; ಎಲ್ಲ ಹೀಗೆಯೇ! ಎದ್ದ ಮೇಲೂ ಸ್ವಲ್ಪ ಹೊತ್ತು ಬೇಕಾಗುತ್ತಿತ್ತು ನಿಜವಾದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು.

ಇವೆಲ್ಲ ಸಂಗತಿಗಳಲ್ಲಿ; ಇನ್ನೂ ಹಲವು ಸಂಗತಿಗಳಲ್ಲಿ ಅರಿವಾಗುವುದು ಒಂದು ವಿಷಯ. ಇವೆಲ್ಲವೂ ಮನಸ್ಸಿನ ಕಲ್ಪನೆಗಳೆಂಬುದು. ಇರುವ ನಿಜದ ಮೇಲೆ ನಮ್ಮ ಅಪೇಕ್ಷೆ-ಭಯಗಳ ಇಷ್ಟ-ಅನಿಷ್ಟಗಳ ಲೇಪವನ್ನು ಮಾಡಿ ನೋಡುವುದನ್ನು ನಾವು ಸದಾಕಾಲವೂ ನಮಗೆ ತಿಳಿಯದ ಹಾಗೆ ಮಾಡುತ್ತಿರುತ್ತೇವೆ; ನಮಗೆ ತೀರ ಅಭ್ಯಾಸವಾಗಿಬಿಟ್ಟಿದೆ. ಈ ರೀತಿಯ ಅನುಭವಗಾಳಾದಾಗ ಒಮ್ಮೊಮ್ಮ ಒಳ ಸರಿದು ನೋಡುವ ಅವಕಾಶ ಸಿಗುತ್ತದೆ.

ಇಷ್ಟು ನೈಜ ಅನುಭವ ಕೊಡುವ ಮನಸ್ಸು ಎಷ್ಟು ಶಕ್ತಿವಂತವಾದುದೋ ಊಹಿಸಿ ನೋಡಿದರೆ ಆಶ್ಚರ್ಯವೇ ಆಗುವುದು. ಸಂತೋಷದ ಸಮಯದಲ್ಲಿ ದುಃಖವನ್ನೂ, ಏನೂ ಇರದ ಸಮಯದಲ್ಲಿ ಆತಂಕವನ್ನೂ, ಒಂದನ್ನು ಇನ್ನೊಂದಾಗಿ ಕಾಣುವುದನ್ನು; ಇನ್ನೂ ಹಲವು ಪರಿಸ್ಥಿತಿಗಳಲ್ಲಿ ಮನಸ್ಸಿನ ಶಕ್ತಿಯ ಅರಿವಾಗುವುದು. ಆ ರೀತಿಯಲ್ಲಿ ನೋಡಿದರೆ ಈ ಜಗತ್ತೇ ಮನೋಮಯ.

ಇದರ ಬಗ್ಗೆಯೇ ದೊಡ್ದವರ ಮಾತು ಹೇಳಿರುವುದು. "ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ" ಎಂದು. ಮನಸ್ಸೇ ಬಂಧಕ್ಕು ಮೋಕ್ಷಕ್ಕೂ ಕಾರಣ. ಬಂಧವನ್ನು ಕಲ್ಪಿಸುವುದು ಮನಸ್ಸು. ಕಲ್ಪಿತಬಂಧದಿಂದ ಮುಕ್ತವಾಗುವುದೂ ಮನಸ್ಸೇ!

Wednesday, December 27, 2006

ಭೈರಪ್ಪನವರ ಪರ್ವ: ಚಿಂತನೆಗಳು - ಭಾಗ ೧

ಗದುಗಿನ ನಾರಣಪ್ಪ ತನ್ನ ಕರ್ಣಾಟಭಾರತಕಥಾಮಂಜರಿಯಲ್ಲಿ - "ತಿಣಿಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ" ಎಂದು ಟೀಕಿಸಿದ್ದಾನೆ. ರಾಮಾಯಣವು ಹಿಂದಿನ ಅನೇಕ ಕವಿಗಳಿಗೆ ಕಾವ್ಯಸ್ಫೂರ್ತಿಯನ್ನೊದಗಿಸಿದ್ದರೂ ಆಧುನಿಕರಿಗೆ ಅದರಲ್ಲಿನ ಕಥೆ ಚರ್ವಿತ-ಚರ್ವಣವಾಗಿ ಕಂಡಿದೆ ಎಂದು ನನ್ನ ಅನಿಸಿಕೆ. ರಾಮಾಯಣದ ಕಥೆಯ ಮುಖ್ಯ ಧಾರೆ ಉಪಕಥೆ ಉಪಾಖ್ಯಾನಗಳೆಂಬ ಹೆಚ್ಚು ಕವಲುಗಳಿಂದ ಕೂಡಿರದೆ ನೇರವಾಗಿ ನಿರೂಪಿಸಲ್ಪಟ್ಟಿದೆ. ಭಾರತ ಹಾಗಲ್ಲ. ರಾಮಾಯಣ ದೊಡ್ಡ ನದಿಯಾದರೆ ಭಾರತ "ಮಹಾ" ಎಂಬ ಅನ್ವರ್ಥ ಬಿರುದನ್ನೂ ಸೇರಿಸಿಕೊಂಡು ಸಾಗರಸದೃಶವೆನಿಸಿದೆ, ಜೊತೆಗೆ ನಿತ್ಯನೂತನವಾಗಿ ಕೂಡ ಕಂಡಿದೆ. ರಾಮಾಯಣ ಭಾರತಗಳ ಮೇಲೆ ಮಾಡಿದ ಚಲನಚಿತ್ರಗಳ ಸಂಖ್ಯೆಯನ್ನೇ ಗಮನಿಸಿದರೆ ತಿಳಿಯುತ್ತದೆ. ಗಾತ್ರದಲ್ಲೂ ವಿಷಯವ್ಯಾಪ್ತಿಯಲ್ಲೂ ಮಹಾಭಾರತಕ್ಕೆ ಮಹಾಭಾರತವೇ ಸಾಟಿ.

ಇಷ್ಟು ದೊಡ್ಡದಾದ ಭಾರತವನ್ನು ಸ್ವಂತ ಕಾವ್ಯಪ್ರತಿಭೆಯಿಂದ ಅಲಂಕರಿಸುವುದು ಕಷ್ಟಸಾಧ್ಯವೇ. ಆದರೂ ಕುಮಾರವ್ಯಾಸ ಪಂಪರಾದಿಯಾಗಿ ಹಲವು ಕವಿಗಳು ಕನ್ನಡದಲ್ಲೂ, ಕಾಲಿದಾಸ, ಭಾರವಿ, ಮಾಘ, ರಾಜಶೇಖರ, ಭಾಸ, ಭಟ್ಟನಾರಾಯಣ ಮೊದಲಾದ ಸಂಸ್ಕೃತ ಕವಿ-ನಾಟಕಕಾರರೂ ಮಹಾಭಾರತದಿಂದ ಸಾಮಗ್ರಿಯನ್ನು ಪಡೆದಿದ್ದಾರೆ. ಮಹಾಭಾರತದಿಂದ ಪ್ರೇರಿತವಾದ ಉತ್ತಮ ಕೃತಿಗಳ ಸಾಲಿಗೆ ನಮ್ಮ ಭೈರಪ್ಪನವರ ಪರ್ವವನ್ನು ಅವಶ್ಯವಾಗಿ ಸೇರಿಸಬಹುದು, ಸೇರಿಸಲೇ ಬೇಕು.

ಮಹಾಭಾರತದ ಕಥೆ ಎಲ್ಲರಿಗೂ ತಿಳಿದಿರುವಂಥದು. ಅದನ್ನಾಧರಿಸಿ ಕೃತಿನಿರ್ಮಾಣ ಮಾಡುವವರು ಸಾಮಾನ್ಯವಾಗಿ ಇಡಿಯ ಕಥೆಯ ನಿರೂಪಣೆಗೆ ಹೋಗದೆ ಕೆಲವು ಭಾಗಗಳನ್ನು ವಿಸ್ತರಿಸಿ ಅದಕ್ಕೆ ತಮ್ಮ ಮಾತಿನ ಚಮತ್ಕಾರವನ್ನೂ ಸೇರಿಸಿ ಹೆಚ್ಚು ರಂಜಕವಾಗಿ ಮಾಡುತ್ತಾರೆ. ಭೈರಪ್ಪನವರ ಪರ್ವ ಈ ಸಾಮಾನ್ಯ ಮಾರ್ಗಕ್ಕೆ ಹೋಗದ ಭಿನ್ನ ಕೃತಿ.

"ಪರ್ವ" ಎಂಬ ಹೆಸರಿನಲ್ಲೇ ಸಾಕಷ್ಟು ಅರ್ಥ ಅಡಗಿದೆ. ಮಹಾಭಾರತದ ಪರ್ವಗಳನ್ನು ಜ್ಞಾಪಿಸುವಂಥ ಈ ಪದ ಎರಡು ಯುಗಗಳ ಮಧ್ಯೆ, ಆ ಯುಗಗಳ ಧರ್ಮಗಳ ಮಧ್ಯೆ ಇರುವ ಸಂಧಿಕಾಲ ಅನ್ನುವುದನ್ನು ಕೂಡ ತನ್ನ ಅರ್ಥವ್ಯಾಪ್ತಿಯ ಒಳಗೆ ಸೇರಿಸಿಕೊಳ್ಳಲು ಸಮರ್ಥವಾಗಿದೆ. ಈ ಅರ್ಥವು ಇಡೀ ಕಥೆಯಲ್ಲಿ ಸ್ಫುಟವ್ಯಕ್ತವಾಗಿದೆ. ದ್ವಾಪರ ಮತ್ತು ಕಲಿಗಳ ನಡುವೆ ಇದ್ದ ಕಾಲವನ್ನು ಮಹಾಭಾರತ ತೋರಿಸುತ್ತದೆ ಎನ್ನುವುದು ತಿಳಿದ ಸಂಗತಿಯೇ. ಯುಗಗಳನ್ನು ಹೆಸರಿಸದೆ ಆ ಅರ್ಥ ಚೆನ್ನಾಗಿ ತಿಳಿಯುವ ಹಾಗೆ ಕಥೆ ಹೆಣೆಯಲ್ಪಟ್ಟಿದೆ.

ಮದ್ರ ದೇಶದ ಶಲ್ಯ ಮಹಾರಾಜನ ಮಗ ರುಕ್ಮರಥನ ಚಿಂತನೆಗಳಿಂದ ಕಥೆಯ ಆರಂಭ. ಆ ಹೊತ್ತಿಗೆ ಪಾಂಡವರು ತಮ್ಮ ಅಜ್ಞಾತವಾಸದ ನಂತರ ತಮ್ಮ ರಾಜ್ಯವನ್ನು ಪಡೆಯಲು ಯುದ್ಧಸನ್ನಾಹದಲ್ಲಿರುತ್ತಾರೆ. ಕೌರವರು ಪಾಂಡವರು ತಮ್ಮ ಸುತ್ತಣ ಪ್ರದೇಶಗಳ ರಾಜರನ್ನು ಓಲೈಸುವ ಯತ್ನ ನಡೆದಿರುತ್ತದೆ. ಅಲ್ಲಿಂದ ಮೊದಲ್ಗೊಂಡು ಸಿಂಹಾವಲೋಕನ ರೀತಿಯಲ್ಲಿ ಕಥೆಗೆ ಬೇಕಾಗುವ ಹಿನ್ನೆಲೆಯನ್ನು ಅದೇ ಒದಗಿಸಿಕೊಡುತ್ತದೆ.

ಒಂದು ಸಂಗತಿಯನ್ನು ಇಲ್ಲಿ ಹೇಳಲೇಬೇಕು. ಮಹಾಭಾರತದ ಕಥೆಯನ್ನು ಸುಮಾರು ಚೆನ್ನಾಗಿಯೇ ತಿಳಿದ ನನಗೆ "ಪರ್ವ" ಪಾತ್ರಗಳ ಮನಸ್ಸಿನೊಳಗೆ ಹೊಕ್ಕು ತೋರಿಸಿದ್ದು ಚೆನ್ನಾಗಿತ್ತು. ಆದರೆ ಮಹಾಭಾರತದ ಕಥೆಯನ್ನು ತಿಳಿಯದೆ ಅಂದರೆ ಅದರ ಕಥೆಯ ಕಿಂಚಿತ್ತೂ ಪರಿಚಯವಿಲ್ಲದೆ "ಪರ್ವ"ವನ್ನು ಸವಿಯಬಹುದೇ? ನನ್ನ ಪ್ರಕಾರ : ಸಾಧ್ಯವಿಲ್ಲ. ಭಾರತೀಯರು ಯಾರಾದರೂ ಮಹಾಭಾರತದ ಸ್ಥೂಲಪರಿಚಯವನ್ನಾದರೂ ಹೊಂದಿರುತ್ತಾರೆ. ಭೈರಪ್ಪನವರಿಂದ ನಿರ್ಧರಿಸಲು ಕೂಡ ಇದು ಸ್ವಲ್ಪ ಕಷ್ಟವೇ ಇರಬಹುದು.

ಧರ್ಮದ್ವಯದ ನಡುವೆ ಇರುವ ಸಂಗ್ರಾಮವೆಂಬುದಾಗಿ ಪಾಂಡವ-ಕೌರವರ ಯುದ್ಧ ಕಾಣುತ್ತದೆ. ಇದು ಯಾವ ಧರ್ಮವೆಂದರೆ ಕಥೆಯ ಮೊದಲಿಗೆ ಹೋಗಬೇಕು. ಅಂದಿನ ಕಾಲದಲ್ಲಿ "ನಿಯೋಗ" ವೆಂಬುದು ಸಂತಾನೋತ್ಪತ್ತಿಗೆ ಸರ್ವರಿಂದಲೂ ಮಾನ್ಯವಾದ ಪದ್ಧತಿ. ಇಂದು "In vitro fertilization" ಅನ್ನು ಎಷ್ಟು ಸಹಾನುಭೂತಿಯಿಂದ ನೋಡುತ್ತೇವೆಯೋ ಅಷ್ಟೇ ಮಾನ್ಯತೆ ಆ ಕಾಲದಲ್ಲಿ ನಿಯೋಗ ಪದ್ಧತಿ ಕೂಡ ಪಡೆದಿತ್ತೆಂಬಂತೆ ಕಾಣುತ್ತದೆ. ಪತಿ ಅಶಕ್ತ ಅಥವಾ ಮೃತನಾದಾಗ ವಂಶವನ್ನು ಮುಂದುವರೆಸಲು ಒಬ್ಬ ಶುದ್ಧಚಾರಿತ್ರ್ಯದ ವ್ಯಕ್ತಿಯಿಂದ ವೀರ್ಯದಾನ ಪಡೆದು ಗರ್ಭಧರಿಸುವುದೇ ಈ ಪದ್ಧತಿ. ಈಗ ಇದರ ಮತ್ತೊಂದು ರೂಪ ವೀರ್ಯ"bank" ಗಳಾಗಿ ಕಾಣಿಸುತ್ತಿದೆ.

ನಿಯೋಗ ಮಹಾಭಾರತದ ಕಥೆಗೆ ಎಷ್ಟು ಮುಖ್ಯವೆಂಬುದನ್ನು ನಾನು ಅಷ್ಟು ಮನಗಂಡಿರಲಿಲ್ಲ. ಆದರೆ ಭೈರಪ್ಪನವರಿಗೆ ಇದು ಮೂಲಭೂತವಾಗಿ ಕಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ. ಭೀಷ್ಮನು ಸತ್ಯವತಿಯನ್ನು ತನ್ನ ತಂದೆಗೆ ಕೊಡಿಸಿ ಮದುವೆ ಮಾಡಿಸುವಾಗ ಮಾಡಿದ ಬ್ರಹ್ಮಚರ್ಯ ಪ್ರತಿಜ್ಞೆಯೇ ಮುಂದಿನ ಕಥೆಗೆ ಕಾರಣ. ನಂತರ ಸತ್ಯವತಿಯ ಮಕ್ಕಳಿಬ್ಬರೂ ಮಡಿದಾಗ ಅವಳು ಭೀಷ್ಮನನ್ನೇ ತನ್ನ ಸೊಸೆಯರನ್ನು ಕೈಹಿಡಿಯಬೇಕೆಂದು ಕೇಳಿಕೊಳ್ಳುತ್ತಾಳೆ. ಆದರೆ ಪ್ರತಿಜ್ಞಾಬದ್ಧನಾದ ಭೀಷ್ಮನು ಹಾಗೆ ಮಾಡುವುದಿಲ್ಲ. ಸತ್ಯವತಿ ತನ್ನ ಮದುವೆಗೆ ಮುಂಚೆ ಹುಟ್ಟಿದ ಮಗನಾದ ವ್ಯಾಸಮಹರ್ಷಿಯನ್ನೇ ಸೊಸೆಯರೊಂದಿಗೆ ನಿಯೋಗಕ್ಕಾಗಿ ಕರೆಯುತ್ತಾಳೆ. ಇದು ನಿಯೋಗದ ಮೊದಲ ಸಂಗತಿಯಾದರೆ ಕುಂತೀ-ಮಾದ್ರಿಯರದು ಇನ್ನೆರಡು.

ಪಾಂಡು ಮಹಾರಾಜನು ಸಂತಾನೋತ್ಪತ್ತಿಯಲ್ಲಿ ಅಶಕ್ತನಾದಾಗ ಕುಂತಿಯು ದೇವತೆಗಳಿಂದ ಮಕ್ಕಳನ್ನು ಪಡೆಯುವುದು ಮಹಾಭಾರತದಲ್ಲಿ ಹೇಳಿದೆ. ಭೈರಪ್ಪನವರು ತಮ್ಮ ಕೃತಿಯಲ್ಲಿ "ದೇವ" ಎಂಬ ಜನಾಂಗದ ಮುಖ್ಯರಿಂದ ಕುಂತಿಗೆ ನಿಯೋಗ ನಡೆದ ಹಾಗೆ ತೋರಿಸಿದ್ದಾರೆ. ಹೆಂಡತಿಯಲ್ಲದಿದ್ದರೂ ಹೆಂಡತಿಯಾಗಿ ಕುಂತಿ "ದೇವ" ಜನಾಂಗದ ಪ್ರಮುಖರನ್ನು ಸಂತಾನಕ್ಕಾಗಿ ಸೇವಿಸುತ್ತಾಳೆ. ಮಾದ್ರಿಯೂ ಹೀಗೇ ಮಾಡುತ್ತಾಳೆ. ಈ ಸಂಗತಿ ನಮ್ಮಲ್ಲಿನ ಮಡಿವಂತರಿಗೆ ಸ್ವಲ್ಪ ಕಷ್ಟವಾಗಿ ಕಾಣಬಹುದು. ಇದನ್ನು ನಮ್ಮ ಸಂಸ್ಕೃತಿಯ ಅವಹೇಳನವೆಂದೂ ಕೆಲವರು ಹೇಳಬಹುದು. ವೈಯಕ್ತಿಕವಾಗಿ ನನಗೆ ಇದು ಸ್ವಲ್ಪ ಸಾಮಾನ್ಯವಲ್ಲದ್ದೆಂದು ಅನಿಸಿದರೂ ತೀರ ಅಸ್ವಾಭಾವಿಕವಲ್ಲವೆಂದೆನಿಸುತ್ತದೆ. ವಾಸ್ತವತೆಯನ್ನು ಭೈರಪ್ಪನವರು ಕೈಬಿಡದೆ ಕಥೆಯ ಮುಂದಿನ ಗೊಂದಲಕ್ಕೆ ಇದು ಹೇಗೆ ಕಾರಣವಾಯ್ತೆಂದು ತೋರಿಸುತ್ತಾರೆ.

