'I appreciate Rajkumar and his work'
ಹೀಗೆ ಸೂರ್ಯನಾರಾಯಣ ಶರ್ಮಾ ಎಂಬುವರರೊಬ್ಬರು thatskannada ಪತ್ರಿಕೆಗೆ ಒಂದು ಖಾರವಾದ ಪತ್ರ ಬರೆದಿದ್ದಾರೆ. ಪತ್ರದ ಸಾರಾಂಶ - ಸತ್ಯುರವರನ್ನು ಬೆಂಬಲಿಸುವುದು ರಾಜಕುಮಾರನ್ನು ತೆಗಳುವುದು.
ಮೊದಲಿಗೆ ಸತ್ಯುರವರ ಪ್ರತಿಕ್ರಿಯೆಯನ್ನೋದಿ ಅನುಮೋದಿಸಿದ್ದೆ. ಆದರೆ ಚಿತ್ರರಂಗದ ಜನರೊಡನೆ ಮಾತಾಡಿದ ಮೇಲೆ ಸ್ವಲ್ಪ ವಿಚಾರ ಬದಲಾಗಿದೆ. ಹೌದು ಚಿತ್ರರಂಗ ಕುಶಲಕರ್ಮ, ಕೃಷಿ ಅಥವಾ ಸಾಹಿತ್ಯದಷ್ಟು ಮುಖ್ಯವಲ್ಲ. ಆದರೂ ಇಂದಿನ ಪ್ರಪಂಚದಲ್ಲಿ ಚಿತ್ರರಂಗಕ್ಕೆ ಒಂದು ವಿಶಿಷ್ಟವಾದ ಸ್ಥಾನವಿದೆ. ಇವರು ಯಾರೋ ಚಿತ್ರವನ್ನು ನೋಡದೆ ಇದ್ದರೆ ಚಿತ್ರರಂಗವನ್ನು ಬೈಯುವುದು ಅಷ್ಟು ತರವಲ್ಲ. ಅದೂ ಇವರ ಆ ಲೇವಡಿ ಮಾಡುವ ಶೈಲಿ ನನಗೆ ಸ್ವಲ್ಪ ಕೋಪವನ್ನುಂಟು ಮಾಡಿದೆ. ಸತ್ಯುರವರು "ಬೆತ್ತಲೆಯವರ ರಾಜ್ಯದಲ್ಲಿ ಓಡಾಡುವ ಅಂಬರಧರ" ನ ಹಾಗೇನೂ ಇಲ್ಲ. ಬಹಳಷ್ಟು ಬೇರೆಯ ಜನ ಸಹಾ ಸತ್ಯು ಹೇಳಿದ್ದನ್ನೇ ಹೇಳಿದ್ದಾರೆ.
ಸತ್ಯು ತಿಳಿಯದೇ ಕನ್ನಡ ಚಿತ್ರರಂಗದ ಕಳಪೆ ಗುಣಮಟ್ಟಕ್ಕೆ ರಾಜಕುಮಾರನ್ನು ಹೆಸರಿಸಿದ್ದಾರೆ. ವಸ್ತುತಃ ಹಾಗಲ್ಲ. ರಾಜಕುಮಾರ್ ಒಳ್ಳೆಯ ನಟರಾಗಿ ಹಲವು ಸದಭಿರುಚಿಯ ಚಿತ್ರಗಳನ್ನು ನೀಡಿದ್ದಾರೆ. ಅವರ ತಾರಾವರ್ಚಸ್ಸಿನಿಂದ ಜನರ ಸಿನಿಮೀಯ ರುಚಿಯನ್ನು ಒಳ್ಳೆಯ ಕಡೆಗೆ ಎಳೆಯಲು ಪ್ರಯತ್ನಿಸಿದ್ದಾರೆ. ಆದರೆ ಚಿತ್ರರಂಗದ ಅಧಃ ಪತನ ಪ್ರಾರಂಭವಾಗಿದ್ದು ರಾಜಕುಮಾರ್ ಸಕ್ರಿಯವಾಗಿ ನಟಿಸದೇ ಇದ್ದಾಗ. ಕ್ರೇಜಿ ಸ್ಟಾರ್ ಅನಿಸಿಕೊಂಡ ರವಿಚಂದ್ರನ್ ಮಹಾ ಸದಭಿರುಚಿಯ ಚಿತ್ರ ನೀಡಿದ್ದಾರೋ ? ಸುಮ್ಮನೆ ರಾಜಕುಮಾರನ್ನು ಬೈದು ಪ್ರಯೋಜನವಿಲ್ಲ. "ತುಂಟಾಟ", ಮುಂತಾದ ಹಲವು ಪಡ್ಡೇ ಹುಡುಗರಿಗೆಂದೇ ಮಾಡಿದ ಚಿತ್ರಗಳು ಅಸಹ್ಯವಾಗಿವೆ ನಿಜ. ಆದರೆ ರಾಜಕುಮಾರ್ ಗು ಅವಕ್ಕೂ ಏನು ಸಂಬಂಧ ? ಪಾಪ - ಚಿಗುರಿದ ಕನಸು ಎಂಬ ಒಳ್ಳೆಯ ಚಿತ್ರವನ್ನು ಮಾಡಿ ರಾಜಕುಮಾರ್ ಕುಟುಂಬ ಕೈ ಸುಟ್ಟಿಕೊಂಡಿರುವುದು. ಒಂದು ಆಸೆ ಎಲ್ಲರಿಗೂ ಇರುತ್ತದೆ - ತಮ್ಮ ಮಕ್ಕಳು ಮುಂದೆ ಬರಲಿ ಎಂದು. ಅದರಿಂದ ರಾಜಕುಮಾರ್ ತನ್ನ ಮಕ್ಕಳಾದ ಶಿವಣ್ಣ , ಪುನೀತ್ ರನ್ನು ಚಿತ್ರರಂಗಕ್ಕೆ ಹಾಕಿದ್ದಾರೆ. ಇವರೇನೂ ಉನ್ನತ ಮಟ್ಟದ ನಟರೆಂದೇನೂ ಹೇಳುತ್ತಿಲ್ಲ. ಆದರೆ ಇವರ ಚಿತ್ರ ಬೇಡವೆಂದರೆ ಬೇಡ. ನೋಡುವುದನ್ನು ಬಿಟ್ಟರೆ ಒಳ್ಳೆಯ ಬುದ್ಧಿ ಇವರಿಗೇ ಬರುತ್ತದೆ.
ಇನ್ನೊಂದು ಸಂಗತಿ - ನನಗೆ ಹಿಡಿಸದಿರುವುದು - "ರಾಜಕುಮಾರ್ ಅಭಿಮಾನಿಗಳ ಸಂಘ" ದ ಹೆಸರಿನಲ್ಲಿ ನಡೆಯುವ ಗಲಾಟೆ-ಘರ್ಷಣೆಗಳು. ಆದರೆ ಇದಕ್ಕೂ ರಾಜಕುಮಾರ್ ಅವರಿಗೂ ಸಂಬಂಧವೇ ಇಲ್ಲವೆಂದು ಬಲ್ಲವರಿಂದ ತಿಳಿದಿದ್ದೇನೆ. ಸ್ವಾರ್ಥಪರರು ರಾಜಕುಮಾರ್ ಹೆಸರನ್ನುಪಯೋಗಿಸಿ ದುಡ್ಡು ಮಾಡಲು ಹವಣಿಸಿದ್ದಾರೆ. ಇದರಲ್ಲೂ ರಾಜಕುಮಾರ್ ತಪ್ಪಿಲ್ಲ.
ಜೊತೆಗೆ ಹೆಚ್ಚು ಕೋಪ ತರಿಸಿದ್ದು ವೀರಪ್ಪನ ಸೆರೆಯಲ್ಲಿ ರಾಜಕುಮಾರ್ ನಡೆವಳಿಕೆಯ ಬಗೆಗಿನ ಚುಚ್ಚು ಮಾತು. ಈ ಲೇಖಕ - "ಕರ್ನಾಟಕಕ್ಕೆ ಕೊಟ್ಟ ಕೊಡುಗೆ ವೀರಪ್ಪನ್ ಪ್ರಕರಣದಲ್ಲಿ ಬಹಿರಂಗಗೊಳ್ಳಲಿಲ್ಲವೇ ?" ಎಂದು ರಾಜಕುಮಾರನ್ನು ಲೇವಡಿ ಮಾಡಿದ್ದಾರೆ. ಇದು ಅವಿವೇಕವೇ ಸರಿ. ಅಲ್ಲ - ಇದೇ ಸೂರ್ಯನಾರಾಯಣ ಶರ್ಮರನ್ನು ವೀರಪ್ಪನ್ ಎಳೆದೊಯ್ದಿದ್ದರೆ ಏನಾಗುತ್ತಿತ್ತು ? ಧೈರ್ಯವಾಗಿ ಕನ್ನಡದ ಬಗ್ಗೆ ಮಾತನಾಡುತ್ತಿದ್ದರೋ ? ರಾಜಕುಮಾರ್ ಒಬ್ಬ ನಟ. ಅವರನ್ನು ಕನ್ನಡದ ಕಣ್ಮಣಿ ಎಂದೆಲ್ಲ ಹೊಗಳಿದ್ದು ನಮ್ಮ ಮೂರ್ಖತನದ ಪರಮಾವಧಿ. ಚೆನ್ನಾಗಿ ಮಯೂರ ವರ್ಮನ ಪಾತ್ರವನ್ನು ಮಾಡಿದ ಮಾತ್ರಕ್ಕೆ ಮಯೂರನ ಹಾಗೆ - "ನಿನ್ನ ಶಿರವನ್ನು ಚೆಂಡಾಡಿಬಿಡುತ್ತೇನೆ " - ಎಂದು ವೀರಪ್ಪನ್ ಮುಂದೆ ಡೈಲಾಗ್ ಹೊಡೆದು fight ಮಾಡಲು ಸಾಧ್ಯವಾಗುವುದೇ ? ಸ್ವಲ್ಪ ವಿವೇಕಸಹಿತವಾಗಿ ಯೋಚನೆ ಮಾಡಿದ್ದೇ ಆದರೆ ನಮ್ಮ ಆ expectation ಏ ತಪ್ಪು ಎಂದು ಅರ್ಥವಾಗುತ್ತದೆ.
ಮುಖ್ಯವಾಗಿ ನಾವು ಮಾಡಬೇಕಾದ ಕೆಲಸ ಹೀಗಿದೆ. ನಟರನ್ನೂ ಕೇವಲ ಮನುಷ್ಯರೆಂದು ನೋಡುವುದು. ತೆರೆಯ ಮೇಲಿನ ವೈಭವ ಅಥವಾ ದಾರಿದ್ರ್ಯ ನಟರದ್ದಲ್ಲ. ಅವರ ಪಾತ್ರಗಳದು. ಒಳ್ಳೆಯ ನಟನೆ ಪ್ರಶಂಸಾರ್ಹ ಆದರೆ ಅದನ್ನು ಅಲ್ಲಿಗೇ ಬಿಟ್ಟರೆ ಎಲ್ಲರಿಗೂ ಒಳ್ಳೆಯದು. ಈ ಬುದ್ದಿ ಯಾವಾಗ ಎಲ್ಲರಿಗೂ ಬರುತ್ತದೋ !
Thursday, March 17, 2005
Tuesday, March 15, 2005
From Joyce to vAk
Author James Joyce's short stories: Dubliners
I had heard of James Joyce as the author of the apparently utterly incomprehensible 'Finnegan's Wake' from which the term Quark was taken by Murray Gell-Mann and subsequently used to denote a class of fundamental particles. There is this category of people in Bangalore that prides itself immensely on its trivia knowledge. I used to be a part of this group - but was simultaneously an outsider too - for they were more Western in their outlook and I was more rooted to my traditions. Nothing wrong about both. So the name James Joyce conjures up some weird images in me. But he was never a litterateur/author to me - till about now.
Three or four years ago during my stay in the US, this name began to be heard more and more. That may be because that was around the time I began frequenting the libraries there. And Joyce was mentioned in the most reverential and hushed tones. After reading observations that "Ulysses" was the best English Novel of the twentieth century I was intrigued to say the least. How could I have skipped him? But then when I actually ventured to look at the first couple of pages - the book threw me off. With a name like Buck Milligan mouthing something in Latin - I did not feel like reading it at all.
After this, I read of many people considering Ulysses as something to be read once in their lifetime and telling others that they had in fact read it. One of my acquaintances (I don't know him well enough to call him a friend) - who is a voracious reader - also had the same idea. My interest perked up again.
So a couple of days ago, I actually made bold to visit a James Joyce admirer site and saw that it required the same level of preparation and study as a complete baccalaureate course in English. To fully understand Ulysses - I apparently needed to study Homer (as Ulysses and its characters is apparently parody Odysseus) and the Bible of course and a host of other works. I then thought if Joyce had ever written something shorter and simpler and landed up on the site featured in this blog.
I read "Araby" and "A Little cloud" in a matter of twenty minutes. I must say now that Joyce is definitely a great story teller. The narration is light but does not allow you to lose focus. The choice of words is exquisite. The character development is fantastic. I could clearly identify with the boy in Araby (I am sure every boy in his adolescence must have had a similar experience). Little Chandler is something else too. Both are amazingly well-crafted stories by a master craftsman. So my next job is to read through Dubliners.
After this I will probably look at the Portrait of the Artist as a young man. I will look at Ulysses only after that.
Taking a step back, I see that Language and Literature are amazing windows to one's mind. As much as one can say "bhAShe oraTu yAna" (a line in a poem by Dr. GS Shivarudrappa, a renowned Kannada poet) - Language is a crude vehicle - it is still a vehicle and quite a useful one at that. I never looked at Language this way till now. Good literature being the finest expression in a language has the ability to look and talk directly to the reader's innermost mind. From being a caveman, Man has surely traveled beyond the edge of the universe to his inner mind. Isn't the inner mind of Man farther than the darkest corner of the Universe ? Language is trying to bring a light into the depths of the mind. Which is probably why a kannada poet said that "mAtembudu jyOtirlinga" (the spoken word is indeed the Divine Light).
Language is rightly praised in sanAtana dharma. vAk or speech has been identified by Vedic seers to be of 4 kinds - parA, pashyantI, madhyamA and vaikharI. parA is the Absolute and that streams down from the undifferentiated heights of mental clarity to normal speech (vaikharI). It is really amazing that so many great truths and nuggets we see in literature have come down from the parA vAk itself. The insight in a statement makes the source of the statement quite evident. It depends on the reader's culture and refinement too.
The study of literature has another wonderful benefit. It is a lasting intellectual and mental stimulation which can be had by Nature or sublime music. Most of the other pursuits have this fleeting feeling. They leave the experiencer hollow once a pursuit is complete. The pursuit of Literature is enriching by itself. The after-effects are desirable too. This is one of the few heavenly delights available in this earthly life.
|| iti sham ||
I had heard of James Joyce as the author of the apparently utterly incomprehensible 'Finnegan's Wake' from which the term Quark was taken by Murray Gell-Mann and subsequently used to denote a class of fundamental particles. There is this category of people in Bangalore that prides itself immensely on its trivia knowledge. I used to be a part of this group - but was simultaneously an outsider too - for they were more Western in their outlook and I was more rooted to my traditions. Nothing wrong about both. So the name James Joyce conjures up some weird images in me. But he was never a litterateur/author to me - till about now.