"ಪರ್ವ"ದಲ್ಲಿ ದುರ್ಯೋಧನ ಈ ಸಂಗತಿಯನ್ನುಪಯೋಗಿಸಿ ಪಾಂಡವರು ತಂದೆಗೆ ಹುಟ್ಟಿದ ಮಕ್ಕಳಲ್ಲವೆಂಬುದನ್ನೇ ಯುದ್ಧದ ಮುಖ್ಯಕಾರಣ ಮಾಡುತ್ತಾನೆ. ತನ್ನ ತಂದೆಯ ಹುಟ್ಟಿನ ಕಥೆಯನ್ನು ಜಾಣತನದಿಂದ ಮರೆಸುತ್ತಾನೆ. ಅವನಿಗೆ ಪಾಂಡವರ ಬಗ್ಗೆ ಇದ್ದ ಮತ್ಸರವೇ ಯುದ್ಧಕ್ಕೆ ಮೂಲಕಾರಣವಾದರೂ ನಿಯೋಗಪದ್ಧತಿಯ ಬಗ್ಗೆ ಅವನು ಮಾಡುವ (ಅಪ?)ಪ್ರಚಾರ ಅವನ ಸೈನ್ಯಕ್ಕೆ ಬಲವನ್ನಂತೂ ಒದಗಿಸುತ್ತದೆ. ಹೀಗೆ ನಿಯೋಗಪದ್ಧತಿ ಧರ್ಮವೋ ಅಧರ್ಮವೋ ಎಂಬುದು ದೊಡ್ಡ ಯುದ್ಧಕ್ಕೆ ಹೊರಗಿನ ಹಾಗೂ ಸ್ವಲ್ಪ ಮಟ್ಟದ ಒಳಗಿನ ಕಾರಣವೂ ಆಗುತ್ತದೆ.

ಭೈರಪ್ಪನವರಿಗೆ ಕ್ಷೇತ್ರ ಮತ್ತು ಬೀಜಗಳ ವಿಷಯ ಬಹಳ ಚಿಂತನೆಯನ್ನೊದಗಿಸಿದೆ. ಸಂತಾನ ಸೇರುವುದು ಕ್ಷೇತ್ರಕ್ಕೋ ಬೀಜಕ್ಕೋ? ವಂಶವೃಕ್ಷದಲ್ಲೂ ಇದೇ ಜಿಜ್ಞಾಸೆ. ಪರ್ವದಲ್ಲಿ ಹಲವು ಕಡೆಗಳಲ್ಲಿ ಇದೇ ಕಾಣುತ್ತದೆ. ಭೀಷ್ಮನಿಂದ ಮೊದಲ್ಗೊಂಡು ಧೃತರಾಷ್ಟ್ರ, ಪಾಂಡುಗಳ ಹುಟ್ಟು, ಪಾಂಡವರ ಹುಟ್ಟು, ಘಟೋತ್ಕಚನ ಹುಟ್ಟು, ಕರ್ಣನ ಹುಟ್ಟು - ಹೀಗೆ ಬರುವ ಕಥೆಯ ಹಲವು ಭಾಗಗಳಲ್ಲಿ ಇದೇ ಚಿಂತನೆಯನ್ನು ನಡೆಸುತ್ತಾರೆ. ಹಾಗೆ ನೋಡಿದಾಗ ವಸ್ತುತಃ ಪಾಂಡು ಮೊದಲ್ಗೊಂಡು ಬರುವ ಸಂತಾನವೆಲ್ಲಕ್ಕೂ ವ್ಯಾಸರೇ ಕಾರಣ! ವ್ಯಾಸರ ಮೊಮ್ಮಕ್ಕಳೇ ಪರಸ್ಪರ ಯುದ್ಧವಾಡಿ ಸಾಯುತ್ತಾರೆ!

ಜೊತೆಗೆ ನಿಯೋಗವನ್ನು ಒಂದು ಉದಾಹರಣೆ ಮಾಡಿಕೊಂಡು ಧರ್ಮದ ಆಚರಣೆಯ ಸ್ವರೂಪ ಹೇಗೆ ಕಾಲದಲ್ಲಿ ಬದಲಾಗುತ್ತದೆ ಎಂದೂ ತೋರಿದ್ದಾರೆ. ವ್ಯಾಸರ ನೆನಪಿನಲ್ಲಿ ತಮ್ಮ ಪೂರ್ವಜರು ಮಾಡಿದ ನಿಯೋಗದಲ್ಲಿ ಹೇಗೆ ರಾಣಿಯ ಅಲಂಕಾರವನ್ನು ಸಂತಾನಾಪೇಕ್ಷಿಯಾದ ರಾಜನೇ ಮಾಡುತ್ತಾನೆ ಎಂದು ಬರುತ್ತದೆ. ಆದರೆ ವ್ಯಾಸರೇ ನಿಯೋಗ ಮಾಡುವ ಸಮಯಕ್ಕೆ ಭೀಷ್ಮ - "ನಿಯೋಗವು ಕೇವಲ ದೈಹಿಕ ಕ್ರಿಯೆಯಾಗಬೇಕು, ಮನಸ್ಸು ಅಚಲವಾಗಿರಬೇಕು. ಅದರಲ್ಲಿರುವ ಇಬ್ಬರೂ ತಮ್ಮ ದೇಹಗಳನ್ನು ಆದಷ್ಟು ಕುರೂಪಮಾಡಿಕೊಳ್ಳಬೇಕು" ಎಂಬ ಕಟ್ಟಳೆ ಮಾಡುತ್ತಾನೆ. ಕುಂತಿಯದು ಸ್ವಲ್ಪ ಭಿನ್ನವಾಗುತ್ತದೆ. ಕೊನೆಯಲ್ಲಿ, ಯುದ್ಧದ ನಂತರ, ಉತ್ತರೆ(ಅರ್ಜುನನ ಸೊಸೆ)ಯ ಮಗು ಹುಟ್ಟುವುದಕ್ಕೆ ಮುಂಚೆಯೇ ಸತ್ತಾಗ ವಂಶಕ್ಕೆ ಬೇರೆ ಗತಿಯಿರುವುದಿಲ್ಲ. ಆಗ ದ್ರೌಪದಿ ಮತ್ತೆ ಗರ್ಭ ಧರಿಸಲು ನಿರಾಕರಿಸಿದಾಗ ಉತ್ತರೆಗೆ ನಿಯೋಗಮಾಡಿಸುವ ವಿಚಾರ ಬರುತ್ತದೆ. ಕುಂತಿಯೇ ಸ್ವಯಂ ನಿಂತು ನಿಯೋಗವನ್ನು ನಿಷೇಧಿಸುತ್ತಾಳೆ. ಇದು ಅಲ್ಲಿ ಕಾಣುವ ಸಂಗತಿ. ಹಲವು ಧರ್ಮಾಚರಣೆಗಳು ಹೇಗೆ ರೂಪಗೊಳ್ಳಬಹುದು ಎಂದು ಊಹಿಸಿಕೊಳ್ಳುವುದಕ್ಕೆ ಇದು ಒಂದು ನಿದರ್ಶನ.

ಇಂಥ ದೊಡ್ಡ ಕೃತಿಯನ್ನು ಕುರಿತು ಬರೆಯುವಾಗ ಮೂಲ ಮಹಾಭಾರತದ ಹಿನ್ನೆಲೆ ಅನಿವಾರ್ಯ. ಆದ್ದರಿಂದ ಒಂದೇ ಭಾಗದಲ್ಲಿ ಮುಗಿಸಲು ಸಾಧ್ಯವಾಗದಿರುವಷ್ಟು ವಿಚಾರಗಳನ್ನು ನನ್ನಲ್ಲಿ "ಪರ್ವ" ಪ್ರಚೋದಿಸಿದೆ.

ನನಗನ್ನಿಸಿದ ಕೆಲವು ವಿಚಾರಗಳನ್ನು ಈ ಲೇಖನದಲ್ಲಿ ಬರೆದಿದ್ದೇನೆ. ಮುಂದಿನ ಭಾಗಗಳಲ್ಲಿ ಹಲವು ಪಾತ್ರಗಳ, "ಪರ್ವ"ದಲ್ಲಿ ನನಗೆ ಕಾಣಿಸಿದ ಚಿಂತನೆಗಳ ಬಗ್ಗೆ ಬರೆಯುತ್ತೇನೆ. ಈ ಲೇಖನವನ್ನು ಓದಿದವರು ಪ್ರತಿಕ್ರಯಿಸಿದರೆ ಸಂತೋಷ.

Saturday, November 18, 2006

Idol vs Icon : Some thoughts on idolatry

Today I was reading the Times of India online and I saw an item that has been a real irritant to me. The item said "Tirupati idols in city on Dec 2-3". The city in question is Mumbai. The Times of India is not my favourite and yet I read it. Rather, I scan it for advertisements to see if I can get good deals on something.

Anyway, back to the peeve in question. Let's look at what dictionary.com has to say about the word idol. It says -
i‧dol
–noun
1.an image or other material object representing a deity to which religious worship is addressed.
2.Bible.
a.an image of a deity other than God.
b.the deity itself.
3.any person or thing regarded with blind admiration, adoration, or devotion: Madame Curie had been her childhood idol.
4.a mere image or semblance of something, visible but without substance, as a phantom.
5.a figment of the mind; fantasy.
6.a false conception or notion; fallacy.
The first meaning is what is usually alluded to by people such as the reporter of the TOI piece. But it is a recent addition and when Westerners refer to it, it usually refers to one of the meanings 2 - 6 above. Note especially this part from the ten commandments which is very important for all the three Abrahamic religions:
You shall not make for yourself an image, whether in the form of anything that is in heaven above, or that is on the earth beneath, or that is in the water under the earth. You shall not bow down to them or worship them;
As we can see quite clearly, this can be interpreted as being against idolatry. Islam, especially prohibits such images and the destruction of innumerable Hindu temples during its invasion proves this quite well. Judaism is similar to Islam in its explicit prohibition of image or idol worship. Certain streams in Christianity interpret this commandment a bit liberally and allow for the veneration of what they call icons. Let us look now at the dictionary meaning of the word icon. The relevant meaning here is :
Eastern Church. a representation of some sacred personage, as Christ or a saint or angel, painted usually on a wood surface and venerated itself as sacred.
As a result, Christians, especially Catholics and the Orthodox church, use the word "icon" to signify any physical object they venerate. Christians have been actively proselytizing in India for at least over 200 years in India. When they did so, they usually downgraded the images of the deities that were being worshipped in India. Their standard line - your god is just a piece of stone. In other words Hindus worshipped idols, whereas the "True Way" worshipped icons. Since English was first used naturally by Western people in India, they liberally used "idol" to describe Hindu objects of worship, and obviously in a derogatory manner. But as far as images of Jesus and symbols such as the cross were concerned, they were all icons. Indians, after taking to the English language, apparently began using the word idol to refer to their own objects of worship, knowingly by a few and unknowingly by the vast majority. Since the word idol has negative connotations, I strongly prefer to not use that word. In fact, I would prefer the word "icon" or better, the samskrit word - mUrti.

I have told several people that once an object becomes worthy of veneration, it becomes at least an icon. I have asked people not to use the word idol while referring to our deities. I wonder if I am being too dogmatic about the whole matter.

Anyway, while the Abrahamic religions revile "idol" worship, what is it that they exactly do? Let's take Muslims first. For them, the most revered place of worship is the Kaaba at Mecca. In its corner is a black stone which devout Muslims are supposed to kiss. While a few Muslims consider that just a stone, other people attribute spiritual qualities to it such as the ability to absorb sin and so on. If somebody kisses an object out of reverence, is that not essentially idolatry?

For the Christians, an altar in which images of Jesus on the cross and several angels can be found in several churches. The church walls are full of images of angels and saints. If they venerate an image, are they not doing something similar to the Hindus? Therefore, when they talk in an accusing tone about Hindus "committing idolatry", they are being just hypocritical.

Even in Judaism, there is a certain location supposed to be in today's Dome of the Rock in Jerusalem considered to the Holy of Holies. The Holy of Holies is a place that is supposed to have the constant presence of the Divine. My question is : Is God not above such physical boundaries? By specially limiting God to a certain area or even considering *only* a specific physical area as holy is essentially the same as idolatry.

I know that God is considered omnipresent by all theistic religions. Hindu religion, though having multiple deities, has one Supreme Reality that is omnipotent and omnipresent. Even then, several temples and mUrtis are built to worship God. The images are considered holy - but people know that they are worshipping not just the image but the Divine in the image. But it is quite common for people to get attached to physical objects, be they icons or idols. It may be this attachment to just the "physical object" that might have been reviled in the ten commandments.

As far as Hindus are concerned, the essential worship that is basic for the three varNas is sandhyA. sandhyAvandanaM is performed during three parts of the day and is essentially worship of no object. Though the Sun God is offered arghya, the gAyatri mantra essentially refers to illumination and a prayer to guide us in the correct path. This worship is actually free of any physical adoration.

I do not condemn image worship or praise the other one. As everybody is different, Hindus have different paths for people of different mental makeup. That is how we can find the complete spectrum of spiritual practices starting from animal sacrifices and worship of trees all the way to dhyAna of the Supreme in one's own heart and AtmavichAra. This is the reason for the variety and colour in Hinduism and so many deities, each considered the Supreme one.

But there is scriptural sanction in the Hindus for all such practices. The following common shloka is indeed elevating:

AkAshAt patitaM toyaM yathA gacChati sAgaram |
sarvadevanamaskAraH keshavaM prati gacChati ||

It basically means that worship of all gods leads to the worship of one Supreme God. And even Lord KrishNa assures us in the gItA

"ye yathA mAM prapadyante tAnstathaiva bhajAmyaham |"

This line means : just as people approach me, so I approach or accept them. Krishna never does say - "you should worship me and only me with the shankha and the chakra and the gadA" and so on.

Such words that can be found in many places in our scriptures are the reason for not just tolerance but the acceptance of various traditions in India.

Compare that with this:
You shall not bow down to them or worship them; for I the Lord your God am a jealous God, punishing children for the iniquity of parents, to the third and the fourth generation of those who reject me.
Do we now know where the intolerance springs from?

Tuesday, October 24, 2006

ಭೈರಪ್ಪನವರ ವಂಶವೃಕ್ಷ : ನನ್ನ ಅನಿಸಿಕೆಗಳು

ನಮ್ಮ ಮನೆಯ ಬಳಿ ಒಂದು ನಗರ ಕೇಂದ್ರ ಗ್ರಂಥಾಲಯವಿದೆ. ಅಲ್ಲಿ ಹೊಸ ಪುಸ್ತಕಗಳೇನು ಇಲ್ಲದಿದ್ದರು, ಹಿಂದೆ ಪ್ರಕಟವಾದ ಕೆಲವು ಒಳ್ಳೆಯ ಪುಸ್ತಕಗಳ ಸರಕು ಅಲ್ಲಿದೆ. ಆ ಪುಸ್ತಕಗಳಲ್ಲಿ ಭೈರಪ್ಪನವರ ಕೆಲವು ಪುಸ್ತಕಗಳೂ ಇದ್ದುವು. ವಂಶವೃಕ್ಷ ನಾನು ಹಿಂದೆಯೇ ಓದಿದ್ದ ಕೃತಿ. ಆದರೆ ಆಗ ಓದಿದ್ದು ಆಂಗ್ಲದ ಅನುವಾದದಲ್ಲಿ. ಈ ಪುಸ್ತಕವನ್ನು ನಾನೋದಿದ್ದೇನೆ ಎಂದು ತಿಳಿದಿದ್ದೆ. ಆದರೂ ಒಮ್ಮೆ ಮೂಲದ ಕನ್ನಡದಲ್ಲಿ ಓದಿ ನೋಡೋಣವೆಂಬ ಆಸಕ್ತಿ. ಮನೆಗೆ ತಂದಾಗ ನನಗೆ ಮತ್ತೆ ತಿಳಿಯಿತು - ಎಷ್ಟೇ ಒಳ್ಳೆಯ ಅನುವಾದವಾದರೂ ಮೂಲದ ಸೊಗಡನ್ನು ಉಳಿಸಿಕೊಳ್ಳುವುದು ಕಷ್ಟ ಎಂದು. ಖ್ಯಾತ ಸಿನೆಮಾ ಕೂಡ ಆದ ವಂಶವೃಕ್ಷದಲ್ಲಿ ಈ ನಿಜ ಪ್ರಖರವಾಗಿ ಗೋಚರಿಸಿತು.

ವಂಶವೃಕ್ಷ ನಂಜನಗೂಡು-ಮೈಸೂರು ಪ್ರಾಂತಗಳಲ್ಲಿರುವ ಕುಟುಂಬಗಳ ಕಥೆ. ಭೈರಪ್ಪನವರ ಕಥಾಪುಸ್ತಕಗಳ ಹೆಸರುಗಳು ಕಥೆಯನ್ನು ಬಹಳ ಚೆನ್ನಾಗಿ ಸೂಕ್ತವಾಗಿ ಪ್ರತಿಬಿಂಬಿಸುತ್ತವೆ. ಇಲ್ಲಿಯೂ ಹಾಗೆಯೇ. ಈ ಕಥೆಗೆ "ವಂಶವೃಕ್ಷ" ಎಂಬ ಹೆಸರು ಎಷ್ಟು ಸರಿಯೆಂಬುದು ಪುಸ್ತಕದ ಮಧ್ಯದಿಂದ ತಿಳಿಯಲು ಪ್ರಾರಂಭವಾಗಿ ಕಥೆ ಕೊನೆಗೊಳ್ಳುವೆ ವೇಳೆ ಆ ವೃಕ್ಷ ನಮ್ಮ ಕಲ್ಪನೆಯನ್ನೆಲ್ಲಾ ವ್ಯಾಪಿಸಿಬಿಟ್ಟಿರುತ್ತದೆ.

ಕರ್ಮಠರಾದ ಆದರೆ ವಿದ್ವಾಂಸ ಹಾಗು ಯೋಚನಾಶಕ್ತಿಯನ್ನು ಹೊಂದಿದ ಶ್ರೀನಿವಾಸ ಶ್ರೋತ್ರಿಗಳು ಈ ಕಥೆಯ ಮುಖ್ಯ ಪಾತ್ರ. ಇವರೇ ಈ ವಂಶವೃಕ್ಷದ ಕಥೆಗೆ ಬೇರು ಮತ್ತು ಮರದ ಮುಖ್ಯ ಭಾಗ. ಕಥೆ ಇವರ ಮಗನಾದ ನಂಜುಂಡ ಶ್ರೋತ್ರಿಯನ ಮರಣದೊಂದಿಗೆ ಆರಂಭವಾಗುತ್ತದೆ. ಮಗನನ್ನು ಕಳೆದುಕೊಂಡ ತಾಯಿ ಭಾಗೀರಥಮ್ಮ, ಗಂಡನನ್ನು ಕಳೆದುಕೊಂಡ ಕಾತ್ಯಾಯನಿ ಮತ್ತು ತನಗೆ ತಿಳಿಯುವ ಮುಂಚೆಯೇ ತಂದೆಯನ್ನು ಕಳೆದುಕೊಂಡ ಮಗು ಚೀನಿ ಆರಂಭದಲ್ಲಿ ಕಾಣುತ್ತಾರೆ. ಇದೇ ಕುಟುಂಬಕ್ಕೆ ಸೇರಿದ ಮತ್ತೊಂದು ಬಹಳ ಒಳ್ಳೆಯ ಪಾತ್ರ - ಕೆಲಸದವಳಾದರೂ ಮನೆಯ ಸದಸ್ಯೆಯಂತೆ ನಡೆಯುವ ಲಕ್ಷ್ಮಿಯದು.

ಈ ಕುಟುಂಬಕ್ಕೆ ಒಂದು ವಿದ್ವತ್ತಿನ ಸಂಬಂಧದಿಂದ ಮತ್ತೊಂದು ಕುಟುಂಬ ಸೇರುತ್ತದೆ. ಮೈಸೂರಿನ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರು ಮತ್ತು ಸಂಶೋಧಕರು ಆದ ಸದಾಶಿವರಾಯರದೇ ಈ ಕುಟುಂಬ. ಇವರಿಗೆ ಒಬ್ಬ ತಮ್ಮ - ಇಂಗ್ಲೀಷಿನ ಅಧ್ಯಾಪಕ ಹಾಗು ನಾಟಕಪ್ರಿಯ ಆಧುನಿಕ - ರಾಜಾರಾಯ. ಸದಾಶಿವರಾಯರ ಹೆಂಡತಿಯಾದ ಮುಗ್ಧೆ ನಾಗಲಕ್ಷ್ಮಿ. ಇವರ ಮಗ ಪೃಥ್ವಿ.

ಮರಣಿಸಿದ ಪತಿಯ ಬಿ.ಏ ಓದುವ ಆಸೆಯನ್ನು ನೆರವೇರಿಸುವ ನಂಬಿಕೆಯನ್ನು ಹೊಂದಿದ ಕಾತ್ಯಾಯನಿ ನಂಜನಗೂಡಿನಿಂದ ಮೈಸೂರಿನ ಕಾಲೇಜಿಗೆ ಹೋಗುವ ಪ್ರಸಂಗದೊಂದಿಗೆ ಕಥೆಗೆ ತಿರುವು ಸಿಗುತ್ತದೆ. ಅತ್ತೆ ಒಪ್ಪದಿದ್ದರೂ ಮಾವನವರು ಒಪ್ಪಿ ಸೊಸೆಯನ್ನು ಕಳಿಸುತ್ತಾರೆ. ಅಲ್ಲಿ ಆಕೆ ರಾಜಾರಾಯನ ಸಂಪರ್ಕವನ್ನು ಹೊಂದುತ್ತಾಳೆ. ಯೌವನಾವಸ್ಥೆಯ ಈರ್ವರ ಸಂಪರ್ಕ ಪರಿಚಯದಿಂದ ಪ್ರೇಮಕ್ಕೆ, ಪ್ರೇಮದಿಂದ ಉತ್ಕಟವಾದ ಪ್ರೇಮಕ್ಕೆ ತಿರುಗುವುದನ್ನು ಭೈರಪ್ಪನವರು ಚೆನ್ನಾಗಿ ನಿರೂಪಿಸಿದ್ದಾರೆ. ಒಂದು ಕಡೆ ತನ್ನ ಮರಣಿಸಿದ ಪತಿಯ ಕುಟುಂಬದ ಕಡೆಗಿನ ಕರ್ತವ್ಯ, ಮತ್ತೊಂದು ಕಡೆ ತನ್ನ ಯೌವನದ ಸಹಜ ವಾಂಛೆಗಳು - ಇವೆರಡರ ನಡುವೆ ಡೋಲಾಯಮಾನವಾದ ಕಾತ್ಯಾಯನಿಯ ಅವಸ್ಥೆ ಮನೋಜ್ಞವಾಗಿ ವರ್ಣಿತವಾಗಿದೆ. ಕೊನೆಗೆ ಆಶೆಯ ಮಹಾಪೂರ ಅವಳ ಧಮನಿಗಳಲ್ಲಿ ಹರಿಯುತ್ತಿದ್ದ ಸಂಪ್ರದಾಯವನ್ನು ಆ ಕಾಲಕ್ಕಾದರೂ ಮುಳುಗಿಸಿ ರಾಜಾರಾಯನ ಜೊತೆಗೆ ಮದುವೆ ನಡೆದುಹೋಗುತ್ತದೆ. ಇಲ್ಲಿ ಒಂದಂಶವನ್ನು ಗಮನಿಸಲೇ ಬೇಕು. ಇಪ್ಪತ್ತನೆಯ ಶತಮಾನದ ಮೊದಲನೆಯ/ಎರಡನೆಯ ದಶಕದಿಂದ ಮೂರು-ನಾಲ್ಕು ದಶಕಳ ಕಾಲ ನಡೆಯುವ ಈ ಕಥೆಯಲ್ಲಿ ಈ ಮದುವೆ ನಡೆಯುವ ಸಮಯದಲ್ಲಿ ವಿಧವಾ ವಿವಾಹಕ್ಕೆ ಮೈಸೂರಂಥ ಸಂಪ್ರದಾಯಸ್ಥ ನಗರ ಸರಿಯಾದ ತಾಣವಾಗಿರಲಿಲ್ಲ. ಈ ಸಂಗತಿ ಕಾತ್ಯಾಯನಿಯ ಯೌವನದ ಬಯಕೆಗಳ ತೀಕ್ಷ್ಣತೆಯನ್ನು ಮತ್ತು ಅವಳ ಸ್ವಾತಂತ್ರ್ಯಪ್ರೀತಿಯನ್ನು ಎತ್ತಿ ತೋರಿಸುತ್ತದೆ.

ಇನ್ನೊಂದು ಕಡೆ ಸದಾಶಿವರಾಯರ ಕನಸು. ಅವರದು ಭಾರತೀಯ ಸಂಸ್ಕೃತಿ ಮತ್ತು ಇತಿಹಾಸಗಳನ್ನು ಕುರಿತು ಉದ್ಗ್ರಂಥವನ್ನು ರಚಿಸಬೇಕೆಂಬ ಹಂಬಲ. ಸಾಕಷ್ಟು ಸಾಮರ್ಥ್ಯ ಅವರಲ್ಲಿತ್ತು ಎಂಬುದನ್ನು ಭೈರಪ್ಪನವರು ನಮಗೆ ತೋರಿಸುತ್ತಾರೆ. ಇವರ ವಿದ್ವನ್ಮಿತ್ರರು ನಂಜನಗೂಡಿನ ಶ್ರೀನಿವಾಸ ಶ್ರೋತ್ರಿಯರು. ಇಬ್ಬರೂ ವಿದ್ವಾಂಸರಾದರು ಅವರಲ್ಲಿರುವ ಭೇದವನ್ನು ಭೈರಪ್ಪನವರು ಸೂಕ್ಷ್ಮವಾದರೂ ಸೊಗಸಾಗಿ ತೋರಿದ್ದಾರೆ. ಸದಾಶಿವರಾಯರದ್ದು ಪಾಶ್ಚಾತ್ಯರ ರೀತಿ. ಅಧ್ಯಯನ ಮಾಡಬೇಕು, ಗ್ರಂಥರಚನೆ ಮಾಡಬೇಕು ಎಂಬ ಹಂಬಲ, ಸ್ವಲ್ಪ ಕೀರ್ತಿಯ ಆಸೆಯೂ ಕಾಣುತ್ತದೆ. ಸಂಸ್ಕೃತಿಯ ಅಧ್ಯಯನಕ್ಕೂ ಜೀವನಕ್ಕೂ ಸಂಬಂಧವಿಲ್ಲದ ಹಾಗೆ ನಡೆಯುತ್ತಾರೆ. ಅಧ್ಯಯನಕ್ಕಾಗಿ ಅಧ್ಯಯನ ಎಂಬುದು ಅವರ ರೀತಿ. ಆದರೆ ಶ್ರೀನಿವಾಸ ಶ್ರೋತ್ರಿಯರದು ಅಪ್ಪಟ ಭಾರತೀಯ ರೀತಿ. ಸದಾಶಿವರಾಯರ ಸಂದೇಹಗಳನ್ನು ಪುಸ್ತಕಗಳನ್ನು ನೋಡದೆಯೇ ಪರಿಹರಿಸಬಲ್ಲ ವಿದ್ವತ್ತು ಇವರಲ್ಲಿದ್ದರೂ, ಪುಸ್ತಕ ರಚನೆಗೆ ಕೈಹಾಕಿದವರಲ್ಲ. ಕೀರ್ತಿಯ ಲಾಲಸರಲ್ಲ. ತಮ್ಮ ಓದನ್ನೆಲ್ಲ ಬದುಕಿನಲ್ಲಿ ಕಾಣಿಸುವ ಋಷಿಕಲ್ಪ ವ್ಯಕ್ತಿತ್ವ ಇವರದು. ಭೈರಪ್ಪನವರ ideal ಏನು, ಅವರ ವೈಯಕ್ತಿಕ ಅಭಿಪ್ರಾಯವೇನು, ಅವರ ಒಲವೆಲ್ಲಿದೆ ಎಂದು ಇವರಿಬ್ಬರ ಪಾತ್ರಗಳ ಅಧ್ಯಯನದಿಂದ ಚೆನ್ನಾಗಿ ತಿಳಿಯಬಹುದು. ಭೈರಪ್ಪನವರಿಗೆ ಪಾಶ್ಚಾತ್ಯರ ಬಗ್ಗೆ ಗೌರವ ಮತ್ತು ಕಾಳಜಗಳಿವೆ, ಆದರೆ ಭಾರತೀಯ ವಿಚಾರಧಾರೆಯಲ್ಲಿ ಶ್ರದ್ಧೆಯಿದೆ ಎಂಬುದನ್ನು ಸುವಿದಿತ ಮಾಡಿಸುತ್ತಾರೆ.

ಸದಾಶಿವರಾಯರ ಹಂಬಲವು ಬೌದ್ಧಿಕ ಸಾಹಚರ್ಯವನ್ನು ಅಪೇಕ್ಷಿಸುವ ಬಗೆ ಸೊಗಸಾಗಿ ವ್ಯಕ್ತವಾಗಿದೆ. ಓದು-ಬರಹ ತಿಳಿಯದ ಪತ್ನಿಯಿಂದ ಬೌದ್ದಿಕ ಸಾಹಚರ್ಯ ಸಿಗದ ರಾಯರಿಗೆ ಶ್ರೀಲಂಕದವಳಾದ ಕೇಂಬ್ರಿಡ್ಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಕರುಣಾ ರತ್ನೆ ಜೊತೆಯಾಗಿ ಸಿಗುತ್ತಾಳೆ. ವಿದ್ಯಾರ್ಥಿನಿಯಾಗಿ ರಾಯರ ಜತೆ ಕೆಲಸ ಮಾಡಲು ಪ್ರಾರಂಭಿಸುವ ಕರುಣಾಳಿಗೆ ಕ್ರಮೇಣ ರಾಯರು ಅನಿವಾರ್ಯರಾಗುತ್ತಾರ, ಜೀವನದ ಗುರಿಯನ್ನು ತಲುಪಲು ಸಾಧನವಾಗುತ್ತಾರೆ. ರಾಯರಿಗೂ ಹಾಗೇ ಆಗಿ ಇಬ್ಬರೂ ಸಿವಿಲ್ ಮದುವೆ ಕೂಡ ಆಗುತ್ತಾರೆ. ಒಂದಂಶ ಇಲ್ಲಿ ನನಗೆ ಅಷ್ಟು ಹಿಡಿಸಲಿಲ್ಲ . ಕರುಣಾ ಎಂಬ ಸೊಗಸಾದ ಹೆಸರನ್ನು ಪಡೆದವಳನ್ನು ಭೈರಪ್ಪನವರು "ರತ್ನೆ" ಎಂದೇ ರಾಯರಿಂದ ಕರೆಸುತ್ತಾರೆ. ರತ್ನೆಯೆಂಬುದು surname. ಪತಿಪತ್ನಿಯರಿಬ್ಬರ ನಡುವೆ ಈ surname ಸಂಬೋಧನೆ ಅಷ್ಟು ಸರಿಯಿಲ್ಲ. ಅಥವಾ - ಇವರಿಬ್ಬರೂ ತಮ್ಮ profession ಗಾಗಿಯೇ ಹತ್ತಿರ ಬಂದದ್ದು, ಕೊನೆಯವರೆಗೂ ಇವರ ಸಂಬಂಧ ಹಾಗೆಯೇ ಉಳಿಯಿತು ಎಂಬುದನ್ನು ಓದುಗರಿಗೆ ಚೆನ್ನಾಗಿ ತಿಳಿಸುವುದಕ್ಕೆ ಹೀಗೆ ಉತ್ಪ್ರೇಕ್ಷೆ ಮಾಡಿದ್ದಾರೋ ಏನೋ! ದ್ವಿಪತ್ನೀತ್ವದಲ್ಲಿ ಓದದ ಹೆಂಡತಿಗೆ ತೊಂದರೆಯಿಲ್ಲ, ಆದರೆ ಓದಿದ ಹೆಂಡತಿಗೆ ತೊಂದರೆ. ಈ ಇಕ್ಕಟ್ಟಿನಲ್ಲಿ ಸದಾಶಿವರಾಯರನ್ನು ಸಿಕ್ಕಿಸಿ ಕೊನೆಯವರೆವಿಗೂ ಒದ್ದಾಡಿಸುತ್ತಾರೆ. ಏನೂ ತಿಳಿಯದ ಹೆಂಡತಿ ಆತಂಕದ ಸಮಯದಲ್ಲಿ ರಾಮನಾಮವನ್ನು ಬರೆದು ದುಗುಡ ಮರೆಯಲು ಯತ್ನಿಸಿ ಮರೆಯುವುದರಲ್ಲಿ ಯಶಸ್ವಿನಿಯೂ ಆಗುತ್ತಾಳೆ. ಇದರಿಂದ ಭೈರಪ್ಪನವರು ಮುಗ್ಧ ನಂಬಿಕೆಗೆ ಒಳ್ಳೆಯ ಸ್ಥಾನವನ್ನೇ ಕೊಟ್ಟ ಹಾಗೆ ಕಾಣುತ್ತದೆ. ಇದರಿಂದ ನಾಗಲಕ್ಷ್ನ್ಮಿಯಲ್ಲಿ ಮೂಡುವ ಒಂದು ನಿರ್ಲಿಪ್ತತೆ ಕೂಡ ನಿದರ್ಶನವೆಂಬುದಾಗಿ ಸಾರಿದ್ದಾರೆ.

ಕಾತ್ಯಾಯನಿ ಮದುವೆಯಾದ ಆರಂಭದ ದಿನಗಳಲ್ಲಿ ಬಹಳ ಸಂತೋಷದಿಂದಿದ್ದರೂ ಒಂದೆರಡು ವರ್ಷಗಳಲ್ಲಿ ತನ್ನ ಹಳೆಯ ಕುಟುಂಬದ ಬಗ್ಗೆ ನೆನಪು ಮಾಡಿಕೊಳ್ಳುತ್ತಾಳೆ. ಜತೆಗೆ ಅವಳಿಗಾಗುವ ಗರ್ಭಪಾತಗಳಿಂದ ಅವಳಿಗೆ ಮಕ್ಕಳಾಗಲು ಸಾಧ್ಯವಿಲ್ಲದೇ ಹೋಗುತ್ತದೆ. ಇದಾದ ಮೇಲಂತೂ ತನ್ನ ಮಗನಾದ ಚೀನಿಯ ಬಗ್ಗೆ ಹೆಚ್ಚಿನ ವಾತ್ಸಲ್ಯ ಅವಳಲ್ಲಿ ಮೂಡಿದರೂ ಏನೂ ಮಾಡಲಾರದೆ ಹೋಗುತ್ತಾಳೆ. ಚೀನಿಯನ್ನು ಕರೆತರುವ ಅವಳ ಪ್ರಯತ್ನಗಳು ವಿಫಲವಾಗಿ ಅವಳ ಖಿನ್ನತೆಗೆ ದಾರಿಯಾಗುತ್ತವೆ. ದುರದೃಷ್ಟವಶಾತ್ ಕಾತ್ಯಾಯನಿಯು ಈ ಗರ್ಭಪಾತಗಳೆಲ್ಲ ಅವಳ ಮಾವನವರ ಮನೆಯನ್ನು ಬಿಟ್ಟೂ ಪುನರ್ವಿವಾಹವಾದದ್ದಕ್ಕೆ ಎಂದು ಬಗೆದು ಮಾನಸಿಕ ರೋಗಕ್ಕೆ ತುತ್ತಾಗುತ್ತಾಳೆ. ಕಾಲೇಜಿಗೆ ಬರುವ ಮಗನೂ ಸಹ ತನ್ನನ್ನು ನಿರಾಕರಿಸಿದಾಗ ಅವಳ ರೋಗ ಉಲ್ಬಣಿಸಿ ಸಮಾಧಾನವಿಲ್ಲದೆಯೇ ಕೊರಗುತ್ತಾಳೆ.

ಈಕೆಯ ವಿಧವಾ-ವಿವಾಹ ಮತ್ತು ವಂಶವೃಕ್ಷದ ಕಲ್ಪನೆಯ ನಡುವಿನ ಘರ್ಷಣೆ ಕೆಲವು ಒಳ್ಳೆಯ ಚಿಂತನೆಗಳನ್ನು ಮೂಡಿಸಿದೆ. ಭೈರಪ್ಪನವರು ಎತ್ತುವ ಪ್ರಶ್ನೆ - ಒಂದು ವಂಶವೃಕ್ಷದ ಬೀಜವನ್ನು ಫಲಿಸಿದ ಕ್ಷೇತ್ರ ಮತ್ತೊಂದು ವಂಶದ ಕ್ಷೇತ್ರವಾಗುವಾಗ ಏನಾಗಬಹುದು - ಎಂಬುದು? ಈ ಪ್ರಶ್ನೆ ಓದುಗರನ್ನೂ ಕಾಡಿಸುತ್ತದೆ. ಪುಸ್ತಕ ಓದಿದ ಬಹಳ ದಿನಗಳ ಮೇಲೆಯೂ!