Three or four years ago during my stay in the US, this name began to be heard more and more. That may be because that was around the time I began frequenting the libraries there. And Joyce was mentioned in the most reverential and hushed tones. After reading observations that "Ulysses" was the best English Novel of the twentieth century I was intrigued to say the least. How could I have skipped him? But then when I actually ventured to look at the first couple of pages - the book threw me off. With a name like Buck Milligan mouthing something in Latin - I did not feel like reading it at all.
After this, I read of many people considering Ulysses as something to be read once in their lifetime and telling others that they had in fact read it. One of my acquaintances (I don't know him well enough to call him a friend) - who is a voracious reader - also had the same idea. My interest perked up again.
So a couple of days ago, I actually made bold to visit a James Joyce admirer site and saw that it required the same level of preparation and study as a complete baccalaureate course in English. To fully understand Ulysses - I apparently needed to study Homer (as Ulysses and its characters is apparently parody Odysseus) and the Bible of course and a host of other works. I then thought if Joyce had ever written something shorter and simpler and landed up on the site featured in this blog.
I read "Araby" and "A Little cloud" in a matter of twenty minutes. I must say now that Joyce is definitely a great story teller. The narration is light but does not allow you to lose focus. The choice of words is exquisite. The character development is fantastic. I could clearly identify with the boy in Araby (I am sure every boy in his adolescence must have had a similar experience). Little Chandler is something else too. Both are amazingly well-crafted stories by a master craftsman. So my next job is to read through Dubliners.
After this I will probably look at the Portrait of the Artist as a young man. I will look at Ulysses only after that.
Taking a step back, I see that Language and Literature are amazing windows to one's mind. As much as one can say "bhAShe oraTu yAna" (a line in a poem by Dr. GS Shivarudrappa, a renowned Kannada poet) - Language is a crude vehicle - it is still a vehicle and quite a useful one at that. I never looked at Language this way till now. Good literature being the finest expression in a language has the ability to look and talk directly to the reader's innermost mind. From being a caveman, Man has surely traveled beyond the edge of the universe to his inner mind. Isn't the inner mind of Man farther than the darkest corner of the Universe ? Language is trying to bring a light into the depths of the mind. Which is probably why a kannada poet said that "mAtembudu jyOtirlinga" (the spoken word is indeed the Divine Light).
Language is rightly praised in sanAtana dharma. vAk or speech has been identified by Vedic seers to be of 4 kinds - parA, pashyantI, madhyamA and vaikharI. parA is the Absolute and that streams down from the undifferentiated heights of mental clarity to normal speech (vaikharI). It is really amazing that so many great truths and nuggets we see in literature have come down from the parA vAk itself. The insight in a statement makes the source of the statement quite evident. It depends on the reader's culture and refinement too.
The study of literature has another wonderful benefit. It is a lasting intellectual and mental stimulation which can be had by Nature or sublime music. Most of the other pursuits have this fleeting feeling. They leave the experiencer hollow once a pursuit is complete. The pursuit of Literature is enriching by itself. The after-effects are desirable too. This is one of the few heavenly delights available in this earthly life.
|| iti sham ||
Thursday, March 10, 2005
The Hindu : Karnataka / Bangalore News : Bomb hoax at Wipro office
The Hindu : Karnataka / Bangalore News : Bomb hoax at Wipro office
I am infuriated by the behavior of this self-styled security expert. What is wrong with this guy ? He has put a lot of people in his company and other people to inconvenience to say the least. Look at the number of people affected by this guy's moronic behavior. Apparently his company has no work for him which seems to be why he was thinking of doing such things.
And look at this guy's intelligence! He goes to a coin operated booth and calls his wife after placing a warning to his company. Good that the police were able to trace the call to him. It is a pity that he was released on bail. Such miscreants and trouble-makers must be sentenced to at least a year in prison so that it serves as a lesson for other people with such intentions.
The LeT threat is not to be taken as an empty one. When police and other security forces are working to address such problems, foolish pranks like these will result in the police not responding to even genuine calls for help. This is what this person has caused.
I hope he gets fired from his company for doing such mischief. Self-righteous idiot! His intention was probably good - but isn't the path to hell paved with such good intentions ? Or was he trying to get a day off this way?
May the number of such people decrease!
I am infuriated by the behavior of this self-styled security expert. What is wrong with this guy ? He has put a lot of people in his company and other people to inconvenience to say the least. Look at the number of people affected by this guy's moronic behavior. Apparently his company has no work for him which seems to be why he was thinking of doing such things.
And look at this guy's intelligence! He goes to a coin operated booth and calls his wife after placing a warning to his company. Good that the police were able to trace the call to him. It is a pity that he was released on bail. Such miscreants and trouble-makers must be sentenced to at least a year in prison so that it serves as a lesson for other people with such intentions.
The LeT threat is not to be taken as an empty one. When police and other security forces are working to address such problems, foolish pranks like these will result in the police not responding to even genuine calls for help. This is what this person has caused.
I hope he gets fired from his company for doing such mischief. Self-righteous idiot! His intention was probably good - but isn't the path to hell paved with such good intentions ? Or was he trying to get a day off this way?
May the number of such people decrease!
Tuesday, March 08, 2005
Responses to 'Nodalare Naa Kannada Chitra'
Kannada Responses to 'Nodalare Naa Kannada Chitra'
ನನ್ನ ಹಿಂದಿನ ಬ್ಲಾಗಿನ ಬಗ್ಗೆ ಸ್ವಲ್ಪ ಟಿಪ್ಪಣಿಸಬೇಕಾಗಿದೆ. ಕನ್ನಡದಲ್ಲಿ ಒಳ್ಲೆಯ ಚಿತ್ರಗಳ ಭಾಗ ಶೇಕಡ ಹತ್ತಕಿಂಥ ಹೆಚ್ಚಿದೆಯಂತೆ. ಬೇರೆ ಭಾಷೆಗಳ success rate ಕೂಡ ಇಷ್ಟೇ ಇದೆಯಂತೆ. ಅಂಕಿ ಅಂಶಗಳನ್ನು ಕೊಟ್ಟರೆ ಅವುಗಳನ್ನು ನಂಬಲೇಬೇಕು. ಇರಲಿ.
ನಿನ್ನೆ ಕನ್ನಡ ಚಿತ್ರರಂಗದಲ್ಲಿ ಕಥೆಗಾರರಾಗಿರುವ ಒಬ್ಬರೊಡನೆ ಸಂಭಾಷಣೆಯಾಯಿತು. ಅವರ ಪ್ರಕಾರ ರಾಜಕುಮಾರ್ ಕುಟುಂಬದ ಕನ್ನಡ ಚಿತ್ರರಂಗದ ಮೇಲಿನ ಹಿಡಿತ ಅಷ್ಟೊಂದು ಇಲ್ಲವಂತೆ. ಒಂದು ಸಂಗತಿಯನ್ನು ಸಹ ನನ್ನೊಡನೆ ಹಂಚಿಕೊಂಡರು. ರಣರಂಗ ಚಿತ್ರದ ಪ್ರದರ್ಶನದ ವೇಳೆಯಲ್ಲಿ - ಅದೇನೋ ಚೆನ್ನಾಗಿಲ್ಲದ ದೃಶ್ಯ ಸೇರಿಸಿದ್ದರಂತೆ. ರಾಜಕುಮಾರ್ ಇದನ್ನು ನೋಡಿ - "ಈ ರೀತಿಯ ದೃಶ್ಯಗಳನ್ನೆಲ್ಲ ಹಾಕಿ ದುಡ್ಡು ಮಾಡೋದು ನಮಗೆ ಬೇಡ" ಎನ್ನುವ ಅರ್ಥದಲ್ಲಿ ಹೇಳಿದರಂತೆ. ಆ ದೃಶ್ಯವನ್ನು ಕಿತ್ತು ಹಾಕಿದರಂತೆ. ಇದರಿಂದ ಪ್ರಭಾವಿ ನಿರ್ದೇಶಕರಾದ ಸೋಮಶೇಖರ್ (ಚಕ್ರವ್ಯೂಹ - ಮುಂತಾದ ಚಿತ್ರಗಳ ನಿರ್ದೇಶಕ) ರಾಜಕುಮಾರ್ ತಂಡದೊಂದಿಗೆ ಕೆಲಸ ಮಾಡುವುದು ಬಿಟ್ಟರಂತೆ. ಅಂಥ ಸದಭಿರುಚಿಯ ಒಳ್ಳೆಯ ಮನಸ್ಸಿನವರು ರಾಜಕುಮಾರ್.