ಬರುಬರುತ್ತಾ ಕೊನೆಯ ನೂರು ಪುಟಗಳಲ್ಲಿ ಅಕಸ್ಮಾತ್ತಾಗಿ ಗೋಚರವಾಗುವ ಸತ್ಯ ಶಾಂತರೂ ದಾಂತರೂ ಆದ ಶ್ರೀನಿವಾಸ ಶ್ರೋತ್ರಿಯರಿಗೂ ಆಘಾತಕರವಾಗಿ ಪರಿಣಮಿಸುತ್ತದೆ. ಪುತ್ರನ ಆಕಸ್ಮಿಕ ಮರಣದ ಸಮಯದಲ್ಲೂ ಅಲ್ಲಾಡದ ಬೆಟ್ಟದಂಥಿದ್ದ ಅವರ ವ್ಯಕ್ತಿತ್ವ ಈ ಸತ್ಯದಿಂದ ಸ್ವಲ್ಪ ಪೆಟ್ಟು ತಿನ್ನುತ್ತದೆ. (ಅದು ಏನು ಎಂದು ನಾನು ಹೇಳಿದರೆ ಓದುಗರಾದ ನೀವು ಈ ಪುಸ್ತಕವನ್ನು ಓದದೇ ಇರಬಹುದು. ಪುಸ್ತಕ ಓದಿದವರಿಗೆ ಹೇಗಿದ್ದರೂ ಗೊತ್ತು ತಾನೆ?) ವಂಶದ ಬಗ್ಗೆ ಬಹಳ ಹೆಚ್ಚಿನ ಗೌರವವಿರಿಸಿದ ಶ್ರೋತ್ರಿಯರಿಗಂತೂ ಈ ಆಘಾತ ಕಷ್ಟಸಹ್ಯವಾಗುತ್ತದೆ. ಅಷ್ಟೇ ಏಕೆ? ಅವರ ವಂಶಗೌರವವೆಂಬ ಕಲ್ಪನೆಯನ್ನೇ ಬುಡಮೇಲು ಮಾಡುತ್ತದೆ. ಆದರೆ ಹಿಂದೆ ಆತಂಕ ಮೂಡಿಸುವ ದುವಿಧೆಗಳಲ್ಲಿ ಗೆದ್ದು ಬಂದಿದ್ದ ಶ್ರೋತ್ರಿಯರು ಇಲ್ಲಿಯೂ ಕಡೆಯಲ್ಲಿ ಗೆಲ್ಲುತ್ತಾರೆ. "ಧರ್ಮದ ಮಾರ್ಗದಲ್ಲಿ ನಡೆಯುವವರಿಗೆ ಧರ್ಮವೇ ಮಾರ್ಗ ತೋರುತ್ತದೆ" ಎಂಬ ಅಚಲ ನಂಬಿಕೆಯನ್ನು ಹೊಂದಿದ ಶ್ರೋತ್ರಿಯರು ಅಂತ್ಯದಲ್ಲಿ ಭಾರತೀಯ ಆಶ್ರಮಧರ್ಮದ ಪಾಲನೆಯನ್ನೇ ಮಾಡುತ್ತಾರೆ.

ಒಂದು ಭಾಗವನ್ನು ಮಾತ್ರ ಇಲ್ಲಿ ನಂಬಲು ಕಷ್ಟ. ಮನೆಯ ಕೆಲಸದವಳಾದ, ಶ್ರೋತ್ರಿಯರಿಗಿಂಥ ಸ್ವಲ್ಪ ಚಿಕ್ಕವಳಾದ ಲಕ್ಷ್ಮಿಗೆ ತಿಳಿದ ಒಂದು ಸತ್ಯ ಇವರಿಗೆ ಹೇಗೆ ತಿಳಿಯದೇ ಹೋಯಿತೆಂಬುದು. ಅದೂ ಅದೇ ಊರಿನಲ್ಲಿಯೇ ಇದ್ದಂಥವರಾದ ಶ್ರೋತ್ರಿಯರು ತಕ್ಕ ಮಟ್ಟಿಗೆ ಜನಜನಿತವಾದ ಒಂದು ವಾರ್ತೆಯನ್ನು ತಿಳಿಯದೇ ಹೋದರಲ್ಲಾ ಎಂದು ನಂಬಲು ಸ್ವಲ್ಪ ಕಷ್ಟ. ಆದರೂ ಹೇಳುತ್ತಾರಲ್ಲಾ, ಕಾವ್ಯಾಸ್ವಾದನೆಗೆ ಅಥವಾ ರಸಾಸ್ವಾದನೆಗೆ ಮೊದಲಿಗೆ ಬೇಕಾಗಿರುವುದು ಕೋಲ್ರಿಜ್ ಹೇಳಿದ "willing suspension of disbelief". ನಾವೂ ಇಲ್ಲಿ ಅದನ್ನೇ ಆಶ್ರಯಿಸಿದಾಗೆ ಒದುಗರಿಗೆ ಒಂದು ಅದ್ಭುತ ಪ್ರಸಂಗ ಮೂಡುತ್ತದೆ. ಒಬ್ಬ ಮಹಾಪುರುಷನು ಒದಗಿದ ಕಷ್ಟವನ್ನು ಹೇಗೆ ನಿಭಾಯಿಸಬಲ್ಲ ಎಂಬುದು ಎಲ್ಲ ಓದುಗರಿಗೆ ಆಗುವ ಒಂದು ಪಾಠ. ಅದನ್ನು ದರ್ಶನಶಾಸ್ತ್ರವನ್ನು ಅಭ್ಯಸಿಸಿದ ಭೈರಪ್ಪನವರು ಚೆನ್ನಾಗಿಯೇ ಮಾಡಿಸುತ್ತಾರೆ.

ಈ ಪುಸ್ತಕದ ಮೇಲೆ ಚಿತ್ರವನ್ನು ಮಾಡಿದ ಗಿರೀಶ್ ಕಾರ್ಣಾಡರ ಪ್ರಕಾರ ಈ ಸಿನಿಮಾ ಕೃತಿ ತಮ್ಮ ಅತ್ಯಂತ ದುರ್ಬಲ ಕೃತಿಗಳಲ್ಲಿ ಒಂದು ಎಂಬುದು. ಹಾಗೆ ಹೇಳಲು ಕಾರಣ ಸ್ವಲ್ಪವಿದೆಯೋ ಏನೋ! ಕಾತ್ಯಾಯನಿಯ ಪಾಡು ಎಂಥ ನಾಯಿಗೂ ಬೇಡವೆಂಬಂತೆ ನಿರೂಪಿಸಿದ ಭೈರಪ್ಪನವರು ಆಧುನಿಕ ಕಾದಂಬರಿಕಾರನ ಮುಸುಕು ಹಾಕಿಕೊಂಡ "ಸನಾತನಿ" ಎಂಬುದೇ ಆ ಕಾರಣವಿರಬಹುದೇ? ಆಧುನಿಕನಾದ ನನ್ನಲ್ಲೂ ಈ ವಿಷಯ ಸ್ವಲ್ಪ ಕಳವಳ ಮೂಡಿಸದೇ ಇರಲಿಲ್ಲ. ಈಗ ಯುವತಿಯಾದ ಒಬ್ಬ ವಿಧವೆ ಮತ್ತೆ ಮದುವೆಯೇ ಆಗಬಾರದೇ? ಮಕ್ಕಳಿಲ್ಲದಿದ್ದರೆ ಹೇಗೆ? ಮಕ್ಕಳಿದ್ದರೆ ಹೇಗೆ? ಇಲ್ಲಿ ಅಸಂಖ್ಯಾತ ಸಾಧ್ಯತೆಗಳಿದ್ದರೂ ಅವುಗಳಲ್ಲಿ ಒಂದನ್ನು ತೋರಿಸಿ ಈ ವಿಷಯದ ಬಗ್ಗೆ ಚಿಂತನೆಯನ್ನು ಪ್ರಚೋದಿಸುವುದೇ ಭೈರಪ್ಪನವರ ಕಥನಾಕೌಶಲವೆಂದು ಹೇಳಬೇಕೇ ಹೊರತು "ಅವರು ಹಾಗೆ ಚಿತ್ರಿಸಿದ್ದಾರೆ, ಆದ್ದರಿಂದ ಅವರು ಸನಾತನಿಗಳು" ಎಂದು ಹೇಳುವುದು ನನ್ನ ಪ್ರಕಾರ ಸರಿಯೆನಿಸುವುದಿಲ್ಲ.

ಇನ್ನೊಂದು ಸಣ್ಣ ತಪ್ಪೂ ಪುಸ್ತಕದಲ್ಲಿದೆ. ಕೊಲಂಬಸನು ಅಮೇರಿಕೆಯನ್ನು ಕಂಡುಹಿಡಿದನೆಂದರೆ ಅದು ಹಾಸ್ಯಾಸ್ಪದವಾದ ಸಂಗತಿಯನ್ನು ಹೇಳುತ್ತಾ ಹೊರಟ ಭೈರಪ್ಪನವರು ಅಲ್ಲಿ ಭಾರತೀಯ ಮೂರ್ತಿಗಳ ಅವಶೇಷಗಳಿದ್ದವು ಎಂದು ನನ್ನ ಪ್ರಕಾರ ತಪ್ಪಾಗಿ ಬರೆದಿದ್ದಾರೆ. ಇದಕ್ಕೆ ಪುರಾವೆ ಎಲ್ಲಿಯೂ ಇಲ್ಲ ಎಂದು ನನ್ನ ತಿಳಿವಳಿಕೆ. ತಪ್ಪಿದ್ದಲ್ಲಿ ತಿದ್ದಿಕೊಳ್ಳಲು ಸಿದ್ಧನಾಗಿರುವೆ.

ಒಟ್ಟಿನಲ್ಲಿ, ಚಿಂತನೆಗೆ ಒಳ್ಳೆಯ ಗ್ರಾಸವಾಗುವ ಈ ವಂಶವೃಕ್ಷ ಅತ್ಯಂತ ಜನಪ್ರಿಯ ಕಾದಂಬರಿಗಳಲ್ಲಿ ಒಂದು. ಈ ಪುಸ್ತಕವನ್ನೋದಿದ ಅಥವಾ ಓದದ ಇತರರಿಗೆ ನನ್ನ ಅನಿಸಿಕೆಗಳನ್ನು ಓದಿ ಏನನ್ನಿಸಿದೆಯೋ ಎಂಬುದನ್ನು ತಿಳಿಯಲು ನಾನು ಕುತೂಹಲಿಯಾಗಿದ್ದೇನೆ.

Wednesday, August 30, 2006

ನಮ್ಮೆಲ್ಲರ ಪ್ರಿಯನಾದ ಗಣೇಶ

ಗಣೇಶನ ಹಬ್ಬ ಕಳೆದು ಇನ್ನೇನು ಪಕ್ಷವಾಗುತ್ತಾ ಬಂದಿತು. ಅವನ ಬಗ್ಗೆ ಈಗ ಬರೆಯಲು ಬಯಕೆ ಬಂದಿದೆ. ಆದರೆ ಗಣೇಶನ ಪೂಜೆ ಗಣೇಶನ ಹಬ್ಬದ ದಿನ ಮಾತ್ರ ಮಾಡುವುದಿಲ್ಲವಲ್ಲ? ನಾವು ನೋಡುವ ಹಾಗೆ ನಿತ್ಯವೂ ಗಣೇಶನ ದೇವಸ್ಥಾನಗಳಲ್ಲಿರುವ ಜನಜಂಗುಳಿ ಬೇರಾವ ದೇವಳಗಳಲ್ಲಿಯೂ ಇರುವುದಿಲ್ಲ. ಇಷ್ಟು ಜನಪ್ರಿಯನಾಗಿರುವ ಗಣೇಶನ ನೆನೆಸಿಕೊಳ್ಳಲೋಸುಗ ಇದನ್ನು ಬರೆಯಲು ಮೊದಲುಗೊಂಡಿರುವುದು. ಋಷಿಮೂಲ-ನದೀಮೂಲಗಳನ್ನು ಕೇಳಬಾರದೆನ್ನುತ್ತಾರೆ ಹಿರಿಯರು. ಈ ಪಟ್ಟಿಗೆ ದೇವರುಗಳನ್ನೂ ಧಾರಾಳವಾಗಿ ಸೇರಿಸಬಹುದು. ಆದರೂ ನನ್ನ ಗಣೇಶಾನ್ವೇಷಣೆ ಆ ರೀತಿಯದಲ್ಲ. ಪ್ರೀತಿಯಿಂದ ನನ್ನ ಮಿತ್ರನೊಬ್ಬನನ್ನು ಕುರಿತು ತಿಳಿಯುವ ಹಾಗಿರುವ ಹುಡುಕಾಟ.

ಹಿಂದಿನ ಕಾಲದಿಂದ ಗಣೇಶ ಕೃಷಿಕರ ದೇವತೆ ಎಂದು ಪ್ರಸಿದ್ಧಿ ಹೊಂದಿದವನು. ಆನೆಗಳು ಬಂದು ಬೆಳೆಯನ್ನು ಧ್ವಂಸ ಮಾಡುವ ಸಾಧ್ಯತೆ ಹೆಚ್ಚಿದ್ದ ಕಾಲವದು ಎಂದು ತೋರುತ್ತದೆ. ನಮ್ಮ ದೇಶ ತಲತಲಾಂತರಗಳಿಂದ ಕೃಷಿ ಪ್ರಧಾನವಾದ ದೇಶ. ಹಾಗೆ ನೋಡಿದರೆ ವೈದಿಕ ದೇವತೆಗಳಾದ ಇಂದ್ರ, ವರುಣ, ಸೂರ್ಯ ಮೊದಲಾದ ದೇವತೆಗಳೆಲ್ಲರೂ ಕೃಷಿಗೆ ತಮ್ಮಿಂದಾಗುವ ಪ್ರಯೋಜನದಿಂದಲೇ ಪೂಜನೀಯರೂ ಆದರು. ಗಣೇಶನ ಬಗ್ಗೆಯೂ ಹಾಗೆಯೇ ಆಗಿರಬೇಕು. ತೊಂದರೆಗಳನ್ನು ನಿವಾರಿಸಲು ಆನೆಯಲ್ಲೇ ವಿಘ್ನೇಶ್ವರನು ಕಂಡಿರಬೇಕು.

ತ್ರಯೀವೇದದಲ್ಲಿ (ಅಂದರೆ ಋಗ್ಯಜುಸ್ಸಾಮಗಳಲ್ಲಿ) ನಾವೀಗ ಕಾಣುವ ಚತುರ್ಭುಜನಾದ ಮೋದಕಪ್ರಿಯನಾದ ಶಿವ-ಗಿರಿಜೆಯರ ಪುತ್ರನಾದ ಗಣೇಶನು ಇಲ್ಲವೆಂದು ನನ್ನ ಭಾವನೆ (ಇದು ತಪ್ಪಾದರೆ ತಿದ್ದಿಕೊಳ್ಳಲು ಬಯಸುತ್ತೇನೆ). ಅರ್ವಾಚೀನವಾದ ಅಥರ್ವವೇದದಲ್ಲಿ ಗಣೇಶಾಥರ್ವಶೀರ್ಷೋಪನಿಷತ್ತು ಮುಂತಾದ ಭಾಗಗಳನ್ನು ಕಾಣಬಹುದು. "ಗಣಾನಾಂತ್ವಾ" ಅಥವಾ "ನಿಷುಸೀದ" ಎಂದು ಬರುವ ತ್ರಯೀವೇದದ ಮಂತ್ರಗಳು ಬಹುಶಃ ಬೃಹಸ್ಪತಿ ಅಥವಾ ಬ್ರಹ್ಮಣಸ್ಪತಿಯನ್ನುದ್ದೇಶಿಸಿದ್ದಾಗಿವೆ.

ಆದರೆ ವೇದದಲ್ಲಿರುವುದಕ್ಕೂ ಜನಪ್ರಿಯತೆಗೂ ಸಂಬಂಧವಿಲ್ಲವಷ್ಟೆ? ಪೌರಾಣಿಕ ದೇವತೆಗಳ ಕಲ್ಪನೆಗೂ ವೈದಿಕ ದೇವತೆಗಳ ಕಲ್ಪನೆಗೂ ಅಜಗಜಾಂತರದ ವ್ಯತ್ಯಾಸ. ಈಗ ಹೆಚ್ಚು ಪೂಜಿಸಲ್ಪಡುವ ದೇವತೆಗಳೆಂದರೆ ಶಿವ-ವಿಷ್ಣು-ಶಕ್ತಿ-ಗಣೇಶ-ಸುಬ್ರಹ್ಮಣ್ಯ ಮೊದಲಾದ ಪೌರಾಣಿಕ ದೇವತೆಗಳೇ! ಈಗ ಒಂದು ಪ್ರಶ್ನೆ ಏಳಬಹುದು. "ವೇದಗಳೇ ಪರಮಗ್ರಂಥಗಳಾದ ಹಿಂದುಗಳಿಗೆ ಪೌರಾಣಿಕದೇವತೆಗಳ ಪೂಜೆ ಸರಿಯಲ್ಲವಲ್ಲ?" ಎಂದು. ಆದರೆ ಈ ದೇವತೆಗಳ ಸ್ವರೂಪಗಳು ದೇವರಲ್ಲ ಎಂದು ಎಲ್ಲಿಯೂ ಹೇಳಿಲ್ಲವಲ್ಲ? "ಏಕಂ ಸದ್ವಿಪ್ರಾ ಬಹುಧಾ ವದಂತಿ, ಅಗ್ನಿಂ ಯಮಂ ಮಾತರಿಶ್ವಾನಮಾಹುಃ" ಎಂದು ವೇದವೇ ಹೇಳಿದೆಯಾದ್ದರಿಂದ ಜನಗಳಿಂದ ಪೂಜ್ಯವಾದ ಒಂದು ರೂಪವು ದೇವರೆಂದೆನಿಸಿಕೊಳ್ಳಲು ಕಷ್ಟವೇನಲ್ಲ. ಈಗ ಶಿರಡಿಯ ಸಾಇ (ಸಾಯಿ ಬಾಬಾ ಎಂದು ಕನ್ನಡಿಗರು ಬರೆಯದಿದ್ದರೆ ಒಳ್ಳೆಯದು) ಬಾಬಾರವರ ವೃತ್ತಾಂತವನ್ನೇ ತೆಗೆದುಕೊಳ್ಳೋಣ. ಎಲ್ಲೆಡೆ ದೇವರೆಂದೇ ಪೂಜೆಗೊಳ್ಳುವ ಬಾಬಾರವರು ಇನ್ನೂರು ವರ್ಷಗಳ ಹಿಂದೆ ಭೌತಿಕವಾಗಿ ಇರಲೇ ಇಲ್ಲ! ಈಗ ಅವರನ್ನು ಸಾಕ್ಷಾತ್ ದೇವರು ಎಂದು ಪರಿಗಣಿಸುವಷ್ಟು ನಮ್ಮ ಹಿಂದೂ ಧರ್ಮ ವಿಶಾಲವಾಗಿರುವಾಗ, ಪೌರಾಣಿಕದೇವತೆಗಳನ್ನು ಹೇಗೆ ತಾನೆ ಒಪ್ಪಿಕೊಳ್ಳದೆ ಇದ್ದೀತು? ಗಣೇಶನದು ಇತ್ತೀಚಿನ ಕಥೆಯಾಗದಿದ್ದರೂ ಒಂದಾನೊಂದು ಕಾಲದಲ್ಲಿ ಈ ರೀತಿ ಪೂಜೆಗೊಳ್ಳುತ್ತಿರಲಿಲ್ಲ ಎಂದು ಹೇಳಬಹುದು ಅಲ್ಲವೇ? ಗಣೇಶನು ಅನಾದಿಯಾದರೂ ಅವನ ಪೂಜೆಗೆ ಆರಂಭ ಇರಬೇಕಲ್ಲ?

ಸಾಯಣಾಚಾರ್ಯರು ತಮ್ಮ ವೇದಭಾಷ್ಯದ ಆರಂಭದಲ್ಲಿ -
"ವಾಗೀಶಾದ್ಯಾಃ ಸುಮನಸಃ ಸರ್ವಾರ್ಥಾನಾಮುಪಕ್ರಮೇ |
ಯಂ ನತ್ವಾ ಕೃತಕೃತ್ಯಾಃ ಸ್ಯುಸ್ತಂ ನಮಾಮಿ ಗಜಾನನಮ್ ||"
ಎಂದು ಗಣೇಶನನ್ನು ಸ್ತುತಿಸಿದ್ದಾರೆ. ಸಾಯಣರು ವಿದ್ಯಾರಣ್ಯರೆಂದು ಖ್ಯಾತರಾದ ಮಾಧಾವಾಚಾರ್ಯರ ಅಣ್ಣಂದಿರು. ಇವರು ಹದಿನಾರನೆಯ ಶತಮಾನದಲ್ಲಿದ್ದದ್ದು. ಅವರ ಸ್ತುತಿಯಿಂದ ತಿಳಿಯುವುದು ಗಣೇಶನ ಆಗಲೇ ಇದ್ದ ಜನಪ್ರಿಯತೆ ಮತ್ತು ಅವನೆಡೆ ಇದ್ದ ಭಕ್ತಿ.

ಅಷ್ಟೇ ಏಕೆ? ವೇದ ವ್ಯಾಸರ ಮಹಾಭಾರತಕ್ಕೆ ಲೇಖಕನಾಗಿದ್ದವನು ಗಣೇಶ. ಮಹಾಭಾರತದ ಲೇಖಕ ಗಣೇಶನೆಂಬ ಕಥೆ ಎಷ್ಟು ಹಳೆಯದೋ ತಿಳಿಯೆ. ಅದರೆ ಜನಮನ್ನಣೆಯನ್ನೇ ಅಲ್ಲ ಗಣೇಶ ಗಳಿಸಿದ್ದು. ಶಂಕರಾಚಾರ್ಯರೇ ಸ್ವತಃ ತಮ್ಮ ಗೀತಾಭಾಷ್ಯದಲ್ಲಿ "ಯಾಂತಿ ದೇವವ್ರತಾ ದೇವಾನ್ ಪಿತೄನ್ಯಾಂತಿ ಪಿತೃವ್ರತಾಃ" ಎಂಬ ಶ್ಲೋಕಕ್ಕೆ (೯-೨೫) ಭಾಷ್ಯ ಬರೆಯುತ್ತ "ವಿನಾಯಕಮಾತೃಗಣಚತುರ್ಭಗಿನ್ಯಾದೀನಿ" ಎಂದು ಭೂತಗಳ ಅಥವಾ ಕ್ಷುದ್ರಶಕ್ತಿಗಳ ಬಗ್ಗೆ ಇರುವ ಮಾತಿನಲ್ಲಿ ವಿನಾಯಕ ಅಥವಾ ಗಣೇಶನನ್ನು ಸೇರಿಸಿದ್ದಾರೆ. ವಿನಾಯಕನೂ ಕೂಡ ಒಂದು ಕ್ಷುದ್ರಶಕ್ತಿಯೋಪಾದಿಯಲ್ಲಿ ಪೂಜೆಗೊಳ್ಳುತ್ತಿದ್ದ ಎಂದು ತಿಳಿಯುತ್ತದೆ. ಇಂದು ಕೂಡ ವಾಮಾಚಾರದ ಪೂಜೆಯಲ್ಲಿ ಗಣೇಶನ ಪೂಜೆ ಮಾಡುತ್ತಾರಂತೆ. ಇದನ್ನು ಏಕೆ ಹೇಳಿದೆನೆಂದರೆ ಗಣೇಶನ ಈ ರೂಪವೂ ಇದೆ ಎಂದು ತೋರುವುದಕ್ಕೆ. ಈ ಉಗ್ರರೀತಿಯಿಂದ ಪೂಜೆಗೊಳ್ಳುವ ಗಣೇಶನನ್ನು ಬಿಟ್ಟು ನಮ್ಮೆಲ್ಲರ ಪ್ರಿಯನಾದ ಸೌಮ್ಯರೂಪನಾದ ಗಣೇಶನೆಡೆ ಮತ್ತೊಮ್ಮೆ ಬರೋಣ.

ಗಣೇಶನದು ಆಗಮಪ್ರಕಾರವೇ ಬಹಳಷ್ಟು ರೂಪಗಳಿರುತ್ತವೆ. ಶಕ್ತಿಗಣಪತಿ (ಮುತ್ತುಸ್ವಾಮಿ ದೀಕ್ಷಿತರು ಈ ಗಣೇಶರೂಪಗಳ ಬಗ್ಗೆ ಬಹಳ ಕೃತಿಗಳನ್ನು ರಚಿಸಿದ್ದಾರೆ), ವಲ್ಲಭಾಂಬಾ ಗಣಪತಿ, ಬಾಲಗಣಪತಿ, ಭಕ್ತಗಣಪತಿ, ನೃತ್ಯಗಣಪತಿ, ಮಹಾಗಣಪತಿ, ಉಚ್ಛಿಷ್ಟಗಣಪತಿ - ಹೀಗೆ ಬಹಳಷ್ಟು ರೂಪಗಳಿವೆ. ಸಾಮಾನ್ಯವಾಗಿ ಬ್ರಹ್ಮಚಾರಿಯೆಂದು ಪರಿಗಣಿಸಲ್ಪಡುವ ಗಣೇಶನಿಗೆ ಸಿದ್ಧಿಬುದ್ಧಿಯರೇ ಅಲ್ಲ, ವಲ್ಲಭಾಂಬೆ, ಲಕ್ಷ್ಮೀ (ನಾರಾಯಣಿಯಾದ ಲಕ್ಷ್ಮಿಯಲ್ಲದೇ ಬೇರೆಯವಳು ಈಕೆ), ಮುಂತಾದವರು ಪತ್ನಿಯರಾಗಿದ್ದಾರೆ.

ಶಿವನ ಮಗನಾದರೂ ತಂದೆಯನ್ನೂ ಮೀರಿಸಿದವ ಗಣಪತಿ. ಗಾಣಪತ್ಯರಿಗಂತೂ ಗಣೇಶನೇ ಅತ್ಯುಚ್ಚ ಪರಬ್ರಹ್ಮ ಸ್ವರೂಪ. ಶಂಕರಾಚಾರ್ಯರದೆಂದು ಖ್ಯಾತವಾದ ಸ್ತೋತ್ರದಲ್ಲಿ "ಅಜಂ ನಿರ್ವಿಕಲ್ಪಂ... ಅದ್ವೈತರೂಪಮ್" ಎಂದು ಸ್ತುತಿಸಿರುವುದು ಗಣೇಶನ ಈ ಅವಾಙ್ಮನಸಗೋಚರರೂಪವನ್ನೇ! ಅಥರ್ವಶೀರ್ಷದಲ್ಲೂ "ಪ್ರಕೃತೇಃ ಪುರುಷಾತ್ ಪರಮ್" ಎಂದು ಹೇಳಿದಾಗ - ಪ್ರಕೃತಿಪುರುಷರೆಂಬ (ಅಥವಾ ಜೀವ-ಜಗತ್ತೆಂಬ) ದ್ವೈತವನ್ನು ಮೀರಿದ ಪರಮಸತ್ಯ ಎಂದು ಗಣೇಶನನ್ನು ಸ್ತುತಿಸಿದೆ. ಅಥರ್ವಶೀರ್ಷದಲ್ಲಿ "ತ್ವಂ ಸಾಕ್ಷಾದಾತ್ಮಾಸಿ ನಿತ್ಯಮ್" ಎಂದು ಆತ್ಮಸ್ವರೂಪವೇ ಗಣೇಶನೆಂದು ಹೇಳಿದೆ.

ಈ ರೂಪಗಳಿದ್ದರೂ ಈಚೆಗೆ ನಮ್ಮವರು ಗಣೇಶಹಬ್ಬ ಬಂದದ್ದೇ ತಡ - ಅವನನ್ನು ಡೈನೋಸಾರ್ ಮೇಲೆ ಕೂಡಿಸುವುದು, ಸೂಟ್ ಹಾಕಿಸುವುದು, ಕನ್ನಡಕ ಹಾಕಿಸುವುದು, ಮುಂತಾದ ಆಧುನಿಕ (ಡೈನೋಸಾರ್ ಆಧುನಿಕವಲ್ಲದಿದ್ದರೂ ಜ್ಯುರಾಸಿಕ್ ಪಾರ್ಕ್ ಆಧುನಿಕ ತಾನೆ!) ವೇಷಗಳನ್ನು ಪಾಪ ಗಣೇಶನಿಗೆ ಹಾಕುತ್ತಾರೆ. ಇದೂ ಸಾಲದೆ ಬೃಹದಾಕಾರನಾದ ಅವನನ್ನು ಸಣ್ಣ ಇಲಿಯ ಮೇಲೆ ಕೂಡಿಸಿ ಅಲ್ಲಿಲ್ಲಿ ಬೀಳಿಸಿದ ಹಾಸ್ಯಚಿತ್ರಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸುತ್ತಾರೆ. ಬ್ರಹ್ಮಾಂಡವನ್ನು ಉದರದಿ ಪೊರೆಯುವ ದೇವದೇವನಿಗೆ ಅಪಚಾರವೇ? ಹಾಗೆ ಅಪಚಾರ ಮಾಡಿದವರ ಮೇಲೆ ಕೋಪವೂ ಬರುತ್ತದೆ. ಆದರೆ ಇನ್ನೊಂದು ಕಡೆಯಿಂದ ನೋಡಿದರೆ ಇದು ನಮ್ಮ ದೇವರ ದೊಡ್ಡತನವೇ ಎಂದು ಕಾಣುತ್ತದೆ. ಭಕ್ತರಿಂದ ಇಷ್ಟೆಲ್ಲ ಮಾಡಿಸಿಕೊಂಡರೂ ಅವರಿಗೇ ಒಲಿಯುವ ಭಕ್ತಪರಾಧೀನ ನಮ್ಮ ಗಣಪ ! ಅವನು ನಮಗೆ ಎಂಥ ಸ್ನೇಹಿತನಲ್ಲವೇ? ಆದರೂ ಸ್ನೇಹಿತನೆಂದು ಬಹಳ ಹಿಂಸಿಸುವುದು ಒಳ್ಳೆಯದಲ್ಲ. ಆದರೂ ಇಲ್ಲಸಲ್ಲದ ಉಡುಪುಗಳನ್ನು ಗಣೇಶನಿಗೆ ತೊಡಿಸಿದಾಗ ನನಗೆ ಬೇಜಾರಾಗದೆ ಇರುವುದಿಲ್ಲ.

ಮತಾಂಧತೆ ತಾಂಡವವಾಡುತ್ತಿರುವ ಈ ಕಾಲದಲ್ಲಿ ಗಣೇಶ ನಮಗೆ ಒಳ್ಳೆಯ ಪಾಠ ಕಲಿಸಿದ್ದಾನೆ. ಇದೇ ರೀತಿಯ ಹಾಸ್ಯ ಮುಸ್ಲಿಮರ ಅಥವಾ ಕ್ರಿಶ್ಚಿಯನ್ನರ ದೇವತೆಗಳಿಗೆ ಮಾಡಿದ್ದರೆ? ಮೊನ್ನೆ ತಾನೆ ಡೆನ್ಮಾರ್ಕಿನಲ್ಲಿ ನಡೆದ ಸಂಗತಿಯ ಪುನರಾವೃತ್ತಿಯಾಗುತ್ತಿತ್ತು. ಹಿಂದು ಧರ್ಮವು ಅವುಗಳಿಗಿಂತ ಸಹಿಷ್ಣು ಎಂದು ಗಣೇಶ ನಿರೂಪಿಸಿದ್ದಾನೆ.

ಭಕ್ತಿಯ ಒಂದು ಸ್ನೇಹದಲ್ಲಿ ಸ್ವಲ್ಪ ಅಪಚಾರ ಮಾಡಿದರೆ ತೊಂದರೆ ಇಲ್ಲ. ಈಗ ಕೃಷ್ಣನಿಗೆ ವಿದುರ ಭಕ್ತಿಭಾವದಲ್ಲಿ ಬಾಳೆಯ ಹಣ್ಣನ್ನು ಕೊಡುವ ಬದಲು ಸಿಪ್ಪೆಯನ್ನು ಕೊಡಲಿಲ್ಲವೇ? ಆದರೆ ಗಣೇಶನ ಬಗ್ಗೆ ಕೆಟ್ಟದಾಗಿ ಕೆಲವು ಆಧುನಿಕ ವಿದ್ವಾಂಸರು ಹೇಳುತ್ತಿದ್ದಾರೆ. ಪಾಲ್ ಕೋರ್‍ಟ್ರೈಟ್ ಎಂಬುವನು ಗಣೇಶನನ್ನು "psycho-analyze" ಮಾಡುವೆ ಹೇಯ ಪ್ರಯತ್ನ ಮಾಡಿರುತ್ತಾನೆ. ಇದು ಎರಡು ವರ್ಷಗಳ ಹಿಂದೆ ದೊಡ್ಡ ರಾದ್ಧಾಂತವನ್ನೇ ಮಾಡಿತ್ತು. ಅದರಲ್ಲಿ ಮುದ್ದಾದ ಗಣೇಶನ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಬರೆದಿರುತ್ತಾರೆ. ಇಲ್ಲಿ ಬರೆಯಲಾಗದಷ್ಟು ಅಶ್ಲೀಲ ಸಂಗತಿಗಳನ್ನು ಸೇರಿಸಿದ್ದಾರೆ. ಈ ಪುಸ್ತಕದಿಂದ ಖೇದಗೊಂಡ ಭಕ್ತರು ಆ ಪುಸ್ತಕದ ಮುದ್ರಣವನ್ನು ಸ್ಥಗಿತಗೊಳಿಸಿದರು. (ನಾನು ಪುಸ್ತಕ ban ವಾದಿಯಲ್ಲ, ಆದರೆ ಈ ರೀತಿಯ ಅಸಹ್ಯವಾದ ಬರವಣಿಗಳನ್ನು ಖಂಡಿಸಲೇಬೇಕು) ಸತ್ಯವಿದ್ದಿದ್ದರೆ ಸರಿ ಎನ್ನಬಹುದಿತ್ತು. ಆದರೆ ವಸ್ತುತಃ ಆ ಪುಸ್ತಕದಲ್ಲಿರುವ ಸತ್ಯಾಂಶ ಕಡಿಮೆ. ಪಾಲ್ ಮಹಾಶಯ ಉಪಯೋಗಿಸಿದ ಕ್ರಮವೂ ತಪ್ಪು. ಅವನ ವಿದ್ವತ್ತೂ ಸರಿಯಿಲ್ಲ ಎಂದು ಕೊಂಡಿಯಲ್ಲಿ ಸಿಗುವ ದೀರ್ಘಲೇಖನದಲ್ಲಿ ಚೆನ್ನಾಗಿ ನಿರೂಪಿಸಿರುತ್ತಾರೆ ವಿಶಾಲ್ ಅಗರ್ವಾಲ್ ಮತ್ತು ಕಲವೈ ವೆಂಕಟ್ ಎಂಬುವರು.

ಹೀಗೆ ಗಣೇಶನಿಂದ - ಯಾವ ಸಂದರ್ಭದಲ್ಲಿ ಸಹಿಷ್ಣುವಾಗಿರಬೇಕು, ಯಾವ ಸಂದರ್ಭದಲ್ಲಿ ಹೋರಾಡಬೇಕು ಎಂಬ ಇನ್ನೊಂದು ಪಾಠವೂ ಆಗಿದೆ.

ಗಣೇಶಚತುರ್ಥಿಯು ಕೇವಲ ಭಕ್ತಿಭರಿತ ವ್ರತವಾಗಿರದೆ ಸಾಮಾಜಿಕ ಐಕ್ಯಕ್ಕೆ ಸಾಧನವಾಗಿ ಕೂಡ ಬಳಸಿಕೊಳ್ಳಬಹುದೆಂದು ಲೋಕಮಾನ್ಯ ಬಾಲಗಂಗಾಧರ ಟಿಳಕರು ನಿರೂಪಿಸಿದ್ದಾರೆ. ಇವರ ಈ ಪ್ರಯತ್ನವೇ ಈಗ ರಸ್ತೆ ರಸ್ತೆಗಳಲ್ಲಿ ಸಿಗುವ ಗಣೇಶ ಮಿತ್ರ ಮಂಡಲಿಗಳಿಗೆ ಕಾರಣ. ಅಂದು ಮನೆಮನೆಗಳಲ್ಲಿ ವರ್ಣಮಯ ಗೌರೀ-ಗಣೇಶರ ಮೂರ್ತಿಗಳು ಕಂಗೊಳಿಸುತ್ತಿರುತ್ತವೆ. ಮೋದಕ, ಕಡುಬುಗಳು ಮುಂತಾದ ಸಿಹಿತಿನಿಸುಗಳನ್ನು ವಿನಾಯಕನಿಗೆ ನಿವೇದಿಸಿ ಭಕ್ತಿಯಿಂದ ಪೂಜೆ ನೆರವೇರುತ್ತದೆ. ಮನೆಗ ಬಂದ ತಾಯಿ-ಮಗನ ಹಾಗೆ ಭಕ್ತರ ಪೂಜಾತಿಥ್ಯಗಳನ್ನು ಸ್ವೀಕರಿಸುತ್ತಾರೆ. ಪ್ರತಿಯೊಂದು ಮನೆಯ ಆತ್ಮೀಯ ಸದಸ್ಯರೇ ಆಗುತ್ತಾರೆ. ಅವರ ಮೃಣ್ಮಯ ಮೂರ್ತಿಗಳನ್ನು ನೀರಿನಲ್ಲಿ ಬಿಡುವಾಗ ಭಕ್ತರಿಗೆಲ್ಲ ದುಃಖ. ನಮ್ಮ ಆತ್ಮೀಯರನ್ನು ಬೀಳ್ಕೊಡುವಾಗ ಆಗುವ ದುಃಖವೇ ಇಲ್ಲಿಯೂ ಆಗುತ್ತದೆ. ಈ ವಿಸರ್ಜನೆಯೂ ಒಂದು ಪಾಠವನ್ನು ಹೇಳಿಕೊಡುತ್ತದೆ. ಸಂತಸದ ಘಳಿಗೆಗಳೇ ಶಾಶ್ವತವಲ್ಲವೆಂದೂ ಜೀವನದ ಅನಿವಾರ್ಯಗಳನ್ನು ಮರೆಯಬಾರದೆಂದು ಆ ಸಂಭ್ರಮದಲ್ಲಿಯೇ ಗಣಪ ನಮಗೆ ಮೆಲ್ಲನೆ ಕಿವಿಮಾತು ಹೇಳುತ್ತಾನೆ.