ವೀರಪ್ಪನ್ ಜೊತೆ ನಡೆದ ವಿಷಯದ ಮಾತೆತ್ತಿದರೆ ನಾನು ಅವರನ್ನು ಕೇಳುತ್ತೇನೆ - 'ನೀವು ಅದೇ ಪರಿಸ್ಥಿತಿಯಲ್ಲಿದ್ದರೆ ಏನು ಮಾಡುತ್ತಿದ್ದಿರಿ ಎಂದು ನಿಮ್ಮೊಳಗೇ ಯೋಚಿಸಿರಿ. ಉತ್ತರ ಹೊಳೆಯುತ್ತದೆ'. ರಾಜಕುಮಾರ್ ಒಬ್ಬ ಮನುಷ್ಯರು, ೭೫ಕ್ಕೂ ಹೆಚ್ಚು ವಯಸ್ಸಿನ ಚಿತ್ರನಟರು. ಅವರೇನು ವೀರಪ್ಪನ ತಲೆ ಚೆಂಡಾಡಲು ರಣಧೀರ ಕಂಠೀರವ ಆಗಿರಲಿಲ್ಲ. ಅಥವಾ ಅವನ ಮನಸ್ಸನ್ನು ಬದಲಾಯಿಸುವ ಶಕ್ತಿಯಿರುವ ಭಕ್ತ ಕನಕದಾಸರೂ ಅಲ್ಲ. ಇವೆರಡೂ ಪಾತ್ರಗಳನ್ನು ಸಮರ್ಥವಾಗಿ ಜೀವಂತ ಮಾಡಿದ ಮಹಾನಟರು. ನಮ್ಮ ಜನ (ನಾನೂ ಸೇರಿದಂತೆ) ಬೇಗನೆ ಪ್ರೆಸ್ಸಿಗೆ ಮರುಳಾಗಿ ಬೇಗ ಒಂದು ರೀತಿ ಯೋಚಿಸಲು ತೊಡಗುತ್ತೇವೆ.
ಈ ಸಂಗತಿ ನನಗೆ ತಿಳಿಸಿದ್ದೇನೆಂದರೆ - ನಾವು ಒಮ್ಮೆಲೆ ಒಬ್ಬರ ಬಗ್ಗೆ ಒಳ್ಳೆಯ ಅಥವಾ ಕೆಟ್ಟ ನಿರ್ಧಾರವನ್ನು ಮಾಡಬಾರದು. ಅಥವಾ ಒಬ್ಬರ ಒಳ್ಳೆಯತನವನ್ನೂ ಕೆಟ್ಟತನವನ್ನೂ ಅಳೆಯಲು ಬೇರೆಯವರಿಗೆ ಯೋಗ್ಯತೆಯಿಲ್ಲ. ಒಬ್ಬ ಕೆಟ್ಟವ ಅಥವಾ ಒಳ್ಳೆಯವ ಎಂದು ನಮಗೆ ಹೇಳಲು ಹೇಗೆ ಸಾಧ್ಯವಾದೀತು ? ಈ ವಿಷಯವನ್ನು ನಾನು ಚೆನ್ನಾಗಿ ರೂಢಿಸಿಕೊಳ್ಳಬೇಕು.
ಮಾಡಬಾರದೆಂದು ನಾನು ಹೇಳಿರುವ ಈ ತಪ್ಪನ್ನೇ ಎಂ. ಎಸ್. ನಟರಾಜ್ ಮಾಡಿರುವರೆಂದು ತೋರುತ್ತದೆ (ಮೇಲಿನ ಲಿಂಕ್ ನೋಡಿ). ಒಂದು ಕೆಟ್ಟ ಚಿತ್ರವನ್ನು ನೋಡಿದ ನಟರಾಜರು ಕನ್ನಡ ಚಿತ್ರರಂಗವನ್ನೇ ಬೈದು ಅನೇಕರ ಮನಸ್ಸನ್ನು ನೋಯಿಸಿರುವ ಹಾಗೆ ಕಾಣುತ್ತದೆ.
ಈ ಹಠಾತ್ತನೆ ನಿರ್ಧಾರಕ್ಕೆ ಬರುವುದು ಮನುಷ್ಯರ ಜಾಯಮಾನವೇ? (ನನ್ನ ಅನುಭವದಿಂದ ಹೌದೆಂದು ತೋರುತ್ತಿದೆ). ಎಷ್ಟೇ ಕಷ್ಟ ಪಟ್ಟರು ಒಂದು ವಿಷಯದ ಬಗ್ಗೆ ಅಥವಾ ವ್ಯಕ್ತಿಯ ಗುಣಾವಗುಣಗಳ ಬಗ್ಗೆ ನಾವು ನಮಗೆ ತಿಳಿಯದ ಹಾಗೆಯೇ ತೀರ್ಮಾನ ಮಾಡಿಬಿಟ್ಟಿರುತ್ತೇವೆ. ಅನಂತರ ಅದೇ ವಿಷಯ ಅಥವಾ ವ್ಯಕ್ತಿಯನ್ನು ನಾವು ಇಷ್ಟ ಪಡುವುದಿಲ್ಲ. ಏಕೆಂದರೆ ನಾವೇ ಮೊದಲು ಮಾಡಿದ ತಪ್ಪು ತೀರ್ಮಾನ. ಇದನ್ನು ತಿದ್ದಲು ಬಹಳ ಕಷ್ಟ. ಆದರೂ ಯತ್ನಿಸಬೇಕು.
ಆದರೆ ಈ ರೀತಿ - "ಅಗುಳನ್ನು ನೋಡಿ ಅನ್ನ ಆಗಿದೆಯೋ ಇಲ್ಲವೋ ಎಂದು ನಿರ್ಧರಿಸಬಹುದು" ಎಂಬ ನೀತಿಯ ವಿರುದ್ಧವಾಗಿರುವ ಹಾಗೆ ತೋರುತ್ತದೆ. ಆದರೆ ಅನ್ನ ಮಾಡುವ ಸಮಯದಲ್ಲಿ ಎಲ್ಲ ಅಗುಳುಗಳನ್ನೂ ಸರಾಸರಿಯಾಗಿ ಅಳೆಯುತ್ತೇವೆ. ಒಂದು ವ್ಯಕ್ತಿತ್ವದ ಒಳಗೆ ನಮಗೆ ನೋಡಲು ಅನ್ನದ ಪಾತ್ರೆಯೊಳಗೆ ಕೈ ಹಾಕುವ ಹಾಗೆ ಹಾಕಲು ಸಾಧ್ಯವಾಗುವುದಿಲ್ಲ. ಜೊತೆಗೆ ಒಂದು ಅನ್ನದ ಪಾತ್ರೆ ನೋಡಿದರೆ ಸಾಕು - ಅದು ಭೌತಿಕವಾದ ಕ್ರಿಯಯಾದ್ದರಿಂದ - ಪ್ರತಿಯೊಂದು ಸಲವೂ ಸರಾಸರಿ ಹಾಗೆಯೇ ಆಗಬಹುದು. ಆದರೆ ವ್ಯಕ್ತಿಯೊಬ್ಬನ ಮನದೊಳಗೆ ಆ ರೀತಿ ಹೊಗುವುದು ದುಸ್ಸಾಧ್ಯ.
ಒಟ್ಟಿನಲ್ಲಿ ಒಂದು ವಿಷಯದ ಸಮ್ಯಗ್-ಜ್ಞಾನವಿದ್ದರೆ ಮಾತ್ರ ಅದರ ಗುಣಾವಗುಣಗಳನ್ನು ತಿಳಿಯಬಹುದು. ಅಸಂಪೂರ್ಣವಾಗಿ ವಿಷಯವನ್ನು ತಿಳಿದು ಅದೃಷ್ಟವಶಾತ್ ಸರಿಯಾದ ನಿರ್ಧಾರ ಮಾಡಿದರೆ ಸರಿ (accidentally erring on the right side). ಇಲ್ಲವೆಂದರೆ ತಪ್ಪು ನಿರ್ಧಾರವನ್ನು ಮಾಡಿ ಅನುಭವಿಸಬೇಕಾದವರು ನಾವೇ!
|| ಇತಿ ಶಮ್ ||
ನನ್ನ ಹಿಂದಿನ ಬ್ಲಾಗಿನ ಬಗ್ಗೆ ಸ್ವಲ್ಪ ಟಿಪ್ಪಣಿಸಬೇಕಾಗಿದೆ. ಕನ್ನಡದಲ್ಲಿ ಒಳ್ಲೆಯ ಚಿತ್ರಗಳ ಭಾಗ ಶೇಕಡ ಹತ್ತಕಿಂಥ ಹೆಚ್ಚಿದೆಯಂತೆ. ಬೇರೆ ಭಾಷೆಗಳ success rate ಕೂಡ ಇಷ್ಟೇ ಇದೆಯಂತೆ. ಅಂಕಿ ಅಂಶಗಳನ್ನು ಕೊಟ್ಟರೆ ಅವುಗಳನ್ನು ನಂಬಲೇಬೇಕು. ಇರಲಿ.
ನಿನ್ನೆ ಕನ್ನಡ ಚಿತ್ರರಂಗದಲ್ಲಿ ಕಥೆಗಾರರಾಗಿರುವ ಒಬ್ಬರೊಡನೆ ಸಂಭಾಷಣೆಯಾಯಿತು. ಅವರ ಪ್ರಕಾರ ರಾಜಕುಮಾರ್ ಕುಟುಂಬದ ಕನ್ನಡ ಚಿತ್ರರಂಗದ ಮೇಲಿನ ಹಿಡಿತ ಅಷ್ಟೊಂದು ಇಲ್ಲವಂತೆ. ಒಂದು ಸಂಗತಿಯನ್ನು ಸಹ ನನ್ನೊಡನೆ ಹಂಚಿಕೊಂಡರು. ರಣರಂಗ ಚಿತ್ರದ ಪ್ರದರ್ಶನದ ವೇಳೆಯಲ್ಲಿ - ಅದೇನೋ ಚೆನ್ನಾಗಿಲ್ಲದ ದೃಶ್ಯ ಸೇರಿಸಿದ್ದರಂತೆ. ರಾಜಕುಮಾರ್ ಇದನ್ನು ನೋಡಿ - "ಈ ರೀತಿಯ ದೃಶ್ಯಗಳನ್ನೆಲ್ಲ ಹಾಕಿ ದುಡ್ಡು ಮಾಡೋದು ನಮಗೆ ಬೇಡ" ಎನ್ನುವ ಅರ್ಥದಲ್ಲಿ ಹೇಳಿದರಂತೆ. ಆ ದೃಶ್ಯವನ್ನು ಕಿತ್ತು ಹಾಕಿದರಂತೆ. ಇದರಿಂದ ಪ್ರಭಾವಿ ನಿರ್ದೇಶಕರಾದ ಸೋಮಶೇಖರ್ (ಚಕ್ರವ್ಯೂಹ - ಮುಂತಾದ ಚಿತ್ರಗಳ ನಿರ್ದೇಶಕ) ರಾಜಕುಮಾರ್ ತಂಡದೊಂದಿಗೆ ಕೆಲಸ ಮಾಡುವುದು ಬಿಟ್ಟರಂತೆ. ಅಂಥ ಸದಭಿರುಚಿಯ ಒಳ್ಳೆಯ ಮನಸ್ಸಿನವರು ರಾಜಕುಮಾರ್.
ವೀರಪ್ಪನ್ ಜೊತೆ ನಡೆದ ವಿಷಯದ ಮಾತೆತ್ತಿದರೆ ನಾನು ಅವರನ್ನು ಕೇಳುತ್ತೇನೆ - 'ನೀವು ಅದೇ ಪರಿಸ್ಥಿತಿಯಲ್ಲಿದ್ದರೆ ಏನು ಮಾಡುತ್ತಿದ್ದಿರಿ ಎಂದು ನಿಮ್ಮೊಳಗೇ ಯೋಚಿಸಿರಿ. ಉತ್ತರ ಹೊಳೆಯುತ್ತದೆ'. ರಾಜಕುಮಾರ್ ಒಬ್ಬ ಮನುಷ್ಯರು, ೭೫ಕ್ಕೂ ಹೆಚ್ಚು ವಯಸ್ಸಿನ ಚಿತ್ರನಟರು. ಅವರೇನು ವೀರಪ್ಪನ ತಲೆ ಚೆಂಡಾಡಲು ರಣಧೀರ ಕಂಠೀರವ ಆಗಿರಲಿಲ್ಲ. ಅಥವಾ ಅವನ ಮನಸ್ಸನ್ನು ಬದಲಾಯಿಸುವ ಶಕ್ತಿಯಿರುವ ಭಕ್ತ ಕನಕದಾಸರೂ ಅಲ್ಲ. ಇವೆರಡೂ ಪಾತ್ರಗಳನ್ನು ಸಮರ್ಥವಾಗಿ ಜೀವಂತ ಮಾಡಿದ ಮಹಾನಟರು. ನಮ್ಮ ಜನ (ನಾನೂ ಸೇರಿದಂತೆ) ಬೇಗನೆ ಪ್ರೆಸ್ಸಿಗೆ ಮರುಳಾಗಿ ಬೇಗ ಒಂದು ರೀತಿ ಯೋಚಿಸಲು ತೊಡಗುತ್ತೇವೆ.
ಈ ಸಂಗತಿ ನನಗೆ ತಿಳಿಸಿದ್ದೇನೆಂದರೆ - ನಾವು ಒಮ್ಮೆಲೆ ಒಬ್ಬರ ಬಗ್ಗೆ ಒಳ್ಳೆಯ ಅಥವಾ ಕೆಟ್ಟ ನಿರ್ಧಾರವನ್ನು ಮಾಡಬಾರದು. ಅಥವಾ ಒಬ್ಬರ ಒಳ್ಳೆಯತನವನ್ನೂ ಕೆಟ್ಟತನವನ್ನೂ ಅಳೆಯಲು ಬೇರೆಯವರಿಗೆ ಯೋಗ್ಯತೆಯಿಲ್ಲ. ಒಬ್ಬ ಕೆಟ್ಟವ ಅಥವಾ ಒಳ್ಳೆಯವ ಎಂದು ನಮಗೆ ಹೇಳಲು ಹೇಗೆ ಸಾಧ್ಯವಾದೀತು ? ಈ ವಿಷಯವನ್ನು ನಾನು ಚೆನ್ನಾಗಿ ರೂಢಿಸಿಕೊಳ್ಳಬೇಕು.
ಮಾಡಬಾರದೆಂದು ನಾನು ಹೇಳಿರುವ ಈ ತಪ್ಪನ್ನೇ ಎಂ. ಎಸ್. ನಟರಾಜ್ ಮಾಡಿರುವರೆಂದು ತೋರುತ್ತದೆ (ಮೇಲಿನ ಲಿಂಕ್ ನೋಡಿ). ಒಂದು ಕೆಟ್ಟ ಚಿತ್ರವನ್ನು ನೋಡಿದ ನಟರಾಜರು ಕನ್ನಡ ಚಿತ್ರರಂಗವನ್ನೇ ಬೈದು ಅನೇಕರ ಮನಸ್ಸನ್ನು ನೋಯಿಸಿರುವ ಹಾಗೆ ಕಾಣುತ್ತದೆ.