ಗಣೇಶನ ವ್ಯಾಪ್ತಿ ಎಲ್ಲ ಕ್ಷೇತ್ರಗಳಲ್ಲೂ ಕಾಣುತ್ತದೆ. ಕರ್ಣಾಟಕ ಶಾಸ್ತ್ರೀಯ ಸಂಗೀತದಲ್ಲಂತೂ ಪಿಳ್ಳಾರಿ ಗೀತೆಗಳಿಂದ ಶಿಕ್ಷಣ ಆರಂಭವಾಗುತ್ತದೆ. ಅದೂ "ಲಂಬೋದರ ಲಕುಮಿಕರ" ಎಂಬ ಗಣೇಶಸ್ತುತಿಯಿಂದ. ಕಾವ್ಯನಾಟಕಾದಿಗಳಲ್ಲೂ ಆರಂಭದಲ್ಲಿ ಗಣೇಶಸ್ತುತಿಯೇ. ಈಗಿನ ಚಲನಚಿತ್ರಗಳಲ್ಲೂ ಹಾಗೆಯೇ! ಮನೆಗಳ ಮುಂದೆ ಗಣೇಶನ ಮೂರ್ತಿಯೊಂದು ಸಾಮಾನ್ಯವಾಗಿ ಕಾಣುತ್ತದೆ. ಅದು ಗಣೇಶನ ಸಂಕೇತವಾಗಿರುವುದರಿಂದ ವಿಘ್ನಗಳನ್ನು ನಿವಾರಿಸುವುದು ಎಂದು ನಂಬಿಕೆ. ಅದಕ್ಕೆ ಒಂದೆಡೆ "ಕಲೌ ದುರ್ಗಾವಿನಾಯಕೌ" ಅಂದರೆ ಕಲಿಯುಗದಲ್ಲಿ ದುರ್ಗೆ ಮತ್ತು ವಿನಾಯಕರ ಪೂಜೆಯನ್ನು ವಿಶೇಷವಾಗಿ ಮಾಡಬೇಕೆಂದು ಹೇಳಿದೆ. ಸಂತಸದ ಸಮಯದಲ್ಲಿ ಮತ್ತು ಆಪತ್ತಿನ ಸಮಯದಲ್ಲೂ ಪ್ರೀತಿಯಿಂದ ಸಲಹುವ ಮಿತ್ರನಾಗಿ, ಸರ್ವಕಾಲವೂ ಭಕ್ತರನ್ನು ಕಾಯುವ ದೇವರಾಗಿ ಗಣೇಶ ಎಲ್ಲರ ಪ್ರೀತಿಭಕ್ತಿಗಳಿಗೆ ಪಾತ್ರನಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಕೆಲಸದ ಆರಂಭದಲ್ಲಿ ಕೋಟ್ಯಂತರ ಜನಗಳು ನೆನೆಯುವ ಆ ಗಣೇಶನು ನಮ್ಮ ವಿಘ್ನಗಳನ್ನು ನಿವಾರಿಸಿ ವಿದ್ಯಾಬುದ್ಧ್ಯಾಯುರಾರೋಗ್ಯೈಶ್ವರ್ಯಗಳನ್ನೂ ಚತುರ್ವಿಧಪುರುಷಾರ್ಥಗಳನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತಾ ಇಲ್ಲಿಗೆ ನನ್ನ ಗಣೇಶಾಲೋಕನವನ್ನು ಸಂಪನ್ನಗೊಳಿಸುವೆ.

|| ಇತಿ ಶಮ್ ||

Tuesday, May 02, 2006

ಶ್ರೀಶಂಕರಜಯಂತಿ

ಶ್ರುತಿ-ಸ್ಮೃತಿ-ಪುರಾಣಾನಾಮಾಲಯಂ ಕರುಣಾಲಯಮ್ |
ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಮ್ ||

ವೈಶಾಖ-ಶುದ್ಧ-ಪಂಚಮಿಯಂದು ಶಂಕರಾಚಾರ್ಯರ ಜಯಂತಿ ಆಚರಿಸುವುದು. ಈ ವರ್ಷ ಅದು ಇಂದಿನ ದಿನ ಬಂದಿದೆ.

ಶ್ರೀಶಂಕರಾಚಾರ್ಯರಷ್ಟು ಪ್ರಭಾವಶಾಲಿ ದಾರ್ಶನಿಕರು ಭಾರತದಲ್ಲಿ ಮತ್ತೊಬ್ಬರಿಲ್ಲ. ಅವರನ್ನು ಒಪ್ಪಲಿ ಬಿಡಲಿ, ಅವರು ಹಾಕಿಕೊಟ್ಟ ಮಾರ್ಗವನ್ನೇ ನಂತರದ ದಾರ್ಶನಿಕರಾದ ರಾಮಾನುಜಾಚಾರ್ಯರು ಮಧ್ವಾಚಾರ್ಯರೂ ಅವಲಂಬಿಸಿದರು. ಪ್ರಸ್ಥಾನತ್ರಯಗಳಾದ ಬ್ರಹ್ಮಸೂತ್ರ-ಉಪನಿಷತ್ತು-ಭಗವದ್ಗೀತೆಗಳಿಗೆ ಭಾಷ್ಯ ಬರೆಯುವ ಕ್ರಮವನ್ನು ತೋರಿಸಿದ್ದೇ ಶಂಕರಾಚಾರ್ಯರು. ಇವರು ಪ್ರತಿಪಾದಿಸಿದ್ದು ಅದ್ವೈತವಾದವೆಂದು ಖ್ಯಾತವಾಯ್ತು. ಆದರೆ ತಮ್ಮನ್ನು ತಾವು ಉಪನಿಷದ್ವಾದಿಗಳೆಂದೂ ಔಪನಿಷದರೆಂದು ತಮ್ಮನ್ನು ತಾವೇ ಬಗೆದಿದ್ದರು. ಅದ್ವೈತಿಗೆಳೆಂದು ತಮ್ಮನ್ನು ಎಲ್ಲಿಯೂ ಕರೆದುಕೊಂಡಿಲ್ಲ. ಶಂಕರರು ಮಠಸ್ಥಾಪನೆಯನ್ನು ಮಾಡಿ ಭಾರತದ ಎಲ್ಲೆಗಳನ್ನು ನಿರೂಪಿಸಿದರೆಂದು ಎಲ್ಲರ ನಂಬಿಕೆ. ಇದರಿಂದ ಭಾರತ ಎಂಬ ಒಂದು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪ್ರದೇಶದ ಸಮ್ಯಗ್ನಿರೂಪಣೆಯಾಯ್ತೆಂದರೆ ಅತಿಶಯೋಕ್ತಿಯೇನಲ್ಲ.

ಭಾಷ್ಯಗಳನ್ನೇ ಪ್ರಮುಖವಾಗಿ ಬರೆದರೂ ಸಾಮಾನ್ಯರಿಗೆ ಮತ್ತು ಮಂದಾಧಿಕಾರಿಗಳಿಗೆ ಉಪಯೋಗವಾಗಲೆಂದು ಹಲವು ಲಘು ಪ್ರಕರಣಗ್ರಂಥಗಳನ್ನೂ ರಚಿಸಿದ್ದಾರೆಂದು ಪ್ರತೀತಿ. ಇವರದೆಂದು ಹೇಳಲ್ಪಟ್ಟ ಸ್ತೋತ್ರಗಳು (ಸೌಂದರ್ಯಲಹರೀ, ಶಿವಾನಂದಲಹರೀ ಮೊದಲಾದವು) ಇವರವಲ್ಲವೆಂಬುದು ಆಧುನಿಕ ವಿದ್ವಾಂಸರ ಮತ. ನನ್ನ ವೈಯಕ್ತಿಕ ದೃಷ್ಟಿಯೂ ಹಾಗೆ ಇದೆ. ಶಂಕರರ ಹೆಸರನ್ನುಪಯೋಗಿಸಿ ತಮ್ಮ ಕೃತಿಗಳನ್ನು ಪ್ರಚುರಪಡಿಸಬೇಕೆಂಬ ಆಸೆಯೊಂದಿಗೆ ಕಾಲಾಂತರದಲ್ಲಿ ಬಂದ ಕವಿಗಳು ಮಾಡಿದ ಕೃತ್ಯಗಳಿವೆಂಬುದನ್ನು ಹೇಳಬಹುದು.

ಆದರೆ ಶಂಕರರು ಎಷ್ಟು ಪ್ರಭಾವಶಾಲಿಗಳೋ ಅವರ ಹೆಸರು ಅಷ್ಟೇ ವಿವಾದಗಳಲ್ಲಿ ದುರದೃಷ್ಟವಶಾತ್ ಕೇಳುತ್ತದೆ. ಶೃಂಗೇರಿ ಮತ್ತು ಕಾಂಚೀಪುರದ ಮಠಗಳ ನಡುವಿನ ತಗಾದೆ ಬಹಳ ದೊಡ್ಡದು. ಇದಕ್ಕೆ ಅಂಗವಾಗಿ ಶಂಕರರ ಕಾಲವನ್ನು ಕ್ರಿ.ಪೂ ಆರನೆ ಶತಮಾನಕ್ಕೆ ತಳ್ಳಲು ಇತಿಹಾಸಜ್ಞ(ಘ್ನ?)ರ ಗುಂಪು ಯತ್ನಿಸಿದೆ. ಸಾಮಾನ್ಯವಾಗಿ ಕ್ರಿ.ಶ.ಏಳನೇ ಶತಮಾನದವರೆಂದು ಪರಿಗಣಿಸಲಾದ ಆಚಾರ್ಯರರ ಕಾಲವನ್ನು ಒಂದು ಸಾವಿರವರ್ಷಗಳ ಹಿಂದೆ ತಳ್ಳುವ ಸ್ವಾರ್ಥಿಗಳ ಯತ್ನ ನಡೆದಿದೆ. ಇದರ ಬಗ್ಗೆ ನಂತರದ ಒಂದು ಬ್ಲಾಗಿನಲ್ಲಿ ಬರೆಯುತ್ತೇನೆ. ಒಟ್ಟಿನಲ್ಲಿ ಕಾಂಚೀಪುರದ ಅಥವಾ ಕುಂಭಕೋಣದ ಮಠದ ಶಂಕರಾಚಾರ್ಯರ ಕ್ರಿ.ಪೂ.ಕಾಲದ ಮತ ಸತ್ಯಕ್ಕೆ ಸಾವಿರವರ್ಷ ದೂರವೆಂದು ಹೇಳಿ ಇದರ ಬಗ್ಗೆ ಇಲ್ಲಿಯೇ ನಿಲ್ಲಿಸುತ್ತೇನೆ.

ಶಂಕರರು ಭಾರತೀಯ ದಾರ್ಶನಿಕತೆಯ ದಿಗ್ಗಜರಲ್ಲಿ ಒಬ್ಬರು. ಅವರು ಹೇಳಿದ ಕೆಲವು ಸಂಗತಿಗಳನ್ನು ಇಲ್ಲಿ ಸ್ಮರಿಸಬಹುದು.

ಭಗವದ್ಗೀತೆಯ ಬಗ್ಗೆ - "ಸಮಸ್ತವೇದಾಂತಾರ್ಥ-ಸಾರ-ಸಂಗ್ರಹಭೂತಂ ದುರ್ವಿಜ್ಞೇಯಾರ್ಥಮ್"
ಗೀತೆಯು ಸಮಸ್ತ ವೇದಾಂತದ ಅರ್ಥದ ಸಾರಸಂಗ್ರಹಭೂತವಾದರೂ ಇದರ ಅರ್ಥ ತಿಳಿಯುವುದು ಕಷ್ಟ.

"ಸರ್ವಶಾಸ್ತ್ರವಿದ್-ಅಸಂಪ್ರದಾಯವಿತ್-ಮೂರ್ಖವದುಪೇಕ್ಷಣೀಯಃ"
ಎಲ್ಲ ಶಾಸ್ತ್ರಗಳನ್ನು ಬಲ್ಲವನಾದರೂ ಸಂಪ್ರದಾಯದ ಅರ್ಥ-ಮರ್ಯಾದೆಗಳನ್ನು ತಿಳಿಯದವನನ್ನು ಮೂರ್ಖನಂತೆ ಉಪೇಕ್ಷೆ ಮಾಡಬೇಕು.

ಇವರು ಹೇಳಿದ ಮತ್ತೊಂದು ದೊಡ್ಡ ಸಂಗತಿಯೆಂದರೆ - ವೇದಾಧಿಕಾರ ಮತ್ತು ಮೋಕ್ಷಾಧಿಕಾರಗಳನ್ನು ಬೇರ್ಪಡಿಸಿ - ಸ್ತ್ರೀಯರಾಗಲಿ, ಶೂದ್ರರಾಗಲಿ ಸಮಾಜದ ಯಾವುದೇ ಸ್ತರದವರಾದರೂ ಅವರಿಗೆ ಮೋಕ್ಷಕ್ಕೆ ಅಧಿಕಾರವಿದೆ. ಮೋಕ್ಷಾಧಿಕಾರಕ್ಕೂ ವೇದಾಧಿಕಾರಕ್ಕೂ ಸಂಬಂಧವಿಲ್ಲ. ಇದು ಆಗಿನ ಎಂಥ ಒಂದು ಕ್ರಾಂತಿಕಾರಕ ಮಾತೆಂದು ತೋರಬಹುದು. ಆದರೆ ವಸ್ತುತಃ ಉಪನಿಷತ್ತುಗಳ ಸಂಪ್ರದಾಯದಲ್ಲಿ ಮೋಕ್ಷಕ್ಕೆ ಅಧಿಕಾರ ಎಲ್ಲರಿಗೂ ಇದ್ದಿತು. ಬ್ರಾಹ್ಮಣರ ದಬ್ಬಾಳಿಕೆ ಎಂದೆಲ್ಲಾ ಹೇಳುವವರು ಪರಮ-ಪುರುಷಾರ್ಥವಾದ ಮೋಕ್ಷಕ್ಕೆ ಎಲ್ಲರಿಗೂ ಅಧಿಕಾರವನ್ನು ಶಾಸ್ತ್ರ ಮೊದಲೇ ನೀಡಿದೆ - ಎಂದು ಗಮನಿಸಬೇಕು. ಅಂಥವರ ಹೋರಾಟ ಇದನ್ನು ತಿಳಿದ ಬಳಿಕೆ ಸ್ವಲ್ಪವಾದರೂ ಕಡಿಮೆಯಾಗಬಹುದು ಅಲ್ಲವೇ?

ಇವರ ಇನ್ನೊಂದು ಧೀರವಾಕ್ಯ ಹೀಗಿದೆ - "ನೂರು ಶ್ರುತಿಗಳು ಬೆಂಕಿ ತಣ್ಣಗಿದೆಯೆಂದು ಹೇಳಿದರೂ ಅದರಿಂದ ಬೆಂಕಿ ತಣ್ಣಗಾಗುವುದಿಲ್ಲ". ಇಲ್ಲಿನ ಸ್ವಾರಸ್ಯ ಗಮನಿಸಲು ಶ್ರುತಿಪ್ರಾಮಾಣ್ಯದ ಬಗ್ಗೆ ತಿಳಿಯಬೇಕು. ಶಂಕರರು ಅನುಭವದ ಪಾರಮ್ಯವನ್ನೇ ಹಿಡಿದವರು. ಇದರ ಜೊತೆಗೆ - ಮುಕ್ತಿ ಜೀವನಾನಂತರ ಕಾಣುವ ಒಂದಾನೊಂದು ಅವಸ್ಥೆಯಲ್ಲ - ಈ ಜೀವನದಲ್ಲೇ ಮುಕ್ತಿ ಸಾಧ್ಯ - ಅದೇ ಜೀವನ್ಮುಕ್ತಿಯೆಂದು ಸಾರಿದರು.

ಶಂಕರರನ್ನು ಈಗಿನ ಕಾಲದವರು ಪಟದಲ್ಲಿರಿಸಿ ಪೂಜೆ ಮಾಡುತ್ತೇವೆ. ಅವರು ಏನು ಹೇಳಿದ್ದಾರೆಂಬುದರ ಕಡೆಗೆ ಗಮನ ಹರಿಸುವುದಿಲ್ಲ. ಅವರ ಮೂರ್ತಿಗೆ ರುದ್ರಾಭಿಷೇಕ ಮಾಡಿ ಹೂವೇರಿಸುವುದಕ್ಕಿಂತ ಅವರು ಹೇಳಿದ ವಿಚಾರದೆಡೆ ಗಮನ ಹರಿಸುವುದೇ ಅವರಿಗೆ ನಾವು ಮಾಡಬಹುದಾದ ನಿಜವಾದ ಪೂಜೆಯೆಂದು ನನ್ನ ವಿಚಾರ.

|| ಇತಿ ಶಮ್ ||

Monday, December 05, 2005

The Bhagavad Gita and the example of the hedgehog

I was browsing Jim Collins's site - a great site for management enthusiasts and generally for people who want to get some good insights into management - when I came across this story of the fox and the hedgehog.

You can find that story here

While reading the story, the following shloka of the gItA echoed in my mind almost in a flash.

Lord Krishna says in the gItA:
vyavasAyAtmikA buddhirekeha kurunandana |
bahushAkhAhyanantAshcha buddhayo.avyavasAyinAm ||


A rough translation - the buddhi of the industrious is one pointed. But the intellects of the unindustrious are many branched.

It may be also interpreted as - the intellect (buddhi roughly translated) that is single-pointed yields to industriousness. But if the intellect is numerously branched, it leads to one becoming an "avyavasAyi" or an unindustrious one.

Reading the shoka, I recognize myself to be an "avyavasAyi" as my intellect is spread across too many things to be able to do something meaningful in a single area.

Going back to Jim Collins's example/parable, it looks like I am a fox. I may be smart, but definitely ineffective when compared with hedgehog-like people.

The fox-hedgehog/one-pointed-many-directional intellect idea seems to be applicable on multiple levels.

We can see that single-mindedness yields success as a student, happiness in the family and a prosperous career.

Single-mindedness yields benefits even on the spiritual plane. A seeker sticking to one particular path that suits him most succeeds whereas a dabbler in different traditions will gain more intellectual knowledge, but will fall short of that ultimate goal of True Understanding.