ಈ ಹಠಾತ್ತನೆ ನಿರ್ಧಾರಕ್ಕೆ ಬರುವುದು ಮನುಷ್ಯರ ಜಾಯಮಾನವೇ? (ನನ್ನ ಅನುಭವದಿಂದ ಹೌದೆಂದು ತೋರುತ್ತಿದೆ). ಎಷ್ಟೇ ಕಷ್ಟ ಪಟ್ಟರು ಒಂದು ವಿಷಯದ ಬಗ್ಗೆ ಅಥವಾ ವ್ಯಕ್ತಿಯ ಗುಣಾವಗುಣಗಳ ಬಗ್ಗೆ ನಾವು ನಮಗೆ ತಿಳಿಯದ ಹಾಗೆಯೇ ತೀರ್ಮಾನ ಮಾಡಿಬಿಟ್ಟಿರುತ್ತೇವೆ. ಅನಂತರ ಅದೇ ವಿಷಯ ಅಥವಾ ವ್ಯಕ್ತಿಯನ್ನು ನಾವು ಇಷ್ಟ ಪಡುವುದಿಲ್ಲ. ಏಕೆಂದರೆ ನಾವೇ ಮೊದಲು ಮಾಡಿದ ತಪ್ಪು ತೀರ್ಮಾನ. ಇದನ್ನು ತಿದ್ದಲು ಬಹಳ ಕಷ್ಟ. ಆದರೂ ಯತ್ನಿಸಬೇಕು.
ಆದರೆ ಈ ರೀತಿ - "ಅಗುಳನ್ನು ನೋಡಿ ಅನ್ನ ಆಗಿದೆಯೋ ಇಲ್ಲವೋ ಎಂದು ನಿರ್ಧರಿಸಬಹುದು" ಎಂಬ ನೀತಿಯ ವಿರುದ್ಧವಾಗಿರುವ ಹಾಗೆ ತೋರುತ್ತದೆ. ಆದರೆ ಅನ್ನ ಮಾಡುವ ಸಮಯದಲ್ಲಿ ಎಲ್ಲ ಅಗುಳುಗಳನ್ನೂ ಸರಾಸರಿಯಾಗಿ ಅಳೆಯುತ್ತೇವೆ. ಒಂದು ವ್ಯಕ್ತಿತ್ವದ ಒಳಗೆ ನಮಗೆ ನೋಡಲು ಅನ್ನದ ಪಾತ್ರೆಯೊಳಗೆ ಕೈ ಹಾಕುವ ಹಾಗೆ ಹಾಕಲು ಸಾಧ್ಯವಾಗುವುದಿಲ್ಲ. ಜೊತೆಗೆ ಒಂದು ಅನ್ನದ ಪಾತ್ರೆ ನೋಡಿದರೆ ಸಾಕು - ಅದು ಭೌತಿಕವಾದ ಕ್ರಿಯಯಾದ್ದರಿಂದ - ಪ್ರತಿಯೊಂದು ಸಲವೂ ಸರಾಸರಿ ಹಾಗೆಯೇ ಆಗಬಹುದು. ಆದರೆ ವ್ಯಕ್ತಿಯೊಬ್ಬನ ಮನದೊಳಗೆ ಆ ರೀತಿ ಹೊಗುವುದು ದುಸ್ಸಾಧ್ಯ.
ಒಟ್ಟಿನಲ್ಲಿ ಒಂದು ವಿಷಯದ ಸಮ್ಯಗ್-ಜ್ಞಾನವಿದ್ದರೆ ಮಾತ್ರ ಅದರ ಗುಣಾವಗುಣಗಳನ್ನು ತಿಳಿಯಬಹುದು. ಅಸಂಪೂರ್ಣವಾಗಿ ವಿಷಯವನ್ನು ತಿಳಿದು ಅದೃಷ್ಟವಶಾತ್ ಸರಿಯಾದ ನಿರ್ಧಾರ ಮಾಡಿದರೆ ಸರಿ (accidentally erring on the right side). ಇಲ್ಲವೆಂದರೆ ತಪ್ಪು ನಿರ್ಧಾರವನ್ನು ಮಾಡಿ ಅನುಭವಿಸಬೇಕಾದವರು ನಾವೇ!
|| ಇತಿ ಶಮ್ ||
Wednesday, March 02, 2005
Sathyu opposes subsidy to Kannada films
Sathyu opposes subsidy to Kannada films
ಈ ಮನುಷ್ಯನ ಮಾತಿನಲ್ಲಿ ಸತ್ಯವಿದೆ. ಸತ್ಯು ಸ್ವಲ್ಪ serious ನಿರ್ದೇಶಕ. ಅವರು ಈಚೆಗೆ ರಾಜಕುಮಾರ್ ಮತ್ತು ಇತರ ನಟರ ಮೇಲೆ ಮಾತಾಡಿ ವಿವಾದ ಸೃಷ್ಟಿಮಾಡಿದ್ದಾರೆ. ಆದರೆ ಜನರ ಮನಸ್ಸುಗಳನ್ನು ಈ ಕಡೆ ತಿರುಗಿಸಿ ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆಂದು ಹೇಳಬೇಕು.
ರೈತರಿಗೆ ಮತ್ತು ಕುಶಲಕರ್ಮಿಗಳಿಗೆ ಸಿಗದ ಸಬ್ಸಿಡಿ ಚಿತ್ರರಂಗಕ್ಕೆ ಏಕೆ ? ಅದೂ ಶುದ್ಧ ರೀಮೇಕು ಮಾಡುವ ಕನ್ನಡ ಚಿತ್ರರಂಗಕ್ಕೆ ? ಒಂದು ಸಿನಿಮವೂ ಸ್ವಂತದ್ದಲ್ಲ. ಎಲ್ಲ ಬಾಡಿಗೆಯದೆ. ನಟ ಸುದೀಪ ಸ್ವಾತಿ ಮುತ್ತು ಎಂಬ ಚಿತ್ರದಲ್ಲಿ ಮಾಡಿದ್ದಾನೆ. ಸುಮಾರು ಇಪ್ಪತ್ತು ವರ್ಷ ಹಳೆಯ ತೆಲುಗಿನ ಸ್ವಾತಿ ಮುತ್ಯಂ ಚಿತ್ರದ ಅನುಕರಣೆ ಇದು. ಆ ಚಿತ್ರ ಅದ್ಭುತವಾಗಿದೆ. ಬೇಕಾದವರು ಅದೇ ಚಿತ್ರವನ್ನು ನೋಡುತ್ತಾರೆ. ಹೋದರೆ ಹೋಗಲಿ ತೀರಾ ಅರ್ಥವಾಗದ ಜಪಾನಿ ಅಥವಾ ಚೀನೀ ಭಾಷೆಯಲ್ಲಿ ಚಿತ್ರವಿದ್ದಿದ್ದರೆ ರೀಮೇಕಿಗೆ ಓಕೆ ಅನ್ನಬಹುದಿತ್ತು. ಪಕ್ಕದ ಆಂಧ್ರದ ಚಿತ್ರವನ್ನು ಕನ್ನಡದಲ್ಲಿ ಮಾಡುವ ದರಿದ್ರ ಬುದ್ಧಿ ನಮ್ಮ ಚಿತ್ರರಂಗಕ್ಕೆ ಯಾಕೆ ? ಅದೇ ಹಾಡಿನ ಅನುವಾದ, ಅದೇ ಹಾಡಿನ ರಾಗ - ಸ್ವಲ್ಪವಾದರೂ ವ್ಯತ್ಯಾಸವಿರಬೇಡವೇ ? ವ್ಯತ್ಯಾಸವಿದೆ - ಮೂಲ ಚಿತ್ರದಲ್ಲಿ ಕಮಲಹಾಸನ್ನಿನ ಅದ್ಭುತ ನಟನೆಯಿತ್ತು. ಕನ್ನಡದ ರೀಮೇಕಿನಲ್ಲಿ ಸುದೀಪನ ಹಳಸಲು ಅಭಿನಯವಿದೆ. ಇದೊಂದೇ ಚಿತ್ರವಲ್ಲ - ನಲ್ಲ, ಕಿಚ್ಚ - ಇವೆಲ್ಲವೂ ರೀಮೇಕುಗಳೇ! ಜೊತೆಗೆ ಈಗ ದುಡ್ಡು ಮಾಡಿರುವ ಜೋಕ್ ಫಾಲ್ಸ್ ಮತ್ತು ಆಪ್ತಮಿತ್ರ ಕೂಡ ಚುಪ್ಕೆ ಚುಪ್ಕೆ (ಹಿಂದಿ) ಮತ್ತು ಮಣಿಚಿತ್ರತಾಳು (ಮಲಯಾಳ) ದ ರೀಮೇಕುಗಳೇ ! ಸ್ವಂತ ಬುದ್ಧಿ ನಮ್ಮಲ್ಲಿ ಏಕಿಲ್ಲ ? ಸ್ವಂತ ಬುದ್ಧಿಯಿರುವವರನ್ನು ಮುಂದೆ ಬರಲು
ಏಕೆ ಬಿಡುತ್ತಿಲ್ಲ ?