Upon reflection, we see that what is said here is commonsense. If we lavish our attention on multiple goals, some of which may be mutually contradictory, we become too weak to concentrate on anything substantial and failure becomes inevitable. However, if we concentrate on a few essential things, the chance of succeeding becomes that much higher.

A simple truth, but really difficult to implement. It is so for me at least. I should try and minimize my areas of action so that I can be successful in a few. But numerous interests drag me hither and thither so that I just accomplish something minimal. This minimization becomes possible by mindful prioritizing. But we have to keep prioritizing things ceaselessly to succeed. It is pretty difficult to do that and needs a lot of mental energy. But in perseverance is the secret (and the difficulty). Doing it one week may be easy, but doing it on every day of one's life is pretty challenging. One has to be really strong-willed to succeed.

As Krishna, again so pithily, states :
abhyAsena tu kaunteya vairAgyena cha gR^ihyate |

By practice and dispassion, the mind can be controlled.

Again, simple to intellectually understand - but the implications of this statement are profound. And internalizing it is not exactly simple.

The gItA is indeed a valuable medicine chest - we go to it when we are unwell and upon following the Lord's prescription, we become well again.

Sometimes, though, we need the sugar coating of a story and some lively language to ingest a bitter pill (as in Jim Collins's article). But we see that the gItA within the mahAbhArata has already done it for us. This is not to belittle Jim Collins's wonderful insights, but only to recognize an alternate and older (read time-tested) encyclopedic source. I mentioned the mahAbhArata because, to understand the gItA, one must have a fairly good idea on the events that had transpired before the delivery of the teaching. I feel that aspiring and practising managers will benefit immensely by a serious study of the mahAbhArata (with or without the gItA in it).

Coincidentally, now is mArgashIrSha, the month in which gItA-jayantI (the anniversary of the descent of the gItA) falls - on the 11th day of the bright fortnight.

Reflecting on the teachings of the gItA will do well for us both in this life and beyond.

|| iti sham ||

Thursday, September 15, 2005

Devudu the sthitaprajna

I read an anecdote pertaining to a great man, Sri Devudu Narasimha Shastry, on my way to work today. One such moment in the day will really make your day. Though it was not a feel good story, it drove home the essential nature of human life and how one must conduct oneself in difficult situations.

Late Sri Narasimha Shastry is well known in Kannada literary circles. His "maha.." trilogy of novels (about Nahusha, Vishwamitra and Yajnavalkya) is just awe-inspiring. His other novels like Mayura are still popular. He was also a short story writer. He had a strong background in mImAMsa and Vedanta and great command over Kannada and Samskrita languages. All these make their presence clearly felt in his works. His wisdom reaches his readers through his noble characters. He has also translated the Yoga vAsiShTha into Kannada (a book that I really would like to read) - but that seems to be out of print for now.

Certain situations in his novels depict the mental state and experiences of the meditator (e.g Vishwamitra). Only a person that had had such an experience would be able to write as authoritatively and as vividly as Sri Shastry. It seems from his works that Sri Shastry was an adept in several Vedic upAsanAs. The incident I read this morning also shows that Sri Shastry had not only the intellectual understanding of these great works but had managed to live a life entirely based on those principles.

A crude gist of the anecdote follows (for a better read look at Sri. TV Venkatachala Shastry's udAracharitaru udAttaprasaMgagaLu - a wonderful book I mentioned in my yesterday's Kannada blog as well or better still - read Sri. Narasimha Shastry's biography).

Sri. Devudu and his wife had been invited to Udupi for a lecture on the BhagavadgItA. They took along a friend, Sri Krishna Shastry, with them. Just before the lecture, Sri Devudu received a telegram. He then requested the organizers for urgent transport to Kadur after the lecture. When asked about the contents of the telegram, Sri Devudu mentioned that it was about a publication and that his publishers wanted him in Bangalore as soon as possible.

The lecture began and was delivered most eloquently by Sri Devudu. His wife was also impressed. She felt that that particular lecture was the best he had delivered on the subject. After the lecture, all of them went to Bangalore and Sri Devudu then broke the real news to Sri Krishna Shastry. It turned out that Sri Devudu's eldest son had passed away all of a sudden and that news had been conveyed in the telegram. Sri Krishna Shastry was horrified at the news. This man seemed to be telling this news with this calm air about him and this was the kind of news that could break anybody's mind. Sri Krishna Shastry then asked Sri Devudu how he was able to deliver that phenomenal lecture knowing well that his son was no more.

Sri Devudu replied that he had given himself the gItopadesha. He had reflected upon "sarvadharmAn parityajya mAmekaM sharaNaM vraja" and other shlokas which the gItA is a treasure-trove of. He had also reflected upon how a sthitaprajna (a man of equaninmity) would conduct himself. He just did those as expounded by BhagavAn in the gItA. If Sri Devudu had mentioned the real reason to the organizers, it would have spoilt the efforts of all of the organizers. He decided to go ahead with the lecture

Sri Devudu then got Sri Krishna Shastry to inform his wife of the bad news. The mother of the deceased son fainted on hearing that and became inconsolable. The parents could not be even present for their son's last rites!

A man of such equanimity as glorified in the gItA was in our midst in flesh and blood! I feel honoured for living in the same city as such a great soul.

I hope none of us get to experience situations like these. But I am sure that it must be after looking at such great men that the following subhAShitas were composed.

vajrAdapi kaThorANi mRudUni kusumAdapi
lokottarANAm chetAMsi ko hi vijnAtumarhati

(The minds of great souls can be softer than flowers and harder than diamonds. Who can indeed fathom those great souls?)

saMpatsu mahatAM chittaM bhavatyutpala komalam
Apatsu cha mahAshailashilAsaMghAtakarkasham (bhartRhari's nItishataka)

(In times of happiness, the minds of the great are as soft as flowers. But in times of distress, they can be as hard as the boulders of a great mountain)

The hardness of minds in times of distress is similar to what Arjuna had when he had to kill even his grandfather BhIShma. It is similar to Lord Krishna's state of mind when his Yadava kinsmen were killing themselves in a spate of unfortunate violence. For softness of minds, we can think of Lord Krishna's grace when He decided to accept Vidura's hospitality and that of Lord Rama when He accepted Shabari's.

Some comment on the net has interpreted the latter shloka in the above pair as not so felicitous. I feel that his interpretation is not in order.

We must be thankful for the inspiring presence of such great people as Sri Devudu and such great works as the nItishatakaM in our midst, even if it is just in our minds.

sarve janAH sukhino bhavantu

Thursday, July 21, 2005

Flying in India - Shivkar Talpade?

http://www.deccanherald.com/deccanherald/dec16/snt2.asp

This is a very interesting article which speaks of Shivkar Talpade pioneering flight a full 8 years before the Wright brothers did (in 1895). Apparently Shivkar's research was based on Samskrit treatises on vaimAnikashAstra. It would be great if this had been true. I would believe it completely had Stephen Knapp's name not been mentioned.

Stephen Knapp has a web site that is pro-Hindu. But it also claims that Taj Mahal was a Shiva temple with pretty poor proof. Any pattern is dubbed 'vedic'. That is another thing I hate nowadays. People are bringing the Veda to everyday life to the extent that soon we'll have vedic tea, vedic coffee and vedic TV. Why the urge to prefix everything under the sun with vedic?

The veda is supreme for me even if it does not talk about quarks or the distance from the earth to the sun or the string theory. It is like a mother to me even if it calls the sun rising and setting. Because the physical realm is not where the veda rules but in the spiritual. What else can declare in words that words and mind cannot reach it ? "yato vAcho nivartante aprApya manasA saha". That, is the realm of the veda and not something like vedic nuclear science or vedic toothpaste. Study of the veda traditionally and with a shraddhA-strengthened intellect should let us into the secrets of the veda.

What can you say to those who think that the puruSha sUkta has coded the distance between the earth and the sun?

Wednesday, July 20, 2005

Meat/Beef eating and Dharma

I am a member of a particular mailing list which had discussions on how Mecca/Medina were Hindu temples of a bygone era. The proof given was not rigorous but something that seemed to be made up. One thing led to another and we had a discussion on whether beef was eaten during the vedic times or not. At a certain point, I was especially irritated when someone mentioned that "if a person eats beef, he ceases to be Hindu". That got me writing this post.

To make things clear, I have been a strict lacto-vegetarian all my life and I have no intention of changing that.

I, for one, will not be bothered if it is conclusively shown that people in vedic times ate beef. I won't be bothered even if it were shown that beef was never eaten. My contention is simply that sanAtana dharma won't be affected if it is shown either way and one will not cease to be a Hindu just because he/she ate beef. karma will accumulate and bad health will also result - but I am not going there.

What constitutes Dharma externally has changed over the ages. Beef eating for instance did not make it adharma in the vedic ages. But after the middle ages (circa 12th century CE, I think) and islamic invasion, beef eating and cow slaughter began to be considered adharma. It could also be the case that in our pastoral culture, the cow came to be regarded very highly and so could not be killed. Whatever the reason that made it adharma, it seems to be the case that beef eating existed during vedic times.

There is one particular proof to show that BhavabhUti, one of Samskrit's greatest poets, mentions sage VasiShTha eating beef. The sage actually requests for some tender meat of a young calf as his teeth were getting old. This proof in itself is quite significant. Because, why would BhavabhUti show vasiShTha eating beef? Did he have a blatant agenda like DN Jha (author of the much maligned book on beef eating in the vedas) who is a known leftist? As chroniclers of a particular era, poets and dramatists provide great contribution to history. How else can we see dharma in action if we can't have stories of people that actually followed it? It is from that perspective that I gave this example. And if BhavabhUti has given an example, it has considerable weight and needs our attention.

I say, "if a Hindu in a bygone era ate beef, so be it". I personally may or may not want to do that. But the thing to know is that it won't affect Dharma mainly because Dharma, though having external representations, is mainly mental, intellectual and spiritual.

I have a question to people who read this. Who is a better person ? A beef eating Dalai Lama or an especially harmful vegetarian? So what I am trying to say is even though meat eating is considered rAjasika and generally considered a bad habit, a meat eater may show better concern towards his fellow beings than a vegetarian because of his adherence to dharma. Who was more virtuous ? The brAhmaNa kaushika or the butcher dharmavyAdha?

Of course, eating meat constantly may cause a rAjasika mind to develop. Also eating meat causes more harm to the environment than not eating it. But these are different arguments from whether a person ate meat in the past. For example - it is the way of Eskimos to eat fish. Can you expect them to eat anything else? Are they worse people because they eat fish? I am sure Ramakrishna Paramahamsa ate fish and so did Swami Vivekananda. So, are they worse than a south Indian vegetarian brahmin who spent his life criticising non-vegetarians?

Someone also mentioned that there was no meat eating in the vedas. To them I can say - strive to be better informed. There have been yajnas where the fat (vapa) from a pashu has been used. The people who conduct the yajna have to partake some meat (not a great amount - but some). Such yajnas have happened even recently. And please don't give me the Kaliyuga answer. The concept of yugas as a means to perform or not perform some actions are, in my opinion, mere arthavAda. I am with the mImAMskas on this - "na chAnIdRshaM jagat kadAchit" - which means "the world (or more specifically its inhabitants) was never different from the current world". But that needs a separate post.

Anyway, modern Hindus, especially those heavily influenced by the RSS/VHP, become very touchy when such issues are discussed. (Note: I am sympathetic to RSS/VHP but they have to understand that sanAtana Dharma is not a monolithic religion like Islam) I say to them, your Dharma is indeed greater than these petty concerns. Why do you even worry about this? Do you, instead, perform all your daily duties - social and spiritual? For example, if somebody calls himself a brahmin, he has to perform sandhyAvandanaM thrice a day at the minimum. That will be his dharma. Of course there are vishESha dharmas, but it is left to the individuals to identify those. Do these people do their regular dharma? Are they honest? I will call someone a better Hindu if he/she performs these activities than go out and shout one's throat hoarse over an event that has been sensationalized.

So, should we just sit at home doing our individual activities without going to the aid of our dharma? Should we practise unconditional ahimsA like Gandhi?

My answer is a loud NO! Our dharma advocates ahimsA - but not pacifism. Krishna told Arjuna - "yudhyasva vigatajvaraH". He addressed Arjuna as "parantapa" (scorcher of foes). But those become vishESha dharmas. For instance, vasiShTha ate the meat of a dog from a chaNDAla as the former was starving. He made prAyashchitta after that. At that point dehadhAraNa (sustenance of life in the body) was more important than anything else. So, if push comes to shove, it will be expected of everybody to contribute in a similar manner. Our conscience is the decision maker. That is the final court of appeal.

One thing I have noticed is that Dharma comes in hierarchies. For example, suppose a person sees his criminal son committing a gruesome murder and is unable to prevent it. His citizen-dharma asks him to turn him over to the police whereas the dharma of a father calls for his child's protection. In this case, the citizen's dharma is more important than that of a father and so, exhorts him to send his son to jail. This is decided by the person's buddhi. But it isn't simple all the time. For example, Krishna says in the gItA - "svadharme nidhanaM shreyaH paradharmo bhayAvahaH". - "It is better to die performing one's duty than doing someone else's which is more dangerous". But what is our svadharma? Is it static all the time? Does it change? In my opinion - all the time. For example, a man can be son, father, husband, teacher, soldier, citizen, human being - all at the same time. What dharma to follow at what time is the question. This for anybody (at least myself) is difficult to answer. But once dharma is followed it brings us long lasting happiness and satisfaction. At no point of time will a dhArmika be ashamed of one's action. That, in my opinion, is how to identify dharma.

So is it still OK to sit back when people are denigrating our deities?

No! Denigrating deities like Ganesha and Shiva by the likes of Wendy and her students should definitely be not tolerated and should be protested. We should strive to educate them and fight their malicious intentions. But don't lose track of your path by helping some one else on the way.

But if somebody shows conclusively (this is also left for us to decide) that a sage ate beef a while ago, it should not be our problem. If modern RSS/VHP Hindus are so touchy about this, they should know that they are betraying the diverse character of the Hindu society that they claim to represent. In fact, by being very touchy and protesting about these things, we have unfortunately become the enemy we love to hate.

Hinduism is not a monolithic religion like Islam or Christianity. There are hundreds of denominations, millions of deities and thousands of gurus. How do you choose what sanAtana dharma is from these? Vedas can be claimed to be the bedrock of Hinduism and yet you have tAntric people claiming that their Agamas are higher than the vedas. Are they not Hindus? Of course they are. And this is what people tend to forget when they try to make a monolithic religion out of Hinduism.

I hope I have made myself clear in where I stand on this. I should write more on this to give form to my thoughts. I will post references from the veda when I get the chance.

|| iti sham ||

Friday, May 06, 2005

TT: martin gardner on David Bohm and Krishnamurti

TT: martin gardner on

I first heard of J Krishnamurti more than ten years ago. At that time, the impression I had of him was that of a man who respected no tradition and generally that of an iconoclast. As I grew older, I came in contact with people connected to the Theosophical Society and Krishnamurti. His books seemed definitely interesting. It was difficult for me to characterize JK as belonging to any particular faith or stream of thought.

I've gone through a couple of his books. One of them - "On Fear" is a collection of speeches and writings delivered by JK on fear. His thought seemed clear. Forget what Martin Gardner says in this mentioned article, but JK seemed clear enough to me. I kind of envied him for being 'free' of fear. Because only one who is free of fear could honestly truthfully write a book on the mechanism of fear and how to overcome it. So I had thought of JK as a fearless man.

But this particular article and a bunch of others seem to convey something else. There is a letter that JK wrote to his long time associate Raja that shows everything. That letter can still be construed to be from a fearless person - but it generally seemed to convey an otherwise impression. JK, while not bound by any tradition, also seems to fall in the class of charlatans and mountebanks, fooling people with his verbosity and a facade of wisdom. So, if this article is true, JK was like any other guru - the kind that he detested and well trapped in the web of human frailty.

Martin Gardner, for his part, has been needlessly harsh in criticizing JK's teachings, I feel. Also, I would like to know where JK said that a man's brain would undergo mutation upon realization.

Before I ended up on this page, I was googling for Martin Gardner, whose achievements are quite remarkable for a non-professional mathematician and scientist. Gardner, who is a ripe 91 as I write this, loves to junk parapsychology. His belief of philosophical theism is interesting. I loved his work on Recreational mathematics and want to read his "scrivener" work when I can get around to it.

MG refers to JK as "one of the most peculiar gurus ever to come out of Mother India". Is he sarcastic here? I felt more than a hint of it. Do others feel the same?

The linked article is quite interesting as a person hailed by someone like Doug Hofstadter (author of GEB) as one of the prominent intellects of America has expressed his views on a brilliant physicist and a guru. (a title that JK detested)

Wednesday, April 13, 2005

ದುರ್ಗಾ ಸಪ್ತಶತೀ ಮತ್ತು ಶ್ರೀಮದ್ಭಗವದ್ಗೀತೆ

ಈಚೆಗೆ ನಾನು ಡಿ.ವಿ.ಜಿಯವರ "ಜೀವನಧರ್ಮಯೋಗ"ವೆಂಬ ಭಗವದ್ಗೀತಾತಾತ್ಪರ್ಯಗ್ರಂಥವನ್ನು ಓದಿದೆ. ಡಿ.ವಿ.ಜಿಯವರ ಶೈಲಿ ಸುಂದರ. ಇದರ ಬಗ್ಗೆ ಹಿಂದೊಮ್ಮೆ ಬರೆದಿದ್ದೇನೆ. ಆದರೆ ಅದಕ್ಕಿಂತ ದೊಡ್ಡ ಪ್ರಯೋಜನವೆಂದರೆ ಈ ಗ್ರಂಥವು ಭಗವದ್ಗೀತೆಗೆ ನನಗೆ ಒದಗಿಸಿದ ಪ್ರವೇಶ. ನಮ್ಮ ಮನೆಯಲ್ಲಿ ಗೀತೆಯ ಇಪ್ಪತ್ತು -ಮೂವತ್ತು ಪ್ರತಿಗಳಿವೆ. ಇಷ್ಟು ವರ್ಷಗಳಲ್ಲಿ ಒಮ್ಮೊಮ್ಮೆ ಕುತೂಹಲ ಹೆಚ್ಚಿ ಕಣ್ಣಾಡಿಸಿದ್ದುಂಟು. ಆದರೆ ಈಗಲೇ ಅದರ ಮಹತ್ತ್ವವನ್ನು ಜೀವನಕ್ಕೆ ಅದರ ಉಪಯುಕ್ತತೆಯನ್ನೂ ಕಂಡುಕೊಂಡದ್ದು. ಈಗಂತೂ ನಾನು ನನ್ನೊಡನೆ ಗೀತೆಯ ಒಂದು ಚಿಕ್ಕಪುಸ್ತಕವನ್ನು ಇಟ್ಟುಕೊಂಡಿರುತ್ತೇನೆ. ಮೊದಲಿನಿಂದ ಪ್ರತಿ ಅಧ್ಯಾಯವನ್ನೂ ಓದುತ್ತಾ ಬರುವುದು. ಮಧ್ಯೆ ಹಿಂದೆ ಓದಿದ ಶ್ಲೋಕಕ್ಕೆ ಹೊಸ ಅರ್ಥ ಸ್ಫುರಿಸುತ್ತದೆ. ಹೀಗೆ ಕೂಡ ಇದನ್ನು ಅರ್ಥ ಮಾಡಬಹುದು - ಇದರೊಡನೆ ಹೊಂದಿಸಬಹುದು ಎಂದೆಲ್ಲಾ ತೋರುತ್ತದೆ. ಜೀವನದ ನನ್ನ ಅನುಭವವನ್ನು ತಾಳೆ ಹಾಕಿ ಸತ್ಯಪರೀಕ್ಷೆ ಮಾಡುವ ಯತ್ನ ಮಾಡುತ್ತೇನೆ. ಇದರ ಜೊತೆಗೆ ಹಲವು ಸಲಹೆಗಳನ್ನು ಅನುಸರಿಸುವುದಕ್ಕೆ note ಮಾಡಿಕೊಳ್ಳುತ್ತೇನೆ. (ಎಲ್ಲವನ್ನು ಅನುಸರಿಸಲು ಆಗಿಲ್ಲ ಎಂದು ಬೇರೆ ಹೇಳಬೇಕಿಲ್ಲ, ಅಲ್ಲವೇ?). ಎಲ್ಲ ಮುಗಿದ ಮೇಲೆ ಮತ್ತೊಮ್ಮೆ ಆರಂಭಿಸುವುದು.
ಭಾರತೀಯರಿಗೆ ವಿಶೇಷವಾದ ಗ್ರಂಥರತ್ನ ಭಗವದ್ಗೀತೆ. ಇದರಲ್ಲಿ ಏಳು ನೂರು ಶ್ಲೋಕಗಳಿವೆ. ಗೀತೆಯ ಮಹತ್ತ್ವವನ್ನು ಹಾಡಿ ಹೊಗಳಿರುವ ಅನೇಕರಿದ್ದಾರೆ. ಪುರಾಣದ ಭಾಗಗಳೇ ಗೀತಾಮಾಹಾತ್ಮ್ಯವೆಂದು ಕರೆಯಲ್ಪಟ್ಟಿವೆ.

ಏಳು ನೂರು ಎಂದು ಸಂಸ್ಕೃತದಲ್ಲಿ ಹೇಳಬೇಕಾದರೆ ಸಪ್ತಶತ. ಅದನ್ನು ಹೊಂದಿದ ಒಂದು ಗ್ರಂಥವನ್ನು ಸಪ್ತಶತೀ ಎಂದು ಸ್ತ್ರೀಲಿಂಗಕ್ಕೆ ತಂದು ಹೆಸರಿಸಬಹುದು. ಈ ರೀತಿಯ ಗ್ರಂಥಗಳಲ್ಲಿ ಹೆಚ್ಚಿನ ಪ್ರಮುಖತೆಯನ್ನು ಪಡೆದ ಪೂಜ್ಯಗ್ರಂಥ ದುರ್ಗಾಸಪ್ತಶತೀ ಅಥವಾ ಚಂಡೀ.
ಚಂಡೀಯ ಬಗ್ಗೆ ಬರೆಯಲು ನನಗೆ ಆನಂದವೇ ಆಗುತ್ತಿದೆ. ಮಾರ್ಕಂಡೇಯ ಪುರಾಣದಲ್ಲಿ ಬರುವ ಈ ಏಳು ನೂರು ಶ್ಲೋಕದ ವಿಷಯದ ಸ್ಥೂಲನಿರೂಪಣೆ ಹೀಗಿದೆ :

ಸುರಥ ಸಮಾಧಿ ಎಂಬ ರಾಜ-ವೈಶ್ಯರ ಜೋಡಿ ಮನೆಮಠಗಳನ್ನು ಕಳೆದುಕೊಂಡು ಋಷ್ಯಾಶ್ರಮಕ್ಕೆ ಬಂದು ಸೇರುತ್ತದೆ. ಮನೆಯವರು ತುಚ್ಛೀಕರಿಸಿ ಇವರನ್ನು ಅಟ್ಟಿದರೂ ಮನೆಯ-ಮನೆಯ ಜನಗಳ ಮೇಲಿನ ವ್ಯಾಮೋಹವನ್ನು ಬಿಡಲು ಮನವೊಲ್ಲದ ಇವರು ಶೋಕತಪ್ತರಾಗಿ ಕಿಂಕರ್ತವ್ಯತಾಮೂಢರಾಗಿ ಋಷಿಯನ್ನು ಮೊರೆ ಹೊಕ್ಕುತ್ತಾರೆ. ಅದೇ ವ್ಯಾಮೋಹದ ಸಮಸ್ಯೆಯನ್ನು ಮುನಿಯ ಮುಂದಿಡುತ್ತಾರೆ. ಜ್ಞಾನಿಗಳಾದ ಋಷಿವರೇಣ್ಯರು - ಇವರ ಸ್ಥಿತಿಗೆ ಭಗವಂತನ ಮಾಯೆಯೆಂಬ ಶಕ್ತಿಯೇ ಕಾರಣವೆಂದು, ಮಾಯೆಯಿಂದ ಮುಕ್ತರಾದವರು ಮುಕ್ತಿಯನ್ನೇ ಪಡೆಯುವರೆಂಬುವ ವೇದಾಂತದ ಉತ್ತರ ನೀಡುತ್ತಾದೆ. ಆಗ ಪೃಚ್ಛಕದ್ವಯವು - ಮಾಯೆಯೆಂದರೇನು ? ಅದರ ಸ್ವರೂಪವೇನು ? ಅದರ ಮಹಿಮೆಯೇನು ಎಂದೆಲ್ಲಾ ಕೇಳಿದಾಗ - ಋಷಿವರ್ಯರು ಭಗವತಿಯ ಅಂದರೆ ವೈಷ್ಣವೀ ಮಾಯೆಯ ಲೀಲೆಯ ವರ್ಣನೆಗೆ ತೊಡಗುತ್ತಾರೆ. ಅದರಲ್ಲಿ ಪ್ರಮುಖವಾಗಿ ಲೋಕಪೀಡಕ-ರಾಕ್ಷಸರ ಸಂಹಾರದ ಪ್ರಕರಣತ್ರಯವಿದೆ. ಮೊದಲ ಪ್ರಕರಣ - ಮಧು-ಕೈಟಭರದು. ಎರಡನೆಯದು - ಮಹಿಷಾಸುರನ ಮರ್ದನ. ಮೂರನೆಯದು - ಶುಂಭ-ನಿಶುಂಭರ ಸಂಹಾರ.

ಈ ಗ್ರಂಥದ ಮಹಿಮೆ ಅಪಾರವೆಂಬುದಕ್ಕೆ ಇದನ್ನು ನಂಬಿರುವ ಭಕ್ತರೇ ಸಾಕ್ಷಿ. ಈ ಭಾಗವನ್ನು ಪಾರಾಯಣ ಮಾಡುವುದು, ಇದರಿಂದ ಹೋಮಮಾಡುವುದೇ ಮುಂತಾದ ಕಾರ್ಯಗಳಿಂದ ದೇವೀಭಗವತಿಯು ಪ್ರೀತಳಾಗಿ ಅನುಗ್ರಹಿಸುವಳು ಎಂದು ಗ್ರಂಥದ ಫಲಶ್ರುತಿಯಲ್ಲೇ ಬರುತ್ತದೆ. ಈ ಗ್ರಂಥದ ನಿಯಮಬದ್ಧವಾದ ಪಾರಾಯಣಕ್ರಮ ಎಲ್ಲರಿಗೂ ಅಲ್ಲ. ದೀಕ್ಷೆ ದೊರೆತವರು ಮಾತ್ರ ಹಾಗೆ ವಿಧ್ಯುಕ್ತವಾಗಿ ಇದನ್ನು ಪಾರಾಯಣ ಮಾಡಬಲ್ಲರು.

ಶಾಕ್ತರಿಗೆ ಈ ಗ್ರಂಥ ಬಹಳ ಮುಖ್ಯವಾದದ್ದು. ಇತರರಿಗೆ ಗೀತೆ ಹೇಗೆ ಮುಖ್ಯವೋ ಶಾಕ್ತರಿಗೆ ಹಾಗೆ ಸಪ್ತಶತಿಯೂ ಮುಖ್ಯ. ಹಲವು ಸಾಮ್ಯಗಳು ಈ ಗ್ರಂಥಗಳ ನಡುವೆ ಕಾಣಸಿಗುತ್ತವೆ. ಅರ್ಜುನನ ಕಾರುಣ್ಯ ಮತ್ತು ಸುರಥಸಮಾಧಿಗಳ ವ್ಯಾಮೋಹ-ಕಾರ್ಪಣ್ಯ ಎದ್ದು ಕಾಣುತ್ತದೆ. ಭಗವಾನ್ ಶ್ರೀಕೃಷ್ಣ್ನನು ಗೀತೆಯಲ್ಲಿ ಹೇಳುವಂತೆ ದೇವಿಯು ಸಪ್ತಶತಿಯಲ್ಲಿ ಅಭಯವನ್ನು ಕೊಡುವ ಹಲವು ಶ್ಲೋಕಗಳಿವೆ. ಭಗವದ್ವೈಭವ ವರ್ಣನೆಯೂ ಉಭಯಗ್ರಂಥಗಳಲ್ಲಿ ಕಾಣಸಿಗುತ್ತವೆ.

ಗೀತೆಯು ಪ್ರಕೃತಿ-ಕರ್ಮ-ಭಕ್ತಿ-ಜ್ಞಾನ ಇವೇ ಮುಂತಾದ ವಿಚಾರಗಳ ವಿವರಣೆಯನ್ನು ಹೊಂದಿದೆ. ಸಪ್ತಶತಿಯೂ ಇವೇ ವಿಚಾರಗಳನ್ನು ಬೇರೆಯ ರೀತಿ ನೀಡುತ್ತದೆ. ಎರಡು ಶ್ಲೋಕಗಳನ್ನು ಇಲ್ಲಿ ಸ್ಮರಿಸಲೇ ಬೇಕು.

ಸಪ್ತಶತಿಯಲ್ಲಿ -
ಜ್ಞಾನಿನಾಮಪಿ ಚೇತಾಂಸಿ ದೇವೀ ಭಗವತೀ ಹಿ ಸಾ
ಬಲಾದಾಕೃಶ್ಯ ಮೋಹಾಯ ಮಹಾಮಾಯಾ ಪ್ರಯಚ್ಛತಿ
ಎಂಬ ಶ್ಲೋಕ ಬರುತ್ತದೆ.

ಇದರ ಅರ್ಥ ಹೀಗಿದೆ :
ಜ್ಞಾನಿಗಳಾದವರ ಮನಸ್ಸು-ಬುದ್ದಿಗಳನ್ನೂ ಮಹಾಮಾಯೆಯಾದ ದೇವೀ ಭಗವತಿಯು ಬಲದಿಂದ ಸೆಳೆದು ಮೋಹಕ್ಕೆ ಕೊಡುತ್ತಾಳೆ. (ಅಂದರೆ ಜ್ಞಾನಿಗಳ ಮನೋಬುದ್ಧಿಗಳನ್ನೂ ಮೋಹಾವಿಷ್ಟಳಾಗಿ ದೇವಿಯ ಮಾಯಾಶಕ್ತಿಯು ಮಾಡಬಲ್ಲುದು ಎಂದು)

ಗೀತೆಯಲ್ಲಿ ಇದಕ್ಕೆ ಹತ್ತ್ತಿರದ ಶ್ಲೋಕ :
ಸದೃಶಂ ಚೇಷ್ಟತೇ ಸ್ವಸ್ಯಾಃ ಪ್ರಕೃತೇರ್ಜ್ಞಾನವಾನಪಿ
ಪ್ರಕೃತಿಂ ಯಾಂತಿ ಭೂತಾನಿ ನಿಗ್ರಹಃ ಕಿಂ ಕರಿಷ್ಯತಿ (೩-೩೩)
(ಅನ್ವಯ : ಜ್ಞಾನವಾನ್ ಅಪಿ ಪ್ರಕೃತೇಃ ಸ್ವಸ್ಯಾಃ ಸದೃಶಂ ಚೇಷ್ಟತೇ, ಭೂತಾನಿ ಪ್ರಕೃತಿಂ ಯಾಂತಿ, ನಿಗ್ರಹಃ ಕಿಂ ಕರಿಷ್ಯತಿ )
ಅರ್ಥ : ಜ್ಞಾನವುಳ್ಳವನೂ ಕೂಡ ತನ್ನ ಪ್ರಕೃತಿಯ ಗುಣಗಳಿಗನುಗುಣವಾಗಿ ನಡೆದುಕೊಳ್ಳುತ್ತಾನೆ. ಜೀವಿಗಳು ಪ್ರಕೃತಿಯನ್ನು ಅನುಸರಿಸುತ್ತವೆ. ಹೀಗಿರುವಲ್ಲಿ, ಮನೋನಿಗ್ರಹವು ಏನು ತಾನೇ ಮಾಡೀತು?

ಇವೆರಡೂ ಶ್ಲೋಕಗಳಲ್ಲಿ ಅದೇ ಧ್ವನಿ ಸಿಗುತ್ತದೆ. ಪ್ರಕೃತಿಯ ಶಕ್ತಿಯನ್ನು ಮನಗಂಡು ವರ್ತಿಸಬೇಕು ಎಂದು ಎಚ್ಚರಿಕೆಯಿದೆ. ಜೊತೆಗೆ ಪ್ರಕೃತಿಯ ಜೊತೆಗಿನ ನಿತ್ಯದ ಸೆಣಸಾಟದಲ್ಲಿ ಸೋತಾಗ ಸಾಂತ್ವನವನ್ನೂ ಇವೆರಡೂ ಶ್ಲೋಕಗಳು ಕೊಡುತ್ತವೆ. ಅಂಥ ದೊಡ್ದವರಿಗೇ ಹೀಗಾಗಿರುವಾಗ ನಮ್ಮಂಥವರಿಗೆ ಪರವಾಗಿಲ್ಲ, ಕೆಲಸವಿನ್ನೂ ಕೆಟ್ಟಿಲ್ಲ ಎಂದು ಹೇಳುತ್ತವೆ.

ಇನ್ನೂ ಆಳವಾಗಿ ಅಧ್ಯಯನ ಮಾಡುವವರಿಗೆ ಇನ್ನೂ ಹೆಚ್ಚು ಸಾಮ್ಯತೆಗಳು ಸಿಗಬಹುದೇನೋ ! ನನಗೇ ಇದು ಸಿಕ್ಕಿರುವಾಗ ಹೆಚ್ಚು ತಿಳಿದವರು ಇನ್ನು ಎಷ್ಟೊಂದನ್ನು ಗುರುತಿಸಬಲ್ಲರೋ!

ಒಟ್ಟಿನಲ್ಲಿ ಗೀತಾಸಪ್ತಶತಿಗಳು ನಮ್ಮ ಸನಾತನಧರ್ಮದ ರತ್ನಗಳು. ಇವೆರಡು ನಮ್ಮೊಂದಿಗಿದ್ದು ಮಾರ್ಗದರ್ಶನ ಮಾಡಿ ಅಭಯ ನೀಡುತ್ತಿವೆ ಎನ್ನುವುದೇ ನಮ್ಮ ಪುಣ್ಯ.

ಇತಿ ಶಮ್

Tuesday, March 15, 2005

From Joyce to vAk

Author James Joyce's short stories: Dubliners

I had heard of James Joyce as the author of the apparently utterly incomprehensible 'Finnegan's Wake' from which the term Quark was taken by Murray Gell-Mann and subsequently used to denote a class of fundamental particles. There is this category of people in Bangalore that prides itself immensely on its trivia knowledge. I used to be a part of this group - but was simultaneously an outsider too - for they were more Western in their outlook and I was more rooted to my traditions. Nothing wrong about both. So the name James Joyce conjures up some weird images in me. But he was never a litterateur/author to me - till about now.

Three or four years ago during my stay in the US, this name began to be heard more and more. That may be because that was around the time I began frequenting the libraries there. And Joyce was mentioned in the most reverential and hushed tones. After reading observations that "Ulysses" was the best English Novel of the twentieth century I was intrigued to say the least. How could I have skipped him? But then when I actually ventured to look at the first couple of pages - the book threw me off. With a name like Buck Milligan mouthing something in Latin - I did not feel like reading it at all.

After this, I read of many people considering Ulysses as something to be read once in their lifetime and telling others that they had in fact read it. One of my acquaintances (I don't know him well enough to call him a friend) - who is a voracious reader - also had the same idea. My interest perked up again.

So a couple of days ago, I actually made bold to visit a James Joyce admirer site and saw that it required the same level of preparation and study as a complete baccalaureate course in English. To fully understand Ulysses - I apparently needed to study Homer (as Ulysses and its characters is apparently parody Odysseus) and the Bible of course and a host of other works. I then thought if Joyce had ever written something shorter and simpler and landed up on the site featured in this blog.

I read "Araby" and "A Little cloud" in a matter of twenty minutes. I must say now that Joyce is definitely a great story teller. The narration is light but does not allow you to lose focus. The choice of words is exquisite. The character development is fantastic. I could clearly identify with the boy in Araby (I am sure every boy in his adolescence must have had a similar experience). Little Chandler is something else too. Both are amazingly well-crafted stories by a master craftsman. So my next job is to read through Dubliners.

After this I will probably look at the Portrait of the Artist as a young man. I will look at Ulysses only after that.

Taking a step back, I see that Language and Literature are amazing windows to one's mind. As much as one can say "bhAShe oraTu yAna" (a line in a poem by Dr. GS Shivarudrappa, a renowned Kannada poet) - Language is a crude vehicle - it is still a vehicle and quite a useful one at that. I never looked at Language this way till now. Good literature being the finest expression in a language has the ability to look and talk directly to the reader's innermost mind. From being a caveman, Man has surely traveled beyond the edge of the universe to his inner mind. Isn't the inner mind of Man farther than the darkest corner of the Universe ? Language is trying to bring a light into the depths of the mind. Which is probably why a kannada poet said that "mAtembudu jyOtirlinga" (the spoken word is indeed the Divine Light).

Language is rightly praised in sanAtana dharma. vAk or speech has been identified by Vedic seers to be of 4 kinds - parA, pashyantI, madhyamA and vaikharI. parA is the Absolute and that streams down from the undifferentiated heights of mental clarity to normal speech (vaikharI). It is really amazing that so many great truths and nuggets we see in literature have come down from the parA vAk itself. The insight in a statement makes the source of the statement quite evident. It depends on the reader's culture and refinement too.

The study of literature has another wonderful benefit. It is a lasting intellectual and mental stimulation which can be had by Nature or sublime music. Most of the other pursuits have this fleeting feeling. They leave the experiencer hollow once a pursuit is complete. The pursuit of Literature is enriching by itself. The after-effects are desirable too. This is one of the few heavenly delights available in this earthly life.

|| iti sham ||