ಕನ್ನಡ ಚಿತ್ರರಂಗ ನನಗೆ ಬಹಳ ಇಷ್ಟವಾದದ್ದು. ಏಕೆಂದರೆ ನನಗೆ ಕನ್ನಡವೆಂದರೆ ಇನ್ನೂ ಹೆಚ್ಚು ಇಷ್ಟ. ಚಿತ್ರರಂಗದ ಈ ರೀತಿಯ ನಡೆವಳಿಕೆ ಕನ್ನಡದ ಮತ್ತು ಕನ್ನಡಿಗರ ಮೇಲೆಸಗಿದ ದ್ರೋಹ. ಅದಕ್ಕೇ ಈ ರೀತಿಯ ವಾರ್ತೆ ಓದಿದಾಗಲೆಲ್ಲಾ ನನಗೆ ಮೈಮನಸ್ಸುಗಳು ಉರಿಯುತ್ತವೆ.
ಕನ್ನಡದಲ್ಲಿ ಪುಸ್ತಕ ಕೊಳ್ಳುವವರಿಲ್ಲ. ಬೆಂಗಳೂರಿನಲ್ಲಿ ಬಸ್ಸಿನಲ್ಲಿ ಕನ್ನಡದಲ್ಲಿ ಮಾತಾಡಿದರೆ ಮಾರುತ್ತರ ಕನ್ನಡದಲ್ಲಿ ಬರುವುದಿಲ್ಲ. ಕನ್ನಡ ಬರುವವರೂ ಸಹ ಕನ್ನಡದಲ್ಲಿ ಮಾತನಾಡಲು ಹಿಂಜರಿಯುತ್ತಾರೆ. ಅದೇ ಬಂಗಾಳಿಗಳು ತಮ್ಮ ಭಾಷೆಯನ್ನು ಎಷ್ಟು ಗೌರವಿಸುತ್ತಾರೆ! ಈ ದರಿದ್ರ ಕನ್ನಡಿಗರಿಗೇ ಈ ರೋಗ ಬಡಿದಿದೆ. ಮೊನ್ನೆ ಯಾರೋ ಹೇಳುತ್ತಿದ್ದರು -ತೆಲುಗಿಗೆ ಇನ್ನು ಕೇವಲ ೮೦ ವರ್ಷಗಳ ಆಯುಷ್ಯವಿದೆಯಂತೆ. ಇದರ ನಂತರ ತೆಲುಗು ಹೇಳುಹೆಸರಿಲ್ಲದಂತಾಗುವುದಂತೆ. ತೆಲುಗಿಗೇ ಹಾಗಾದರೆ ಕನ್ನಡ ಇನ್ನು ೫೦ ವರ್ಷಗಳಲ್ಲಿ ಸಾಯಬಹುದು ಎಂದು ಅವರು ತರ್ಕಿಸಿದರು. ಕನ್ನಡ ತಾಯಿ ತನ್ನ ಮಕ್ಕಳಿಂದ ಈ ರೀತಿಯ ಹಿಂಸೆಗೊಳಗಾಗುವುದರಿಂದ ನಿತ್ಯ ಸಾಯುವ ಬದಲು ಒಂದೇ ಬಾರಿ ಗೌರವದಿಂದ ಸಾಯುವುದು ಮೇಲು ಅನ್ನಿಸುತ್ತದೆ. ಇಂಥ ಕೃತಘ್ನ ಮಕ್ಕಳಿಗೆ ಕನ್ನಡದಂಥ ಮಹಾತಾಯನ್ನು ಗೌರವಿಸುವ ಭಾಗ್ಯವಿಲ್ಲ.
ಎಂಥ ಪ್ರತಿಭಾಶಾಲಿ ಕವಿಗಳ, ಮಹಾರಾಜರುಗಳ, ಸಜ್ಜನರ ಮನಸ್ಸು-ಬಾಯಿಗಳಲ್ಲಿ ಮೂಡಿದ ಭಾಷೆ! ಕನ್ನಡ ಸಾಯುತ್ತದೆಯೆಂದು ನೆನೆಸಿದರೆ ಸೂತಕದ ಭಾವನೆ ನನ್ನನ್ನಾವರಿಸುತ್ತದೆ. ಹಾಗಾಗದೆ ಹೋಗಲಿ, ಏನಾದರೂ ಮಾಡಲೇಬೇಕು ಎಂದು ಆಶಿಸುವ ಆಶಾವಾದ ನನ್ನಲ್ಲಿನ್ನೂ ಇದೆ.
ಕನ್ನಡ ತಾಯಿ ನಮ್ಮನ್ನು ಕಾಪಾಡಲಿ ! ನಾವು ಕನ್ನಡತಾಯಿಯನ್ನು ಕಾಪಾಡೋಣ!
|| ಇತಿ ಶಮ್ ||
ಈ ಮನುಷ್ಯನ ಮಾತಿನಲ್ಲಿ ಸತ್ಯವಿದೆ. ಸತ್ಯು ಸ್ವಲ್ಪ serious ನಿರ್ದೇಶಕ. ಅವರು ಈಚೆಗೆ ರಾಜಕುಮಾರ್ ಮತ್ತು ಇತರ ನಟರ ಮೇಲೆ ಮಾತಾಡಿ ವಿವಾದ ಸೃಷ್ಟಿಮಾಡಿದ್ದಾರೆ. ಆದರೆ ಜನರ ಮನಸ್ಸುಗಳನ್ನು ಈ ಕಡೆ ತಿರುಗಿಸಿ ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆಂದು ಹೇಳಬೇಕು.
ರೈತರಿಗೆ ಮತ್ತು ಕುಶಲಕರ್ಮಿಗಳಿಗೆ ಸಿಗದ ಸಬ್ಸಿಡಿ ಚಿತ್ರರಂಗಕ್ಕೆ ಏಕೆ ? ಅದೂ ಶುದ್ಧ ರೀಮೇಕು ಮಾಡುವ ಕನ್ನಡ ಚಿತ್ರರಂಗಕ್ಕೆ ? ಒಂದು ಸಿನಿಮವೂ ಸ್ವಂತದ್ದಲ್ಲ. ಎಲ್ಲ ಬಾಡಿಗೆಯದೆ. ನಟ ಸುದೀಪ ಸ್ವಾತಿ ಮುತ್ತು ಎಂಬ ಚಿತ್ರದಲ್ಲಿ ಮಾಡಿದ್ದಾನೆ. ಸುಮಾರು ಇಪ್ಪತ್ತು ವರ್ಷ ಹಳೆಯ ತೆಲುಗಿನ ಸ್ವಾತಿ ಮುತ್ಯಂ ಚಿತ್ರದ ಅನುಕರಣೆ ಇದು. ಆ ಚಿತ್ರ ಅದ್ಭುತವಾಗಿದೆ. ಬೇಕಾದವರು ಅದೇ ಚಿತ್ರವನ್ನು ನೋಡುತ್ತಾರೆ. ಹೋದರೆ ಹೋಗಲಿ ತೀರಾ ಅರ್ಥವಾಗದ ಜಪಾನಿ ಅಥವಾ ಚೀನೀ ಭಾಷೆಯಲ್ಲಿ ಚಿತ್ರವಿದ್ದಿದ್ದರೆ ರೀಮೇಕಿಗೆ ಓಕೆ ಅನ್ನಬಹುದಿತ್ತು. ಪಕ್ಕದ ಆಂಧ್ರದ ಚಿತ್ರವನ್ನು ಕನ್ನಡದಲ್ಲಿ ಮಾಡುವ ದರಿದ್ರ ಬುದ್ಧಿ ನಮ್ಮ ಚಿತ್ರರಂಗಕ್ಕೆ ಯಾಕೆ ? ಅದೇ ಹಾಡಿನ ಅನುವಾದ, ಅದೇ ಹಾಡಿನ ರಾಗ - ಸ್ವಲ್ಪವಾದರೂ ವ್ಯತ್ಯಾಸವಿರಬೇಡವೇ ? ವ್ಯತ್ಯಾಸವಿದೆ - ಮೂಲ ಚಿತ್ರದಲ್ಲಿ ಕಮಲಹಾಸನ್ನಿನ ಅದ್ಭುತ ನಟನೆಯಿತ್ತು. ಕನ್ನಡದ ರೀಮೇಕಿನಲ್ಲಿ ಸುದೀಪನ ಹಳಸಲು ಅಭಿನಯವಿದೆ. ಇದೊಂದೇ ಚಿತ್ರವಲ್ಲ - ನಲ್ಲ, ಕಿಚ್ಚ - ಇವೆಲ್ಲವೂ ರೀಮೇಕುಗಳೇ! ಜೊತೆಗೆ ಈಗ ದುಡ್ಡು ಮಾಡಿರುವ ಜೋಕ್ ಫಾಲ್ಸ್ ಮತ್ತು ಆಪ್ತಮಿತ್ರ ಕೂಡ ಚುಪ್ಕೆ ಚುಪ್ಕೆ (ಹಿಂದಿ) ಮತ್ತು ಮಣಿಚಿತ್ರತಾಳು (ಮಲಯಾಳ) ದ ರೀಮೇಕುಗಳೇ ! ಸ್ವಂತ ಬುದ್ಧಿ ನಮ್ಮಲ್ಲಿ ಏಕಿಲ್ಲ ? ಸ್ವಂತ ಬುದ್ಧಿಯಿರುವವರನ್ನು ಮುಂದೆ ಬರಲು
ಏಕೆ ಬಿಡುತ್ತಿಲ್ಲ ?
ಕನ್ನಡ ಚಿತ್ರರಂಗ ನನಗೆ ಬಹಳ ಇಷ್ಟವಾದದ್ದು. ಏಕೆಂದರೆ ನನಗೆ ಕನ್ನಡವೆಂದರೆ ಇನ್ನೂ ಹೆಚ್ಚು ಇಷ್ಟ. ಚಿತ್ರರಂಗದ ಈ ರೀತಿಯ ನಡೆವಳಿಕೆ ಕನ್ನಡದ ಮತ್ತು ಕನ್ನಡಿಗರ ಮೇಲೆಸಗಿದ ದ್ರೋಹ. ಅದಕ್ಕೇ ಈ ರೀತಿಯ ವಾರ್ತೆ ಓದಿದಾಗಲೆಲ್ಲಾ ನನಗೆ ಮೈಮನಸ್ಸುಗಳು ಉರಿಯುತ್ತವೆ.
ಕನ್ನಡದಲ್ಲಿ ಪುಸ್ತಕ ಕೊಳ್ಳುವವರಿಲ್ಲ. ಬೆಂಗಳೂರಿನಲ್ಲಿ ಬಸ್ಸಿನಲ್ಲಿ ಕನ್ನಡದಲ್ಲಿ ಮಾತಾಡಿದರೆ ಮಾರುತ್ತರ ಕನ್ನಡದಲ್ಲಿ ಬರುವುದಿಲ್ಲ. ಕನ್ನಡ ಬರುವವರೂ ಸಹ ಕನ್ನಡದಲ್ಲಿ ಮಾತನಾಡಲು ಹಿಂಜರಿಯುತ್ತಾರೆ. ಅದೇ ಬಂಗಾಳಿಗಳು ತಮ್ಮ ಭಾಷೆಯನ್ನು ಎಷ್ಟು ಗೌರವಿಸುತ್ತಾರೆ! ಈ ದರಿದ್ರ ಕನ್ನಡಿಗರಿಗೇ ಈ ರೋಗ ಬಡಿದಿದೆ. ಮೊನ್ನೆ ಯಾರೋ ಹೇಳುತ್ತಿದ್ದರು -ತೆಲುಗಿಗೆ ಇನ್ನು ಕೇವಲ ೮೦ ವರ್ಷಗಳ ಆಯುಷ್ಯವಿದೆಯಂತೆ. ಇದರ ನಂತರ ತೆಲುಗು ಹೇಳುಹೆಸರಿಲ್ಲದಂತಾಗುವುದಂತೆ. ತೆಲುಗಿಗೇ ಹಾಗಾದರೆ ಕನ್ನಡ ಇನ್ನು ೫೦ ವರ್ಷಗಳಲ್ಲಿ ಸಾಯಬಹುದು ಎಂದು ಅವರು ತರ್ಕಿಸಿದರು. ಕನ್ನಡ ತಾಯಿ ತನ್ನ ಮಕ್ಕಳಿಂದ ಈ ರೀತಿಯ ಹಿಂಸೆಗೊಳಗಾಗುವುದರಿಂದ ನಿತ್ಯ ಸಾಯುವ ಬದಲು ಒಂದೇ ಬಾರಿ ಗೌರವದಿಂದ ಸಾಯುವುದು ಮೇಲು ಅನ್ನಿಸುತ್ತದೆ. ಇಂಥ ಕೃತಘ್ನ ಮಕ್ಕಳಿಗೆ ಕನ್ನಡದಂಥ ಮಹಾತಾಯನ್ನು ಗೌರವಿಸುವ ಭಾಗ್ಯವಿಲ್ಲ.
ಎಂಥ ಪ್ರತಿಭಾಶಾಲಿ ಕವಿಗಳ, ಮಹಾರಾಜರುಗಳ, ಸಜ್ಜನರ ಮನಸ್ಸು-ಬಾಯಿಗಳಲ್ಲಿ ಮೂಡಿದ ಭಾಷೆ! ಕನ್ನಡ ಸಾಯುತ್ತದೆಯೆಂದು ನೆನೆಸಿದರೆ ಸೂತಕದ ಭಾವನೆ ನನ್ನನ್ನಾವರಿಸುತ್ತದೆ. ಹಾಗಾಗದೆ ಹೋಗಲಿ, ಏನಾದರೂ ಮಾಡಲೇಬೇಕು ಎಂದು ಆಶಿಸುವ ಆಶಾವಾದ ನನ್ನಲ್ಲಿನ್ನೂ ಇದೆ.
ಕನ್ನಡ ತಾಯಿ ನಮ್ಮನ್ನು ಕಾಪಾಡಲಿ ! ನಾವು ಕನ್ನಡತಾಯಿಯನ್ನು ಕಾಪಾಡೋಣ!
|| ಇತಿ ಶಮ್ ||
Subscribe to:
Posts (Atom)